ಕನ್ನಡ ವ್ಯಾಕರಣ.

ಕನ್ನಡ ವ್ಯಾಕರಣ

•ಕನ್ನಡ ವರ್ಣಮಾಲೆ
•ಸಂಧಿ ಪ್ರಕರಣ
•ನಾಮ ಪದ ಪ್ರಕರಣ
•ಲಿಂಗಳು
•ವಚನಗಳು
•ವಿಭಕ್ತಿ ಪ್ರತ್ಯಯಗಳು
•ಕ್ರಿಯಾಪದ ಪ್ರಕರಣ
•ಕರ್ತರಿ ಮತ್ತು ಕರ್ಮಣಿ ಪ್ರಯೋಗಗಳು
•ಛಂದಸ್ಸು
•ಷಟ್ಟದಿ ಪದ್ಯಗಳು
•ರಗಳೆಗಳು
•ಅಕ್ಷರ ಗಣಗಳು
•ಅಲಂಕಾರಗಳು
•ನವರಸಗಳು
•ಪತ್ರಲೇಖನ
•ಪ್ರಬಂಧ

🙏🙏🙏🙏🙏🙏

ಕನ್ನಡ ವ್ಯಾಕರಣ

“ಭಾಷೆಗೆ ಸಂಸ್ಕಾರವನ್ನುಂಟು ಮಾಡುವ ನಿಯಮಾವಳಿಗಳಿಗೆ ವ್ಯಾಕರಣ ಎಂದು ಹೆಸರು”..

ಕನ್ನಡ ವರ್ಣಮಾಲೆ

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ

ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ

ವರ್ಣಮಾಲೆಯ ವಿಧಗಳು

*.ಸ್ವರಗಳು
*.ವ್ಯಂಜನಗಳು
*.ಯೋಗವಾಹಗಳು

ಸ್ವರಗಳು:13
“ಸ್ವತಂತ್ರವಾಗಿ ಉಚ್ಛರಿಸಲ್ಪಡುವ ಅಕ್ಷರಗಳನ್ನು ಸ್ವರಗಳು ಎಂದು ಕರೆಯುತೇವೆ”.
ಉದಾ: ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ

ಸ್ವರಗಳ ವಿಧಗಳು
*.ಹ್ರಸ್ವಸ್ವರ
*.ದೀರ್ಘ ಸ್ವರ
*.ಪ್ಲುತ ಸ್ವರ

ಹ್ರಸ್ವ ಸ್ವರ: 6
“ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಹ್ರಸ್ವಸ್ವರ ಅಕ್ಷರಗಳು ಎನಿಸುವುದು”.
ಉದಾ:ಅ ಇ ಉ ಋ ಎ ಒ

ದೀರ್ಘ ಸ್ವರ: 7
“ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ದೀರ್ಘ ಸ್ವರ ಎನ್ನಲಾಗಿದೆ”.
ಉದಾ:ಆ ಈ ಊ ಏ ಓ ಐ ಔ

ಪ್ಲುತ ಸ್ವರ:
“ಮೂರು ಮಾತ್ರೆಗಳ ಕಾಲದಲ್ಲಿ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಪ್ಲುತ ಸ್ವರ ಎನ್ನಲಾಗಿದೆ
”.ಉದಾ:ಅಕ್ಕಾ , ಅಮ್ಮಾ,
ಕ್+ಅ=ಕ ,
ಮ್+ಅ=ಮ,
ಯ್+ಅ=ಯ.

ಸಂಧ್ಯಾಕ್ಷರಗಳು:4
ಏ,ಐ,ಒ,ಔ,

ವ್ಯಂಜನಗಳು:34
“ಸ್ವರಾಕ್ಷರಗಳ ಸಹಾಯದಿಂದ ಉಚ್ಛರಿಸಲ್ಪಡುವ ಅಕ್ಷರಗಳಿಗೆ ವ್ಯಂಜನಗಳು ಎಂದು ಕರೆಯುತ್ತೇವೆ”.

ವ್ಯಂಜನಗಳ ವಿಧಗಳು:2
1.ವರ್ಗೀಯ ವ್ಯಂಜನಾಕ್ಷರಗಳು
2.ಅವರ್ಗೀಯ ವ್ಯಂಜನಾಕ್ಷರಗಳು

ವರ್ಗೀಯ ವ್ಯಂಜನಾಕ್ಷರಗಳು:25
“ಸ್ವರಗಳ ಸಹಾಯದಿಂದ ಹಾಗೂ ಒಂದು ಮಾತ್ರಾ ಕಾಲದಲ್ಲಿ ಉಚ್ಛರಿಸಲ್ಲಡುವ ಎಲ್ಲಾ ಕಾಗುಣಿತಾಕ್ಷರಗಳಿಗೆ ವರ್ಗೀಯ ವ್ಯಂಜನಾಕ್ಷರಗಳು ಎಂದು ಕರೆಯುತ್ತೇವೆ”.
ಉದಾ:
ಕ ವರ್ಗ – ಕ ಖ ಗ ಘ ಙ
ಚ ವರ್ಗ – ಚ ಛ ಜ ಝ ಞ
ಟ ವರ್ಗ – ಟ ಠ ಡ ಢ ಣ
ತ ವರ್ಗ- ತ ಥ ದ ಧ ನ
ಪ ವರ್ಗ- ಪ ಫ ಬ ಭ ಮ

ವರ್ಗೀಯ ವ್ಯಂಜನಾಕ್ಷರಗಳ ವಿಧಗಳು
*.ಅಲ್ಪ ಪ್ರಾಣಾಕ್ಷರಗಳು
*.ಮಹಾ ಪ್ರಾಣಾಕ್ಷರಗಳು
*.ಅನುನಾಸಿಕಾಕ್ಷರಗಳು

ಅಲ್ಪ ಪ್ರಾಣಾಕ್ಷರಗಳು:10
“ಕಡಿಮೆ ಸ್ವರದಿಂದ / ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಕಾಗುಣಿತಾಕ್ಷರಗಳಿಗೆ ಅಲ್ಪ ಪ್ರಾಣಾಕ್ಷರಗಳು ಎನ್ನಲಾಗಿದೆ”.
ಉದಾ:
ಕ, ಚ,ಟ.ತ ,ಪ
ಗ,ಜ,ಡ,ದ,ಬ

ಮಹಾ ಪ್ರಾಣಾಕ್ಷರಗಳು:10
“ಹೆಚ್ಚು ಉಸಿರಿನಿಂದ ಉಚ್ಛರಿಸಲ್ಪಡುವ ಎರಡನೆಯ ಮತ್ತು ನಾಲ್ಕನೆಯ ವ್ಯಂಜನಗಳಿಗೆ ಮಹಾ ಪ್ರಾಣಾಕ್ಷರಗಳು ಎನ್ನಲಾಗಿದೆ
ಉದಾ:
ಖ, ಛ ,ಠ ,ಧ, ಫ
ಘ ,ಝ, ಢ, ಧ, ಭ

ಅನುನಾಸಿಕಾಕ್ಷರಗಳು:5
“ಮೂಗಿನ ಸಹಾಯದಿಂದುಚ್ಛರಿಸಲ್ಪಡುವ ವರ್ಣಕ್ಕೆ ಅನುನಾಸಿಕಾಕ್ಷರಗಳು ಎನ್ನಲಾಗಿದೆ”.
ಉದಾ:
ಙ ,ಞ ,ಣ, ನ, ಮ

ಅವರ್ಗೀಯ ವ್ಯಂಜನಾಕ್ಷರಗಳು:9
“ವರ್ಗಗಳಾಗಿ ವಿಂಗಡಿಸಲಾರದ ವ್ಯಂಜನಗಳಿಗೆ ವರ್ಗೀಯ ವ್ಯಂಜನಾಕ್ಷರಗಳೆಂದು ಹೆಸರು”.
ಉದಾ:
ಯ ,ರ, ಲ, ವ ,ಶ, ಷ ,ಸ ,ಹ, ಳ

ಯೋಗವಾಹಗಳು:2
“ಬೇರೆ ಅಕ್ಷರಗಳ ಸಹಯೋಗದೊಂದಿಗೆ ಉಚ್ಛರಿಸಲ್ಪಡುವ ಅಕ್ಷರಗಳಿಗೆ ಯೋಗವಾಹಗಳು ಎನ್ನಲಾಗಿದೆ”.
ಅಂ ಅಃ

ಯೋಗವಾಹಗಳ ವಿಧಗಳು
1.ಅನುಸ್ವರ ಂ
2.ವಿಸರ್ಗ ಃ

ಅನುಸ್ವರ {ಂ}
“ಯಾವುದೇ ಅಕ್ಷರವು ಒಂದು ಸೊನ್ನೊ(ಂ) ಬಿಂದು, ಎಂಬ ಸಂಕೇತನವನ್ನು ಹೊಂದಿದ್ದರೆ ಅದು ಅನುಸ್ವಾರಾಕ್ಷರ ಎನಿಸುವುದು”,
ಉದಾ:ಅಂಕ , ಒಂದು, ಎಂಬ

ವಿಸರ್ಗ {ಃ}
“ಯಾವುದೇ ಅಕ್ಷರವು ಬಿಂದು ಸಮೇತ ಅಂದರೆ ಒಂದರ ಮೇಲೊಂದು ಇರುವ ಎರಡು ಸೊನ್ನೊಗಳ ಸಂಕೇತವನ್ನು ಹೊಂದಿದ್ದರೆ ಅದು ವಿಸರ್ಗಾಕ್ಷರ ಎನಿಸುವುದು”,
ಉದಾ:ಅಂತಃ , ದುಃಖ, ಸಃ, ನಃ

🙏🙏🙏🙏🙏

ಕನ್ನಡ ವರ್ಣಮಾಲೆ ಒಟ್ಟು ಅಕ್ಷರಗಳು ಸಂಖ್ಯೆ

ಕನ್ನಡ ವರ್ಣಮಾಲೆ(49)
ಸ್ವರಗಳು(13)
ಹ್ರಸ್ವ(06) ,
ಧೀರ್ಘ(07) ,
ಪ್ಲುತ
ವ್ಯಂಜನಾಕ್ಷರಗಳು(34)
ವರ್ಗೀಯ(25){ಅಲ್ಪಪ್ರಾಣ(10) , ಮಹಾಪ್ರಾಣ(10) , ಅನುನಾಸಿಕ(05) } ,
ಅವರ್ಗೀಯ(09)
ಯೋಗವಾಹ(02)
ಅನುಸ್ವಾರ(ಂ) ,
ವಿಸರ್ಗ(ಃ)

ಸಂಯುಕ್ತಾಕ್ಷರ
“ಯಾವುದಾದರೂ ಒಂದು ಪದದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವ್ಯಂಜನಗಳು ಒಂದರ ನಂತರ ಒಂದು ಬಂದು ಅವುಗಳಾದ ಮೇಲೆ ಒಂದು ಸ್ವರ ಬಂದರೆ ಅಂತಹ ಅಕ್ಷರಗಳನ್ನು ಸಂಯುಕ್ತಾಕ್ಷರ / ಒತ್ತಕ್ಷರ ಎಂದು ಕರೆಯುತ್ತೇವೆ”.
ಉದಾ:
ಕ್ + ತ್ + ಅ = ಕ್ತ
ಪ್ + ರ್ + ಅ = ಪ್ರ
ಗ್ + ಗ್ + ಅ = ಗ್ಗ
ಸ್ + ತ್ + ರ್ + ಅ = ಸ್ತ್ರ

ಸಂಯುಕ್ತಾಕ್ಷರಗಳ ವಿಧಗಳು
1.ಸಜಾತಿಯ ಸಂಯುಕ್ತಾಕ್ಷರಗಳು
2.ವಿಜಾತೀಯ ಸಂಯುಕ್ತಾಕ್ಷರಗಳು

ಸಂಜಾತಿಯ ಸಂಯುಕ್ತಾಕ್ಷರಗಳು
“ಯಾವುದೇ ಪದದಲ್ಲಿ ಒಂದೇ ವ್ಯಂಜನವು ಎರಡು ಬಾರಿ ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ಸಜಾತೀಯ ವ್ಯಂಜನಾಕ್ಷರಗಳು ಎನ್ನುತ್ತೇವೆ”.
ಉದಾ:
ಕತೇ – ಕ್ + ತ್ + ತ್ + ಎ
ಅಕ್ಕ – ಅ + ಕ್ + ಕ್ + ಅ
ಹಗ್ಗ , ಅಜ್ಜ , ತಮ್ಮ , ಅಪ್ಪ

ವಿಜಾತಿಯ ಸಂಯುಕ್ತಾಕ್ಷರಗಳು
“ಯಾವುದೇ ಪದದಲ್ಲಿ ಎರಡು ಬೇರೆ ಬೇರೆ ವ್ಯಂಜನಗಳು ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ವಿಜಾತೀಯ ಸಂಯುಕ್ತಾಕ್ಷರಗಳು ಎನ್ನುತ್ತೇವೆ”.
ಉದಾ:
ಅಗ್ನಿ- ಆ + ಗ್ + ನ್ + ಇ
ಆಪ್ತ – ಆ + ಪ್ + ತ್ + ಅ
ಸೂರ್ಯ , ಮಗ್ನ , ಸ್ವರ , ಪ್ರಾಣ

🙏🙏🙏🙏🙏

ಸಂಧೀ ಪ್ರಕರಣ

ಸಂಧಿ ಅರ್ಥ :
” ಉಚ್ಛಾರಣೆಯಲ್ಲಿ ಎರಡು ವರ್ಣಗಳ ನಡುವೆ ಕಾಲವಿಳಂಬವಿಲ್ಲದಂತೆ ಕೂಡುವುದಕ್ಕೆ ಸಂಧಿ ಎಂದು ಹೆಸರು “.
ಉದಾ:
ಗಾಣ + ಇಗ =ಗಾಣಿಗ
ಆಡು + ಇಸು =ಆಡಿಸು
ಹಸು + ಇನ =ಹಸುವಿನ
‘ಯ’ ಕಾರ ಮತ್ತು ‘ವ’ ಕಾರಗಳು ಹೊಸದಾಗಿ ಸೇರಿವೆ.

ಸಂಧಿ ಕಾರ್ಯಗಳಾಗುವ ಸನ್ನಿವೇಶಗಳು
*.ಸ್ವರ ಸಂಧಿ :
” ಸ್ವರದ ಮುಂದೆ ಸ್ವರ ಬಂದು ಸಂಧಿಯಾದರೆ ಅದು ಸ್ವರ ಸಂಧಿ ಎನಿಸುವುದು”.
ಉದಾ:
ಊರು(ಉ) + (ವ) ಅನ್ನು = ಊರನ್ನು
ಮನೆ(ಎ) + (ಅ) ಅಲ್ಲಿ =ಮನೆಯಲ್ಲಿ

*.ವ್ಯಂಜನ ಸಂಧಿ :
“ಸ್ವರದ ಮುಂದೆ ವ್ಯಂಜನ ಬಂದು ವ್ಯಂಜನದ ಮುಂದೆ ವ್ಯಂಜನ ಬಂದು ಸಂಧಿಯಾದರೆ ಅದು ವ್ಯಮಜನ ಸಂಧಿ ಎನಿಸುವುದು “.
ಉದಾ:
ಮಳೆ(ಕ) + (ಗ)ಕಾಲ =ಮಳೆಗಾಲ
ಬೆಟ್ಟದ(ತ) + (ದ)ತಾವರೆ =ಬೆಟ್ಟದಾವರೆ

ಸಂಧಿಗಳ ವಿದಗಳು:
1.ಕನ್ನಡ ಸಂಧಿಗಳು
2.ಸಂಸ್ಕ
ೃತ ಸಂಧಿಗಳು

ಕನ್ನಡ ಸಂಧಿಗಳ ವಿಧಗಳು
1.ಲೋಪ ಸಂಧಿ
2.ಆಗಮ ಸಂಧಿ
3.ಆದೇಶ ಸಂಧಿ
4.ಪ್ರಕ್ಥತ ಭಾವ

ಲೋಪ ಸಂಧಿ :
” ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು ಇದಕ್ಕೆ ಲೋಪ ಸಂಧಿ ಎಂದು ಹೆಸರು
ಉದಾ:
ಹಣದಾಸೆ – ಹಣದ + ಆಸೆ “ಅ” ಕಾರಲೋಪ
ನಿನಗಲ್ಲದೆ – ನಿನಗೆ +ಅಲ್ಲದೆ “ಎ”ಕಾರಲೋಪ
ಅಲ್ಲೊಂದು – ಅಲ್ಲಿ +ಒಂದು “ಇ” ಕಾರಲೋಪ
ಊರಲ್ಲಿ – ಊರು +ಅಲ್ಲಿ “ಉ” ಕಾರಲೋಪ

ಆಗಮ ಸಂಧಿ :
” ಸ್ವರದ ಮುಂದೆ ಸ್ವರವು ಬಂದು ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಾಧ್ಯದಲ್ಲಿ “ಯ” ಕಾರವನ್ನೊ ಅಥವಾ “ವ” ಕಾರವನ್ನೊ ಹೊಸದಾಗಿ ಸೇರಿಸಿ ಹೆಳುತ್ತೇವೆ ಇದಕ್ಕೆ ಆಗಮ ಸಂಧಿ ಎನ್ನುವರು”.
ಆಗಮ ಸಂಧಿಯ ವಿಧಗಳು
ಎ: ‘ಯ’ ಕಾರ ಆಗಮ ಸಂಧಿ
ಬಿ: ‘ವ’ ಕಾರ ಆಗಮ ಸಂಧಿ

‘ಯ’ ಕಾರ ಆಗಮ ಸಂಧಿ :
” ಆ ಇ ಈ ಎ ಏ ಐ ಎಂಬ ಸ್ವರಗಳ ಮುಂದೆ ಸ್ವರವು ಬಂದರೆ ಆ ಎರಡು ಸ್ವರಗಳ ಮಧ್ಯದಲ್ಲಿ “ಯ” ಕಾರವು ಆಗಮವಾಗುವುದು”.
ಉದಾ:
ಕೆರೆಯನ್ನು = ಕೆರೆ + ಅನ್ನು
ಕಾಯದೆ = ಕಾ + ಅದೆ
ಬೇಯಿಸಿದ = ಬೇ + ಇಸಿದ
ಕುರಿಯನ್ನು , ಮೀಯಲು , ಚಳಿಯಲ್ಲಿ

‘ವ’ ಕಾರ ಆಗಮ ಸಂಧಿ :
“ಅ ಉ ಊ ಋ ಓ ಎಂಬ ಸ್ವರಗಳ ಮುಂದೆ ಸ್ವರವು ಬಂದರೆ ಆ ಎರಡು ಸ್ವರಗಳ ನಡುವೆ “ವ” ಕಾರವೂ ಆಗಮವಾಗುವುದು”.
ಉದಾ:
ಮಗುವಿಗೆ =ಮಗು + ಇಗೆ
ಗುರುವನ್ನು = ಗುರು + ಅನ್ನು
ಹೂವಿದು= ಹೂ + ಇದು
ಗೋವಿಗೆ , ಶಾಂತವಾಗಿ , ರಸವಾಗಿ ,

ಆದೇಶ ಸಂಧಿ :”ಸಂಧಿಯಾಗುವಾಗ ಒಂದು ವ್ಯಂಜನದ ಮತ್ತೊಂದು ವ್ಯಂಜನವು ಬರುವುದಕ್ಕೆ ಆದೇಶ ಸಂಧಿ ಎನಿಸುವುದು”.
ಕ – ಗ
ಚ – ಜ
ಟ – ಡ
ತ – ದ
ಪ – ಬ
ಉದಾ:
ಮಳೆಗಾಲ =ಮಳೆ +ಕಾಲ
ಕಂಬನಿ = ಕಣ್ + ಪನಿ
ಕೈದಪ್ಪು = ಕೈ + ತಪ್ಪು
ಹೊಸಗನ್ನಡ , ಬೆಟ್ಟದಾವರೆ ,ಕೊನೆಗಾಲ,

ಪ್ರಕೃತಿ ಭಾವ ಸಂಧಿ:
“ಕೆಲವೆಡೆ ಸ್ವರಕ್ಕೆ ಸ್ವರ ಪರವಾದರೆ ಯಾವ ಸಂಧಿಕಾರ್ಯವು ನಡೆಯುವುದಿಲ್ಲ ಇದನ್ನು ಪ್ರಕೃತಿ ಭಾವ ಎಂದು ಕರೆಯುತ್ತಾರೆ “.
ಉದಾ:
ಅಣ್ಣ ಓಡಿಬಾ = ಅಣ್ಣ + ಓಡಿಬಾ
ಅಬ್ಬಾ ಅದುಹಾವೆ? = ಅಬ್ಬಾ + ಅದುಹಾವೆ?
ರಾಮ ಎಲ್ಲಿದ್ದೀಯೆ? = ರಾಮ + ಎಲ್ಲಿದ್ದೀಯೆ?

ಸಂಸ್ಕೃತ ಸಂಧಿಗಳ ವಿಧಗಳು
1.ಸಂಸ್ಕೃತ ಸ್ವರ ಸಂಧಿಗಳು
2.ಸಂಸ್ಕೃತ ವ್ಯಂಜನ ಸಂಧಿಗಳು

ಸಂಸ್ಕೃತ ಸ್ವರ ಸಂಧಿಗಳ ವಿಧಗಳು
1.ಸವರ್ಣ ದೀರ್ಘ ಸಂಧಿ
2.ಗುಣ ಸಂಧಿ
3.ವೃದ್ಧಿ ಸಂಧಿ
4.ಯಣ್ ಸಂಧಿ

ಸವರ್ಣ ದೀರ್ಘ ಸಂಧಿ
” ಸವರ್ಣ ಸ್ವರಗಳು ಬಂದರೆ ಮುಂದೊಂದು ಬಂದಾಗ, ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘ ಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣ ದೀರ್ಘ ಸಂಧಿ ಎನ್ನುವರು
“.ಅ-ಅ=ಆ ,
ಅ-ಆ=ಆ,
ಇ-ಇ=ಈ ,
ಇ-ಈ=ಈ
ಉ-ಉ=ಊ ,
ಉ-ಊ=ಊ

ಉದಾ:
ದೇವಾಲಯ= ದೇವ + ಆಲಯ
ವಿದ್ಯಾಭ್ಯಾಸ= ವಿದ್ಯಾ + ಅಭ್ಯಾಸ
ಗಿರೀಶ= ಗಿರಿ + ಈಶ
ಗುರೂಪದೇಶ= ಗುರು + ಉಪದೇಶ
ಶುಭಾಶಯ , ರವೀಂದ್ರ , ದೇವಾಸುರ , ಫಲಾಹಾರ , ಸೂರ್ಯಸ್ತ.

ಗುಣ ಸಂಧಿ
“ಅ .ಆ ಕಾರಗಳ ಮುಂದೆದ ಇ.ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಏ” ಕಾರವೂ. ಉ.ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಓ” ಕಾರವೂ , ಋ ಕಾರವು ಪರವಾದರೆ ಅವೆರಡರ ಸ್ಥಾನದಲ್ಲಿ “ಅರ್” ಕಾರವೂ ಆದೇಶವಾಗಿ ಬಂದರೆ ಅಂತಹ ಸಂಧಿಯನ್ನು “ಗುಣಸಂಧಿ” ಎಂದು ಕರೆಯಲಾಗುತ್ತದೆ”.
ಅ-ಆ,
ಇ-ಈ=ಏ
ಅ-ಆ,
ಉ-ಊ=ಓ
ಅ-ಆ,ಋ=ಅರ್

ಉದಾ:
ದೇವೇಂದ್ರ=ದೇವ + ಇಂದ್ರ
ಸಪ್ತರ್ಷಿ=ಸಪ್ತ + ಋಷಿ
ಸುರೇಂದ್ರ=ಸುರ + ಇಂದ್ರ
ಜನೋಪಕಾರ=ಜನ + ಉಪಕಾರ
ನಾಗೇಶ , ಏಕೋನ , ಚಂದ್ರೋದಯ ,ಉಮೇಶ

ವೃದ್ಧಿ ಸಂಧಿ
“ಅ.ಆ ಕಾರಗಳಿಗೆ ಏ .ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಐ” ಕಾರವೂ. ಓ .ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ “ಔ” ಕಾರವೂ ಆದೇಶವಾಗಿ ಬರುತ್ತದೆ ಇದಕ್ಕೆ ವೃದ್ದಿ ಸಂಧಿ ಎನ್ನುವರು”.
ಅ,ಆ-ಏ,
ಐ=ಐಅ,
ಆ-ಒ,
ಓ=ಔ

ಉದಾ:
ಏಕೈಕ= ಏಕ + ಏಕ
ವನೌಷಧಿ=ವನ + ಔಷಧಿ
ಜನೈಕ್ಯ=ಜನ + ಐಕ್ಯ
ವನೌಷಧ , ಸಿದ್ಧೌಷದ , ಲೋಕೈಕವೀರ

ಯಣ್ ಸಂಧಿ
“ಇ ,ಈ ಕಾರಗಳ ಮುಂದೆ ಅ ,ಆ ಕಾರಗಳು ಪರವಾದರೆ ಅವೆರಡರಸ್ಥಾನದಲ್ಲಿ “ಯ್” ಕಾರವೂ. ಉ ,ಊ ಕಾರಗಳಿಗೆ “ವ್” ಕಾರವೂ ಋ ಕಾರಕ್ಕೆ ‘ರ್’ ಕಾರವೂ ಆದೇಶಗಳಾಗಿ ಬರುವುದಕ್ಕೆ ಯಣ್ ಸಂಧಿ ಎನ್ನುವರು”
ಇ,ಈ-ಅ,ಆ=’ಯ್’
ಉ,ಊ-ಅ,ಆ=’ವ್’
ಋ-ಅ,ಆ=’ರ್’
ಉದಾ:
ಪ್ರತ್ಯುತ್ತರ= ಪ್ರತಿ +ಉತ್ತರ
ಮನ್ವಂತರ= ಮನು +ಅಂತರ
ಜಾತ್ಯಾತೀತ=ಜಾತಿ +ಅತೀತ
ಮಾತ್ರಂಶ=ಮಾತೃ +ಅಂಶ
ಅತ್ಯವಸರ , ಮನ್ವಾದಿ , ಅತ್ಯಾಶೆ , ಗತ್ಯಂತರ

ಸಂಸ್ಕೃತ ವ್ಯಂಜನ ಸಂಧಿಗಳ ವಿಧಗಳು
1.ಜಶ್ತ್ವ ಸಂಧಿ
2.ಶ್ಚುತ್ವ ಸಂಧಿ
3.ಅನುನಾಸಿಕ ಸಂಧಿ

ಜಶ್ತ್ವ ಸಂಧಿ
“ಪೂರ್ವ ಪದದ ಕೊನೆಯಲ್ಲಿರುವ ಕ,ಚ,ಟ,ತ,ಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ ಪ್ರಾಯಶಃ ಅದೇ ವರ್ಗದ ವ್ಯಂಜನಾಕ್ಷರಗಳಾದ ಗ,ಜ,ಡ,ದ,ಬ ಗಳು ಆದೇಶವಾಗಿ ಬರುವುದಕ್ಕೆ ಜಶ್ತ್ವ ಸಂಧಿ ಎಂದು ಹೆಸರು”.
ಉದಾ:
ವಾಗೀಶ=ವಾಕ್ + ಈಶ
ಅಜಂತ=ಅಚ್ + ಅಂತ
ಷೆಡಂಗ=ಷಟ್ +ಅಂಗ
ಸದ್ಭಾವ=ಸತ್ +ಭಾವ
ಅಜ್ಜ=ಅಪ್ + ಜ
ದಿಗಂತ , ಅಜೌದಿ , ಷಡಾನನ , ಚಿದಾನಂದ , ಅಬ್ಧಿ

ಶ್ಚುತ್ವ ಸಂಧಿ
” ಶ್ಚು ಎಂದರೆ ಶಕಾರ ಚ ವರ್ಗಾಕ್ಷರಗಳು(ಶ್ ಶಕಾರ ಚು=ಚ ವ ಜ ಝ ಞ) ಈ ಆರು ಅಕ್ಷರಗಳೇ “ಶ್ಚು” ಎಂಬ ಸಂಜ್ಞೆಯಿಂದ ಸಂಸ್ಕೃತ ವ್ಯಾಕರಣದಲ್ಲಿ ಕರೆಯಿಸಿಕೊಳ್ಳು ತ್ತವೆ. ಇವುಗಳು ಆದೇಶವಾಗಿ ಬರುವುದಕ್ಕೆ ಶ್ಚುತ್ವ ಸಂಧಿ ಎಂದು ಹೆಸರು”.
ಸ ಕಾರಕ್ಕೆ – ಶ ಕಾರವು
ತ ವರ್ಗಕ್ಕೆ- ಚ ವರ್ಗವು (ಆದೇಶವಾಗಿ ಬರುತ್ತವೆ)

ಉದಾ:
ಸಜ್ಜನ=ಸತ್ +ಜನ
ಚಲಚಿತ್ರ= ಚಲತ್ + ಚಿತ್ರ
ಯಶಶ್ಯರೀರ=ಸರತ್ +ಚಂದ್ರ
ಜಗಜ್ಯೋತಿ, ಪಯಶ್ಯಯನ, ಶರಚ್ಚಂದ್ರ

ಅನುನಾಸಿಕ ಸಂಧಿ
“ವರ್ಗದ ಪ್ರಥಮ ವರ್ಣಗಳಿಗೆ ಅನುನಾಸಿಕಾಕ್ಷರ ಪರವಾದರೆ ಅಂದರೆ ಕ ಚ ಟ ತ ಪ ವ್ಯಂಜನಗಳಿಗೆ ಕ್ರಮವಾಗಿ ಙ ಞ ನ ಣ ಮ ಗಳು ಆದೇಶವಾಗಿ ಬರುವುದಕ್ಕೆ ಅನುನಾಸಿಕ ಸಂಧಿ ಎಂದು ಹೆಸರು”.
ಉದಾ.
ವಾಙ್ಮಯ=ವಾಕ್ +ಮಯ
ಚಿನ್ಮೂರ್ತಿ= ಚಿತ್ + ಮೂರ್ತಿ
ತನ್ಮಯ= ತತ್+ಮಯ
ಸನ್ಮಾನ , ಅಮ್ಮಯ , ಸನ್ಮಣಿ ,ಚಿನ್ಮೂಲ ,

ಸಮಾಸ ಪ್ರಕರಣ

“ಎರಡು ಅಥವಾ ಹಲವು ಪದಗಳು ಒಂದು ಗೂಡಿ ಒಂದು ಶಬ್ಧವಾಗುವುದಕ್ಕೆ ಸಮಾಸ ಎಂದು ಹೆಸರು”.
ಉದಾ:
ತಲೆಯಲ್ಲಿ (ಅಲ್ಲಿ) + (ನೋವು) ನೋವು=ತಲೆನೋವು
ಕಣ್ಣಿನಿಂದು(ಇಂದ)+(ಕುರುಡ)ಕುರುಡ=ಕಣ್ಣುಕುರುಡ

ವಿಗ್ರಹ ವಾಕ್ಯ
“ಸಮಾಸದ ಅ
ರ್ಥವನ್ನು ಬಿಡಿಸಿ ಹೇಳುವ ಮಾತುಗಳ ಗುಂಪಿಗೆ ವಿಗ್ರಹವಾಕ್ಯವೆಂದು ಹೆಸರು”.
ಉದಾ:
ಸಮಸ್ತಪದ = ಪೂರ್ವಪದ + ಉತ್ತರ ಪದ
ದೇವಮಂದಿರ= ದೇವರ + ಮಂದಿರ
ಹೆಜ್ಜೇನು=ಹಿರಿದು + ಜೇನು
ಮುಂಗಾಲು= ಕಾಲಿನ + ಮುಂದು(ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವ ಪದವೆಂದು, ಎರಡನೆಯ ಪದವನ್ನು ಉತ್ತರ ಪದವೆಂದು ಕರೆಯಲಾಗುತ್ತದೆ.)

ಸಮಾಸ ಪದಗಳಾಗುವ ಸನ್ನಿವೇಶಗಳು
ಸಂಸ್ಕ್ರತ-ಸಂಸ್ಕ್ರತ ಶಬ್ಧಗಳು ಸೇರಿ
ಕನ್ನಡ-ಕನ್ನಡ ಶಬ್ಧಗಳು ಸೇರಿ
ತದ್ಬವ-ತದ್ಬವ ಶಬ್ಧಗಳು ಸೇರಿ
ಅಚ್ಚಗನ್ನಡ ಶಬ್ಧ – ತದ್ಬವ ಶಬ್ಧಗಳು ಸೇರಿ ಸಮಾಸಪದಗಳಾಗುತ್ತವೆ.
ಆದರೆ
ಕನ್ನಡಕ್ಕೆ – ಸಂಸ್ಕ್ರತ ಶಬ್ಧಗಳು ಸೇರಿ ಸಮಾಸವಾಗಲಾರದು.

ಸಮಾಸದ ವಿಧಗಳು
1.ತತ್ಪುರುಷ ಸಮಾಸ
2.ಕರ್ಮಧಾರೆಯ ಸಮಾಸ
3.ದ್ವಿಗು ಸಮಾಸ
4.ಅಂಶಿ ಸಮಾಸ
5.ದ್ವಂದ್ವ ಸಮಾಸ
6.ಬಹುವ್ರೀಹಿ ಸಮಾಸ
7.ಕ್ರಿಯಾ ಸಮಾಸ
8.ಗಮಕ ಸಮಾಸ

ತತ್ಪುರುಷ ಸಮಾಸ
“ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ತತ್ಪುರುಷ ಸಮಾಸ ಎಂದು ಹೆಸರು”.
ಉದಾ:
ಮರದ+ಕಾಲ =ಮರಗಾಲ
ಬೆಟ್ಟದ+ತಾವರೆ =ಬೆಟ್ಟದಾವರೆ
ಕೈ+ತಪ್ಪು = ಕೈತಪ್ಪು
ಹಗಲಿನಲ್ಲಿ+ಕನಸು =ಹಗಲುಗನಸು
ಅರಮನೆ , ಎದೆಗುಹೆ ,ಜಲರಾಶಿ , ತಲೆನೋವು

ಕರ್ಮಧಾರೆಯ ಸಮಾಸ
“ಪೂರ್ವೋತ್ತರ ಪದಗಳು ಲಿಂಗ ,ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ”.
ಉದಾ:
ಹೊಸದು+ಕನ್ನಡ =ಹೊಸಗನ್ನಡ
ಹಿರಿದು+ಜೇನು =ಹೆಜ್ಜೇನು
ಕಿರಿಯ+ಗೆಜ್ಜೆ =ಕಿರುಗೆಜ್ಜೆ
ಕೆಂದುಟಿ, ಚಿಕ್ಕಮಗು, ಸಿಡಿಮದ್ದು , ಪಂದತಿ

ದ್ವಿಗು ಸಮಾಸ
“ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ”
ಉದಾ:
ಒಂದು + ಕಣ್ಣು = ಒಕ್ಕಣ್ಣು
ಎರಡು+ಬಗೆ=ಇಬ್ಬಗೆ
ಸಪ್ತ+ಸ್ವರ=ಸಪ್ತಸ್ವರ
ನವರಾತ್ರಿ, ನಾಲ್ವಡಿ, ಮುಮ್ಮಡಿ, ದಶಮುಖಗಳು

ಅಂಶಿ ಸಮಾಸ
“ಪೂರ್ವೋತ್ತರ ಪದಗಳು ಅಂಶಾಂಶಿಭಾವ ಸಂಬಂಧದಿಂದ ಸೇರಿ ಪೂರ್ವಪದದ ಅರ್ಥವು ಪ್ರಧಾನವಾಗಿ ಉಳ್ಳ ಸಮಾಸಕ್ಕೆ ಅಂಶಿ ಸಮಾಸವೆಂದು ಹೆಸರು”.
ಅಂಶವೆಂದರೆ ‘ಭಾಗ’ ಅಥವಾ ‘ಅವಯವ’
ಉದಾ:ತಲೆಯ+ಮುಂದು=ಮುಂದಲೆ
ಬೆರಳಿನ+ತುದಿ = ತುದಿಬೆರಳು
ಕರೆಯ+ಒಳಗು= ಒಳಗೆರೆ
ಹಿಂದಲೆ, ಮುಂಗಾಲು, ಮಧ್ಯರಾತ್ರಿ, ಅಂಗೈ

ದ್ವಂದ್ವ ಸಮಾಸ
“ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎಂದು ಹೆಸರು”
.ಉದಾ:
ಕೆರೆಯು + ಕಟ್ಟಿಯು + ಬಾವಿಯು= ಕೆರೆ ಕಟ್ಟೆ ಬಾವಿಗಳು
ಕಾಫಿಯೂ+ತಿಂಡಿಯೂ=ಕಾಫಿ-ತಿಂಡಿ
ಬೆಟ್ಟವೂ+ಗುಡ್ಡವೂ=ಬೆಟ್ಟಗುಡ್ಡಗಳು
ಅಣ್ಣನು +ತಮ್ಮನು= ಅಣ್ಣತಮ್ಮಂದಿರು.

ಸ್ತ್ರೀಧನ ಮಹಿಳೆಯ ಖಾಯಂ ಹಕ್ಕು.

image

ಸ್ತ್ರೀಧನ ಮಹಿಳೆಯ ಖಾಯಂ ಹಕ್ಕು: ಸುಪ್ರೀಂ ತೀರ್ಪು , ಪತಿಯಿಂದ ಬೇರ್ಪಟ್ಟ ಬಳಿಕವೂ ಅದನ್ನು ಆಕೆ ಪಡೆಯಬಹುದು
ಹೊಸದಿಲ್ಲಿ,ನ.21: ಸ್ತ್ರೀಧನವು ಮಹಿಳೆಯ ಖಾಯಂ ಹಕ್ಕಾಗಿದ್ದು, ತನ್ನ ಪತಿಯಿಂದ ಬೇರ್ಪಟ್ಟ ಬಳಿಕವೂ ಅದು ಆಕೆಗೆ ಸೇರಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಹಿಳೆಗೆ ಸ್ತ್ರೀಧನವನ್ನು ನಿರಾಕರಿಸುವುದು, ಕೌಟುಂಬಿಕ ಹಿಂಸೆಗೆ ಸಮಾನವಾಗಿದ್ದು, ಇದಕ್ಕೆ ಕಾರಣರಾದ ಪತಿ ಅಥವಾ ಆತನ ಬಂಧುಗಳು ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸಬೇಕಾದೀತೆಂದು ಅದು ಹೇಳಿದೆ.
ಹಿಂದೂ ಕಾನೂನಿನ ಪ್ರಕಾರ, ಓರ್ವ ಮಹಿಳೆಗೆ ತನ್ನ ಜೀವಿತಾವಯಲ್ಲಿ ದೊರೆಯುವ ಎಲ್ಲಾ ಸ್ಥಿರಚರಾಸ್ತಿಗಳು, ವಿವಾಹದ ಮೊದಲು ಅಥವಾ ಆನಂತರ ಮತ್ತು ಆಕೆಯ ಮಗುವಿನ ಜನನ ಸಮಯದಲ್ಲಿ ಸಿಗುವ ಉಡುಗೊರೆಗಳನ್ನು ಸೀಧನವೆಂದು ಕರೆಯಲಾಗುತ್ತದೆ.
ಪತಿಯಿಂದ ಬೇರ್ಪಟ್ಟ ಮಹಿಳೆಗೆ ಸ್ತ್ರೀಧನಕ್ಕಾಗಿ ಹಕ್ಕೊತ್ತಾಯ ಮಾಡುವ ಅಧಿಕಾರವಿಲ್ಲವೆಂಬ ವಿಚಾರಣಾ ನ್ಯಾಯಾಲಯ ಹಾಗೂ ತ್ರಿಪುರಾ ಹೈಕೋರ್ಟ್‌ನ ಆದೇಶವನ್ನು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಪ್ರುಲ್ಲಾ ಸಿ. ಪಂತ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ನ್ಯಾಯಪೀಠ ತಳ್ಳಿಹಾಕಿದೆ.
ಕಾನೂನು ಬದ್ಧವಾಗಿ ಪತಿಯಿಂದ ಪ್ರತ್ಯೇಕಗೊಂಡ ಬಳಿಕ ಮಹಿಳೆಯು ಸ್ತ್ರೀಧನವನ್ನು ಕೇಳುವ ಹಕ್ಕನ್ನು ಕಳೆದುಕೊಂಡಿದ್ದಾಳೆಂದು ತೀರ್ಪು ನೀಡಿದ್ದಕ್ಕಾಗಿ ಕೆಳ ನ್ಯಾಯಾಲಯಗಳನ್ನು ಸುಪ್ರೀಂಕೋರ್ಟ್ ನ್ಯಾಯಪೀಠವು ತರಾಟೆಗೆ ತೆಗೆದುಕೊಂಡಿದೆ. ಮಹಿಳೆಗೆ ಪರಿಣಾಮಕಾರಿ ರೀತಿಯಲ್ಲಿ ರಕ್ಷಣೆಯನ್ನು ನೀಡುವುದೇ ಕೌಟುಂಬಿಕ ಹಿಂಸೆ ತಡೆ ಕಾಯ್ದೆಯ ಉದ್ದೇಶವಾಗಿದೆಯೆಂದು ಅದು ಹೇಳಿದೆ.ಇಂತಹ ಅಹವಾಲುಗಳ ಬಗ್ಗೆ ಸಂವೇದನಕಾರಿಯಾದ ನಿಲುವನ್ನು ಪ್ರದರ್ಶಿಸುವಂತೆಯೂ ಅದು ಕಿವಿಮಾತು ಹೇಳಿದೆ.
ಈ ಪ್ರಕರಣದಲ್ಲಿ ಅರ್ಜಿದಾರ ಮಹಿಳೆಗೆ 2005ರಲ್ಲಿ ವಿವಾಹವಾಗಿತ್ತು. ಐದು ವರ್ಷಗಳ ಬಳಿಕ ಆಕೆಯ ಪತಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಆತನ ಪರವಾಗಿ 2010ರಲ್ಲಿ ತೀರ್ಪು ನೀಡಿತ್ತು. ತನ್ನ ಕುಟುಂಬಿಕರು ಹಾಗೂ ಸ್ನೇಹಿತರು ನೀಡಿದ್ದ ಉಡುಗೊರೆಗಳು ಮತ್ತಿತರ ಸೊತ್ತುಗಳನ್ನು ತನ್ನ ಪತಿ ಹಾಗೂ ಆತನ ಬಂಧುಗಳು ತನಗೆ ಹಸ್ತಾಂತರಿಸಿಲ್ಲವೆಂದು ಆರೋಪಿಸಿ ಸಂತ್ರಸ್ತ ಮಹಿಳೆಯು ವಿಚಾರಣಾ ನ್ಯಾಯಾಲಯದ ಮೆಟ್ಟಲೇರಿದ್ದಳು. ಆದರೆ ಕೋರ್ಟ್ ಆಕೆಯ ಅರ್ಜಿಯು ವಿಚಾರಣಾ ಯೋಗ್ಯವಲ್ಲವೆಂದು ಹೇಳಿ ತಿರಸ್ಕರಿಸಿತ್ತು. ತ್ರಿಪುರಾ ಹೈಕೋರ್ಟ್ ಕೂಡಾ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿಯಿತು.
ಆ ಬಳಿಕ ಮಹಿಳೆಯು ಸುಪ್ರೀಂಕೋರ್ಟ್‌ನ ಮೊರೆ ಹೋಗಿದ್ದಳು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸ್ತ್ರೀಧನವು ಮಹಿಳೆಯ ಖಾಯಂ ಹಕ್ಕಾಗಿದ್ದು, ಅದರ ಮೇಲೆ ಆಕೆಯ ಪತಿಗಾಗಿ ಅಥವಾ ಬಂಧುಗಳಿಗಾಗಲಿ ಯಾವುದೇ ಅಕಾರವಿರುವುದಿಲ್ಲವೆಂದು ತೀರ್ಪು ನೀಡಿದೆ.

ಆನ್ ಲೈನ್ ಶಿಕ್ಷಣ ಜ್ಞಾನದ ಆಗರ.

image

ಭಾರತದಲ್ಲಿ ಆನ್‌ಲೈನ್ ಶಿಕ್ಷಣ ಅಭೂತಪೂರ್ವ ಪ್ರಗತಿ ಕಾಣುತ್ತಿದೆ. ಇತ್ತೀಚೆಗೆ ಪ್ರಕಟವಾದ ವರದಿಯೊಂದು ಯಾವ ರೀತಿ ಭಾರತೀಯ ಶಿಕ್ಷಣ ವ್ಯವಸ್ಥೆಯ ಮೇಲೆ ಆನ್‌ಲೈನ್ ಕೋರ್ಸ್ ಸಕಾರಾತ್ಮಕ ಪರಿಣಾಮ ಬೀರಿವೆ ಎಂಬುದನ್ನು ತೆರೆದಿಟ್ಟಿದೆ.

ಆನ್‌ಲೈನ್ ಶಿಕ್ಷಣ ಕೋರ್ಸ್‌ಗಳ ಸಾಕಷ್ಟು ಜಾಹೀರಾತುಗಳನ್ನು ನೋಡಿರುತ್ತೀರಿ. ಆದರೆ ಅವು ಯಾವ ರೀತಿ ಸಾಮಾನ್ಯ ಶಿಕ್ಷಣಕ್ಕಿಂತ ಹೆಚ್ಚು ಜನಪ್ರಿಯವಾಗಿವೆ ಎಂಬ ಬಗ್ಗೆ ಅಧಿಕೃತ ದತ್ತಾಂಶ ಇದುವರೆಗೆ ಸಿಕ್ಕಿರಲಿಲ್ಲ. ಆದರೆ ಈಗ ‘ಲರ್ನಿಂಗ್ ಔಟ್‌ಕಮ್ಸ್’ಎಂಬ ಸಮೀಕ್ಷೆಯಲ್ಲಿ ‘ಮ್ಯಾಸಿವ್ ಓಪನ್ ಆನ್‌ಲೈನ್ ಕೋರ್ಸ್(ಎಂಒಒಸಿ)ಗಳು’ ಕಳೆದ ನಾಲ್ಕು ವರ್ಷಗಳಿಂದ ಭಾರತೀಯ ವಿದ್ಯಾರ್ಥಿಗಳನ್ನು ಯಾವ ರೀತಿ ಈ ಕೋರ್ಸ್‌ಗಳು ಆಕರ್ಷಿಸುತ್ತಿವೆ ಎಂಬುದನ್ನು ಮುಂದಿಟ್ಟಿದೆ.

ಈ ಹಿಂದೆ ಎಂಒಒಸಿ ಪ್ರಮಾಣ ಪತ್ರಗಳು ಮತ್ತು ಮೌಲ್ಯಮಾಪನದ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವವಾಗಿದ್ದವು. ಆದರೆ ವಾಷಿಂಗ್ಟನ್ ಮತ್ತು ಯುನಿವರ್ಸಿಟಿ ಆಫ್ ಪೆನ್ಸಲ್ವೇನಿಯಾದ ಸಂಶೋಧಕರು ಈ ಅನುಮಾನಗಳಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ. ಇತರ ದೇಶಗಳಿಗೆ ಹೋಲಿಸಿದರೆ ಆನ್‌ಲೈನ್ ಶಿಕ್ಷಣದಲ್ಲಿ ಭಾರತದ ವಿದ್ಯಾರ್ಥಿಗಳು ಮುಂದಿದ್ದಾರೆ. ಒಟ್ಟು 51,954 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಉಳಿದವರಿಗೆ ಹೋಲಿಸಿದರೆ ಭಾರತೀಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಮೀಕ್ಷೆಯ ವೇಳೆ ಆನ್‌ಲೈನ್ ಕೋರ್ಸ್ ಪೂರ್ಣಗೊಳಿಸಲು ಮೂರು ಅಥವಾ ಅದಕ್ಕಿಂತ ಹೆಚ್ಚು ತಿಂಗಳ ಇರುವ ವಿದ್ಯಾರ್ಥಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಯಿತು. ಇಲ್ಲಿ ಅವರು ಕೋರ್ಸ್ ಸೇರುವುದಕ್ಕೆ ಮುಖ್ಯ ಕಾರಣ ಮತ್ತು ವೃತ್ತಿ ಜೀವನ ನಿರ್ಮಾಣ ಎಂಬ ಅಂಶಗಳನ್ನು ಮಾನದಂಡವಾಗಿ ಪರಿಗಣಿಸಲಾಯಿತು. ಅಂದರೆ ವೃತ್ತಿ ಜೀವನದಲ್ಲಿ ಇನ್ನಷ್ಟು ಮುಂದಕ್ಕೆ ಹೋಗಬೇಕು ಎನ್ನುವವರು ಮತ್ತು ಶೈಕ್ಷಣಿಕ ವಿದ್ಯಾಭ್ಯಾಸ ಪಡೆಯಬೇಕು ಎನ್ನುವವರು ಎಂದು ಅವರು ಗುರುತಿಸಲಾಯಿತು.

ಈ ಸಮೀಕ್ಷೆಯಲ್ಲಿ ಭಾರತೀಯರು ಅಗ್ರ ಸ್ಥಾನಕ್ಕೇರಿದ್ದಾರೆ. ಒಟ್ಟು ಅಭ್ಯರ್ಥಿಗಳಲ್ಲಿ ಶೇ. 82ರಷ್ಟು ಜನರು ಉದ್ಯೋಗದಲ್ಲಿ ಉನ್ನತ ಹಂತಕ್ಕೇರುವ ಮತ್ತು ಶೇ. 76ರಷ್ಟು ಜನರು ಶಿಕ್ಷಣದಲ್ಲಿ ಇನ್ನಷ್ಟು ಜ್ಞಾನ ಸಂಪಾದನೆ ಉದ್ದೇಶ ಹೊಂದಿದ್ದರು. ಜಾಗತಿಕ ಸರಾಸರಿಯಾದ ಶೇ. 88ಕ್ಕೆ ಹೋಲಿಸಿದರೆ ಶೇ. 91ರಷ್ಟು ಭಾರತೀಯ ಅಭ್ಯರ್ಥಿಗಳು ಆನ್‌ಲೈನ್ ಕೋರ್ಸ್‌ನಿಂದ ನಾನಾ ವಿಧದ ಲಾಭ ಪಡೆದಿರುವುದು ಸಮೀಕ್ಷೆಯಲ್ಲಿ ಕಂಡು ಬಂದಿದೆ.

ಆನ್‌ಲೈನ್ ಶಿಕ್ಷಣದಲ್ಲಿ ಉದ್ಯೋಗಾವಕಾಶ ಮತ್ತು ಸವಾಲುಗಳ ಕುರಿತು ಡಬ್ಲ್ಯೂಐಝಡ್‌ಐಕ್ಯೂ ಚರ್ಚಾ ಕೂಟ ನಡೆಸಿತು. ಇದರಲ್ಲಿ ಭಾರತದಲ್ಲಿ ಶಿಕ್ಷಣ ಸಂಸ್ಕೃತಿ ನಿಧಾನಗತಿಯಲ್ಲಿ ಬದಲಾಗುವುದುತ್ತಿದೆ ಎಂದು ಚರ್ಚೆಯಲ್ಲಿ ಕಂಡುಕೊಳ್ಳಲಾಯಿತು. ಜೊತೆಗೆ ಆನ್‌ಲೈನ್ ಶಿಕ್ಷಣಕ್ಕೆ ಇಲ್ಲಿ ಭದ್ರವಾದ ತಳಪಾಯ ನಿರ್ಮಾಣವಾಗಿದ್ದು, ಅತಿ ವೇಗದ ಪ್ರಗತಿಯತ್ತ ಅದು ಮುನ್ನಡೆಯುತ್ತಿದೆ. ಏನು ಮತ್ತು ಎಲ್ಲಿ ಕಲಿತಿದ್ದೀರಿ ಎನ್ನುವುದನ್ನು ಬಿಟ್ಟು, ಒಟ್ಟಾರೆ ಆನ್‌ಲೈನ್ ಶಿಕ್ಷಣ ಹೊಸ ಆವಿಷ್ಕಾರಗಳು ಮತ್ತು ಅನನ್ಯತೆಗೆ ಸಾಕ್ಷಿಯಾಗುತ್ತಿದೆ ಎಂದು ಚರ್ಚೆಯಲ್ಲಿ ತಿಳಿದು ಬಂದಿದೆ.

ಒಟ್ಟಿನಲ್ಲಿ ಸಾಂಪ್ರದಾಯಿಕ ತರಗತಿಗಳಿಗಿಂತ ಹೆಚ್ಚಾಗಿ ಆನ್‌ಲೈನ್ ಶಿಕ್ಷಣ ಭಾರತದಲ್ಲಿ ಜನಪ್ರಿಯವಾಗುತ್ತಿದೆ ಎಂಬುದು ಕಂಡು ಬಂದಿದೆ. ಉದ್ಯೋಗ ಮಾಡುತ್ತಿರುವಾಗಲೇ ಇನ್ನಷ್ಟು ಉನ್ನತ ಹಂತಕ್ಕೆ ಏರುವುದಾಗಲಿ, ಮಾಮೂಲಿ ಶಿಕ್ಷಣದಿಂದ ಪಡೆದ ಜ್ಞಾನವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಆನ್‌ಲೈನ್ ಶಿಕ್ಷಣ ನೆರವಾಗುತ್ತಿದೆ.

ಉಡುಗೊರೆ ಹೆಸರಲ್ಲಿ ವಂಚನೆ.

image

ಪಾರ್ಸಲ್ ಪಡೆವ ಮುನ್ನ ಎಚ್ಚರವಿರಲಿ!
°°°°°°°°°°°°°°°°°°°°°°°°°°°°°°
ಉಡುಗೊರೆ ಹೆಸರಿನಲ್ಲಿ ಬರುವ ಪಾರ್ಸಲ್ ಮುಟ್ಟುವ ಮುನ್ನ ಎಚ್ಚರ. ಏಕೆಂದರೆ, ಸಾವಿರಾರು ರೂಪಾಯಿ ಕಳೆದುಕೊಳ್ಳಬೇಕಾದೀತು.

‘ಗಿಫ್ಟ್’ ಹೆಸರಿನಲ್ಲಿ ವಂಚಕರು ಅಂಚೆ ಇಲಾಖೆ ಸೇವೆಯನ್ನು ದುರ್ಬಳಕೆ ಮಾಡಿಕೊಂಡು ಜನಸಾಮಾನ್ಯರನ್ನು ವಂಚಿಸುತ್ತಿರುವ ಜಾಲ ಉದ್ಯಾನನಗರಿಯನ್ನು ಆವರಿಸುತ್ತಿದೆ. ಬಡವರೇ ಈ ಜಾಲದ ಟಾರ್ಗೆಟ್. ಸಾವಿರಾರು ರೂ. ಗಿಫ್ಟ್ ಪಡೆಯುವ ಸಂತಸದಲ್ಲಿ ನಿತ್ಯ ನೂರಾರು ಮಂದಿ ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಬಿಹಾರ, ದೆಹಲಿ, ಗಯಾ ಮತ್ತಿತರ ಕಡೆಯಿಂದ ಅಂಚೆ ಇಲಾಖೆಯ ‘ವಿಪಿಪಿ’ (ವ್ಯಾಲ್ಯುಬಲ್ ಪೇ ಪಾರ್ಸಲ್) ಸೇವೆ ಮುಖಾಂತರ ಗಿಫ್ಟ್ ರವಾನಿಸುವ ಸೋಗಿನಲ್ಲಿ ವಂಚಿಸಲಾಗುತ್ತಿದೆ.

ಸಿದ್ಧಾಪುರ ನಿವಾಸಿ, ಆಟೋ ಚಾಲಕ ಅಂಜುಮ್ ಖಾನ್​ಗೆ ಬುಧವಾರ ಜಯನಗರ ಪ್ರಾದೇಶಿಕ ಅಂಚೆ ಕಚೇರಿಯಿಂದ ಕರೆ ಬಂದಿತ್ತು. ನಿಮ್ಮ ಹೆಸರಿಗೆ ವಿಪಿಪಿ ಪಾರ್ಸಲ್ ಬಂದಿದೆ, ತೆಗೆದು ಕೊಂಡು ಹೋಗಿ ಎಂದು ಸೂಚಿಸಿದ್ದರು. ಅಂಚೆ ಕಚೇರಿಗೆ ತೆರಳಿದ ಅಜುಮ್ ಪಾರ್ಸಲ್ ಬಾಕ್ಸ್ ನೋಡಿ ಸಂತಸದಿಂದಲೇ 2 ಸಾವಿರ ರೂ. ಹಾಗೂ ಅಂಚೆ ಸೇವೆ ಶುಲ್ಕ 100 ಸೇರಿ ಒಟ್ಟು 2100 ರೂ. ಪಾವತಿಸಿದ್ದಾರೆ. ಪಾರ್ಸಲ್ ಬಾಕ್ಸ್ ತೆರೆದು ನೋಡಿದರೆ ಹೆಸರಿಲ್ಲದ ಎರಡು ಪೊಟ್ಟಣದಲ್ಲಿ ಪುಡಿಯಿತ್ತು. ಹಿಂದಿ ಪತ್ರಿಕೆಯೊಂದರಲ್ಲಿ ಸುತ್ತಿ, ಬಳಪದ ಬಾಕ್ಸ್​ನಲ್ಲಿ ಪ್ಯಾಕಿಂಗ್ ಮಾಡಲಾಗಿದೆ. ಕನಿಷ್ಠ 20 ರೂ. ಬೆಲೆಬಾಳುವ ವಸ್ತುಗಳೂ ಅದರಲ್ಲಿರಲಿಲ್ಲ. ಈ ಬಗ್ಗೆ ಅಂಚೆ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸಹಿ ಹಾಕಿ ಪಾರ್ಸಲ್ ಪಡೆದ ಬಳಿಕ ನಾವೇನೂ ಮಾಡಲಾಗುವುದಿಲ್ಲ ಎಂದು ಹೇಳಿ ಕಳಿಸಿದ್ದಾರೆ.

ಅ.26ರಂದು ನನ್ನ ಮೊಬೈಲ್​ಗೆ ಕರೆಬಂತು. ನೀವು 7 ವರ್ಷದಿಂದ ಏರ್​ಟೆಲ್ ಮೊಬೈಲ್ ನಂಬರ್ ಬಳಸುತ್ತಿದ್ದೀರಿ. ನಿಮಗೆ ಕಂಪನಿ ವತಿಯಿಂದ 4 ಸಾವಿರ ರೂ. ಮೌಲ್ಯದ ವಾಚ್, 16 ಸಾವಿರ ರೂ. ಮೊತ್ತದ ಮೊಬೈಲ್, 10 ಸಾವಿರ ರೂ. ಚೆಕ್ ಅಂಚೆ ಮುಖಾಂತರ ಬರಲಿದೆ, ಸ್ವೀಕರಿಸಿ ಎಂದು ಹೇಳಿದ್ದರು. ವಂಚಕರು ಕನ್ನಡದಲ್ಲಿಯೇ ಮಾತನಾಡಿದ್ದರು. ಅಂಚೆ ಇಲಾಖೆಗೆ ಪಾರ್ಸಲ್ ಬಂದ ಸಂಗತಿ ತಿಳಿದು ಅದನ್ನು ಸ್ವೀಕರಿಸುವ ಮೊದಲು 2 ಸಾವಿರ ರೂ. ಕಟ್ಟಲು ತಿಳಿಸಿದ್ದರು ಎಂದು ಅಂಜುಮ್ ‘ವಿಜಯವಾಣಿ’ಗೆ ತಿಳಿಸಿದರು.

•ಜನಜಾಗೃತಿ ಅಗತ್ಯ

ಬೆಲೆಬಾಳುವ ವಸ್ತುಗಳ ಪಾರ್ಸಲ್ ಅನ್ನು ವಿಪಿಪಿ ಸೇವೆ ಮೂಲಕ ಅಂಚೆ ಇಲಾಖೆ ರವಾನಿಸುತ್ತದೆ. ಪಾರ್ಸಲ್ ಪಡೆದವರು ಸಂದಾಯ ಮಾಡಿದ ಮೊತ್ತವನ್ನು ಪಾರ್ಸಲ್ ಕಳುಹಿಸಿದವರ ವಿಳಾಸಕ್ಕೆ ಮನಿಯಾರ್ಡರ್ ಮಾಡಲಾಗುತ್ತದೆ. ಅಂತರ್ಜಾಲ ಮೂಲಕ ಜನಸಾಮಾನ್ಯರ ಮೊಬೈಲ್ ನಂಬರ್ ಪಡೆದು, ಕರೆಮಾಡಿ ಅಂಚೆ ವಿಳಾಸ ಪಡೆದುಕೊಳ್ಳುತ್ತಾರೆ. ನಂತರ ವಿಪಿಪಿ ಸೇವೆಯನ್ನೇ ಅಸ್ತ್ರವನ್ನಾಗಿ ಬಳಸಿ ಪಾರ್ಸಲ್ ರವಾನಿಸಿ ಜನರನ್ನು ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಜನರು ಜಾಗೃತಿ ವಹಿಸುವುದು ಅಗತ್ಯ ಎಂದು ಪೋಸ್ಟ್​ಮಾಸ್ಟರ್ ತಿಳಿಸಿದರು.

•ತಕ್ಷಣ ದೂರು ಕೊಟ್ಟರೆ ಹಣ ವಾಪಸ್

ವಿಪಿಪಿ ಮೂಲಕ ಪಡೆದ ಪಾರ್ಸಲ್​ನಲ್ಲಿ ಪಾವತಿಸಿದ ಹಣದ ಮೌಲ್ಯದಷ್ಟು ವಸ್ತುಗಳು ಇಲ್ಲದಿದ್ದರೂ ವಂಚನೆಯಿಂದ ಪಾರಾಗಲು ನಿಮಗೆ ಅವಕಾವಿದೆ. ಪಾರ್ಸಲ್ ತಂದುಕೊಡುವ ಪೋಸ್ಟ್ ಆಫೀಸ್ ಸಿಬ್ಬಂದಿ ಎದುರಲ್ಲೇ ಬಾಕ್ಸ್ ತೆರೆದು ನೋಡಿ ನಂತರ ನೀವು ಬಯಸಿದ ವಸ್ತು ಇಲ್ಲದಿದ್ದಲ್ಲಿ ಅದನ್ನು ಫೋಟೋ ತೆಗೆದುಕೊಂಡು ಅಂಚೆ ಕಚೇರಿಗೆ ದೂರು ನೀಡಬಹುದು. ಇದರಿಂದಾಗಿ ಅವರು ನಿಮ್ಮನ್ನು ವಂಚಿಸಿದ ಸಂಸ್ಥೆಗೆ ಹಣ ಪಾವತಿಸುವುದನ್ನು ತಡೆ ಹಿಡಿಯುತ್ತಾರೆ. ತನಿಖೆ ನಂತರ ನಿಮ್ಮ ಮನಿಯಾರ್ಡರ್ ವಾಪಸ್ ಪಡೆಯಬಹುದು. ಒಂದೊಮ್ಮೆ ಅನಾಮಧೇಯ ಪಾರ್ಸಲ್ ಪಡೆದು ಹಣ ಕಳೆದುಕೊಂಡಿದ್ದರೆ ಅವರು ಕೂಡಲೇ ದೂರು ನೀಡಬೇಕು. ಮನಿಯಾರ್ಡರ್ ಅನ್ನು ಸ್ಥಗಿತಗೊಳಿಸಿ ವಿಚಾರಣೆಗೆ ಆದೇಶಿಸಲಾಗುತ್ತದೆ. ಪಾರ್ಸಲ್ ಕಳುಹಿಸಿದವರ ಬಗ್ಗೆಯೂ ವಿಚಾರಣೆ ನಡೆಸಿ ಹಣವನ್ನು ವಾಪಸ್ ಈ ಅವಕಾಶವಿದೆ ಎಂದು ಪ್ರಧಾನ ಅಂಚೆ ಕಚೇರಿಯ ಅಧಿಕಾರಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.