.ಜನಪ್ರಿಯ ಒಗಟುಗಳು೧. ಗೂಡಿನಲ್ಲಿನ ಪಕ್ಷಿ ನಾಡೆಲ್ಲ
ನೋಡುತ್ತದೆ- ಕಣ್ಣು
೨. ಕಾಸಿನ ಕುದುರೆಗೆ ಬಾಲದ ಲಗಾಮು-
ಸೂಜಿ ದಾರ
೩. ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ
ಕೆಂಪಗಾಗಿದೆ, ಮಳೆಯಿಲ್ಲ , ಬೆಲೆಯಿಲ್ಲ , ಮೈ
ಹಸಿರಾಗಿದೆ- ಗಿಳಿ
೪. ಮನೆ, ಮನೆಗೆರಡು ಬಾಗಿಲು, ಬಾಗಿಲ ಮುಂದೆ ,
ಮುಚ್ಚಿದರೆ ಹಾನಿ ಇದೇನು?- ಮೂಗು , ಬಾಯಿ
೫. ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ
ನೋಡಿದರೂ ಬಾಗಿಲಿಲ್ಲ ಇದು ಏನು?-
ಮೊಟ್ಟೆ
೬. ಅಂಗಳದಲ್ಲಿ ಹುಟ್ಟುವುದು, ಅಂಗಳದಲ್ಲಿ
ಬೆಳೆಯುವುದು, ತನ್ನ ಮಕ್ಕಳ ಹಂಗಿಸಿ
ಮಾತಾಡುವುದು ಇದು ಏನು? ಕೋಳಿ
೭. ಇದ್ದಲು ನುಂಗುತ್ತ , ಗದ್ದಲ ಮಾಡುತ್ತಾ,
ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ
ನಾನ್ಯಾರು?- ರೈಲು
೮. ಊಟಕ್ಕೆ ಕುಳಿತವರು ಹನ್ನೆರಡು ಜನರು,
ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ
ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು
ಜನಕ್ಕೂ ಬಡಿಸಿರುತ್ತಾನೆ- ಗಡಿಯಾರ
೯. ಹಸಿರು ಹಾವರಾಣಿ, ತುಂಬಿದ ತತ್ರಾಣಿ,
ಹೇಳದಿದ್ದರೆ ನಿಮ್ಮ ದೇವರಾಣಿ- ಕಲ್ಲಂಗಡಿ
ಹಣ್ಣು
೧೦. ಮೊಟ್ಟೆ ಒಡೆಯೋ ಹಾಗಿಲ್ಲ ಕೊಡ
ಮುಳುಗಿಸೋ ಹಾಗಿಲ್ಲ ಬರಿ ಕೊಡೆ ತಗೊಂಡು
ಬಾರೋ ಹಾಗಿಲ್ಲ- ತೆಂಗು
೧೨. ಕಡಿದರೆ ಕಚ್ಚೋಕೆ ಆಗೋಲ್ಲ , ಹಿಡದ್ರೆ
ಮುಟ್ಟೋಕೆ ಸಿಗೋಲ್ಲ- ನೀರು
೧೩.ಒಂದು ರುಮಾಲು ನಮ್ಮಪ್ಪನೂ
ಸುತ್ತಲಾರ.- ದಾರಿ
೧೪. ಅಬ್ಬಬ್ಬ ಹಬ್ಬ ಬಂತು, ಸಿಹಿಕಹಿ ಎರಡೂ
ತಂತು.- ಯುಗಾದಿ
೧೫. ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ
ಹಾಕಿರುತ್ತೆ .- ಬದನೆಕಾಯಿ.
೧೬. ಸಾಗರ ಪುತ್ರ ,ಸಾರಿನ ಮಿತ್ರ.- ಉಪ್ಪು
೧೭. ಸಾವಿರಾರು ಹಕ್ಕಿಗಳು, ಒಂದೇ ಬಾರಿಗೆ
ನೀರಿಗಿಳಿತವೆ.- ಅಕ್ಕಿ
೧೮. ಗುಡುಗು, ಗುಡುಗಿದರೆ ಸಾವಿರ ನಯನಗಳು
ಅರಳುವುದು.- ನವಿಲು.
೧೯. ಕಣ್ಣಿಲ್ಲ, ಕಾಲಿಲ್ಲ ,ಆದರು ಚಲಿಸುತಿದೆ
ಯಾವುದು ಎಲ್ಲಿದೆ ಬಲ್ಲಿದನ ಹೇಳಿರಲ.- ನದಿ
೨೦. ಹಲ್ಲಿಲ್ಲದ ಹಕ್ಕಿಗೆ ಗೂಡು ತುಂಬ
ಮರಿಗಳು.- ಕೋಳಿ
೨೧. ಮೋಟು ಗೋಡೆ ಮೇಲೆ, ದೀಪ ಉರೀತಿದೆ.-
ಮೂಗುಬೊಟ್ಟು
೨೨. ಹೊಂಚು ಹಾಕಿದ ದೆವ್ವ, ಬೇಡ ಬೇಡ
ಎಂದರೂ ಜೂತೆಯೇ ಬರುತ್ತೆ.- ನೆರಳು
೨೩. ಮರನು ಮರನೇರಿ ಮತ್ತೆ ಮರನೇರಿ
ಬಸವನಾ ಕತ್ತೇರಿ ತಿರುಗುತ್ತಿದೆ- ಗಾಣ
೨೪. ಹೊಕ್ಕಿದ್ದು ಒಂದಾಗಿ ಹೊರಟಿದ್ದು ಅದು
ನೂರಾಗಿ- ಶ್ಯಾವಿಗೆ
೨೫. ಮಣ್ಣು ಆಗಿದೆ ಕಲ್ಲು ಸಿಕ್ಕಿತು, ಕಲ್ಲು
ಆಗಿದೆ ಬೆಳ್ಳಿ ಸಿಕ್ಕಿತು, ಬೆಳ್ಳಿ ಒಡೆದ ನೀರು
ಸಿಕ್ಕಿತು- ತೆಂಗಿನಕಾಯಿ
೨೬. ಕತ್ತಲೆ ಮನೆಯಲಿ ಕಾಳವ್ವ ಕುಂತವ್ಳೆ
ಕುಯ್ಯೋ, ಮರ್ರೋ ಅಂತವಳೇ- ತಂಬೂರಿ
೨೭. ಹಾರಿದರೆ ಹನುಮಂತ, ಕೂತರೆ ಮುನಿ,
ಕೂಗಿದರೆ ಕಾಡಿನ ಒಡೆಯ- ಕಪ್ಪೆ
೨೮. ಕೈಲಿದ್ದಾಗ ಗುದಿಸಾಡುತ್ತೇನೆ, ಕೈ
ಬಿಟ್ಟಾಗ ಗೊರಕೆ ಒಡೆಯುತ್ತೇನೆ-ಕಸಪ
ೊರಕೆ
೨೯. ಗಿಡ ಕೊಡಲಾರದು, ಮರ ಬೆಳೆಸಲಾರದು
ಅದಿಲ್ಲದೆ ಊಟ ಸೇರಲಾರದು- ಉಪ್ಪು
೩೦. ನೀರಿಲ್ಲದ ಸಮುದ್ರ, ಜನರಿಲ್ಲದ ಪಟ್ಟಣ,
ಸಂಚಾರವಿಲ್ಲದ ಮಾರ್ಗಗಳು ಎಲ್ಲಿ?- ನಕ್ಷೆ
೩೧. ಒಬ್ಬನನ್ನು ಹಿಡಿದರೆ ಎಲ್ಲಾರ ಮರ್ಜಿಯು
ಗೊತ್ತಾಗುತ್ತದೆ.- ಅನ್ನದ ಅಗುಳು.
೩೨. ಮೇಲೆ ನೋಡಿದರೆ ನಾನಾ ಬಣ್ಣ,
ಉಜ್ಜಿದರೆ ಒಂದೇ ಬಣ್ಣ.- ಸಾಬೂನು.
೩೩. ಒಂದು ಕೊಂಬಿನ ಗುಳಿ ಅದರ ತಲೆಯೆಲ್ಲಾ
ಮುಳ್ಳು.- ಬದನೆಕಾಯಿ.
೩೪. ನಾನು ತುಳಿದೆ ಅದನ್ನ, ಅದು ತುಳಿಯೆತು
ನನ್ನನ್ನ.- ನೀರು
೩೫. ಕೊಳದ ಒಳಗೆ ಒಂದು ಮರ ಹುಟ್ಟಿ ,ಬೇರು
ಇಲ್ಲ ,ನೀರು ಇಲ್ಲ.- ಎಣ್ಣೆ ದೀಪ.
೩೬. ಬಡ ಬಡ ಬಂದ ಅಂಗಿ ಕಳಚಿದ
,ಬಾವಿಯೊಳಗೆ ಬಿದ್ದ.- ಬಾಳೆ ಹಣ್ಣು .
೩೭. ನೋಡಿದರೆ ನೋಟಗಳು ,ನಕ್ಕರೆ ನಗುಗಳು
,ಒಡೆದರೆ ತುಂಡುಗಳು.- ಕನ್ನಡಿ
೩೮. ಅಕ್ಕ ಪಕ್ಕ ಚದುರಂಗ ,ಅದರ ಹೂವು
ಪದುರಂಗ ಅದರ ಹೆಸರು ಅಯ್ಯಯ್ಯಪ್ಪ
.ಇದು ಏನು?- ದತ್ತುರಿಯ ಮುಳ್ಳು.
೩೯. ವನದಲ್ಲಿ ಹುಟ್ಟಿ ,ವನದಲ್ಲಿ ಬೆಳೆದು
,ವನದಿಂದ ಹೊರಟು ವನಜಲೊನೆ ಶಿರಕ್ಕೆರುವರು.-
ಕಮಲ.
೪೦. ಕಲ್ಲು ಕೋಳಿ ಕುಗುತ್ತದೆ, ಮುಲ್ಲ ಚೂರಿ
ಹಾಕುತ್ತಾನೆ.- ಗಿರಣಿ
೪೧. ಸಾವಿರ ತರುತ್ತೆ ಲಕ್ಷ ತರುತ್ತೆ
ನೀರಿನಲ್ಲಿ ಹಾಕಿದರೆ ಸಾಯುತ್ತೆ.- ದುಡ್ಡು.
೪೨. ತಕ್ಕಡೀಲಿ ಇಟ್ಟು ಮಾರೋ ಹಾಗಿಲ್ಲ,
ಅದಿಲ್ಲದೆ ಹಬ್ಬ ಅಗೋ ಹಾಗಿಲ್ಲ.- ಸಗಣಿ.
೪೩. ಚರಚರ ಕೊಯ್ತದೆ ಕತ್ತಿ ಅಲ್ಲ, ಮಿಣಿಮಿಣಿ
ಮಿಂಚುತ್ತದೆ ಮಿಂಚಲ್ಲ, ಪೆಟ್ಟಿಗೆಗೆ ತುಂಬ್ತದೆ
ದಾಗಿನ ಅಲ್ಲ.- ಗರಗಸ.
೪೪. ಕಡ್ಲೆ ಕಾಳಷ್ಟು ಹಿಂಡಿ ೩೨ ಮನೆ ಸಾರಿಸಿ
ಬಚ್ಚಲ ಪಾಲು ಆಗುತ್ತೆ.- ಹಲ್ಲುಪುಡಿ.
೪೫. ಕರಿ ಗುಡ್ಡ-ಬಿಳಿ ನೀರು ಅದ್ರಾಗೆ
ಕುಂತವಳೇ ಚಂಪರಾಣಿ.- ಗಡಿಗೆಮಜ್ಜಿಗೆ.
೪೬. ಕೆಂಪು ಕುದುರೆ ಮೇಲೆ ಒಬ್ಬ ಏರುತ್ತಾನೆ,
ಒಬ್ಬ ಇಳಿಯುತ್ತಾನೆ .-ರೊಟ್ಟಿ , ದೋಸೆ
೪೭. ಕೆಂದ ಕುದುರೆ ,ಬಿಳಿ ತಡಿ, ಕರೆ ಲಗಾಮು,
ಅಣ್ಣ ಅತ್ತಾನೆ, ತಮ್ಮ ಇಳಿತ್ತಾನೆ- ಬೆಂಕಿ,
ಸುಣ್ಣ ಹಚ್ಚಿದ ಹಂಚು , ಹೊಗೆ , ರೊಟ್ಟಿ
೪೮. ಕಂಬ ಕಂಬದ ಮೇಲೆ ದಿಂಬ, ದಿಂಬದ ಮೇಲೆ
ಲಾಗಲೂಟೆ, ಲಾಗಲೂಟೆ ಮೇಲೆ ಎರಡು ಹುಡ್ಗರು
ಓಡ್ಯಾಡುತಾರೆ.- ಕಣ್ಣು.
೪೯. ಶತ್ತಗಿಂಡಿ, ಶಾರಾಗಿಂಡಿ, ನೀರಾಗಿ
ಹಕ್ಕಿದರೆ ಮುಳುಗದು ಮುತ್ತಿನ ಗಿಂಡಿ.- ಬೆಣ್ಣೆ
ಉಂಡೆ.
೫೦.ಕುತ್ತಿಗೆ ಇದೆ ತಲೆ ಇಲ್ಲ, ತೋಳಿದೆ
ಬೆರಳಿಲ್ಲ, ದಡಾ ಇದೆ, ಕಾಲಿಲ್ಲ.- ಅಂಗಿ .
೫೧. ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ-
ಮಲ್ಲಿಗೆ
೫೨. ಅಂಗೈ ಅಗಲದ ರೊಟ್ಟಿಗೆ ಲೆಕ್ಕವಿಲ್ಲದಷ್ಟು
ಉಪ್ಪಿನಕಾಯಿ- ಆಕಾಶ , ನಕ್ಷತ್ರ
೫೩. ಸುಟ್ಟ ಹೆಣ ಮತ್ತೆ ಸುಡ್ತಾರೆ-ಇದ್ದಿಲ
ು
೫೪. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ-
ಹಲಸಿನ ಹಣ್ಣು , ಬೀಜ
೫೫. ಅಂಗೈ ಕೊಟ್ಟರೆ ಮುಂಗೈನೂ
ನುಂಗುತ್ತದೆ- ಬಳೆ
೫೬. ಒಂದು ಹಪ್ಪಳ ಊರಿಗೆಲ್ಲ ಊಟ- ಚಂದ್ರ
೫೭. ಆಕಾಶದಲ್ಲಿ ಕೊಡಲಿಗಳು ತೇಲಾಡುತ್ತವೆ-
ಹುಣಸೇಹಣ್ಣು
೫೮. ನೀಲಿ ಕೆರೆಯಲಿ ಬಿಳಿ ಮೀನು- ನಕ್ಷತ್ರ
೫೯. ಒಂದು ತೇಲುತ್ತೆ ,ಒಂದು ಮುಳುಗುತ್ತೆ,
ಒಂದು ಕರಗುತ್ತೆ.- ವಾರ,ತಿಂಗಳು,ವರ್ಷ
೬೦. ಬಾ ಅಂದರೆ ಬರೋಲ್ಲ , ಹೋಗು ಅಂದರೆ
ಹೋಗೋಲ್ಲ- ಮಳೆ
೬೧. ನಾ ಇರುವಾಗ ಬರುತ್ತೆ , ನಾ ಹೋದ
ಮೇಲೂ ಇರುತ್ತೆ- ಕೀರ್ತಿ
೬೨. ಬೆಳ್ಳಿ ಸಮುದ್ರದಲ್ಲಿ ಕಪ್ಪು ಸೂರ್ಯ-
ಕಣ್ಣು
೬೩ ಅಕ್ಕನ ಮೇಲೆ ಛತ್ರಿ- ರೆಪ್ಪೆ
೬೪. ತಮ್ಮಂಗೆ ಮೂರು ಕಣ್ಣು ಅಮ್ಮಂಗೆ
ಒಂದೇ ಕಣ್ಣು- ತೆಂಗಿನ ಕಾಯಿ
೬೫. ಅಕ್ಕ ಓದುತ್ತಾಳೆ ತಂಗಿ ನಡೀತ್ತಾಳೆ-
ಕಣ್ಣು
೬೬.ಅಮ್ಮನ ಆಕಾಶವಾಣಿ ನಾನು- ಮಗು
೬೭. ಅಂಗಡಿಯಿಂದ ತರೋದು
ಮುಂದಿಟ್ಟುಕೊಂಡು ಅಳೋದು-ಈರುಳ್ಳಿ
೬೮. ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿಕೊಂಡು
ನುಂಗಣ್ಣ- ಬಾಳೆಹಣ್ಣು
೬೯. ಗೂಡ್ನಲ್ಲಿರೋ ಜೋಡಿ ಪಕ್ಷಿ ಊರೆಲ್ಲ
ನೋಡುತ್ತೆ-ಕಣ್ಣು
೭೦. ಒಂದು ಮಡಕೆ, ಮಡಕೆಯೊಳಗೆ, ಕುಡಿಕೆ,
ಕುಡಿಕೆಯಲ್ಲಿ ಸಾಗರ-ತೆಂಗಿನ ಕಾಯಿ
೭೧. ನೀನಿಲ್ಲದೆ ಊಟವಿಲ್ಲ- ಉಪ್ಪು
೭೨. ಬಿಳಿ ಸರದಾರನಿಗೆ ಕರಿ ಟೋಪಿ-ಬೆಂಕಿಕಡ್ಡಿ
೭೩. ಕಾಲಿಲ್ದ ಹುಡುಗಿಗೆ ಮಾರುದ್ದ ಕಡಿವಾಣ –
ಸೂಜಿ
೭೪. ಮೂರು ಕಾಸಿನ ಕುದುರೆಗೆ ಮುನ್ನೂರು
ರೂಪಾಯಿನ ಹಗ್ಗ- ಹೇನು ಕೂದಲು
೭೫. ಕೆಂಪು ಕುದುರೆಗೆ ಲಗಾಮು, ಓಬ್ಬ
ಹತ್ತುತ್ತಾನೆ , ಇನ್ನೊಬ್ಬ ಇಳಿತಾನೇ-
ಬೆಂಕಿ,ಬಾಣಲೆ , ದೋಸೆ
೭೬ . ಒಂದು ಮನೆಗೆ ಒಂದೇ ತೊಲೆ- ತಲೆ
೭೭. ಕಂದ ಬಂದ ಕೊಂದ ತಂದ-ಶ್ರೀ ರಾಮ
ಚಂದ್ರ
೭೮. ಕಲ್ಲಿಲ್ಲದ ಬೆಟ್ಟ ಮರಳಿಲ್ಲದ
ಮರುಭೂಮಿ- ಭೂಪಟ
೭೯. ಚಿಕ್ಕಕ್ಕನಿಗೆ ಪುಕ್ಕುದ್ದ- ಸೌಟು
೮೦. ಎರಡು ಮನೆಗೆ ಒಂದೇ ದೂಲ- ಮೂಗು
೮೧. ನೀರಿರೋತಾವ ನಿಲ್ಲಲೇ ಕೋಣ- ಚಪ್ಪಲಿ
೮೨. ಹೋದ ನೆಂಟ, ಬಂದ ದಾರಿ ಗೊತ್ತಿಲ್ಲ-
ನೆರಳು
೮೩. ಮರದೊಳಗೆ ಮರ ಹುಟ್ಟಿ ಮರ ಚಕ್ರ
ಕಾಯಾಗಿ ತಿನ್ನಬಾರದ ಹಣ್ಣು ಬಲು ರುಚಿ-
ಮನುಷ್ಯನ ಹುಟ್ಟು ಮಗು
೮೪. ಕಲ್ಲರಳಿ ಹೂವಾಗಿ, ಎಲ್ಲರಿಗೂ ಬೇಕಾಗಿ,
ಮಲ್ಲಿಕಾರ್ಜುನನ ಗುಡಿಗೆ ಬೆಳಕಾಗಿ, ಬಲ್ಲವರು
ಹೇಳಿ -ಸುಣ್ಣ
೮೫. ಚಿಣಿಮಿನಿ ಎನ್ನುವ ಕೆರೆ, ಚಿಂತಾಮಣಿ
ಎನ್ನುವ ಹಕ್ಕಿ, ಕೆರೆ ಬತ್ತಿದರೆ ಹಕ್ಕಿಗೆ ಮರಣ –
ದೀಪ
೮೬. ಹೋಗುತ್ತಾ, ಬರುತ್ತಾ ಇರುವುದು
ಎರಡು,ಹೋದ ಮೇಲೆ ಬರಲಾರವು ಎರಡು-
ಸಿರಿತನ-ಬಡತನ , ಪ್ರಾಣ -ಬಡತನ
೮೭. ಒಂದು ಹಸ್ತಕ್ಕೆ ನೂರೆಂಟು ಬೆರಳು-
ಬಾಳೆಗೊನೆ
೮೮. ಎಲ್ಲರ ಮನೆ ಅಜ್ಜಿಗೆ ಮೈಯೆಲ್ಲಾ ಕಜ್ಜಿ –
ಜರಡಿ
೮೯. ಎಂದರೆ ತೆರಿತಾವ, ಅಪ್ಪ ಎಂದರೆ
ಮುಚ್ಚುತಾವ- ಬಾಯಿ
೯೦. ದಾಸ್ ಬುರುಡೆ ದೌಲಥ ಬುರುಡೆ,
ಲೋಕಕ್ಕೆಲ್ಲ ಎರಡೇ ಬುರುಡೆ- ಸೂರ್ಯ ,
ಚಂದ್ರ
೯೧. ಅಪ್ಪ ಆಕಾಶಕ್ಕೆ ಅವ್ವ ಪಾತಾಳಕ್ಕೆ ಮಗ
ವ್ಯಾಪಾರಕ್ಕೆ ಮಗಳು ಮದುವೆಗೆ – ಅಡಿಕೆ ಮರ
೯೨.ಹಾರಾಡುತ್ತಿದೆ ಗಾಳಿಪತವಲ್ಲ , ಬಣ್ಣ
ಮೂರಿರುವುದು ಕಾಮನಬಿಲ್ಲಲ್ಲ- ಧ್ವಜ
೯೩. ನೀಲಿ ಸಾಗರದಲ್ಲಿ ಬೆಳ್ಳನೆ ಮೀನುಗಳು
ನಾನ್ಯಾರು?- ತಾರೆಗಳು
೯೪. ಬಿಡಿಸಿದರೆ ಹೂವು, ಮದಚಿದರೆ ಮೊಗ್ಗು
,ಇದು ಏನು?- ಛತ್ರಿ
೯೫. ಆರು ಕಾಲು ಅಂಕಣ್ಣ ಮೂರು ಕಾಲು
ದೊಂಕಣ್ಣ ಸದಾ ಮೀಸೆ ತಿರುವಣ್ಣ- ನೊಣ
೯೬. ಒಂಟಿಕಾಲಿನ ಕುಂಟ. ನಾನ್ಯಾರು?- ಬುಗರಿ
೯೭. ಕಪ್ಪು ಕಂಬಳಿ ನೆಂಟ ಎಲ್ಲವನು ನಾಶ
ಮಾಡೋಕೆ ಹೊಂಟ- ಇಲಿ
೯೮. ಹಲ್ಲು ಹಾಕಿದರೆ ಹಾಲು ಕೆಡೋಲ್ಲ ಕಲ್ಲು
ಹಾಕಿದರೆ ಕೆಡುತ್ತೇ- ಕಳ್ಳಿ
೯೯. ಕಾಡಿನಲ್ಲಿ ಹುಟ್ಟುವುದು ಕಾಡಿನಲ್ಲಿ
ಬೆಳೆಯುವುದು ಕಡಿದಲ್ಲಿ ಕಂಪ ಸೂಸುವೆನು-
ಶ್ರೀಗಂಧ
೧೦೦. ಹಸಿರು ಕೋಟೆ, ಬಿಳಿ ಕೋಟೆ, ಕೆಂಪಿನ
ಕೋಟೆ ಈ ಕೋಟೆಯೊಳಗೆ ಕಪ್ಪು
ಸಿಪಾಯಿಗಳು- ಪರಂಗಿ ಹಣ್ಣು
೧೦೧.ಒಂದು ಮನೆಯಲ್ಲಿ ಮೂರು ಜನ ಅಕ್ಕ-
ತಂಗಿಯರಿದ್ದಾರೆ ಆದರೆ ಒಬ್ಬರ ಮುಖ ಕಂಡರೆ
ಒಬ್ಬರಿಗೆ ಕಾಣೋಲ್ಲ- ಜಾದಳಕಾಯಿ
೧೦೨. ಅಂಕಡೊಂಕಿನ ಬಾವಿ ಹೊಕ್ಕು ನೋಡಿದ್ರೆ
ಮುಕ್ಕ ನೀರಿಲ್ಲ- ಕಿವಿ
೧೦೩. ಕೆಂಪು ಕುದುರೆ ಕರಿ ತಡಿ ಒಬ್ಬ ಏರುತಾನೆ
ಒಬ್ಬ ಇಳಿತಾನೆ-ರೊಟ್ಟಿ
೧೦೪. ಮೂರೂ ಪಕ್ಷಿಗಳು ಗೂಡಿಗೆ ಹೋಗುವಾಗ
ಬೇರೆ ಬೇರೆ ಬಣ್ಣ ಬರುವಾಗ ಬಣ್ಣ-ಎಲೆ ಅದಿಕೆ
೧೦೫. ಆಕಾಶದೊಳಗಿನ ಗಿಣಿ ಊಟದ ಹೊತ್ತಿಗೆ
ರಾಣಿ- ಬಾಳೆಲೆ
೧೦೬. ಎರಡು ಬಾವಿಗಳ ನಡುವೆಯೊಂದು
ಸೇತುವೆ- ಮೂಗು
೧೦೭. ತಲೆ ಇಲ್ಲ , ನಡು ಇಲ್ಲ , ಕೈಗಳಿದ್ದರು
ಬೆರಳಿಲ್ಲ-ಕೋಟು ಅಂಗಿ
೧೦೮. ತಿಂಡಿಗೆ ಕಡಿಮೆ ಇಲ್ಲ ,ತೀರ್ಥ ಕುಡಿದರೆ
ಸಾವು -ವಿಷ
೧೦೯ . ಒಬ್ಬಳು ಮುಲುಗಿದಳು, ಒಬ್ಬಳು
ಕರಗಿದಳು , ಒಬ್ಬಳು ತೇಲಿದಳು -ಅಡಿಕೆ , ಸುಣ್ಣ
೧೧೦.ಹೋಗೋದು ಮುಳುಗೋದು ತರೋದು
ಏನು?- ಬಿಂದಿಗೆ
೧೧೧. ಕಿರೀಟ ಇದೆ ರಾಜ ಅಲ್ಲ, ಕಲ
ತಿಳಿಸುತ್ತ್ತೆ ಗಡಿಯಾರವಲ್ಲ- ಕೋಳಿ
೧೧೨. ಒಂದು ಹಣ್ಣಿಗೆ ಹನ್ನೆರಡು ತೊಳೆ
ಮತ್ತೂ ಮೂವತ್ತು ಬೀಜ- ವರ್ಷ
೧೧೩. ಗುಂಡಾಕಾರ ಮೈಯೆಲ್ಲಾ ತೂತು- ದೋಸೆ
೧೧೪.ಬಂಗಾರದ ಗುಬ್ಬಿ ಬಾಲದಲ್ಲೇ
ನೀರನ್ನು ಕುಡಿಯುತ್ತೆ- ಚಿಮಿಣಿ
೧೧೫. ಒಂದು ಮರ , ಮರದಾಗ ಅಲ್ಲ,
ಅಲ್ಲಿನಾಗ ಕೊಬ್ರಿ ಗುಂಡ- ಆಕಾಶ ನಕ್ಷತ್ರ
ಚಂದ್ರ
೧೧೬. ಅನ್ನ ಮಾಡಲಿಕ್ಕೆ ಬಾರದಂತಹ ಅಕ್ಕಿ
ಯಾವುದು- ಏಲಕ್ಕಿ
೧೧೭. ಬೆಳ್ಳಿ ಬಟ್ಟಲಲ್ಲಿ ಮುತ್ತಿನ ಬಿಂದು-
ತಾರೆ
೧೧೮. ಲಟಪಟ ಲೇಡಿಗೆ ಒಂದೇ ಕಣ್ಣು- ಸೂಜಿ
೧೧೯. ಹಸಿರು ಕೋಲಿಗೆ ಮುತ್ತಿನ ತುರಾಯಿ-
ಜೋಳದ ತೆನೆ
೧೨೦. ಬಿಳಿ ಹುಲ್ಲಲ್ಲಿ ಕೆಂಪು ಕುರಿಮರಿ- ನಾಲಿಗೆ
೧೨೧. ಸೂಜಿ ಸಣ್ಣಕಾಗೆ ಬಣ್ಣ – ಕೂದಲು
೧೨೨. ಹೋದರು ಇರುತ್ತೆ ಬಂದರೂ
ಕಾಡುತ್ತೆ.ಇದು ಏನು?- ನೆನಪು
೧೨೩. ಆರು ಕಾಲಿನ ಆನೆ, ಆನೆ ತಿನ್ನುತ್ತೆ ನೀರು
ಕುಡಿಯಲ್ಲ- ನುಸಿ
೧೨೪. ಊರಿಗೆಲ್ಲ ಒಂದೇ ಕಂಬಳಿ- ಆಕಾಶ
೧೨೫. ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ- ಕುಂಕುಮ
೧೨೬. ಕರಿ ಹೊಲದ ಮದ್ಯದಲ್ಲಿ ಬೇಲಿ ದಾರಿ-
ಬೈತಲೆ
೧೨೭. ಒಂದು ಬತ್ತಿ ಮನೆಯೆಲ್ಲ ಬೆಳಕು- ಸೂರ್ಯ
೧೨೮.ಕಣ್ಣಿಗೆ ಕಾಣೋದಿಲ್ಲ, ಕೈಗೆ ಸಿಗೋದಿಲ್ಲ
-ಗಾಳಿ
೧೨೯. ಕಣ್ಣಿಗೆ ಹತ್ತಿರ ಕಾಲಿಗೆ ದೂರ- ಬೆಟ್ಟ
೧೩೦. ಊಟಕ್ಕೆ ಮೊದಲು ನಾನು ಅಂತ ಬರುತ್ತೆ
-ಬಾಳೆ ಎಲೆ , ತಟ್ಟೆ
೧೩೧. ಹಸಿರು ಮೈ ಹಳದಿ ಮೈ ಪೇಟೇಲಿ ಕುಳಿತು
ಎಲ್ಲರನ್ನು ಕರೆಯುತ್ತೆ- ಮಾವು
೧೩೨. ಹುಲಿಯ ಚಿಕ್ಕಮ್ಮ , ಇಲಿಯ ಮುಕ್ಕಮ್ಮ-
ಬೆಕ್ಕು
೧೩೩. ಕೂಗಿದರೆ ರಾವಣ, ಹಾರಿದರೆ ಹನುಮಂತ,
ಕೂತರೆ ಮುನಿ- ಕಪ್ಪೆ
೧೩೪. ಕಲ್ಲಲ್ಲಿ ಹುಟ್ಟುವುದು, ಕಲ್ಲಲ್ಲಿ
ಬೆಳೆಯುವುದು, ನೆತ್ತಿಯಲ್ಲಿ ಕುತಗುಟ್ಟುವುದು-
ಸುಣ್ಣ
೧೩೫. ಕಾಂತಾಮಣಿ ಎಂಬ ಪಕ್ಷಿ, ಚಿಂತಾಮಣಿ
ಎಂಬ ಕೆರೆ, ಕೆರೆಯಲ್ಲಿ ನೀರಿಲ್ದೆ ಹೋದ್ರೆ
ಪಕ್ಷಿಗೆ ಮರಣ- ದೀಪ
೧೩೬. ಕಲ್ಲು ತುಳಿಯುತ್ತೆ, ಮುಳ್ಳು ಮೆಯುತ್ತೆ,
ನೀರು ಕಂಡ್ರೆ ನಿಲ್ಲುತ್ತೆ- ಚಪ್ಪಲಿ
೧೩೭. ಕಾಲಿಲ್ಲದೇ ನಡೆಯುವುದು, ತಲೆ ಎಲ್ಲಡೆ
ನುಡಿಯುವುದು, ಮೇಲು ಕೆಳಗಾಗಿ ಓದುವುದು- ನದಿ
೧೩೮. ಜಂಬು ನೇರಳೆ ಮರ, ಎಳೆದರೆ ನಾಲ್ಕು
ಬಾವಿ ನೀರು ಒಂದೇ ಆಗುತ್ತದೆ- ಮೇಡು
೧೩೯. ಇಡೀ ಮನೆಗೆಲ್ಲ ಒಂದೇ ಕಂಬಳಿ, ಬಾಯಿ
ತೆರೆದರೆ ಮೂಗು ಮುಚ್ಚುತ್ತಿ-ಆಕಾಶ
೧೪೦. ಒಂದು ಕಾಲಿನ ಪಕ್ಷಿಗೆ ಒಂಭತ್ತು ರೆಕ್ಕೆ,
ಒಂದೇ ಕಾಲಲಿ ನಿಂತು ನೂರಾರು ಮೊಟ್ಟೆ
ಇಡುತ್ತದೆ- ಜೋಳದ ದಂಟು
೧೪೧. ಎತ್ತ ಹೋದರು ಕುತ್ತಿಗೆಗೆ ಕೈ
ಹಾಕುತ್ತಾರೆ! ನಾನ್ಯಾರು?- ಸಾಲಿಗ್ರಾಮ
೧೪೨. ಕರಿ ಹುಡುಗನಿಗೆ ಬಿಳಿ ಟೋಪಿ – ಹೆಂಡದ
ಮಡಿಕೆ
೧೪೩. ಬಿಳಿ ಆಕಾಶದಲ್ಲಿ ಕಪ್ಪು
ನಕ್ಷತ್ರಗಳು,ಇದನ್ನು ನೋಡಲು ಜನ
ಕಾದಿಹರು-ನಾಣ್ಯ
೧೪೪. ಗೋಡೆ ಗುದ್ದಪ್ಪ ನೀನಿದ್ದಲ್ಲಿ ನಿದ್ದೆ
ಇಲ್ಲಪ್ಪ.- ತಿಗಣೆ
೧೪೫. ಕುದುರೆ ಬಾಲದಿಂದ ನೀರು
ಕುಡಿಯುತ್ತದೆ- ಹೇನು
೧೪೬. ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು
ಪ್ರಜೆಗಳು.- ಸೀತ ಫಲ
೧೪೭. ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ.-
ಕಣ್ಣು
೧೪೮. ಮನೆ ಮೇಲೆ ಮಲ್ಲಿಗೆ ಹೂವು.- ಮಂಜು
೧೪೯. ಹಾರಿದರೆ ಹನುಮಂತ ಕೂಗಿದರೆ ಶಂಖ.-
ಕಪ್ಪೆ
೧೫೦. ನೋಡಿದರೆ ಕಲ್ಲು ನೀರು ಹಾಕಿದರೆ
ಮಣ್ಣು.- ಸುಣ್ಣ
೧೫೧.ಸುದ್ದಿ ಸೂರಪ್ಪ ದೇಶವೆಲ್ಲಾ
ಸುತ್ತಾಡ್ತಾನೆ.- ಪೋಸ್ಟ್ ಕಾರ್ಡ್
೧೫೨. ಬಿಳಿ ಕುದುರೆಗೆ ಹಸಿರು ಬಾಲ.- ಮೂಲಂಗಿ
೧೫೩. ಚಿಕ್ಕ ಬೆಟ್ಟದಲ್ಲಿ ಪುಟ್ಟ ಚಂದ್ರ.-
ಕುಂಕುಮ
೧೫೪. ಬರೋದ ಕಂಡು ಕೈ ಒಡ್ತಾರೆ.- ಬಸ್
೧೫೫. ಹತ್ತಾರು ಮಕ್ಕಳ ತಂದೆ ಅದಕ್ಕೆ ತಲೆಯ
ಮೇಲೆ ಜುಟ್ಟು-ಹುಂಜ
೧೫೬. ಹಸಿರು ಮುಖಕ್ಕೆ ವಿಪರೀತ ಕೋಪ ,
ಕೋಪ ಮಾಡಿಕೊಳ್ಳದೆ ನಾನ್ಯಾರೆಂದು
ಹೇಳಿ?- ಮೆಣಸಿನಕಾಯಿ
೧೫೭. ಅಜ್ಜಿ ಗುದ್ದಿದರೆ ಮನೆಯೆಲ್ಲ ಮಕ್ಕಳು
ಈಗ ಹೇಳಿ ನಾನ್ಯಾರು- ಬೆಳ್ಳುಳ್ಳಿ
೧೫೮. ಹಗಲಲ್ಲಿ ಮಾಯಾ ರಾತ್ರಿಯಲ್ಲಿ
ಪ್ರತ್ಯಕ್ಷ ?ನಾನ್ಯಾರು ಹೇಳಿ?- ನಕ್ಷತ್ರ
೧೫೯.ಹಗ್ಗ ಹಾಸಿದೆ ಕೋಣ ಮಲಗಿದೆ-
ಕುಂಬಳಕಾಯಿ , ಬಳ್ಳಿ
೧೬೦. ನನ್ನ ಕಂಡರೆ ಎಲ್ಲರು ಓದೀತಾರೆ –
ಚೆಂಡು
೧೬೧. ಹಳ್ಳಿ ಗಡಿಯಾರ, ಒಳ್ಳೆ ಆಹಾರ-ಕೋಳಿ