Study corner

.70007:

1. ‘ರಿವರ್ ಆಫ್ ಲೈಫ್’ ಎಂದು ಕರೆಯಲ್ಪಡುವ ಯಾವುದು?

ಉತ್ತರ: ರಕ್ತ
2. ರಕ್ತ ಪರಿಚಲನೆಯನ್ನು ಕಂಡುಹಿಡಿಯಲಾಯಿತು?

ಉತ್ತರ: ವಿಲಿಯಂ ಹಾರ್ವೆ
3. ವಯಸ್ಕದಲ್ಲಿರುವ ಒಟ್ಟು ರಕ್ತದ ಪ್ರಮಾಣ?

ಉತ್ತರ: 5-6 ಲೀಟರ್ಸ್
4. ಮಾನವ ರಕ್ತದ ಪಿಹೆಚ್ ಮೌಲ್ಯ?

ಉತ್ತರ: 7.35-7.45
5. ಸಾಮಾನ್ಯ ರಕ್ತದ ಕೊಲೆಸ್ಟರಾಲ್ ಮಟ್ಟ?

ಉತ್ತರ: 150-250 ಮಿಲಿಗ್ರಾಂ / 100 ಮಿಲಿ
6. ರಕ್ತದ ದ್ರವ ಭಾಗ?

ಉತ್ತರ: ಪ್ಲಾಸ್ಮಾ
7. ಪ್ಲಾಸ್ಮಾ ಪ್ರೋಟೀನ್ ಫೈಬ್ರಿನೋಜೆನ್ ಸಕ್ರಿಯ ಪಾತ್ರವನ್ನು ಹೊಂದಿದೆ?

ಉತ್ತರ: ರಕ್ತದ ಕ್ಲೋಟಿಂಗ್.
8. ಪ್ಲಾಸ್ಮಾ ಪ್ರೋಟೀನ್ ಗ್ಲೋಬ್ಯುಲಿನ್ಸ್ ಕಾರ್ಯನಿರ್ವಹಿಸುತ್ತದೆ?

ಉತ್ತರ: ಪ್ರತಿಕಾಯಗಳು
9. ಪ್ಲಾಸ್ಮಾ ಪ್ರೋಟೀನ್ಗಳು ರಕ್ತ ಪಿಹೆಚ್ ಅನ್ನು ಕಾಯ್ದುಕೊಳ್ಳುತ್ತವೆ?

ಉತ್ತರ: ಆಲ್ಬಮ್ಗಳು
10. ಬೈಕಾನ್ಕೇವ್ ಡಿಸ್ಕ್ ಆಕಾರದ ರಕ್ತ ಕಣ?

ಉತ್ತರ: ಆರ್ಬಿಸಿ (ಎರಿಥ್ರೋಸೈಟ್ಗಳು)
11. ನಾನ್ ನ್ಯೂಕ್ಲಿಯೇಟೆಡ್ ರಕ್ತ ಕಣ?

ಉತ್ತರ: ಆರ್ಬಿಸಿ (ಎರಿಥ್ರೋಸೈಟ್ಗಳು)
12. ಆರ್ಬಿಸಿಯಲ್ಲಿ ಉಸಿರಾಟದ ವರ್ಣದ್ರವ್ಯಗಳು ಇರುತ್ತವೆ?

ಉತ್ತರ: ಹೆಮೋಗ್ಲೋಬಿನ್
13. ಆರ್ಬಿಬಿಯಲ್ಲಿ ರೆಡ್ ಪಿಗ್ಮೆಂಟ್ ಇರುವುದು?

ಉತ್ತರ: ಹೆಮೋಗ್ಲೋಬಿನ್
14. ಆರ್ಬಿಸಿ ಯು ಉತ್ಪಾದನೆಯಾಯಿತು?

ಉತ್ತರ: ಮೂಳೆ ಮಜ್ಜೆಯ
15. ಹೆಮೋಗ್ಲೋಬಿನ್ನ ಐರನ್ ಹೊಂದಿರುವ ಪಿಗ್ಮೆಂಟ್?

ಉತ್ತರ: ಹೇಮ್
16. ಹೆಮೋಗ್ಲೋಬಿನ್ ವರ್ಣದ್ರವ್ಯವನ್ನು ಹೊಂದಿರುವ ಪ್ರೋಟೀನ್?

ಉತ್ತರ: ಗ್ಲೋಬಿನ್
17. ಆರ್ಬಿಸಿಯ ಗ್ರೇವ್ಯಾರ್ಡ್?

ಉತ್ತರ: ತೆಳು
18. ದೇಹದಲ್ಲಿ ರಕ್ತ ಬ್ಯಾಂಕ್?

ಉತ್ತರ: ತೆಳು
19. ಆರ್ಬಿಬಿಯ ಜೀವಿತಾವಧಿ?

ಉತ್ತರ: 120 ದಿನಗಳು
20. ಒಟ್ಟು ಎಣಿಕೆ ಒಂದು ಉಪಕರಣದ ಮೂಲಕ ಅಳೆಯಲಾಗುತ್ತದೆ?

ಉತ್ತರ: ಹೆಮೊಸೈಟೊಮೀಟರ್
21. ಆರ್ಬಿಸಿ ಎಣಿಕೆಗೆ ಇಳಿಮುಖವಾಗಿದೆಯೆ?

ಉತ್ತರ: ರಕ್ತಹೀನತೆ
22. ಆರ್ಬಿಸಿ ಎಣಿಕೆಗೆ ಏರಿಕೆ ಎನ್ನುತ್ತಾರೆ?

ಉತ್ತರ: ಪಾಲಿಸಿಟಮಿಯಾ
23. ರಕ್ತದಲ್ಲಿನ ಹೆಚ್ಚಿನ ಪ್ರಮಾಣದ ಬಿಲಿರುಬಿನ್ ಕಾರಣವಾಗುತ್ತದೆ?

ಉತ್ತರ: ಕಾಮಾಲೆ
24. ರೋಗದ ನಿರೋಧಕ ರಕ್ತ ಕಣ?

ಉತ್ತರ: ಡಬ್ಲ್ಯೂಬಿಸಿ (ಲ್ಯುಕೋಸೈಟ್ಸ್)
25. ಯಾವ ಡಬ್ಲ್ಯುಬಿಸಿಯನ್ನು ದೇಹದ ಸೈನಿಕರು ಎಂದು ಕರೆಯಲಾಗುತ್ತದೆ?

ಉತ್ತರ: ನ್ಯೂಟ್ರೋಫಿಲ್ಗಳು
26. ದೊಡ್ಡ WBC?

ಉತ್ತರ: ಮೊನೊಸಿಸ್
27. ಚಿಕ್ಕ WBC?

ಉತ್ತರ: ಲಿಂಫೋಸೈಟ್ಸ್
28. ವಿಬಿಸಿ ಉತ್ಪಾದಿಸುವ ಪ್ರತಿಕಾಯಗಳು?

ಉತ್ತರ: ಲಿಂಫೋಸೈಟ್ಸ್
29. ಡಬ್ಲ್ಯೂಬಿಸಿ ಜೀವಿತಾವಧಿ?

ಉತ್ತರ: 10-15 ದಿನಗಳು
30.ರಕ್ತ ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ರಕ್ತ ಕಣ ಪ್ರಮುಖ ಪಾತ್ರವಹಿಸುತ್ತದೆ?

ಉತ್ತರ: ಥ್ರಂಬೋಸೈಟ್ಸ್ (ಪ್ಲೇಟ್ಲೆಟ್ಗಳು)
31. ನಾಳಗಳನ್ನು ಕರೆಯುತ್ತಾರೆ?

ಉತ್ತರ: ಥ್ರಂಬಸ್
32. ರಕ್ತದಲ್ಲಿ ಆಂಟಿಕಾಗೋಲಂಟ್ ಇರುವವರು?

ಉತ್ತರ: ಹೆಪಾರಿನ್
33. ಒಂದು ಆನುವಂಶಿಕ ರಕ್ತಸ್ರಾವ ರೋಗ?

ಉತ್ತರ: ಹೆಮೊಫಿಲಿಯಾ
34. ರಕ್ತಸ್ರಾವದ ಕಾಯಿಲೆ?

ಉತ್ತರ: ಹೆಮೊಫಿಲಿಯಾ
35. ಕ್ರಿಸ್ಮಸ್ ರೋಗ?

ಉತ್ತರ: ಹೆಮೊಫಿಲಿಯಾ

ವಿದ್ಯಾರ್ಥಿ ಪುಟ Students page

.

🌺

🌺

*

ನೆನಪಿನ ಬುತ್ತಿಯನ್ನು ಗಟ್ಟಿಗೊಳಿಸೋಣ*🌺🌺

26 Dec, 2016(ಪರಮೇಶ್ವರಯ್ಯ ಸೊಪ್ಪಿಮಠ)

_ಮಕ್ಕಳಲ್ಲಿ ಜ್ಞಾಪಕಶಕ್ತಿಯ ಕೊರತೆ ಅವರ ಶಿಕ್ಷಣ ಮತ್ತು ವೈಯಕ್ತಿಕ ಬದುಕಿನ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಜ್ಞಾಪಕಶಕ್ತಿಯ ಕೊರತೆ ಮಕ್ಕಳ ಆತ್ಮವಿಶ್ವಾಸವನ್ನೂ ಕಸಿದುಕೊಳ್ಳುತ್ತದೆ.  ನಮ್ಮ ಮೆದುಳು ತನ್ನದೇ ಆದ ನಿರ್ದಿಷ್ಟ ರೀತಿಯ ಕಾರ್ಯವೈಖರಿಯನ್ನು ಹೊಂದಿದೆ. ಕಲಿಕೆ ಮತ್ತು ಕಲಿತದ್ದು ಉಳಿಯುವಿಕೆ – ವಿಶೇಷ ಪ್ರಕಿಯೆಗಳು. ಜ್ಞಾಪಕಶಕ್ತಿಯು ನೊಂದಣಿ, ಮುದ್ರಣ, ಸ್ಮರಣೆ – ಈ ಮೂರು ಹಂತಗಳಲ್ಲಿ ನಡೆಯುತ್ತದೆ. ಇವು ಜ್ಞಾಪಕಶಕ್ತಿ ಪ್ರಕ್ರಿಯೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ._

 ನೆನಪಿನ ಶಕ್ತಿ ಕಡಿಮೆಗೆ ಕಾರಣಗಳು

  • ಮನೋರಂಜನಗೆ ಮಾತ್ರ ಆದ್ಯತೆ:

ದೂರದರ್ಶನ, ಮೊಬೈಲ್, ಕಂಪ್ಯೂಟರ್ ಮುಂತಾದವು ಮಕ್ಕಳನ್ನು ಹೆಚ್ಚು ಹಿಡಿದಿಡುತ್ತಿವೆ. ಮಕ್ಕಳು ಈ ಯಂತ್ರಗಳ ದಾಸರಾಗಿ ಗೇಮ್‌ಗಳಲ್ಲಿ ಮುಳುಗಿಹೋಗುತ್ತಾರೆ. ಇವು ಓದಿನ ಆಸಕ್ತಿಯನ್ನು ಕಡಿಮೆಗೊಳಿಸುತ್ತವೆ. ಹಾಗೆಂದು ಇವುಗಳಿಂದ ಸಂಪೂರ್ಣ ದೂರವಿರುವುದು ಒಳ್ಳೆಯದಲ್ಲ.  ಎಷ್ಟು ಅವಶ್ಯಕವೋ ಅಷ್ಟನ್ನು ಮಾತ್ರ ಬಳಸುವಂತೆ ಮಕ್ಕಳನ್ನು ಪ್ರೇರೇಪಿಸಬೇಕಿದೆ.

  • ಮೆದುಳಿಗೆ ಮೇವು ಹಾಕುತ್ತಿಲ್ಲ:

 ನಾವು ನಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸುವ ಬದಲು ಪ್ರತಿಯೊಂದು ವಿಷಯಕ್ಕೂ ಕ್ಯಾಲ್ಕುಲೇಟರ್, ಮೊಬೈಲ್‌ಗಳನ್ನು ಬಳಸುವುದು ಜಾಸ್ತಿಯಾಗಿದೆ. ಯಾವುದಾದರು ಮಾಹಿತಿ ಬಗ್ಗೆ ತಿಳಿಯಲು ತಕ್ಷಣ ಅಂತರ್ಜಾಲದ ಮೊರೆಹೋಗುವುದು, ಸಣ್ಣ ಪುಟ್ಟ ಲೆಕ್ಕಚಾರಕ್ಕೆ ಎಲ್ಲರೂ ಕ್ಯಾಲ್ಕುಲೇಟರ್ ಬಳಸುವುದು ಸಾಮಾನ್ಯವಾಗಿದೆ. ನಾವು ನಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸದೆ ಅದು ಜಡವಾಗುತ್ತದೆ. 

  • ಅನವಶ್ಯಕ ಗೊಂದಲಗಳು.

ಬಹುತೇಕ ಮಕ್ಕಳು ಬಹಳ ಚೆನ್ನಾಗಿ ಓದಿದ್ದರೂ ಪರೀಕ್ಷಾ ಸಮಯದಲ್ಲಿ ಒತ್ತಡಕ್ಕೆ ಒಳಗಾಗಿ ಗೊಂದಲ ಮಾಡಿಕೊಂಡು ಸರಿಯಾಗಿ ಉತ್ತರಿಸುವಲ್ಲಿ ವಿಫಲರಾಗುತ್ತಾರೆ. ಆ ವಿಷಯ, ಪಾಠ, ಪರೀಕ್ಷೆಗಳ ಬಗ್ಗೆ ಮಕ್ಕಳು ಮೊದಲೇ ಪೂರ್ವಗ್ರಹ ಪೀಡಿತರಾಗಿ ಮಾನಸಿಕವಾಗಿ ಕುಸಿದುಹೋಗಿರುತ್ತಾರೆ.  ಇಂತಹ ಗೊಂದಲಗಳು ಜ್ಞಾಪಕಶಕ್ತಿಯ ಮೇಲೆ ಪ್ರಭಾವ ಬೀರುತ್ತವೆ. 

  • ಅನಾರೋಗ್ಯ;

 ಮಕ್ಕಳು ಸದಾ ಅಸ್ವಸ್ಥರಾಗುವುದು, ದೀರ್ಘ ಕಾಲದ ಕಾಯಿಲೆಗಳಿಂದ ಬಳಲುತ್ತಿರುವಾಗ ಆರೋಗ್ಯಸಮಸ್ಯೆ ಇದ್ದಾಗ ಓದುವುದು ಒಳ್ಳೆಯದಲ್ಲ. ಓದಿದರೂ ಅದು ಹೆಚ್ಚು ಪ್ರಯೋಜನವಾಗುವುದಿಲ್ಲ. ಸಾಧ್ಯವಾದಷ್ಟು ಆ ಸಮಸ್ಯೆಯಿಂದ ಮುಕ್ತವಾಗಿ ಕಲಿಕೆಯಲ್ಲಿ ತೊಡಗಿಕೊಂಡರೆ ಅದು ನಿರೀಕ್ಷಿತ ಫಲ ಕೊಡುವುದರಲ್ಲಿ ಅನುಮಾನವಿಲ್ಲ. 

  • ಸಾಮಾಜಿಕ ಸಮಸ್ಯೆಗಳು:

 ಆರ್ಥಿಕ, ಸಾಮಾಜಿಕ, ಕುಟುಂಬದ ಸಮಸ್ಯೆಗಳು ಮನಸ್ಸಿಗೆ ಘಾಸಿ ಮಾಡಿ ಮಕ್ಕಳ ಮನಸ್ಸನ್ನು ಕುಗ್ಗಿಸುತ್ತವೆ. ದುಃಖದಿಂದ ಮಕ್ಕಳ  ಉತ್ಸಾಹ ಮತ್ತು ಲವಲವಿಕೆ ಕುಂಠಿತವಾಗುತ್ತದೆ. ಬೇಸರ, ಸಿಟ್ಟುಗಳು ವಿದ್ಯಾರ್ಥಿಗಳ ಅಂತಃಶಕ್ತಿಯನ್ನು ನಾಶಪಡಿಸುತ್ತವೆ. ಇದರಿಂದಾಗಿ ಮಕ್ಕಳು ದುಃಖಕ್ಕೆ ಒಳಗಾಗಿ ಚಿಂತೆ ಮಾಡುತ್ತಾ, ಸರಿಯಾದ ಮಾರ್ಗದರ್ಶನ ಸಿಗದೆ, ಏಕಾಗ್ರತೆಯನ್ನು ಸಾಧಿಸಲು ಅಸಮರ್ಥರಾಗುತ್ತಾರೆ. ಇಂಥ ಸಮಸ್ಯೆಗಳು ಮಕ್ಕಳ ನೆನಪಿನ ಬುತ್ತಿ ಗಟ್ಟಿಯಾಗಲು ಬಹುದೊಡ್ಡ ಅಡ್ಡಗಾಲು ಹಾಕುವುದರಲ್ಲಿ ಅನುಮಾನವಿಲ್ಲ. 

  • ಜ್ಞಾಪಕಶಕ್ತಿ ಹೆಚ್ಚಳಕ್ಕೆ ಸರಳ ಉಪಾಯಗಳು

  • ಶೇ. 100ರಷ್ಟು ಓದು.

 ಓದುವಾಗ ನೂರಕ್ಕೆ ನೂರರಷ್ಟು ಗಮನಕೊಟ್ಟು ಓದಬೇಕು. 30ರಿಂದ 45 ನಿಮಿಷ ಓದಿ ನಂತರ ಅದನ್ನು ಅರ್ಥಮಾಡಿಕೊಳ್ಳುತ್ತಾ, ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು. ಮುಖ್ಯಾಂಶಗಳನ್ನು ಬರೆಯುವುದರಿಂದ ಅದು ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತದೆ. ಮಕ್ಕಳು ತರಗತಿ ವಿಷಯ/ಪಾಠಗಳನ್ನು  ಪ್ರೀತಿಸುವುದನ್ನು ಕಲಿಯಬೇಕು. ಸಮಸ್ಯೆಗಳಿದ್ದರೆ ಶಿಕ್ಷಕರ ಜೊತೆ ಚರ್ಚೆ ಮಾಡಿ ಅದನ್ನು ತಕ್ಷಣ ಪರಿಹರಿಸಿಕೊಳ್ಳಬೇಕು. ಪರೀಕ್ಷಾ ಸಮಯದಲ್ಲಷ್ಟೆ ಓದುವ ಅಭ್ಯಾಸ ಒಳ್ಳೆಯದಲ್ಲ.  ಓದಿದ್ದರ ಕುರಿತು ಗೆಳೆಯರೊಂದಿಗೆ ಚರ್ಚೆ ನಡೆಸುವುದು ಉತ್ತಮ. 

  • ಧನಾತ್ಮಕ ಧೋರಣೆ:

 ನನ್ನ ಜ್ಞಾಪಕಶಕ್ತಿ ಹೆಚ್ಚಾಗುತ್ತಿದೆ ಎಂದು ಮಕ್ಕಳು ತಮ್ಮಷ್ಟಕ್ಕೆ ತಾವೇ ಹೇಳಿಕೊಳ್ಳಬೇಕು.  ‘ಈ ಪಾಠಗಳು ಯಾವಾಗಲೂ ನನಗೆ ನೆನಪಿಗೆ ಬರುವುದಿಲ್ಲ’ ಎಂಬ ನಕಾರಾತ್ಮಕ ಧೋರಣೆಯನ್ನು ಮೊದಲು ತಲೆಯಿಂದ ಕಿತ್ತು ಹಾಕಬೇಕು.  

  • ಮಾತ್ರೆಗಳು ಪವಾಡ ಮಾಡುವುದಿಲ್ಲ:

ನೆನಪಿನ ಸಮಸ್ಯೆಯಲ್ಲಿ ಎರಡು ವಿಧ ಕಾಣುತ್ತೇವೆ. ಒಂದು ಏಕಾಗ್ರತೆಯ ಕೊರತೆ; ಮತ್ತೊಂದು ಆರೋಗ್ಯ ಸಮಸ್ಯೆ. ಆರೋಗ್ಯಸುಧಾರಣೆಗೆ ಔಷಧಗಳನ್ನು ಬಳಸಬಹುದು.  ಸ್ವತಃ ಮಾತ್ರೆಗಳನ್ನು ತೆಗೆದುಕೊಳ್ಳದೇ ನುರಿತ ವೈದ್ಯರ ಸಲಹೆ ಪಡೆದು ಬಳಸಬೇಕು. ಏಕಾಗ್ರತೆಯ ಕೊರತೆಗೆ ಮುಖ್ಯವಾಗಿ ಪೋಷಕರು ಮಕ್ಕಳಿಗೆ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿಕೊಡುವುದು ಬಹಳ ಮುಖ್ಯ. ಪೋಷಕರು ಮಕ್ಕಳ ನೆನಪಿನ ಶಕ್ತಿಗೆ ಎಂದು ಮಾತ್ರೆಗಳನ್ನು ನೀಡುವ ಬದಲು ಅವರ ಜೀವನಶೈಲಿಯನ್ನು ಬದಲಾಯಿಸಬೇಕು. 

  • ಓದು ನಿಮ್ಮ ಕೈಲಿ:

ಮಾನಸಿಕ ನೆಮ್ಮದಿ ಮತ್ತು ಸತತ ಅಧ್ಯಯನದಿಂದ ಮಾತ್ರ ಯಶಸ್ಸು ಸಿಗುತ್ತದೆ. ಓದಿದ್ದನ್ನು ಮನನ ಹಾಗೂ ಪುನಃಸ್ಮರಣೆಯಿಂದ ಜ್ಞಾಪಕಶಕ್ತಿ ಹೆಚ್ಚಾಗುತ್ತದೆ. ಪ್ರಶಾಂತವಾದ ವಾತಾವರಣದಲ್ಲಿ ಓದಬೇಕು. ಮಕ್ಕಳು ತಲೆಗೆ ಕೆಲಸ ಕೊಡುವಂತಹ ಆಟಗಳನ್ನು ಆಡುವುದು ಸೂಕ್ತ. ಪದಬಂಧ, ಚೆಸ್, ಮೋಜಿನ ಗಣಿತ, ವಿನೋದವಿಜ್ಞಾನ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಬುದ್ಧಿಶಕ್ತಿ ಹೆಚ್ಚಾಗುತ್ತದೆ.

  • ನೆನಪಿನ ತಂತ್ರಗಳು:

 ಮಕ್ಕಳು ವಿಚಾರಗಳನ್ನು ನೆನಪಿಟ್ಟುಕೊಳ್ಳಲು ತಮ್ಮವೇ ತಂತ್ರಗಳನ್ನು ರೂಢಿಸಿಕೊಳ್ಳಬೇಕು. ಮಕ್ಕಳು ಪಾಠ, ಪದ್ಯ, ಸೂತ್ರ ಇತ್ಯಾದಿಗಳನ್ನು ನೆನಪಿಟ್ಟುಕೊಳ್ಳಲು ತಮ್ಮದೇ ಆದ ಕೌಶಲಗಳನ್ನು ಬಳಸುತ್ತಿರುತ್ತಾರೆ. ಕೆಲವು ಅವರ ಅರಿವಿಗೆ ಬಂದರೆ ಕೆಲವು ಅರಿವಿಲ್ಲದೆ ಬಳಸುತ್ತಾರೆ. ಮಕ್ಕಳ ಎಷ್ಟು ಕೌಶಲಗಳನ್ನು ಬಳಸುತ್ತಾರೋ ಅಷ್ಟು ಹೆಚ್ಚು ನೆನಪಿಡಬಹುದು. 

  • ಮೈಂಡ್-ಚಿತ್ರ:

 ಮಕ್ಕಳು ತಮ್ಮ ನೋಟ್ಸ್‌ನ್ನು ಹೆಚ್ಚು ಕಾಲ ನೆನಪಿಟ್ಟುಕೊಳ್ಳಬೇಕಾದರೆ, ಅದರಲ್ಲಿ ಹೆಚ್ಚಿನ ಸಂಖ್ಯೆಯ ಆಕೃತಿ, ಚಿತ್ರಗಳು, ಬಣ್ಣ, ಸಂಕೇತಗಳನ್ನು ಬಳಸುವಂತೆ ಮಾಡಬೇಕು. ಇದಕ್ಕೆ ಒಂದು ಸರಳವಾದ ಉದಾಹರಣೆ ನೀಡಬಹುದಾದರೆ, ನೋಟ್ಸ್ ಬರೆಯುವಾಗ ವಿಷಯ/ಶೀರ್ಷಿಕೆಯ ಚಿತ್ರವು ಪುಟದ ಮಧ್ಯದಲ್ಲಿರಲಿ. ನಂತರ ಅದಕ್ಕೆ ಪೂರಕವಾದ ಅತ್ಯಂತ ಮುಖ್ಯಪದಗಳನ್ನು ಸುತ್ತಲೂ ಬೇರೆ ಬೇರೆ ಬಣ್ಣಗಳಿಂದ ಬರೆಯಬೇಕು. ಅಲ್ಲಿ ವಿವರಣಾತ್ಮಕ ವಾಕ್ಯಗಳಿಗೆ ಅವಕಾಶವೇ ಇಲ್ಲ.  ಅತ್ಯಂತ ಪ್ರಮುಖ ಪದಗಳನ್ನು ಗುರುತು ಮಾಡುವುದು, ಬಾಣದ ಗೆರೆ ಎಳೆಯುವುದು, ಇಲ್ಲವೇ ಯಾವುದೇ ರೀತಿಯಲ್ಲಿ ಒತ್ತು ನೀಡಿ ತಕ್ಷಣ ಎದ್ದುಕಾಣುವಂತಿರಬೇಕು. ಅದರ ಕುರಿತು ಹೊಸ ಆಲೋಚನೆಗಳು ಬಂದರೆ ಸಂಗ್ರಹಿಸಿ ಅವನ್ನೂ ಗುರುತು ಹಾಕಿಕೊಳ್ಳಬೇಕು. ನಂತರ ಆ ಚಿತ್ರ ನೋಡಿದ ತಕ್ಷಣ ಎಲ್ಲವೂ ನೆನಪಿಗೆ ಬರುತ್ತದೆ. 

  • ಸನ್ನಿವೇಶಗಳನ್ನು ಬಳಸಿ:

ಗೆಳೆಯನೊಬ್ಬ ಶಾಲೆಯಲ್ಲಿ ನೋಟ್ಸ್ ಕೇಳಿ ಪಡೆದುಕೊಂಡ ಎಂದಿಟ್ಟುಕೊಳ್ಳೋಣ. ಸ್ವಲ್ಪ ಸಮಯದ ನಂತರ ನೋಟ್ಸ್ ಕೊಟ್ಟಿರುವುದು ನೆನಪಿರುತ್ತದೆ. ಆದರೆ ಯಾರಿಗೆ ಕೊಟ್ಟೆ, ಎಲ್ಲಿ ಎಂದು – ನೆನಪೇ ಆಗುವುದಿಲ್ಲ. ಆಗ ಮಕ್ಕಳು ಅದನ್ನು ನೆನಪು ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ? ‘ನಾನು ಮನೆಯಲ್ಲಿ ನೋಟ್ಸ್‌ನ್ನು ಬ್ಯಾಗಿನಲ್ಲಿ ಹಾಕಿಕೊಂಡೆ, ಶಾಲೆಗೆ ಹೋದಾಗ ಇತ್ತು, ಮತ್ತೆ ನನ್ನ ಡೆಸ್ಕ್‌ನಲ್ಲಿ ಕುಳಿತಾಗ ಇತ್ತು. ಅಲ್ಲಿ ಪ್ರಶ್ನೋತ್ತರ ಬರೆದೆ, ಶಿಕ್ಷಕರಿಗೆ ತೋರಿಸಿ ಸಹಿ ಮಾಡಿಸಿದ್ದೆ … ಆನಂತರ …..’ ಹೀಗೆ ತಮ್ಮ  ನೋಟ್ಸ್ ಸಂಬಂಧಿಸಿದ ಎಲ್ಲ ಘಟನೆಗಳನ್ನು ನೆನಪಿಸುತ್ತಾ ಹೋಗುತ್ತಾರೆ. ಅಂದರೆ ನಮ್ಮ ನೆನಪು ಸನ್ನಿವೇಶಗಳಾಗಿ ಉಳಿಸಿ ಕೊಂಡಿರುತ್ತೇವೆ. ನಾವು ನಮ್ಮ ಒಳಗಣ್ಣಿನಿಂದ ನೋಡುತ್ತಾ, ಅನುಭವಿಸುತ್ತೇವೆ. ಆಗ ನಮ್ಮ ಆ ಘಟನೆಯಲ್ಲಿ ಬರುವ ಎಲ್ಲ ವಿಚಾರಗಳನ್ನು ಗುರುತಿಸಲು ಒಳಗಣ್ಣಿನಿಂದ ಕಾಣಲು ಶ್ರಮಿಸುತ್ತೇವೆ. ಅಂದರೆ ನೆನಪು ಘಟನೆಯ ರೂಪದಲ್ಲಿದ್ದರೆ ಜ್ಞಾಪಕದಲ್ಲಿಟ್ಟುಕೊಳ್ಳುವುದು ಸರಳವಾಗುತ್ತದೆ. ಮಕ್ಕಳಿಗೆ ಈ ಸ್ವಭಾವ ಸಹಜವಾಗಿರುತ್ತದೆ; ಅದನ್ನು ರೂಢಿಸಿಕೊಳ್ಳಲು ಪ್ರೋತ್ಸಾಹಿಸಿ.

  • ಘಟನೆಗಳಾಗಿ ಬದಲಾಯಿಸಿಕೊಳ್ಳಿ:

ಮಕ್ಕಳು ಪಠ್ಯದ ಪಾಠಗಳನ್ನೂ ಓದುತ್ತಾರೆ, ಅದೇ ರೀತಿ ಕಥಾಪುಸ್ತಕಗಳನ್ನೂ ಓದುತ್ತಾರೆ. ಅವುಗಳಲ್ಲಿ ಕಥೆಗಳೇ ಹೆಚ್ಚು ನೆನಪಿನಲ್ಲಿರುತ್ತವೆ. ಏಕೆ ಅಂದರೆ, ಕಥೆಗಳನ್ನು ಮಕ್ಕಳು ಘಟನೆಗಳಾಗಿ ನೆನಪಿಟ್ಟುಕೊಳ್ಳುತ್ತಾರೆ. ಅಂದರೆ ಕಥೆಯಲ್ಲಿ ಬರುವ ಸ್ಥಳಗಳು ಅವರಿಗೆ ತಿಳಿದಿರುವ ಮತ್ತು ನೋಡಿರುವ ಸ್ಥಳಗಳಾಗಿ ಕಲ್ಪಿಸಿಕೊಳ್ಳುತ್ತಾರೆ. ಜೊತೆಗೆ ಪಾತ್ರಗಳು ಮಕ್ಕಳು ತಿಳಿದಿರುವ ವ್ಯಕ್ತಿಗಳೊಂದಿಗೆ ಹೋಲಿಸಿಕೊಳ್ಳುತ್ತಾರೆ. ಆದ್ದರಿಂದ ಮಕ್ಕಳು ಅನುಭವಿಸಿದ ಒಂದು ಘಟನೆಯಾಗಿ ಅದು ಅವರ ಮನಸ್ಸಲ್ಲಿರುತ್ತದೆ. ಆದರೆ ಪಾಠ ಹಾಗಿರುವುದಿಲ್ಲ. ಇನ್ನು ಕೆಲವರಿಗೆ ಕೆಲವು ಪಾಠಗಳು ನೆನಪಿರಬಹುದು. ಅಲ್ಲೂ ‘ಘಟನೆ’ ಎಂಬ ವಿಚಾರ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜ್ಞಾಪಕಶಕ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬಹುದು.

  • ಒಳ್ಳೆಯ ಆಹಾರವನ್ನು ನೀಡಿ:

ಮಕ್ಕಳಿಗೆ ಹಸಿ ಸೊಪ್ಪು, ತರಕಾರಿಯಂಥ ಆರೋಗ್ಯಭರಿತ ಆಹಾರ ಅತ್ಯಂತ ಅಗತ್ಯ. ಧಾರಾಳವಾಗಿ ನೀರು ಕುಡಿಯಬೇಕು ಮತ್ತು  ತಾಜಾ ಹಣ್ಣುಗಳನ್ನು ಸೇವಿಸುವುದು ಉತ್ತಮ. ಸಮತೋಲನ ಆಹಾರಶೈಲಿಯನ್ನು ಅಳವಡಿಸಿಕೊಂಡರೆ ಮಾನಸಿಕ ಸಾಮರ್ಥ್ಯ ಹೆಚ್ಚಾಗುವುದಲ್ಲದೇ ಜ್ಞಾಪಕಶಕ್ತಿಯೂ ಹೆಚ್ಚುತ್ತದೆ. ಆದರೆ ಮಕ್ಕಳು ಹೆಚ್ಚು ಇಷ್ಟ ಪಡುವ ಜಂಕ್ ಫುಡ್, ಮಸಾಲೆ ಪದಾರ್ಥ, ಕರಿದ ತಿಂಡಿ, ಬೇಕರಿ ಪದಾರ್ಥ, ಕೂಲ್ ಡ್ರಿಂಕ್ಸ್‌ಗಳಿಂದ ಸಾಧ್ಯವಿದ್ದಷ್ಟು ಅವರನ್ನು ದೂರವಿರಬೇಕು. ಅಗತ್ಯಕ್ಕಿಂತ ಹೆಚ್ಚು ಯಾವುದನ್ನೂ ತಿನ್ನುವುದು ಒಳಿತಲ್ಲ. ಪ್ರತಿದಿನ ಮಕ್ಕಳು ತಮ್ಮ ವಯೋಮಾನಕ್ಕೆ ಸರಿಹೊಂದುವ ವ್ಯಾಯಾಮ/ಯೋಗಾಭ್ಯಾಸವನ್ನು ಮಾಡಬೇಕು. ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಆಮ್ಲಜನಕ ಹೆಚ್ಚು ಪೂರೈಕೆಯಾಗಿ, ಬುದ್ಧಿಶಕ್ತಿ ಮತ್ತು ಜ್ಞಾಪಕಶಕ್ತಿಗಳು ವೃದ್ಧಿಸುತ್ತವೆ.

ವೇಸ್ಟ್ ಆಗದಿರಲಿ ಟ್ಯಾಲಂಟ್.

ವೇಸ್ಟ್ ಆಗದಿರಲಿ ಟ್ಯಾಲಂಟ್ಮನುಷ್ಯ-ಮನುಷ್ಯರ ಮಧ್ಯೆಯೂ ಬುದ್ಧಿವಂತಿಕೆ ಹಾಗೂ ಪ್ರತಿಭೆಗೆ ಸಂಬಂಧಿಸಿದಂತೆ ಭಿನ್ನತೆಗಳಿವೆ. ಕೆಲವರಿಗೆ ಹೆಚ್ಚು, ಕೆಲವರಿಗೆ ಕಡಿಮೆ ಬುದ್ಧಿವಂತಿಕೆ ಇರಬಹುದು. ಎಲ್ಲರೂ ಪ್ರತಿಭಾವಂತರಲ್ಲದೇ ಇರಬಹುದು ಕೂಡ. ಪ್ರತಿಭೆ ಇದ್ದವರೂ ಕೆಲವೊಮ್ಮೆ ಅದನ್ನು ಹೊರತರಲಾಗದೇ, ಮೊನಚುಗೊಳಿಸಲಾಗದೇ ಹೋಗಬಹುದು. ಆದ್ದರಿಂದ ನಮ್ಮ ಶಕ್ತಿಯನುಸಾರ, ಆಯ್ಕೆ ಮಾಡಿಕೊಂಡು ಅದರಲ್ಲೇ ಏನಾದರೂ ಸಾಧಿಸುವುದು ಜಾಣ ಯುವ ಜನರ ಲಕ್ಷಣ. ಸುಮ್ಮನೆ ಬೇಡದ್ದನ್ನು ತಲೆ ಮೇಲೆ ಹೊತ್ತುಕೊಂಡು ಏದುರುಸಿರು ಬಿಡುತ್ತ ಗುಡ್ಡ ಏರುವುದು ಕಷ್ಟದ ಕೆಲಸ. ಹಾಗಾದರೆ ಆಯ್ಕೆ ಹೇಗಿರಬೇಕು? ಪ್ರಾರಂಭದಲ್ಲೇ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಹೇಗೆ ನಡೆಯಬೇಕು? ಎಂಬ ಮಾಹಿತಿ ಇಲ್ಲಿದೆ.

  • ಮಲ್ಲಿಕಾರ್ಜುನ ತಳವಾರ ಬೆಳಗಾವಿ

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ಹಾಗೂ ದೇಶಿ ಕ್ರಿಕೆಟ್​ನಲ್ಲಿ ಸಾವಿರು ರನ್ ಗಳಿಸಿ ದಾಖಲೆ ಮಾಡಿದ್ದ ಪ್ರಣವ್ ಧನವಾಡೆ ಎಂಬ ಹುಡುಗನ ಕುರಿತು ಚರ್ಚೆಯೊಂದು ನಡೆದಿತ್ತು. ನಿಂತ ನಿಲುವಿನಲ್ಲಿ ಸಾವಿರ ರನ್ ಗಳಿಸಿದ ಪ್ರಣವ್​ಗೆ ಸಿಗದಿರುವ ಅವಕಾಶ ತೆಂಡುಲ್ಕರ್ ಮಗ ಅರ್ಜುನ್​ಗೆ ಯಾಕೆ ಸಿಕ್ಕೀತು? ಎಂಬ ಪ್ರಶ್ನೆ ಇಟ್ಟುಕೊಂಡು ಜಾಲತಾಣಿಗರು ಸಿಕ್ಕಾಪಟ್ಟೆ ಚರ್ಚೆ ಮಾಡಿದರು. ಅಸಾಮಾನ್ಯ ಪ್ರತಿಭೆ ಇದ್ದ ಹುಡುಗನೊಬ್ಬ ಕ್ರೀಡಾ ರಾಜಕೀಯದ ಮಸಲತ್ತಿನಿಂದಾಗಿ ಅವಕಾಶ ವಂಚಿತನಾದ ಎನ್ನುವುದು ಪ್ರಣವ್ ಕುರಿತು ಹಲವರ ಕಳಕಳಿ ಆಗಿತ್ತು. ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಅಂಥ ಚರ್ಚೆ ಆಶಾದಾಯಕ ಬೆಳವಣಿಗೆ ಅನಿಸಿದ್ದು ಹೌದು. ಪ್ರಣವ್ ಧನವಾಡೆ ಒಬ್ಬರೇ ಅಲ್ಲ! ಅಂಥ ನೂರಾರು ಪ್ರತಿಭೆಗಳು ಹಲವು ಕಾರಣಗಳಿಗಾಗಿ ನಮ್ಮ ಕಣ್ಣೆದುರಿಗೆ ಬಾಡಿ ಹೋಗುತ್ತಿವೆ.

ಮನುಷ್ಯ ಅಂದ ಮೇಲೆ ಒಬ್ಬೊಬ್ಬ ಒಂದೊಂದು ಕ್ಷೇತ್ರದಲ್ಲಿ ನೈಪುಣ್ಯತೆ ಹೊಂದಿರುತ್ತಾನೆ. ಕ್ಷೇತ್ರ ಯಾವುದೇ ಆದರೂ ಎಲ್ಲರಲ್ಲೂ ಒಂದೊಂದು ತೆರನಾದ ಪ್ರತಿಭೆ ಇರುತ್ತದೆ. ಆದರೆ ಬಹಳಷ್ಟು ಸಲ ಅದಕ್ಕೊಂದು ವೇದಿಕೆ ಸಿಗುವುದಿಲ್ಲ. ಸಿಕ್ಕರೂ ಅದು ಸಮರ್ಪಕವಾಗಿ, ಉಜ್ವಲವಾಗಿ ಬೆಳಗದೇ ಹೋಗಬಹುದು. ಅದಕ್ಕೆ ಇಂತಹದ್ದೇ ನಿರ್ದಿಷ್ಟ ಕಾರಣ ಕೊಡಲಾಗುವುದಿಲ್ಲವಾದರೂ ಮನುಷ್ಯನ ಇಚ್ಛಾಶಕ್ತಿ ಹಾಗೂ ದೀರ್ಘಕಾಲಿಕ ತಾಳ್ಮೆಯ ಕೊರತೆ, ಸಾಮಾಜಿಕ, ಆರ್ಥಿಕ, ಕೌಟುಂಬಿಕ, ಮಾನಸಿಕ ಕಾರಣಗಳಿಂದಾಗಿ ಪ್ರತಿಭೆ ಮಣ್ಣು ಪಾಲಾಗುತ್ತಿರುತ್ತದೆ ಅನ್ನುವುದು ಮಾತ್ರ ಮೇಲ್ನೋಟಕ್ಕೆ ಸತ್ಯ.

ಭಾರತೀಯ ಶಿಕ್ಷಣ ವ್ಯವಸ್ಥೆಯ ಕುರಿತು ಹಲವು ಟೀಕೆಗಳಿವೆ. ಅವು ವ್ಯಕ್ತವಾಗುತ್ತ, ಮತ್ತೆ ಹಳತಾಗುತ್ತಲೂ ಇವೆ. ಆಗಾಗ ಕೆಲ ಬದಲಾವಣೆಗಳಾಗಿರಬಹುದಾರೂ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಮಾತ್ರ ಇನ್ನೂ ಸಾಧ್ಯವಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಪ್ರತಿಭೆಯುಳ್ಳ ಮನುಷ್ಯ ಹೇಗಾದರೂ ಮಾಡಿ ತಾನೇ ತನಗೊಂದು ವೇದಿಕೆ ಹುಡುಕಿಕೊಳ್ಳಬೇಕು ಅನಿಸುವುದರಲ್ಲಿ ತಪ್ಪೇನೂ ಕಾಣುವುದಿಲ್ಲ. ವೇದಿಕೆ ಹುಡುಕಿಕೊಳ್ಳುವುದೇ ಇಲ್ಲಿ ದೊಡ್ಡ ಕೆಲಸ. ನಿಜಕ್ಕೂ ಪ್ರತಿಭಾವಂತನಾದ ವ್ಯಕ್ತಿ ಹೇಗಿದ್ದರೂ ಒಂದು ನೆಲೆ ಕಂಡುಕೊಳ್ಳುತ್ತಾನೆ. ವೇದಿಕೆ ಸಿಕ್ಕ ನಂತರ ಪ್ರತಿಭೆಗೆ ಸಾಣೆ ಹಿಡಿದು, ಹರಿತಗೊಂಡು, ಪಕ್ವಗೊಳ್ಳಬೇಕಾದ್ದು ಪ್ರತಿಭಾವಂತ ಅನ್ನಿಸಿಕೊಂಡವನ ಹೊಣೆ. ಅದಷ್ಟು ಸುಲಭದ ಹಾದಿಯಲ್ಲ ಅನ್ನೋದು ನಿಜವಾದರೂ ಅಸಾಧ್ಯವಂತೂ ಅಲ್ಲ.

ಯಡವಟ್ಟಾಗದಿರಲಿ ಕೋರ್ಸ್ ಆಯ್ಕೆ

ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ವಿಷಯವಾರು ಆಯ್ಕೆಗೆ ಅವಕಾಶವಿರುವುದಿಲ್ಲವಾದರೂ ಕಾಲೇಜು ಹಂತದ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಆಯ್ಕೆಯ ಅವಕಾಶವಿರುತ್ತದೆ. ಆದರೂ ಬಹಳಷ್ಟು ವಿದ್ಯಾರ್ಥಿಗಳು ವಿಷಯಗಳ ಆಯ್ಕೆಯಲ್ಲಿ ಯಡವಟ್ಟು ಮಾಡಿಕೊಂಡಿರುವುದು ಕಾಣುತ್ತದೆ. ಪ್ರಾವೀಣ್ಯತೆ ಹಾಗೂ ಆಸಕ್ತ ವಿಷಯದ ಕೋರ್ಸ್ ಆಯ್ಕೆ ಮಾಡಿಕೊಂಡಾಗ ಸಾಮರ್ಥ್ಯದ ಸಂಪೂರ್ಣ ಸದ್ಬಳಕೆ ಸಾಧ್ಯವಾಗುತ್ತದೆ. ಆದರೆ ತುಂಬ ಸಲ ಹಾಗಾಗುವುದಿಲ್ಲ. ಪಟಪಟ ಕನ್ನಡ ಓದುವ, ಬರೆಯುವ, ವ್ಯಾಕರಣದಲ್ಲಿ ಬುದ್ಧಿವಂತನಿರುವ ಆದರೆ, ಇಂಗ್ಲಿಷ್ ಎಂದರೆ ಮಾರುದೂರ ಓಡುವ ಓರ್ವ ವಿದ್ಯಾರ್ಥಿ, ವಿಜ್ಞಾನ ವಿಷಯದಲ್ಲಿ ಆಸಕ್ತಿ ಇಲ್ಲದಿದ್ದರೂ ಆ ಕ್ಷೇತ್ರಕ್ಕೆ ಪ್ರವೇಶ ಪಡೆದರೆ ಆತನಿಂದ ನ್ಯಾಯಪರ ಸಾಧನೆ ನಿರೀಕ್ಷೆ ಮಾಡಲಾಗುವುದಿಲ್ಲ. ಹಾಗಂತ ಇದು ಮೇಲ್ನೋಟದ ಸತ್ಯವಲ್ಲ. ಮನೋಶಾಸ್ತ್ರಜ್ಞರು ಹಾಗೂ ಸಮಾಜವಿಜ್ಞಾನಿಗಳು ಈ ವಾದ ಪುಷ್ಠೀಕರಿಸುತ್ತಾರೆ ಕೂಡ.

ಇತಿಹಾಸದಲ್ಲಿ ಆಸಕ್ತಿ ಇರುವ, ಗಣಿತವೆಂದರೆ ಮೂಗು ಮುರಿಯುವ, ಕನಿಷ್ಠ ಮಟ್ಟದ ಗಣಿತ ಜ್ಞಾನ ಹಾಗೂ ಆಸಕ್ತಿ ಇಲ್ಲದ ವಿದ್ಯಾರ್ಥಿಗೆ ಗಣಿತ ಪ್ರಧಾನವಾಗಿರುವ ಕೋರ್ಸ್ ಕೊಡಿಸಿದರೆ ಆತ ಅದನ್ನು ದಕ್ಕಿಸಿಕೊಳ್ಳದೇ ಹೋಗಬಹುದು. ಇವು ಕೇವಲ ಉದಾಹರಣೆಗಳಷ್ಟೇ. ಕೋರ್ಸ್ ಆಯ್ಕೆ ಮಾಡಿಕೊಳ್ಳುವಲ್ಲಿ ಎಡವಿದ ವಿದ್ಯಾರ್ಥಿ ಜೀವನ ಪರ್ಯಂತ ಎಡವುತ್ತಲೇ ಇರುತ್ತಾನೆ. ವಿಷಯದ ಆಯ್ಕೆಯ ತಪ್ಪು ಹೆಜ್ಜೆ ಬರೀ ಫಲಿತಾಂಶದ ಮೇಲೆ ಮಾತ್ರವಲ್ಲ, ನೇರವಾಗಿ ಜೀವನದ ಮೇಲೆಯೂ ಪರಿಣಾಮ ಬೀರಬಲ್ಲದು.

ಪೋಲಾಗುವ ಸಾಮರ್ಥ್ಯ!

ಪ್ರತಿಯೊಬ್ಬರಲ್ಲೂ ಒಂದೊಂದು ತೆರನಾದ ಪ್ರತಿಭೆ ಇರುತ್ತದೆ ಎಂದು ಎಲ್ಲರೂ ಹೇಳುತ್ತಿರುತ್ತಾರೆ. ಆದರೆ ಅದನ್ನು ಗುರುತಿಸುವ ಹಾಗೂ ಬೆಳೆಸುವ ಗೋಜಿಗೆ ಎಲ್ಲರೂ ಹೋಗುವುದಿಲ್ಲ. ಸಾಮಾನ್ಯವಾಗಿ ಬಾಲ್ಯದಲ್ಲಿಯೇ ಮಕ್ಕಳ ಪ್ರತಿಭೆ ಗೋಚರಿಸತೊಡಗಿರುತ್ತದೆ. ಪ್ರತಿಭೆ ಪತ್ತೆ ಹಚ್ಚಿ, ಬೆಳಗುವಂತೆ ಮಾಡುವುದು ಸುಲಭದ ಮಾತಲ್ಲ. ಹಾಗಂತ ಅಸಾಧ್ಯವೂ ಅಲ್ಲ. ಮನುಷ್ಯನ ಆಸಕ್ತಿ ಪ್ರಧಾನವಾದ ಕ್ಷೇತ್ರದ, ವಿಷಯದ ಆಯ್ಕೆ ಮಾತ್ರ ಅವನನ್ನು ದಡ ಸೇರಿಸಬಲ್ಲದು ಎಂಬುದು ಗೊತ್ತಿದ್ದರೂ ತುಂಬ ಜನರು ಅದರ ಬೆನ್ನು ಹತ್ತುವುದಿಲ್ಲ. ಡಾಟಾ ಎಂಟ್ರಿ ಮಾಡುವ ಕೆಲಸಕ್ಕೆ ಸೇರಿದರೆ ಸಾಕು, ಸಾವಿರಾರು ರೂಪಾಯಿ ಗಳಿಸಬಹುದು ಎನ್ನುವ ಅಲ್ಪ ಸಂತೃಪ್ತಿ, ಮುಂದೆ ಬಿಕಾಂ ಮಾಡಿ ಚಾರ್ಟರ್ಡ್ ಅಕೌಂಟಂಟ್ ಆಗಬಲ್ಲೆ ಎಂಬ ಮಹಾದಾಸೆಯನ್ನು ಆರಂಭದಲ್ಲಿ ಕೊಂದು ಬಿಡುತ್ತದೆ. ಹಾಗಾಗಿ ಗರಿಷ್ಠ ಮಟ್ಟದಲ್ಲಿ ನೈಪುಣ್ಯತೆ ಬಳಸಿಕೊಳ್ಳುವತ್ತ ಗಮನ ಹರಿಸುವುದು ಸಾಧನೆಯ ಮೊದಲ ಮೆಟ್ಟಿಲಾಗಬಹುದು.

ಏನೇ ಆದರೂ ಇದು ಬುದ್ಧಿವಂತರ ಲೋಕ. ಅದರಲ್ಲೂ ಎಲ್ಲ ಕ್ಷೇತ್ರಗಳಲ್ಲಿ ಈಚೆಗೆ ವಿಪರೀತ ಸ್ಪರ್ಧೆ ಏರ್ಪಡುತ್ತಿದೆ. ಸಾಕಷ್ಟು ಪೂರ್ವ ತಯಾರಿ, ಜಾಣ್ಮೆ, ಕೌಶಲಗಳಿದ್ದರೂ ಇನ್ನೂ ಏನೋ ಕಲಿಯಬೇಕಿತ್ತೆಂದು ಪ್ರತಿಯೊಬ್ಬರೂ ಯೋಚಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹಾಗಾಗಿ ಹೊಸತು ಕಲಿಯಲು ಹಂಬಲಿಸುವುದು ಹಾಗೂ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದು ಪ್ರತಿಭೆಗೆ ಸಾಣೆ ಹಿಡಿಯುವ ಮೊದಲ ಹೆಜ್ಜೆಯಾಗಬಹುದು. ಎಲ್ಲ ಕ್ಷೇತ್ರಗಳಲ್ಲೂ ಆರೋಗ್ಯಕರ ಸ್ಪರ್ಧೆ ಇರುವಂತೆಯೇ ಅನಾರೋಗ್ಯಕರ ಸ್ಪರ್ಧೆಯೂ ಇದೆ. ಅದರ ಮಧ್ಯೆಯೇ ನಮ್ಮ ಪ್ರತಿಭೆಗೊಂದು ನೆಲೆ ಸಿಗುವ ಹಾಗೇ ಮತ್ತು ಅದು ಸಕಾರಾತ್ಮಕವಾಗಿ ವ್ಯಕ್ತವಾಗಿ ಫಲ ನೀಡುವ ಬಗೆಯ ಹಾದಿಯಲ್ಲಿ ನಾವೇ ಚಲಿಸಬೇಕು. ಹಾಗಂತ ಬರೀ ಪ್ರತಿಭೆಯೊಂದೇ ಇದ್ದರೆ ಸಾಲದು. ಜತೆಗೆ ನಿರಂತರ ಪರಿಶ್ರಮವೂ ಬೇಕು. ಒಮ್ಮೆ ಪ್ರಶಸ್ತಿ ಗೆದ್ದ ಓಟಗಾರ ನಿರಂತರ ಅಭ್ಯಾಸ ಮಾಡದಿದ್ದರೆ ಮತ್ತೊಂದು ಕ್ರೀಡಾಕೂಟದಲ್ಲಿ ಹೇಳ ಹೆಸರಿಲ್ಲ್ಲಂತಾಗಬಹುದು. ಹಾಗಾಗಿ ಪರಿಶ್ರಮಿಗಳು, ಒಮ್ಮೊಮ್ಮೆ ಪ್ರತಿಭಾವಂತರನ್ನೂ ಮೀರಿಸುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ನಮ್ಮೊಳಡಗಿರುವ ಪ್ರತಿಭೆಯನ್ನು ನಾವೇ ಗುರುತಿಸಿಕೊಳ್ಳಬೇಕು. ಅದನ್ನು ಬೇರೆಯವರೂ ಗುರುತಿಸಲು ನಾವು ಶ್ರಮ ಪಡಬೇಕು. ಆ ಶ್ರಮ ಫಲ ನೀಡಲು ನಿರಂತರ ಅಭ್ಯಾಸವಿರಲೇಬೇಕು. ಚೂರು ಮೈಮರೆತರೆ ಪಕ್ಕದಲ್ಲಿ ಓಡುತ್ತಿರುವ ಪ್ರತಿಸ್ಪರ್ಧಿ ನಮ್ಮನ್ನು ದಾಟಿಕೊಂಡು ಹೋಗಬಹುದು. ಕುಡುಗೋಲು ಮೊಂಡಾದರೆ ಸಾಣೆ ಹಿಡಿದು ಹರಿತುಗೊಳಿಸುವಂತೆ ಆಗಾಗ ಆಲಸ್ಯಗೊಳ್ಳುವ, ಮೈ ಮುರಿಯುವ, ಒಲ್ಲೆ ಎನ್ನುವ, ಸೆಟಗೊಳ್ಳುವ ಪ್ರತಿಭೆಯನ್ನು ಸತತ ಪ್ರಯತ್ನ ಹಾಗೂ ದೃಢ ಇಚ್ಛಾಶಕ್ತಿಯ ಮೂಲಕ ಬಡಿದೇಳಿಸುತ್ತಲೇ ಇದ್ದರೆ ನಮಗೂ ಒಂದು ಗೆಲುವಿನ ದಡ ದಕ್ಕಬಹುದು. ಆ ನಿಟ್ಟಿನಲ್ಲಿ ಸಿಗಬಹುದಾದ ಯಶಸ್ಸು ನಮ್ಮ ದೃಢ ಸಂಕಲ್ಪವನ್ನು ಅವಲಂಬಿಸಿರುತ್ತದೆ ಅಷ್ಟೇ.

ಶಿಕ್ಷಕರು ಏನು ಮಾಡಬಹುದು?

  • ವಿದ್ಯಾರ್ಥಿಗಳ ವಿಷಯವಾರು ಜಾಣತನ ಗುರುತಿಸುವುದು. ಆ ಕುರಿತು ಮಕ್ಕಳಿಗೆ ವಿಶೇಷ ಸಲಹೆ ನೀಡುವುದು.
  • ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳಿಗಿರುವ ಆಸಕ್ತಿ ಹಾಗೂ ತೊಡಗಿಸಿಕೊಳ್ಳುವಿಕೆ ಗಮನಿಸುವುದು.
  • ಪ್ರತಿಭಾನ್ವೇಷಣೆ ಹಾಗೂ ಶಾಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳು ತೋರುವ ಪ್ರದರ್ಶನದಲ್ಲಿ ಅವರ ವಿಭಿನ್ನ, ವಿಶೇಷ ಹೊಳವುಗಳನ್ನು ಆರಿಸಿಟ್ಟು, ಸಾಧ್ಯವಾದರೆ ಸಲಹೆ ನೀಡುವುದು.
  • ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಮಕ್ಕಳು ನಿರ್ದಿಷ್ಟ ಕ್ರೀಡೆ ಅಥವಾ ಆಟದಲ್ಲಿ ಹೊಂದಿರುವ ಸಾಮರ್ಥ್ಯವನ್ನು ತೂಕಕ್ಕಿಟ್ಟು ನೋಡುವುದು. ಆ ಕುರಿತು ಮಕ್ಕಳಿಗೆ ವಿಶೇಷ ಸಲಹೆ, ತರಬೇತಿಗೆ ಸೂಚನೆ ನೀಡುವುದು. ಮಕ್ಕಳ ಬೇಡಿಕೆಗಳನ್ನು ಚೌಕಟ್ಟಿನೊಳಗೇ ಪೂರೈಸಲು ಯತ್ನಿಸುವುದು.
  • ಮಕ್ಕಳ ಮನರಂಜನೆಗೆ ಏರ್ಪಡಿಸುವ ಸ್ಪರ್ಧೆಗಳಲ್ಲಿ ವ್ಯಕ್ತವಾಗುವ ಪ್ರತಿಭೆಯನ್ನು ಸಾಧ್ಯವಾದಷ್ಟು ಸಾಣೆ ಹಿಡಿಯಲು ಅನುವಾಗುವಂತೆ ಬಳಸಿಕೊಳ್ಳುವುದು.
  • ಪ್ರತಿಭೆ ಬಳಸಿಕೊಳ್ಳಲು ಲಭ್ಯವಿರುವ ವೇದಿಕೆಗಳನ್ನು ಮಕ್ಕಳಿಗೆ ಒದಗಿಸಿಕೊಡುವುದು.
  • ತರಗತಿ, ಅಂತರ್ ತರಗತಿ, ಶಾಲೆಯಲ್ಲಿ, ಅಂತರ್ ಶಾಲೆ, ವಲಯ, ಜಿಲ್ಲೆ ಹಾಗೂ ರಾಜ್ಯಮಟ್ಟದ ವೇದಿಕೆಗಳನ್ನು ಗರಿಷ್ಠಮಟ್ಟದಲ್ಲಿ ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು.
  • ಮಕ್ಕಳಲ್ಲಿರುವ ಪ್ರತಿಭೆ ಹಾಗೂ ಅದು ಹರಳುಗಟ್ಟಿ ಫಲ ನೀಡುವ ಬಗೆಯ ಕುರಿತು ಮಕ್ಕಳ ಪಾಲಕರೊಂದಿಗೆ ರ್ಚಚಿಸುವುದು. ಸಾಧ್ಯವಾದರೆ ಮಕ್ಕಳ ಪ್ರತಿಭಾ ಪ್ರದರ್ಶನದ ಕಾರ್ಯಕ್ರಮಗಳಿಗೆ ಪಾಲಕರನ್ನು ಕರೆಯುವುದು. ಮಕ್ಕಳು ಹಾಗೂ ಪಾಲಕರೊಂದಿಗೆ ಪ್ರತಿಭೆ ಬೆಳೆಸುವ ಬಗ್ಗೆ ರ್ಚಚಿಸುವುದು.

ಪಾಲಕರು ಮಾಡಬಹುದಾದದ್ದೇನು?

  • ಮಕ್ಕಳಲ್ಲಿರುವ ವಿಶೇಷ ಆಸಕ್ತಿ ಗುರುತಿಸಿ, ಆ ಕುರಿತು ತರಬೇತಿ ಹಾಗೂ ಕಠಿಣ ಅಭ್ಯಾಸ ಮಾಡುವಂತೆ ಪ್ರೇರೇಪಿಸುವುದು.
  • ಬೇರೆ ಮಕ್ಕಳಿಗಿಂತ ನಮ್ಮ ಮಕ್ಕಳು ಯಾವುದರಲ್ಲಿ ಭಿನ್ನ, ಅವರ ತಾಕತ್ತೇನು, ಅದನ್ನು ಮತ್ತಷ್ಟು ಬೆಳೆಸುವ ಬಗೆ ಹೇಗೆ? ಎಂಬ ಕುರಿತು ಗಹನ ವಿಚಾರ ಮಾಡುವುದು.
  • ಮಕ್ಕಳ ವರ್ತನೆ ಕುರಿತು ಆಗಾಗ ಶಿಕ್ಷಕರ ಬಳಿ ವರದಿ ಕೇಳುವುದು.
  • ಮಕ್ಕಳು ಪ್ರತಿಭೆ, ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಈಗಾಗಲೇ ಸಾಧನೆ ಮಾಡಿದ ಜಗತ್ತಿನ ಸಾಧಕರ ಕುರಿತಾದ ಪುಸ್ತಕ, ಸಿನಿಮಾ, ಸಾಕ್ಷ್ಯತ್ರ, ಚಿತ್ರಪಟ, ವಿವರಗಳು ಮಕ್ಕಳಿಗೆ ಸಿಗುವಂತೆ ಮಾಡುವುದು. ಮಕ್ಕಳ ಋಣಾತ್ಮಕ ಹವ್ಯಾಸಗಳನ್ನು ಅತ್ಯಂತ ಎಚ್ಚರಿಕೆಯಿಂದಲೇ ಚಿವುಟುವುದು.
  • ನಿರಂತರ ಅಭ್ಯಾಸ ಮಾಡುವುದರಿಂದ ಮಾತ್ರ ದೃಢ ಸಾಧನೆ ಸಾಧ್ಯ ಎಂಬುದನ್ನು ಮಕ್ಕಳಿಗೆ ಮನದಟ್ಟು ಮಾಡಿಸುವುದು.
  • ಪ್ರತಿಭೆ ಬೆಳೆಸುವ ಹಾದಿಯಲ್ಲಿ ಹಾಗೂ ಜಗತ್ತಿಗೆ ಅದನ್ನು ತೋರಿಸುವ ಧಾವಂತದಲ್ಲಿ ಮಕ್ಕಳ ಮೇಲೆ ಅನವಶ್ಯಕ ಒತ್ತಡ ಬೀಳದಂತೆ ನೋಡಿಕೊಳ್ಳಬೇಕು. ಸಣ್ಣ ತಪ್ಪಿಗೂ ಬೇರೆಯವರ ಮಕ್ಕಳೊಂದಿಗೆ ಹೋಲಿಸಿ ಮಾತನಾಡದಿರುವುದು ಒಳಿತು.

ಅಧ್ಯಯನಕ್ಕೆ ಸಂಬಂಧಪಟ್ಟ ಮಾಹಿತಗಳು.

  • @

  • @
  • ಉನ್ನತ ಶಿಕ್ಷಣ ಸಾಲ ಸೌಲಭ್ಯ

04.01.2017, ವಿಜಯವಾಣಿ 

ಕೇಂದ್ರ, ರಾಜ್ಯ ಸರ್ಕಾರಗಳು ಕಾಲ ಕಾಲಕ್ಕೆ ಜಾರಿಗೊಳಿಸುತ್ತಿರುವ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ವಿಜಯವಾಣಿ ಪ್ರತಿ ವಾರ ಯೋಜನೆಗಳ ಮಾಹಿತಿ ಕೈಪಿಡಿ ನೀಡುತ್ತಿದ್ದು, ಈ ವಾರ ‘ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗಾಗಿ ನೀಡುವ ರಾಜೀವ್​ಗಾಂಧಿ ವಿದ್ಯಾರ್ಥಿವೇತನದ’ ಕುರಿತ ಮಾಹಿತಿ ನಿಮ್ಮ ಮುಂದೆ… 

ಇತ್ತೀಚಿನ ವರ್ಷಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಹಾಗೂ ವೃತ್ತಿಪರ ಕೋರ್ಸ್ ಸೇರಿದಂತೆ ಎಲ್ಲ ರೀತಿಯ ಶಿಕ್ಷಣ ದುಬಾರಿಯಾಗಿದೆ. ವ್ಯಕ್ತಿಯ ಆರ್ಥಿಕ ದುರ್ಬಲತೆಯ ಕಾರಣಕ್ಕಾಗಿ ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗಾಗಿ ಸರ್ಕಾರ ವೃತ್ತಿಪರ ಕೋರ್ಸ್​ಗಳಿಗೆ ನೀಡುತ್ತಿರುವ ಸಾಲ ಸೌಲಭ್ಯವನ್ನು 2013ರಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೂ ವಿಸ್ತರಿಸಿದೆ. ರಾಜೀವ್ ಗಾಂಧಿ ಸಾಲ ವಿದ್ಯಾರ್ಥಿ ವೇತನ ಮಾರ್ಗಸೂಚಿಯಂತೆ ಸರ್ಕಾರಿ ವಿಶ್ವವಿದ್ಯಾಲಯ, ಸರ್ಕಾರಿ ಮತ್ತು ಅನುದಾನಿತ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗೆ ಸೇರುವ ಅಭ್ಯರ್ಥಿಗಳು ಇದರ ಫಲಾನುಭವ ಪಡೆಯಬಹುದು.

  • ಸಾಲದ ಮೊತ್ತವೆಷ್ಟು?

ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿಸಿಎ ಸೇರಿದಂತೆ ಪದವಿ ಕೋರ್ಸ್ ಮಾಡುವ ವಿದ್ಯಾರ್ಥಿಗಳಿಗೆ ಪ್ರತಿವರ್ಷ 60,000 ರೂ.ನಂತೆ ಮೂರು ವರ್ಷಕ್ಕೆ 1.80 ಲಕ್ಷ ರೂ. ನೀಡಲಾಗುತ್ತದೆ.

5 ವರ್ಷದ ಇಂಟಿಗ್ರೇಟೆಡ್ ಕೋರ್ಸ್​ಗಳಿಗೆ ಪ್ರತಿ ವರ್ಷ 60,000 ರೂ.ಗಳಂತೆ 3 ಲಕ್ಷ ರೂ. ಸಾಲ ಒದಗಿಸಲಾಗುತ್ತದೆ.

6 ತಿಂಗಳ ಒಳಗಿನ ಕೋರ್ಸ್​ಗಳಿಗೆ 2 ಸಾವಿರ, 6-1ವರ್ಷದ ಕೋರ್ಸ್​ಗೆ 40 ಸಾವಿರ, 1ವರ್ಷಕ್ಕಿಂತ ಅಧಿಕ ಅವಧಿಯ ಕೋರ್ಸ್​ಗೆ 60 ಸಾವಿರದಿಂದ 1ಲಕ್ಷ ರೂ. ನಿಗದಿಪಡಿಸಲಾಗಿದೆ.

4 ಲಕ್ಷ ರೂ.ಗೆ ಶೇ.12ರಷ್ಟು ಬಡ್ಡಿಯನ್ನು ಹುಡುಗರಿಗೆ, ಶೇ.11ರ ಬಡ್ಡಿಯನ್ನು ಹುಡುಗಿಯರಿಗೆ ರಾಷ್ಟ್ರೀಕೃತ ಬ್ಯಾಂಕ್​ಗಳು ನಿಗದಿಪಡಿ ಸಿವೆ. (ಕೋರ್ಸ್ ಮುಗಿದು 6 ತಿಂಗಳ ನಂತರ ಇದು ಅನ್ವಯ.)

  • ಸಾಲ ಮರುಪಾವತಿ ಹೇಗೆ?

ಪದವಿ ಅಥವಾ ಸ್ನಾತಕೋತ್ತರ ಪದವಿ ಮುಗಿದು 6 ತಿಂಗಳವರೆಗೂ ಸಾಲದ ಬಡ್ಡಿ ದರವನ್ನು ಸರ್ಕಾರವೇ ಪಾವತಿಸುತ್ತದೆ. ಆ ನಂತರ ಬಡ್ಡಿ ಸಮೇತವಾಗಿ 50,000ವರೆಗಿನ ಸಾಲಕ್ಕೆ 2ವರ್ಷ, 50,000 ದಿಂದ 1ಲಕ್ಷದವರೆ ಗಿನ ಸಾಲಕ್ಕೆ 2 ರಿಂದ 5 ವರ್ಷ ಹಾಗೂ 1ಲಕ್ಷಕ್ಕೂ ಅಧಿಕ ಪ್ರಮಾಣದ ಸಾಲದ ಮರುಪಾವತಿಗೆ 7ವರ್ಷಗಳ ಕಾಲಾವಕಾಶ ಕಲ್ಪಿಸಲಾಗುತ್ತದೆ.

  • ಬಡ್ಡಿಯ ಸಹಾಯಧನ ಹೇಗೆ?

ಪ್ರಥಮ ಪದವಿ, ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಕೋರ್ಸ್​ಗೆ ಒಮ್ಮೆಗೆ ಮಾತ್ರ ಅರ್ಹ ವಿದ್ಯಾರ್ಥಿಗಳಿಗೆ ಯೋಜನೆಯ ಬಡ್ಡಿ ಸಹಾಯಧನದ ಸೌಲಭ್ಯ ದೊರಕುತ್ತದೆ. ಸಂಯುಕ್ತ ಕೋರ್ಸ್​ಗಳ ವಿದ್ಯಾರ್ಥಿಗಳಿಗೂ (ಪದವಿ ಮತ್ತು ಸ್ನಾತಕೋತ್ತರ ಪದವಿ ಒಟ್ಟಿಗೆ ಇರುವುದು) ಬಡ್ಡಿ ಸಹಾಯಧನ ಲಭ್ಯವಿದೆ. ವಿದ್ಯಾರ್ಥಿ ಅನುತ್ತೀರ್ಣನಾಗಿದ್ದಲ್ಲಿ, ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಕಾಲೇಜು ಬಿಟ್ಟರೆ ಅಥವಾ ಅಶಿಸ್ತಿನ ಮೇಲೆ ವಜಾಗೊಂಡಾಗ ಬಡ್ಡಿಯ ಸಬ್ಸಿಡಿ ಲಭ್ಯವಾಗುವುದಿಲ್ಲ. ವೈದ್ಯಕೀಯ ಕಾರಣದಿಂದ ವಿದ್ಯಾಭ್ಯಾಸ ಮೊಟಕುಗೊಂಡಿದ್ದಕ್ಕೆ ಸೂಕ್ತ ವೈದ್ಯಕೀಯ ದಾಖಲೆ ಹಾಗೂ ವಿದ್ಯಾಸಂಸ್ಥೆಯ ತೃಪ್ತಿಕರ ದೃಢೀಕರಣ ಪತ್ರ ಸಲ್ಲಿಸಿದ್ದಲ್ಲಿ ಬಡ್ಡಿಯ ಸಹಾಯಧನ ಲಭ್ಯವಾಗುತ್ತದೆ.

  • ಆಧಾರ್ ಕಡ್ಡಾಯ.

ಈ ಸಾಲ ಪಡೆಯಲು ಫಲಾನುಭವಿ, ಆಧಾರ್ ಮತ್ತು ಪ್ಯಾನ್ ಸಂಖ್ಯೆಯನ್ನು ಬ್ಯಾಂಕ್​ಗೆ ಕಡ್ಡಾಯವಾಗಿ ನೀಡಬೇಕು.

  • ಅರ್ಜಿ ಎಲ್ಲಿ ಲಭ್ಯ?

ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲೂ ಸಾಲ ಸೌಲಭ್ಯ ಲಭ್ಯವಿದ್ದು, ಪದವಿ ಕಾಲೇಜುಗಳಲ್ಲಿ ಅರ್ಜಿ ದೊರೆಯಲಿದೆ. ಇಲ್ಲವೆ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆ ಡಿಡಿಡಿ.ಛ್ಚಛಿ.kಚ್ಟ.ಜ್ಚಿ.ಜ್ಞಿ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿ ಭರ್ತಿ ಮಾಡಿ ಕಾಲೇಜಿನ ಪ್ರಾಂಶುಪಾಲರ ಸಹಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಇಲಾಖೆಗೆ ಸಲ್ಲಿಸಬೇಕು.

  • ಯಾರಿಗೆ ಅನ್ವಯ, ಹೇಗೆ?

ಈ ಯೋಜನೆಯನ್ನು ರಾಷ್ಟ್ರೀಕೃತ ಬ್ಯಾಂಕ್​ಗಳ ಸಹಯೋಗದಲ್ಲಿ ಕಾರ್ಯರೂಪಕ್ಕೆ ತರಲಾಗಿದೆ. ರಾಜ್ಯದ ವಿಶ್ವವಿದ್ಯಾಲಯ ಅಥವಾ ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಮಾತ್ರ ಇದು ಅನ್ವಯ. ವಿದ್ಯಾಭ್ಯಾಸದ ಅವಧಿಗೆ ಪೂರ್ಣ ಬಡ್ಡಿ ಸಹಾಯಧನವನ್ನು ಸರ್ಕಾರದಿಂದ ಬ್ಯಾಂಕ್​ಗೆ ಪಾವತಿಸಲಾಗುತ್ತದೆ. ಕೋರ್ಸ್​ನ ನಂತರ ಸಾಲದ ಅಸಲು ಮತ್ತು ಬಡ್ಡಿಯನ್ನು ಕಂತುಗಳ ಮೂಲಕ ವಿದ್ಯಾರ್ಥಿಗಳೇ ಪಾವತಿಸಬೇಕು.

  • ಯಾರು ಅರ್ಹರು?

ಭಾರತೀಯನಾಗಿರಬೇಕು, ದ್ವಿತೀಯ ಪಿಯುಸಿ ಅಥವಾ 10+2 ಕೋರ್ಸ್​ನಲ್ಲಿ ಶೇ.50ರಷ್ಟು ಅಂಕ ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷ ರೂ. ಮಿತಿ (ತಹಸೀಲ್ದಾರ್​ರಿಂದ ಕುಟುಂಬದ ವರಮಾನ ದೃಢೀಕರಣ ಪತ್ರ)

  • ಉದ್ದೇಶ

ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಪ್ರವೇಶಾತಿ ಹೆಚ್ಚಿಸುವುದು

ರಾಜ್ಯದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಭವಿಷ್ಯ ಉಜ್ವಲಗೊಳಿಸುವುದು

ಕನಿಷ್ಠ 50 ಸಾವಿರ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡುವುದು

ಹೆಚ್ಚಿನ ಮಾಹಿತಿಗೆ: ಕಾಲೇಜು ಶಿಕ್ಷಣ ಇಲಾಖೆ, 2ನೇ ಮಹಡಿ, ತಾಂತ್ರಿಕ ಶಿಕ್ಷಣ ಭವನ, ಅರಮನೆ ರಸ್ತೆ, ಬೆಂಗಳೂರು – 560 001, ವೆಬ್​ಸೈಟ್: http://www.dce.kar.nic.in

 ನಿರೂಪಣೆ: ಭಾಗ್ಯ ಚಿಕ್ಕಣ್ಣ
@

  • ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನದ ಆ್ಯಪ್‌.

13 Dec, 2016
*ಬೆಂಗಳೂರು: ಕನ್ನಡ ಮಾಧ್ಯಮದಲ್ಲಿ ಕಲಿತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗಲು ‘ಸ್ವಾಧ್ಯಾಯ’ ಎಂಬ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಪಠ್ಯ, ವಿಡಿಯೊ ಪಾಠ, ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಈ ಆ್ಯಪ್‌ ಮೂಲಕ ಮೊಬೈಲ್‌ನಲ್ಲೇ ಪಡೆದು ಅಧ್ಯಯನ ಮಾಡಬಹುದಾಗಿದೆ. ಮೊಬೈಲ್ ಆಧಾರಿತ ಅಧ್ಯಯನವನ್ನು ಉತ್ತೇಜಿಸಲು ನುರಿತ ಸಾಫ್ಟವೇರ್‌ ಉದ್ಯೋಗಿಗಳು ಈ ಆ್ಯಪ್‌ ರೂಪಿಸಿದ್ದಾರೆ.

*ಆ್ಯಪ್‌ನಲ್ಲಿ ಇರುವುದು: 

150ಕ್ಕಿಂತಲೂ ಹೆಚ್ಚು ವಿಡಿಯೊ ಪಾಠಗಳು, 500 ಸಂಭವನೀಯ  ಪ್ರಶ್ನೆಗಳು (ಉತ್ತರ ಸಹಿತ), 350ಕ್ಕೂ ಹೆಚ್ಚು ಹಿಂದಿನ ಪರೀಕ್ಷೆಗಳ ಪ್ರಶ್ನೆಗಳು, ಆಯ್ದ ವಿಷಯಗಳ ಮೇಲೆ ಟಿಪ್ಪಣಿಗಳು ಇವೆ. ಆಫ್‌ಲೈನ್‌ನಲ್ಲೂ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗಿದೆ.

(ಮಾಹಿತಿಗೆ: www.m-swadhyaya.com

ಸಂಪರ್ಕ ಸಂಖ್ಯೆ: 91088 54441)

ಕೆಲವು ಜನಪ್ರಿಯ ಒಗಟುಗಳು

.ಜನಪ್ರಿಯ ಒಗಟುಗಳು೧. ಗೂಡಿನಲ್ಲಿನ ಪಕ್ಷಿ ನಾಡೆಲ್ಲ

ನೋಡುತ್ತದೆ- ಕಣ್ಣು

೨. ಕಾಸಿನ ಕುದುರೆಗೆ ಬಾಲದ ಲಗಾಮು-

ಸೂಜಿ ದಾರ

೩. ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ

ಕೆಂಪಗಾಗಿದೆ, ಮಳೆಯಿಲ್ಲ , ಬೆಲೆಯಿಲ್ಲ , ಮೈ

ಹಸಿರಾಗಿದೆ- ಗಿಳಿ

೪. ಮನೆ, ಮನೆಗೆರಡು ಬಾಗಿಲು, ಬಾಗಿಲ ಮುಂದೆ ,

ಮುಚ್ಚಿದರೆ ಹಾನಿ ಇದೇನು?- ಮೂಗು , ಬಾಯಿ

೫. ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ

ನೋಡಿದರೂ ಬಾಗಿಲಿಲ್ಲ ಇದು ಏನು?-

ಮೊಟ್ಟೆ

೬. ಅಂಗಳದಲ್ಲಿ ಹುಟ್ಟುವುದು, ಅಂಗಳದಲ್ಲಿ

ಬೆಳೆಯುವುದು, ತನ್ನ ಮಕ್ಕಳ ಹಂಗಿಸಿ

ಮಾತಾಡುವುದು ಇದು ಏನು? ಕೋಳಿ

೭. ಇದ್ದಲು ನುಂಗುತ್ತ , ಗದ್ದಲ ಮಾಡುತ್ತಾ,

ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ

ನಾನ್ಯಾರು?- ರೈಲು

೮. ಊಟಕ್ಕೆ ಕುಳಿತವರು ಹನ್ನೆರಡು ಜನರು,

ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ

ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು

ಜನಕ್ಕೂ ಬಡಿಸಿರುತ್ತಾನೆ- ಗಡಿಯಾರ

೯. ಹಸಿರು ಹಾವರಾಣಿ, ತುಂಬಿದ ತತ್ರಾಣಿ,

ಹೇಳದಿದ್ದರೆ ನಿಮ್ಮ ದೇವರಾಣಿ- ಕಲ್ಲಂಗಡಿ

ಹಣ್ಣು

೧೦. ಮೊಟ್ಟೆ ಒಡೆಯೋ ಹಾಗಿಲ್ಲ ಕೊಡ

ಮುಳುಗಿಸೋ ಹಾಗಿಲ್ಲ ಬರಿ ಕೊಡೆ ತಗೊಂಡು

ಬಾರೋ ಹಾಗಿಲ್ಲ- ತೆಂಗು

೧೨. ಕಡಿದರೆ ಕಚ್ಚೋಕೆ ಆಗೋಲ್ಲ , ಹಿಡದ್ರೆ

ಮುಟ್ಟೋಕೆ ಸಿಗೋಲ್ಲ- ನೀರು

೧೩.ಒಂದು ರುಮಾಲು ನಮ್ಮಪ್ಪನೂ

ಸುತ್ತಲಾರ.- ದಾರಿ

೧೪. ಅಬ್ಬಬ್ಬ ಹಬ್ಬ ಬಂತು, ಸಿಹಿಕಹಿ ಎರಡೂ

ತಂತು.- ಯುಗಾದಿ

೧೫. ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ

ಹಾಕಿರುತ್ತೆ .- ಬದನೆಕಾಯಿ.

೧೬. ಸಾಗರ ಪುತ್ರ ,ಸಾರಿನ ಮಿತ್ರ.- ಉಪ್ಪು

೧೭. ಸಾವಿರಾರು ಹಕ್ಕಿಗಳು, ಒಂದೇ ಬಾರಿಗೆ

ನೀರಿಗಿಳಿತವೆ.- ಅಕ್ಕಿ

೧೮. ಗುಡುಗು, ಗುಡುಗಿದರೆ ಸಾವಿರ ನಯನಗಳು

ಅರಳುವುದು.- ನವಿಲು.

೧೯. ಕಣ್ಣಿಲ್ಲ, ಕಾಲಿಲ್ಲ ,ಆದರು ಚಲಿಸುತಿದೆ

ಯಾವುದು ಎಲ್ಲಿದೆ ಬಲ್ಲಿದನ ಹೇಳಿರಲ.- ನದಿ

೨೦. ಹಲ್ಲಿಲ್ಲದ ಹಕ್ಕಿಗೆ ಗೂಡು ತುಂಬ

ಮರಿಗಳು.- ಕೋಳಿ

೨೧. ಮೋಟು ಗೋಡೆ ಮೇಲೆ, ದೀಪ ಉರೀತಿದೆ.-

ಮೂಗುಬೊಟ್ಟು

೨೨. ಹೊಂಚು ಹಾಕಿದ ದೆವ್ವ, ಬೇಡ ಬೇಡ

ಎಂದರೂ ಜೂತೆಯೇ ಬರುತ್ತೆ.- ನೆರಳು

೨೩. ಮರನು ಮರನೇರಿ ಮತ್ತೆ ಮರನೇರಿ

ಬಸವನಾ ಕತ್ತೇರಿ ತಿರುಗುತ್ತಿದೆ- ಗಾಣ

೨೪. ಹೊಕ್ಕಿದ್ದು ಒಂದಾಗಿ ಹೊರಟಿದ್ದು ಅದು

ನೂರಾಗಿ- ಶ್ಯಾವಿಗೆ

೨೫. ಮಣ್ಣು ಆಗಿದೆ ಕಲ್ಲು ಸಿಕ್ಕಿತು, ಕಲ್ಲು

ಆಗಿದೆ ಬೆಳ್ಳಿ ಸಿಕ್ಕಿತು, ಬೆಳ್ಳಿ ಒಡೆದ ನೀರು

ಸಿಕ್ಕಿತು- ತೆಂಗಿನಕಾಯಿ

೨೬. ಕತ್ತಲೆ ಮನೆಯಲಿ ಕಾಳವ್ವ ಕುಂತವ್ಳೆ

ಕುಯ್ಯೋ, ಮರ್ರೋ ಅಂತವಳೇ- ತಂಬೂರಿ

೨೭. ಹಾರಿದರೆ ಹನುಮಂತ, ಕೂತರೆ ಮುನಿ,

ಕೂಗಿದರೆ ಕಾಡಿನ ಒಡೆಯ- ಕಪ್ಪೆ

೨೮. ಕೈಲಿದ್ದಾಗ ಗುದಿಸಾಡುತ್ತೇನೆ, ಕೈ

ಬಿಟ್ಟಾಗ ಗೊರಕೆ ಒಡೆಯುತ್ತೇನೆ-ಕಸಪ

ೊರಕೆ

೨೯. ಗಿಡ ಕೊಡಲಾರದು, ಮರ ಬೆಳೆಸಲಾರದು

ಅದಿಲ್ಲದೆ ಊಟ ಸೇರಲಾರದು- ಉಪ್ಪು

೩೦. ನೀರಿಲ್ಲದ ಸಮುದ್ರ, ಜನರಿಲ್ಲದ ಪಟ್ಟಣ,

ಸಂಚಾರವಿಲ್ಲದ ಮಾರ್ಗಗಳು ಎಲ್ಲಿ?- ನಕ್ಷೆ

೩೧. ಒಬ್ಬನನ್ನು ಹಿಡಿದರೆ ಎಲ್ಲಾರ ಮರ್ಜಿಯು

ಗೊತ್ತಾಗುತ್ತದೆ.- ಅನ್ನದ ಅಗುಳು.

೩೨. ಮೇಲೆ ನೋಡಿದರೆ ನಾನಾ ಬಣ್ಣ,

ಉಜ್ಜಿದರೆ ಒಂದೇ ಬಣ್ಣ.- ಸಾಬೂನು.

೩೩. ಒಂದು ಕೊಂಬಿನ ಗುಳಿ ಅದರ ತಲೆಯೆಲ್ಲಾ

ಮುಳ್ಳು.- ಬದನೆಕಾಯಿ.

೩೪. ನಾನು ತುಳಿದೆ ಅದನ್ನ, ಅದು ತುಳಿಯೆತು

ನನ್ನನ್ನ.- ನೀರು

೩೫. ಕೊಳದ ಒಳಗೆ ಒಂದು ಮರ ಹುಟ್ಟಿ ,ಬೇರು

ಇಲ್ಲ ,ನೀರು ಇಲ್ಲ.- ಎಣ್ಣೆ ದೀಪ.

೩೬. ಬಡ ಬಡ ಬಂದ ಅಂಗಿ ಕಳಚಿದ

,ಬಾವಿಯೊಳಗೆ ಬಿದ್ದ.- ಬಾಳೆ ಹಣ್ಣು .

೩೭. ನೋಡಿದರೆ ನೋಟಗಳು ,ನಕ್ಕರೆ ನಗುಗಳು

,ಒಡೆದರೆ ತುಂಡುಗಳು.- ಕನ್ನಡಿ

೩೮. ಅಕ್ಕ ಪಕ್ಕ ಚದುರಂಗ ,ಅದರ ಹೂವು

ಪದುರಂಗ ಅದರ ಹೆಸರು ಅಯ್ಯಯ್ಯಪ್ಪ

.ಇದು ಏನು?- ದತ್ತುರಿಯ ಮುಳ್ಳು.

೩೯. ವನದಲ್ಲಿ ಹುಟ್ಟಿ ,ವನದಲ್ಲಿ ಬೆಳೆದು

,ವನದಿಂದ ಹೊರಟು ವನಜಲೊನೆ ಶಿರಕ್ಕೆರುವರು.-

ಕಮಲ.

೪೦. ಕಲ್ಲು ಕೋಳಿ ಕುಗುತ್ತದೆ, ಮುಲ್ಲ ಚೂರಿ

ಹಾಕುತ್ತಾನೆ.- ಗಿರಣಿ

೪೧. ಸಾವಿರ ತರುತ್ತೆ ಲಕ್ಷ ತರುತ್ತೆ

ನೀರಿನಲ್ಲಿ ಹಾಕಿದರೆ ಸಾಯುತ್ತೆ.- ದುಡ್ಡು.

೪೨. ತಕ್ಕಡೀಲಿ ಇಟ್ಟು ಮಾರೋ ಹಾಗಿಲ್ಲ,

ಅದಿಲ್ಲದೆ ಹಬ್ಬ ಅಗೋ ಹಾಗಿಲ್ಲ.- ಸಗಣಿ.

೪೩. ಚರಚರ ಕೊಯ್ತದೆ ಕತ್ತಿ ಅಲ್ಲ, ಮಿಣಿಮಿಣಿ

ಮಿಂಚುತ್ತದೆ ಮಿಂಚಲ್ಲ, ಪೆಟ್ಟಿಗೆಗೆ ತುಂಬ್ತದೆ

ದಾಗಿನ ಅಲ್ಲ.- ಗರಗಸ.

೪೪. ಕಡ್ಲೆ ಕಾಳಷ್ಟು ಹಿಂಡಿ ೩೨ ಮನೆ ಸಾರಿಸಿ

ಬಚ್ಚಲ ಪಾಲು ಆಗುತ್ತೆ.- ಹಲ್ಲುಪುಡಿ.

೪೫. ಕರಿ ಗುಡ್ಡ-ಬಿಳಿ ನೀರು ಅದ್ರಾಗೆ

ಕುಂತವಳೇ ಚಂಪರಾಣಿ.- ಗಡಿಗೆಮಜ್ಜಿಗೆ.

೪೬. ಕೆಂಪು ಕುದುರೆ ಮೇಲೆ ಒಬ್ಬ ಏರುತ್ತಾನೆ,

ಒಬ್ಬ ಇಳಿಯುತ್ತಾನೆ .-ರೊಟ್ಟಿ , ದೋಸೆ

೪೭. ಕೆಂದ ಕುದುರೆ ,ಬಿಳಿ ತಡಿ, ಕರೆ ಲಗಾಮು,

ಅಣ್ಣ ಅತ್ತಾನೆ, ತಮ್ಮ ಇಳಿತ್ತಾನೆ- ಬೆಂಕಿ,

ಸುಣ್ಣ ಹಚ್ಚಿದ ಹಂಚು , ಹೊಗೆ , ರೊಟ್ಟಿ

೪೮. ಕಂಬ ಕಂಬದ ಮೇಲೆ ದಿಂಬ, ದಿಂಬದ ಮೇಲೆ

ಲಾಗಲೂಟೆ, ಲಾಗಲೂಟೆ ಮೇಲೆ ಎರಡು ಹುಡ್ಗರು

ಓಡ್ಯಾಡುತಾರೆ.- ಕಣ್ಣು.

೪೯. ಶತ್ತಗಿಂಡಿ, ಶಾರಾಗಿಂಡಿ, ನೀರಾಗಿ

ಹಕ್ಕಿದರೆ ಮುಳುಗದು ಮುತ್ತಿನ ಗಿಂಡಿ.- ಬೆಣ್ಣೆ

ಉಂಡೆ.

೫೦.ಕುತ್ತಿಗೆ ಇದೆ ತಲೆ ಇಲ್ಲ, ತೋಳಿದೆ

ಬೆರಳಿಲ್ಲ, ದಡಾ ಇದೆ, ಕಾಲಿಲ್ಲ.- ಅಂಗಿ .

೫೧. ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ-

ಮಲ್ಲಿಗೆ

೫೨. ಅಂಗೈ ಅಗಲದ ರೊಟ್ಟಿಗೆ ಲೆಕ್ಕವಿಲ್ಲದಷ್ಟು

ಉಪ್ಪಿನಕಾಯಿ- ಆಕಾಶ , ನಕ್ಷತ್ರ

೫೩. ಸುಟ್ಟ ಹೆಣ ಮತ್ತೆ ಸುಡ್ತಾರೆ-ಇದ್ದಿಲ

೫೪. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ-

ಹಲಸಿನ ಹಣ್ಣು , ಬೀಜ

೫೫. ಅಂಗೈ ಕೊಟ್ಟರೆ ಮುಂಗೈನೂ

ನುಂಗುತ್ತದೆ- ಬಳೆ

೫೬. ಒಂದು ಹಪ್ಪಳ ಊರಿಗೆಲ್ಲ ಊಟ- ಚಂದ್ರ

೫೭. ಆಕಾಶದಲ್ಲಿ ಕೊಡಲಿಗಳು ತೇಲಾಡುತ್ತವೆ-

ಹುಣಸೇಹಣ್ಣು

೫೮. ನೀಲಿ ಕೆರೆಯಲಿ ಬಿಳಿ ಮೀನು- ನಕ್ಷತ್ರ

೫೯. ಒಂದು ತೇಲುತ್ತೆ ,ಒಂದು ಮುಳುಗುತ್ತೆ,

ಒಂದು ಕರಗುತ್ತೆ.- ವಾರ,ತಿಂಗಳು,ವರ್ಷ

೬೦. ಬಾ ಅಂದರೆ ಬರೋಲ್ಲ , ಹೋಗು ಅಂದರೆ

ಹೋಗೋಲ್ಲ- ಮಳೆ

೬೧. ನಾ ಇರುವಾಗ ಬರುತ್ತೆ , ನಾ ಹೋದ

ಮೇಲೂ ಇರುತ್ತೆ- ಕೀರ್ತಿ

೬೨. ಬೆಳ್ಳಿ ಸಮುದ್ರದಲ್ಲಿ ಕಪ್ಪು ಸೂರ್ಯ-

ಕಣ್ಣು

೬೩ ಅಕ್ಕನ ಮೇಲೆ ಛತ್ರಿ- ರೆಪ್ಪೆ

೬೪. ತಮ್ಮಂಗೆ ಮೂರು ಕಣ್ಣು ಅಮ್ಮಂಗೆ

ಒಂದೇ ಕಣ್ಣು- ತೆಂಗಿನ ಕಾಯಿ

೬೫. ಅಕ್ಕ ಓದುತ್ತಾಳೆ ತಂಗಿ ನಡೀತ್ತಾಳೆ-

ಕಣ್ಣು

೬೬.ಅಮ್ಮನ ಆಕಾಶವಾಣಿ ನಾನು- ಮಗು

೬೭. ಅಂಗಡಿಯಿಂದ ತರೋದು

ಮುಂದಿಟ್ಟುಕೊಂಡು ಅಳೋದು-ಈರುಳ್ಳಿ

೬೮. ಅಂಗಣ್ಣ ಮಂಗಣ್ಣ ಅಂಗಿ ಬಿಚ್ಚಿಕೊಂಡು

ನುಂಗಣ್ಣ- ಬಾಳೆಹಣ್ಣು

೬೯. ಗೂಡ್ನಲ್ಲಿರೋ ಜೋಡಿ ಪಕ್ಷಿ ಊರೆಲ್ಲ

ನೋಡುತ್ತೆ-ಕಣ್ಣು

೭೦. ಒಂದು ಮಡಕೆ, ಮಡಕೆಯೊಳಗೆ, ಕುಡಿಕೆ,

ಕುಡಿಕೆಯಲ್ಲಿ ಸಾಗರ-ತೆಂಗಿನ ಕಾಯಿ

೭೧. ನೀನಿಲ್ಲದೆ ಊಟವಿಲ್ಲ- ಉಪ್ಪು

೭೨. ಬಿಳಿ ಸರದಾರನಿಗೆ ಕರಿ ಟೋಪಿ-ಬೆಂಕಿಕಡ್ಡಿ

೭೩. ಕಾಲಿಲ್ದ ಹುಡುಗಿಗೆ ಮಾರುದ್ದ ಕಡಿವಾಣ –

ಸೂಜಿ

೭೪. ಮೂರು ಕಾಸಿನ ಕುದುರೆಗೆ ಮುನ್ನೂರು

ರೂಪಾಯಿನ ಹಗ್ಗ- ಹೇನು ಕೂದಲು

೭೫. ಕೆಂಪು ಕುದುರೆಗೆ ಲಗಾಮು, ಓಬ್ಬ

ಹತ್ತುತ್ತಾನೆ , ಇನ್ನೊಬ್ಬ ಇಳಿತಾನೇ-

ಬೆಂಕಿ,ಬಾಣಲೆ , ದೋಸೆ

೭೬ . ಒಂದು ಮನೆಗೆ ಒಂದೇ ತೊಲೆ- ತಲೆ

೭೭. ಕಂದ ಬಂದ ಕೊಂದ ತಂದ-ಶ್ರೀ ರಾಮ

ಚಂದ್ರ

೭೮. ಕಲ್ಲಿಲ್ಲದ ಬೆಟ್ಟ ಮರಳಿಲ್ಲದ

ಮರುಭೂಮಿ- ಭೂಪಟ

೭೯. ಚಿಕ್ಕಕ್ಕನಿಗೆ ಪುಕ್ಕುದ್ದ- ಸೌಟು

೮೦. ಎರಡು ಮನೆಗೆ ಒಂದೇ ದೂಲ- ಮೂಗು

೮೧. ನೀರಿರೋತಾವ ನಿಲ್ಲಲೇ ಕೋಣ- ಚಪ್ಪಲಿ

೮೨. ಹೋದ ನೆಂಟ, ಬಂದ ದಾರಿ ಗೊತ್ತಿಲ್ಲ-

ನೆರಳು

೮೩. ಮರದೊಳಗೆ ಮರ ಹುಟ್ಟಿ ಮರ ಚಕ್ರ

ಕಾಯಾಗಿ ತಿನ್ನಬಾರದ ಹಣ್ಣು ಬಲು ರುಚಿ-

ಮನುಷ್ಯನ ಹುಟ್ಟು ಮಗು

೮೪. ಕಲ್ಲರಳಿ ಹೂವಾಗಿ, ಎಲ್ಲರಿಗೂ ಬೇಕಾಗಿ,

ಮಲ್ಲಿಕಾರ್ಜುನನ ಗುಡಿಗೆ ಬೆಳಕಾಗಿ, ಬಲ್ಲವರು

ಹೇಳಿ -ಸುಣ್ಣ

೮೫. ಚಿಣಿಮಿನಿ ಎನ್ನುವ ಕೆರೆ, ಚಿಂತಾಮಣಿ

ಎನ್ನುವ ಹಕ್ಕಿ, ಕೆರೆ ಬತ್ತಿದರೆ ಹಕ್ಕಿಗೆ ಮರಣ –

ದೀಪ

೮೬. ಹೋಗುತ್ತಾ, ಬರುತ್ತಾ ಇರುವುದು

ಎರಡು,ಹೋದ ಮೇಲೆ ಬರಲಾರವು ಎರಡು-

ಸಿರಿತನ-ಬಡತನ , ಪ್ರಾಣ -ಬಡತನ

೮೭. ಒಂದು ಹಸ್ತಕ್ಕೆ ನೂರೆಂಟು ಬೆರಳು-

ಬಾಳೆಗೊನೆ

೮೮. ಎಲ್ಲರ ಮನೆ ಅಜ್ಜಿಗೆ ಮೈಯೆಲ್ಲಾ ಕಜ್ಜಿ –

ಜರಡಿ

೮೯. ಎಂದರೆ ತೆರಿತಾವ, ಅಪ್ಪ ಎಂದರೆ

ಮುಚ್ಚುತಾವ- ಬಾಯಿ

೯೦. ದಾಸ್ ಬುರುಡೆ ದೌಲಥ ಬುರುಡೆ,

ಲೋಕಕ್ಕೆಲ್ಲ ಎರಡೇ ಬುರುಡೆ- ಸೂರ್ಯ ,

ಚಂದ್ರ

೯೧. ಅಪ್ಪ ಆಕಾಶಕ್ಕೆ ಅವ್ವ ಪಾತಾಳಕ್ಕೆ ಮಗ

ವ್ಯಾಪಾರಕ್ಕೆ ಮಗಳು ಮದುವೆಗೆ – ಅಡಿಕೆ ಮರ

೯೨.ಹಾರಾಡುತ್ತಿದೆ ಗಾಳಿಪತವಲ್ಲ , ಬಣ್ಣ

ಮೂರಿರುವುದು ಕಾಮನಬಿಲ್ಲಲ್ಲ- ಧ್ವಜ

೯೩. ನೀಲಿ ಸಾಗರದಲ್ಲಿ ಬೆಳ್ಳನೆ ಮೀನುಗಳು

ನಾನ್ಯಾರು?- ತಾರೆಗಳು

೯೪. ಬಿಡಿಸಿದರೆ ಹೂವು, ಮದಚಿದರೆ ಮೊಗ್ಗು

,ಇದು ಏನು?- ಛತ್ರಿ

೯೫. ಆರು ಕಾಲು ಅಂಕಣ್ಣ ಮೂರು ಕಾಲು

ದೊಂಕಣ್ಣ ಸದಾ ಮೀಸೆ ತಿರುವಣ್ಣ- ನೊಣ

೯೬. ಒಂಟಿಕಾಲಿನ ಕುಂಟ. ನಾನ್ಯಾರು?- ಬುಗರಿ

೯೭. ಕಪ್ಪು ಕಂಬಳಿ ನೆಂಟ ಎಲ್ಲವನು ನಾಶ

ಮಾಡೋಕೆ ಹೊಂಟ- ಇಲಿ

೯೮. ಹಲ್ಲು ಹಾಕಿದರೆ ಹಾಲು ಕೆಡೋಲ್ಲ ಕಲ್ಲು

ಹಾಕಿದರೆ ಕೆಡುತ್ತೇ- ಕಳ್ಳಿ

೯೯. ಕಾಡಿನಲ್ಲಿ ಹುಟ್ಟುವುದು ಕಾಡಿನಲ್ಲಿ

ಬೆಳೆಯುವುದು ಕಡಿದಲ್ಲಿ ಕಂಪ ಸೂಸುವೆನು-

ಶ್ರೀಗಂಧ

೧೦೦. ಹಸಿರು ಕೋಟೆ, ಬಿಳಿ ಕೋಟೆ, ಕೆಂಪಿನ

ಕೋಟೆ ಈ ಕೋಟೆಯೊಳಗೆ ಕಪ್ಪು

ಸಿಪಾಯಿಗಳು- ಪರಂಗಿ ಹಣ್ಣು

೧೦೧.ಒಂದು ಮನೆಯಲ್ಲಿ ಮೂರು ಜನ ಅಕ್ಕ-

ತಂಗಿಯರಿದ್ದಾರೆ ಆದರೆ ಒಬ್ಬರ ಮುಖ ಕಂಡರೆ

ಒಬ್ಬರಿಗೆ ಕಾಣೋಲ್ಲ- ಜಾದಳಕಾಯಿ

೧೦೨. ಅಂಕಡೊಂಕಿನ ಬಾವಿ ಹೊಕ್ಕು ನೋಡಿದ್ರೆ

ಮುಕ್ಕ ನೀರಿಲ್ಲ- ಕಿವಿ

೧೦೩. ಕೆಂಪು ಕುದುರೆ ಕರಿ ತಡಿ ಒಬ್ಬ ಏರುತಾನೆ

ಒಬ್ಬ ಇಳಿತಾನೆ-ರೊಟ್ಟಿ

೧೦೪. ಮೂರೂ ಪಕ್ಷಿಗಳು ಗೂಡಿಗೆ ಹೋಗುವಾಗ

ಬೇರೆ ಬೇರೆ ಬಣ್ಣ ಬರುವಾಗ ಬಣ್ಣ-ಎಲೆ ಅದಿಕೆ

೧೦೫. ಆಕಾಶದೊಳಗಿನ ಗಿಣಿ ಊಟದ ಹೊತ್ತಿಗೆ

ರಾಣಿ- ಬಾಳೆಲೆ

೧೦೬. ಎರಡು ಬಾವಿಗಳ ನಡುವೆಯೊಂದು

ಸೇತುವೆ- ಮೂಗು

೧೦೭. ತಲೆ ಇಲ್ಲ , ನಡು ಇಲ್ಲ , ಕೈಗಳಿದ್ದರು

ಬೆರಳಿಲ್ಲ-ಕೋಟು ಅಂಗಿ

೧೦೮. ತಿಂಡಿಗೆ ಕಡಿಮೆ ಇಲ್ಲ ,ತೀರ್ಥ ಕುಡಿದರೆ

ಸಾವು -ವಿಷ

೧೦೯ . ಒಬ್ಬಳು ಮುಲುಗಿದಳು, ಒಬ್ಬಳು

ಕರಗಿದಳು , ಒಬ್ಬಳು ತೇಲಿದಳು -ಅಡಿಕೆ , ಸುಣ್ಣ

೧೧೦.ಹೋಗೋದು ಮುಳುಗೋದು ತರೋದು

ಏನು?- ಬಿಂದಿಗೆ

೧೧೧. ಕಿರೀಟ ಇದೆ ರಾಜ ಅಲ್ಲ, ಕಲ

ತಿಳಿಸುತ್ತ್ತೆ ಗಡಿಯಾರವಲ್ಲ- ಕೋಳಿ

೧೧೨. ಒಂದು ಹಣ್ಣಿಗೆ ಹನ್ನೆರಡು ತೊಳೆ

ಮತ್ತೂ ಮೂವತ್ತು ಬೀಜ- ವರ್ಷ

೧೧೩. ಗುಂಡಾಕಾರ ಮೈಯೆಲ್ಲಾ ತೂತು- ದೋಸೆ

೧೧೪.ಬಂಗಾರದ ಗುಬ್ಬಿ ಬಾಲದಲ್ಲೇ

ನೀರನ್ನು ಕುಡಿಯುತ್ತೆ- ಚಿಮಿಣಿ

೧೧೫. ಒಂದು ಮರ , ಮರದಾಗ ಅಲ್ಲ,

ಅಲ್ಲಿನಾಗ ಕೊಬ್ರಿ ಗುಂಡ- ಆಕಾಶ ನಕ್ಷತ್ರ

ಚಂದ್ರ

೧೧೬. ಅನ್ನ ಮಾಡಲಿಕ್ಕೆ ಬಾರದಂತಹ ಅಕ್ಕಿ

ಯಾವುದು- ಏಲಕ್ಕಿ

೧೧೭. ಬೆಳ್ಳಿ ಬಟ್ಟಲಲ್ಲಿ ಮುತ್ತಿನ ಬಿಂದು-

ತಾರೆ

೧೧೮. ಲಟಪಟ ಲೇಡಿಗೆ ಒಂದೇ ಕಣ್ಣು- ಸೂಜಿ

೧೧೯. ಹಸಿರು ಕೋಲಿಗೆ ಮುತ್ತಿನ ತುರಾಯಿ-

ಜೋಳದ ತೆನೆ

೧೨೦. ಬಿಳಿ ಹುಲ್ಲಲ್ಲಿ ಕೆಂಪು ಕುರಿಮರಿ- ನಾಲಿಗೆ

೧೨೧. ಸೂಜಿ ಸಣ್ಣಕಾಗೆ ಬಣ್ಣ – ಕೂದಲು

೧೨೨. ಹೋದರು ಇರುತ್ತೆ ಬಂದರೂ

ಕಾಡುತ್ತೆ.ಇದು ಏನು?- ನೆನಪು

೧೨೩. ಆರು ಕಾಲಿನ ಆನೆ, ಆನೆ ತಿನ್ನುತ್ತೆ ನೀರು

ಕುಡಿಯಲ್ಲ- ನುಸಿ

೧೨೪. ಊರಿಗೆಲ್ಲ ಒಂದೇ ಕಂಬಳಿ- ಆಕಾಶ

೧೨೫. ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ- ಕುಂಕುಮ

೧೨೬. ಕರಿ ಹೊಲದ ಮದ್ಯದಲ್ಲಿ ಬೇಲಿ ದಾರಿ-

ಬೈತಲೆ

೧೨೭. ಒಂದು ಬತ್ತಿ ಮನೆಯೆಲ್ಲ ಬೆಳಕು- ಸೂರ್ಯ

೧೨೮.ಕಣ್ಣಿಗೆ ಕಾಣೋದಿಲ್ಲ, ಕೈಗೆ ಸಿಗೋದಿಲ್ಲ

-ಗಾಳಿ

೧೨೯. ಕಣ್ಣಿಗೆ ಹತ್ತಿರ ಕಾಲಿಗೆ ದೂರ- ಬೆಟ್ಟ

೧೩೦. ಊಟಕ್ಕೆ ಮೊದಲು ನಾನು ಅಂತ ಬರುತ್ತೆ

-ಬಾಳೆ ಎಲೆ , ತಟ್ಟೆ

೧೩೧. ಹಸಿರು ಮೈ ಹಳದಿ ಮೈ ಪೇಟೇಲಿ ಕುಳಿತು

ಎಲ್ಲರನ್ನು ಕರೆಯುತ್ತೆ- ಮಾವು

೧೩೨. ಹುಲಿಯ ಚಿಕ್ಕಮ್ಮ , ಇಲಿಯ ಮುಕ್ಕಮ್ಮ-

ಬೆಕ್ಕು

೧೩೩. ಕೂಗಿದರೆ ರಾವಣ, ಹಾರಿದರೆ ಹನುಮಂತ,

ಕೂತರೆ ಮುನಿ- ಕಪ್ಪೆ

೧೩೪. ಕಲ್ಲಲ್ಲಿ ಹುಟ್ಟುವುದು, ಕಲ್ಲಲ್ಲಿ

ಬೆಳೆಯುವುದು, ನೆತ್ತಿಯಲ್ಲಿ ಕುತಗುಟ್ಟುವುದು-

ಸುಣ್ಣ

೧೩೫. ಕಾಂತಾಮಣಿ ಎಂಬ ಪಕ್ಷಿ, ಚಿಂತಾಮಣಿ

ಎಂಬ ಕೆರೆ, ಕೆರೆಯಲ್ಲಿ ನೀರಿಲ್ದೆ ಹೋದ್ರೆ

ಪಕ್ಷಿಗೆ ಮರಣ- ದೀಪ

೧೩೬. ಕಲ್ಲು ತುಳಿಯುತ್ತೆ, ಮುಳ್ಳು ಮೆಯುತ್ತೆ,

ನೀರು ಕಂಡ್ರೆ ನಿಲ್ಲುತ್ತೆ- ಚಪ್ಪಲಿ

೧೩೭. ಕಾಲಿಲ್ಲದೇ ನಡೆಯುವುದು, ತಲೆ ಎಲ್ಲಡೆ

ನುಡಿಯುವುದು, ಮೇಲು ಕೆಳಗಾಗಿ ಓದುವುದು- ನದಿ

೧೩೮. ಜಂಬು ನೇರಳೆ ಮರ, ಎಳೆದರೆ ನಾಲ್ಕು

ಬಾವಿ ನೀರು ಒಂದೇ ಆಗುತ್ತದೆ- ಮೇಡು

೧೩೯. ಇಡೀ ಮನೆಗೆಲ್ಲ ಒಂದೇ ಕಂಬಳಿ, ಬಾಯಿ

ತೆರೆದರೆ ಮೂಗು ಮುಚ್ಚುತ್ತಿ-ಆಕಾಶ

೧೪೦. ಒಂದು ಕಾಲಿನ ಪಕ್ಷಿಗೆ ಒಂಭತ್ತು ರೆಕ್ಕೆ,

ಒಂದೇ ಕಾಲಲಿ ನಿಂತು ನೂರಾರು ಮೊಟ್ಟೆ

ಇಡುತ್ತದೆ- ಜೋಳದ ದಂಟು

೧೪೧. ಎತ್ತ ಹೋದರು ಕುತ್ತಿಗೆಗೆ ಕೈ

ಹಾಕುತ್ತಾರೆ! ನಾನ್ಯಾರು?- ಸಾಲಿಗ್ರಾಮ

೧೪೨. ಕರಿ ಹುಡುಗನಿಗೆ ಬಿಳಿ ಟೋಪಿ – ಹೆಂಡದ

ಮಡಿಕೆ

೧೪೩. ಬಿಳಿ ಆಕಾಶದಲ್ಲಿ ಕಪ್ಪು

ನಕ್ಷತ್ರಗಳು,ಇದನ್ನು ನೋಡಲು ಜನ

ಕಾದಿಹರು-ನಾಣ್ಯ

೧೪೪. ಗೋಡೆ ಗುದ್ದಪ್ಪ ನೀನಿದ್ದಲ್ಲಿ ನಿದ್ದೆ

ಇಲ್ಲಪ್ಪ.- ತಿಗಣೆ

೧೪೫. ಕುದುರೆ ಬಾಲದಿಂದ ನೀರು

ಕುಡಿಯುತ್ತದೆ- ಹೇನು

೧೪೬. ಬಿಳಿ ಸಾಮ್ರಾಜ್ಯದಲ್ಲಿ ಕಪ್ಪು

ಪ್ರಜೆಗಳು.- ಸೀತ ಫಲ

೧೪೭. ಅಣ್ಣ ಅತ್ತರೆ ತಮ್ಮನೂ ಅಳುತ್ತಾನೆ.-

ಕಣ್ಣು

೧೪೮. ಮನೆ ಮೇಲೆ ಮಲ್ಲಿಗೆ ಹೂವು.- ಮಂಜು

೧೪೯. ಹಾರಿದರೆ ಹನುಮಂತ ಕೂಗಿದರೆ ಶಂಖ.-

ಕಪ್ಪೆ

೧೫೦. ನೋಡಿದರೆ ಕಲ್ಲು ನೀರು ಹಾಕಿದರೆ

ಮಣ್ಣು.- ಸುಣ್ಣ

೧೫೧.ಸುದ್ದಿ ಸೂರಪ್ಪ ದೇಶವೆಲ್ಲಾ

ಸುತ್ತಾಡ್ತಾನೆ.- ಪೋಸ್ಟ್ ಕಾರ್ಡ್

೧೫೨. ಬಿಳಿ ಕುದುರೆಗೆ ಹಸಿರು ಬಾಲ.- ಮೂಲಂಗಿ

೧೫೩. ಚಿಕ್ಕ ಬೆಟ್ಟದಲ್ಲಿ ಪುಟ್ಟ ಚಂದ್ರ.-

ಕುಂಕುಮ

೧೫೪. ಬರೋದ ಕಂಡು ಕೈ ಒಡ್ತಾರೆ.- ಬಸ್

೧೫೫. ಹತ್ತಾರು ಮಕ್ಕಳ ತಂದೆ ಅದಕ್ಕೆ ತಲೆಯ

ಮೇಲೆ ಜುಟ್ಟು-ಹುಂಜ

೧೫೬. ಹಸಿರು ಮುಖಕ್ಕೆ ವಿಪರೀತ ಕೋಪ ,

ಕೋಪ ಮಾಡಿಕೊಳ್ಳದೆ ನಾನ್ಯಾರೆಂದು

ಹೇಳಿ?- ಮೆಣಸಿನಕಾಯಿ

೧೫೭. ಅಜ್ಜಿ ಗುದ್ದಿದರೆ ಮನೆಯೆಲ್ಲ ಮಕ್ಕಳು

ಈಗ ಹೇಳಿ ನಾನ್ಯಾರು- ಬೆಳ್ಳುಳ್ಳಿ

೧೫೮. ಹಗಲಲ್ಲಿ ಮಾಯಾ ರಾತ್ರಿಯಲ್ಲಿ

ಪ್ರತ್ಯಕ್ಷ ?ನಾನ್ಯಾರು ಹೇಳಿ?- ನಕ್ಷತ್ರ

೧೫೯.ಹಗ್ಗ ಹಾಸಿದೆ ಕೋಣ ಮಲಗಿದೆ-

ಕುಂಬಳಕಾಯಿ , ಬಳ್ಳಿ

೧೬೦. ನನ್ನ ಕಂಡರೆ ಎಲ್ಲರು ಓದೀತಾರೆ –

ಚೆಂಡು

೧೬೧. ಹಳ್ಳಿ ಗಡಿಯಾರ, ಒಳ್ಳೆ ಆಹಾರ-ಕೋಳಿ

ಪಿಯುವರೆಗೆ ಏಕರೂಪ ಶಿಕ್ಷಣ: ಜ್ಞಾನ ಆಯೋಗ ಶಿಫಾರಸು.

*ಪಿಯುವರೆಗೆ ಏಕರೂಪ ಶಿಕ್ಷಣ: ಜ್ಞಾನ ಆಯೋಗ ಶಿಫಾರಸು.
ಬಹುಭಾಷಾ ಮಾಧ್ಯಮ ನೀತಿಗೆ ಜ್ಞಾನ ಆಯೋಗ ಶಿಫಾರಸು

ಎಲ್ಲರಿಗೂ ಸಿಬಿಎಸ್‌ಇ ಪಠ್ಯಕ್ರಮ /ಇತಿಹಾಸ, ಸಂಸ್ಕೃತಿಯೂ ಅಗತ್ಯ / ಹೆಣ್ಣುಮಕ್ಕಳಿಗೆ ಪದವಿ ಶಿಕ್ಷಣ ಖಾತರಿ / ಶಿಕ್ಷಕರಿಗೆ ಬಿ.ಇಡಿ ಕಡ್ಡಾಯ

ಬೆಂಗಳೂರು: ಪ್ರತಿ ಮಗುವಿಗೂ 12ನೇ ತರಗತಿ ವರೆಗೆ ಏಕರೂಪದ ಗುಣ ಮಟ್ಟದ ಶಿಕ್ಷಣ, ಪದವಿ ವರೆಗೆ ಪ್ರತಿ ಹೆಣ್ಣುಮಕ್ಕಳಿಗೂ ಶಿಕ್ಷಣದ ಖಾತರಿ, ಪಂಚಾಯತಿ ಮಟ್ಟದಲ್ಲಿ 12ನೇ ತರಗತಿ ವರೆಗೆ ಶಾಲಾ ಕ್ಯಾಂಪಸ್, ಶೇ.1 ಶಿಕ್ಷಕರಿಗೆ ಪ್ರತಿವರ್ಷ ವಿದೇಶಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ತರಬೇತಿ, ಶಿಕ್ಷಕರಿಗೆ ಕನಿಷ್ಠ ಬಿ.ಇಡಿ ಪದವಿ ಕಡ್ಡಾಯ, ಭವಿಷ್ಯದ ಸವಾಲು ಮತ್ತು ಸ್ಪರ್ಧೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲು ಬಹುಭಾಷಾ ನೀತಿ ಆಯ್ಕೆ ಮಾಡಿಕೊಳ್ಳುವಂತೆ ಕರ್ನಾಟಕ ಜ್ಞಾನ ಆಯೋಗ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ.

ಖ್ಯಾತ ವಿಜ್ಞಾನಿ ಕೆ. ಕಸ್ತೂರಿರಂಗನ್ ಅಧ್ಯಕ್ಷತೆಯ 42 ಮಂದಿ ಗಣ್ಯರು ಹಾಗೂ ತಜ್ಞರನ್ನು ಒಳಗೊಂಡ ಆಯೋಗ ‘ಕರ್ನಾಟಕ ರಾಜ್ಯ ಶಿಕ್ಷಣ ನೀತಿ’ಗೆ ಸಂಬಂಧಿಸಿದಂತೆ ಕರಡು ಸಿದ್ಧಪಡಿಸಿ ಶನಿವಾರ ಸರಕಾರಕ್ಕೆ ಸಲ್ಲಿಸಿತು. ವಾಸ್ತವಿಕ ಸಂದರ್ಭ ಹಾಗೂ ಭವಿಷ್ಯದ ಅಗತ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಒಟ್ಟಾರೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತರುವ ಸಂಬಂಧ ಮಹತ್ವದ ಶಿಫಾರಸು ಮಾಡಿದೆ. ವಿಷಯಾಧರಿತ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಬ್ರೇಕ್ ಹಾಕಿ, ವೃತ್ತಿಪರ ಕೋರ್ಸ್ ಸೇರಿ ಎಲ್ಲ ವಿಷಯಗಳ (ಅಂತರ ಶಿಸ್ತೀಯ) ಅಧ್ಯಯನಕ್ಕೆ ಅವಕಾಶ ಕಲ್ಪಿಸುವ ಸಾಂಪ್ರದಾಯಿಕ ವಿವಿಗಳ ಕಲ್ಪನೆಯನ್ನೇ ಆಯೋಗ ಸಮರ್ಥಿಸಿದೆ.

ಆಯೋಗದ ವರದಿ ಸ್ವೀಕರಿಸಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ತನ್ವೀರ್ ಸೇಠ್ ‘‘ಆಯೋಗವು ಸಾಕಷ್ಟು ಅಧ್ಯಯನ ನಡೆಸಿ ಮಹತ್ವದ ಶಿಫಾರಸುಗಳೊಂದಿಗೆ ವರದಿ ಸಲ್ಲಿಸಿದೆ. ವರದಿಯನ್ನು ಪರಿಶೀಲಿಸಿ ಆದಷ್ಟು ಶೀಘ್ರ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು. ಅನುಷ್ಠಾನಕ್ಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು’’ ಎಂದು ಭರವಸೆ ನೀಡಿದರು.

*ಏಕರೂಪ ಶಿಕ್ಷಣ ಹೇಗೆ?*
* ಹುಟ್ಟಿದ ಸ್ಥಳ, ಭೌಗೋಳಿಕ ಕಾರಣಕ್ಕಾಗಿ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತವಾಗಬಾರದು.

* ಪ್ರತಿ ಮಗುವಿಗೂ 12ನೇ ತರಗತಿ ವರೆಗೆ ಏಕರೂಪದ ಗುಣಮಟ್ಟದ ಶಿಕ್ಷಣ ಸಿಗಬೇಕು.

* ಖಾಸಗಿ-ಸರಕಾರಿ ಶಾಲೆಗಳ ಶಿಕ್ಷಣ ವ್ಯವಸ್ಥೆಯಲ್ಲಿ ಏಕರೂಪತೆ ಮತ್ತು ಗುಣಮಟ್ಟಕ್ಕೆ ಒತ್ತು ಸಿಕ್ಕರೆ ಸರಕಾರಿ ಶಾಲೆಗಳ ಗುಣಮಟ್ಟ ಸುಧಾರಣೆ ಸಾಧ್ಯ.

* ಏಕರೂಪತೆ ಮತ್ತು ಗುಣಮಟ್ಟಕ್ಕಾಗಿ ಸಿಬಿಎಸ್‌ಸಿ ಪಠ್ಯಕ್ರಮ ಅಳವಡಿಸಿಕೊಳ್ಳಬೇಕು.

* ಇತಿಹಾಸ, ಸಂಸ್ಕೃತಿ, ಭೂಗೋಳ ಮತ್ತಿತರ ರಾಜ್ಯದ ವಿಷಯಗಳೂ ಪಠ್ಯಕ್ರಮದಲ್ಲಿ ರಬೇಕು.

* ಪರೀಕ್ಷೆ, ಮೌಲ್ಯಮಾಪನ ಅಗತ್ಯವಾದರೂ, ಕನಿಷ್ಠ 15ನೇ ವರ್ಷದ ವರೆಗೆ ಎಲ್ಲ ಮಕ್ಕಳೂ ಶಾಲೆಯಲ್ಲೇ ಇರಬೇಕು.

* ಶಾಲಾ ಶಿಕ್ಷಣಕ್ಕೆ ಖಾಸಗಿ ವಲಯದ ಹೂಡಿಕೆ ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಸರಕಾರ ಸೂಕ್ತ ವ್ಯವಸ್ಥೆ ಮಾಡಬೇಕು.

*ಶಿಕ್ಷಕರಿಗೆ ವಿದೇಶದಲ್ಲಿ ತರಬೇತಿ*

* ಶಿಕ್ಷಕರಿಗೆ ಬಿ.ಇಡಿ ಕನಿಷ್ಠ ಅರ್ಹತೆಯಾಗಬೇಕು. ಈಗಿರುವ ಶಿಕ್ಷಕರು ಬಿ.ಇಡಿ ಮಾಡಲು ಅವಕಾಶ ಕಲ್ಪಿಸಬೇಕು.

* ಶಿಕ್ಷಕರ ವೃತ್ತಿಪರತೆಗೆ ಮಾನ್ಯತೆ ಸಿಗುವಂತಾಗಬೇಕು,

* ಶಿಕ್ಷಕರಲ್ಲಿ ಶೇ. 1 ಮಂದಿಗೆ ಪ್ರತಿವರ್ಷ ವಿದೇಶಗಳ ಪ್ರತಿಷ್ಠಿತ ಸಂಸ್ಥೆಗಳಲ್ಲಿ ತರಬೇತಿ ಕೊಡಿಸಬೇಕು.

*ಕೌಶಲ್ಯಾಭಿವೃದ್ಧಿ ಪರ ಒಲವು*

* ವಿಷಯ ಆಧರಿತ ವಿಶ್ವವಿದ್ಯಾಲಯಗಳ ಕಲ್ಪನೆ ಅಂತ್ಯಗೊಂಡು ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು ಹಾಗೂ ಕೌಶಲ್ಯಾಭಿವೃದ್ಧಿ ಕೋರ್ಸ್‌ಗಳು ಸೇರಿದಂತೆ ಎಲ್ಲ ವಿಷಯಗಳ ಅಂತರ ಶಿಸ್ತೀಯ ಅಧ್ಯಯನಕ್ಕೆ ವಿವಿಗಳಲ್ಲಿ ಅವಕಾಶ ಸಿಗಬೇಕು.

* ಸ್ಮಾರ್ಟ್‌ರ್ಟ್ ಕ್ಲಾಸ್‌ರೂಮ್ಸ್, ಡಿಜಿಟಲ್ ಟೀಚಿಂಗ್, ಡಿಜಿಟಲ್ ಲೈಬ್ರರಿ, ಸೆಟಲೈಟ್ ತಂತ್ರಜ್ಞಾನ ಆಧರಿತ ಶಿಕ್ಷಣ ಜಾಲ ನಿರ್ಮಾಣ.

* ಭೌಗೋಳಿಕ ಮಿತಿ ಮೀರಿ ಯಾವುದೇ ವಿವಿಯಲ್ಲಿ ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶ.

ಉನ್ನತ ಶಿಕ್ಷಣ ಸಂಬಂಧಿ ಶಿಫಾರಸು

* ವಿಶ್ವವಿದ್ಯಾಲಯಗಳ ಆಡಳಿತ, ಶೈಕ್ಷಣಿಕ ಹಾಗೂ ಹಣಕಾಸು ಸಂಬಂಧಿ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಷರತ್ತಿಗೊಳಪಟ್ಟು ಸಂಪೂರ್ಣ ಸ್ವಾಯತ್ತತೆ ನೀಡಬೇಕು.

* ಶೈಕ್ಷಣಿಕ ಪಾಲುದಾರಿಕೆ, ಇಂಡಸ್ಟ್ರಿ ಗ್ರಾಂಟ್ ಮತ್ತಿತರ ವಿಧಾನದಿಂದ ಹೆಚ್ಚುವರಿ ಅನುದಾನ ಸಂಗ್ರಹಕ್ಕೆ ವಿಶ್ವವಿದ್ಯಾಲಯಗಳಿಗೆ ಅವಕಾಶ ಕಲ್ಪಿಸಬೇಕು.

* ವಿಶ್ವವಿದ್ಯಾಲಯ, ಸಂಸ್ಥೆಗಳಿಗೆ ಅನುದಾನ ಕಾರ್ಯಕ್ರಮತೆ ಆಧರಿಸಿ ನಿಗದಿಯಾಗಬೇಕು.

* ವಿಶ್ವವಿದ್ಯಾಲಯಗಳು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದ ಸಂಪರ್ಕ ಕೊಂಡಿಗಳಾಗಿ ರೂಪುಗೊಳ್ಳಲು ಉತ್ತೇಜನ ನೀಡಬೇಕು.

* ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಬಹುಆಯಾಮಗಳ ಸಂಶೋಧನೆಗೆ ಒತ್ತು ನೀಡುವ ಶಿಕ್ಷಣ ವಿಭಾಗ ಇರಲೇಬೇಕು.

* ಕಾಲೇಜು, ವಿ.ವಿ.ಗಳಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಪ್ರೋತ್ಸಾಹಕ್ಕಾಗಿ ‘ಕರ್ನಾಟಕ ವಿಜ್ಞಾನ, ತಂತ್ರಜ್ಞಾನ, ಮಾನವೀಯ ಅಧ್ಯಯನ ಮತ್ತು ಸಾಮಾಜಿಕ ವಿಜ್ಞಾನಗಳ ಪ್ರತಿಷ್ಠಾನ’ ಸ್ಥಾಪಿಸಬೇಕು.

* ಪ್ರತಿ ವಿಶ್ವವಿದ್ಯಾಲಯವೂ ರಾಷ್ಟ್ರೀಯ ಮತ್ತು ಜಾಗತಿಕ ಸ್ಪರ್ಧೆ ಎದುರಿಸಲು ಸಹಾಯವಾಗುವಂತೆ ಸ್ವಾಯತ್ತತೆ ನೀಡುವ ಪ್ರತ್ಯೇಕ ಶಾಸನ ರೂಪಿಸಬೇಕು.

*ಇನ್ನಿತರ ಶಿಫಾರಸುಗಳು*

* ರಾಜ್ಯದಲ್ಲಿ ಶಿಕ್ಷಣದ ಸಾಮಾಜಿಕ ಆಯಾಮವನ್ನು ಗುರುತಿಸಿ ಭವಿಷ್ಯದ ಶಿಕ್ಷಣಕ್ಕೆ ನೀತಿಯ ನಾಯಕತ್ವ ನೀಡಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಸಚಿವರು ಸದಸ್ಯರಾಗಿರುವ ‘ಮಿನಿಸ್ಟೀರಿಯಲ್ ಗ್ರೂಪ್ ಆನ್ ಎಜುಕೇಷನ್’ ರಚಿಸಬೇಕು.

* ಶಿಕ್ಷಣ, ಶಿಕ್ಷಕ ಸೇರಿ ಶಿಕ್ಷಣದ ಎಲ್ಲ ಆಯಾಮಗಳ ನಿಯಂತ್ರಣ, ಪರಾಮರ್ಶೆ ಮತ್ತು ಮೌಲ್ಯಮಾಪನಕ್ಕಾಗಿ ‘ಕರ್ನಾಟಕ ರಾಜ್ಯ ಶಿಕ್ಷಣ ನಿಯಂತ್ರಣ ಪ್ರಾಧಿಕಾರ’ ಎಂ ಸ್ವಾಯತ್ತ ಸಂಸ್ಥೆ ರಚಿಸಬೇಕು. ಶಿಕ್ಷಣದಲ್ಲಿ ಪಾರದರ್ಶಕತೆ ಮತ್ತು ಏಕರೂಪತೆ ತರಲು ಈ ವ್ಯವಸ್ಥೆ ಅತ್ಯಗತ್ಯ.

* ಸದ್ಯದ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಖಾಸಗಿ ವಿಶ್ವವಿದ್ಯಾಲಯಗಳಿಗೂ ಪ್ರಾತಿನಿಧ್ಯ ಕಲ್ಪಿಸಬೇಕು.

ಬಹುಭಾಷಾ ಮಾಧ್ಯಮ ಚಿಂತನೆ

ಮಾತೃಭಾಷಾ ಮಾಧ್ಯಮ ನೀತಿ ಕಡ್ಡಾಯ ನಿಲುವಿಗೆ ಸರಕಾರ ಬದ್ಧವಾಗಿದ್ದರೆ, ಮಕ್ಕಳ ಪಾಲಕರು ಸ್ಪರ್ಧಾತ್ಮಕ ಸನ್ನಿವೇಶ ದೃಷ್ಟಿಯಲ್ಲಿಟ್ಟುಕೊಂಡು ಆಂಗ್ಲ ಮಾಧ್ಯಮದತ್ತ ಆಕರ್ಷಿತರಾಗಿದ್ದಾರೆ. ಮಾತೃಭಾಷಾ ಮಾಧ್ಯಮ ನೀತಿ ಜಾರಿಗೆ ಸುಪ್ರೀಂಕೋರ್ಟ್ ‘ನೋ’ ಎಂದಿದೆ. ಈ ಇಕ್ಕಟ್ಟಿನ ಸಂದರ್ಭದಲ್ಲಿ ಜ್ಞಾನ ಆಯೋಗ ಪರಿಹಾರ ಸೂತ್ರವನ್ನು ಪ್ರಸ್ತಾಪಿಸಿದೆ.

* 4ನೇ ತರಗತಿ ವರೆಗೆ ಕನ್ನಡ ಮಾಧ್ಯಮ

* 5ರಿಂದ ಇಂಗ್ಲಿಷ್ ಮಾಧ್ಯಮ ಆಯ್ಕೆಗೆ ಅವಕಾಶ

* 1ನೇ ತರಗತಿಯಿಂದಲೇ ಇಂಗ್ಲಿಷ್ ದ್ವಿತೀಯ ಭಾಷೆ

Opposite words & General Knowledge

Opposite words

(5th to 7th standard )

absent × present
accept × decline, refuse
accurate × inaccurate
admit × deny
advantage × disadvantage
agree × disagree
alive × dead
all × none, nothing
always × never
ancient × modern
answer × question
apart × together
appear × disappear, vanish
approve × disapprove
arrive × depart
artificial × natural
ascend × descend
attractive × repulsive
awake × asleep
backward × forward
bad × good
beautiful × ugly
before × after
begin × end
below × above
bent × straight
best × worst
better × worse, worst
big × little, small
black × white
blame × praise
bless × curse
bitter × sweet
borrow × lend
bottom × top
boy × girl
brave × cowardly
build × destroy
bold × meek, timid
bound × free
bright × dim, dull
brighten × fade
broad × narrow
calm × windy, troubled
capable × incapable
careful × careless
cheap × expensive
cheerful × sad, discouraged, dreary
clear × cloudy, opaque
clever × stupid
clockwise × counterclockwise
close × far, distant
closed × open
cold × hot
combine × separate
come × go
comfort × discomfort
common × rare
contract × expand
cool × warm
correct × incorrect, wrong
courage × cowardice
create × destroy
crooked × straight
cruel × kind
compulsory × voluntary
courteous × discourteous, rude
dangerous × safe
dark × light
day × night
dead × alive
decline × accept, increase
decrease × increase
deep × shallow
definite × indefinite
demand × supply
despair × hope
disappear × appear
diseased × healthy
down × up
downwards × upwards
dry × moist, wet
dull × bright, shiny
early × late
east × west
easy × hard, difficult
empty × full
encourage × discourage
end × begin, start
enter × exit
even × odd
export × import
external × internal
fade × brighten
fail × succeed
false × true
famous × unknown
far × near
fast × slow
fat × thin
few × many
find × lose
first × last
foolish × wise
fold × unfold
forget × remember
found × lost
friend × enemy
generous × stingy
gentle × rough
get × give
girl × boy
glad × sad, sorry
gloomy × cheerful
good × bad
great × tiny, small, unimportant
guest × host
guilty × innocent
happy × sad
hard × easy
hard × soft
harmful × harmless
hate × love
healthy × diseased, ill, sick
heaven × hell
heavy × light
here × there
high × low
hill × valley
horizontal × vertical
hot × cold
humble × proud
in × out
include × exclude
inhale × exhale
inner × outer
inside × outside
intelligent × stupid, unintelligent
interior × exterior
join × separate
junior × senior
knowledge × ignorance
known × unknown
landlord × tenant
large × small
last × first
laugh × cry
lawful × illegal
leader × follower
left × right
less × more
like × dislike, hate
limited – boundless
little × big
long × short
loose × tight
loss × win
loud × quiet
low × high
major × minor
many × few
mature × immature
maximum × minimum
melt × freeze
narrow × wide
near × far, distant
never × always
new × old
no × yes
noisy × quiet
none × some
north × south
odd × even
offer × refuse
old × young
on × off
open × closed, shut
opposite × same, similar
out × in
over × under
past × present
peace × war
permanent × temporary
plural × singular
polite × rude, impolite
possible × impossible
powerful × weak
pretty × ugly
private × public
pure × impure, contaminated
push × pull
qualified × unqualified
quiet × loud, noisy
raise × lower
rapid × slow
rare × common
regular × irregular
real × fake
rich × poor
right × left, wrong
rough × smooth
safe × unsafe
secure × insecure
scatter × collect
separate × join, together
shallow × deep
shrink × grow
sick × healthy, ill
simple × complex, hard
singular × plural
sink × float
slim × fat, thick
sorrow × joy
start – finish
strong × weak
success × failure
sunny × cloudy

ಅರವತ್ತನಾಲ್ಕು ವಿದ್ಯೆಗಳ ಪಟ್ಟಿ.

೧.ವೇದ
೨.ವೇದಾಂಗ
೩.ಇತಿಹಾಸ
೪.ಆಗಮ
೫.ನ್ಯಾಯ
೬.ಕಾವ್ಯ
೭.ಅಲಂಕಾರ
೮.ನಾಟಕ
೯.ಗಾನ
೧೦.ಕವಿತ್ವ
೧೧.ಕಾಮಶಾಸ್ತ್ರ
೧೨.ದೂತನೈಪುಣ್ಯ
೧೩.ದೇಶಭಾಷಾಜ್ಞಾನ
೧೪.ಲಿಪಿಕರ್ಮ
೧೫.ವಾಚನ
೧೬.ಸಮಸ್ತಾವಧಾನ
೧೭.ಸ್ವರಪರೀಕ್ಷಾ
೧೮.ಶಾಸ್ತ್ರಪರೀಕ್ಷಾ
೧೯.ಶಕುನಪರೀಕ್ಷಾ
೨೦.ಸಾಮುದ್ರಿಕಪರೀಕ್ಷಾ
೨೧.ರತ್ನಪರೀಕ್ಷಾ
೨೨.ಸ್ವರ್ಣಪರೀಕ್ಷಾ
೨೩.ಗಜಲಕ್ಷಣ
೨೪.ಅಶ್ವಲಕ್ಷಣ
೨೫.ಮಲ್ಲವಿದ್ಯಾ
೨೬.ಪಾಕಕರ್ಮ
೨೭.ದೋಹಳ
೨೮.ಗಂಧವಾದ
೨೯.ಧಾತುವಾದ
೩೦.ಖನಿವಾದ
೩೧.ರಸವಾದ
೩೨.ಅಗ್ನಿಸ್ತಂಭ
೩೩.ಜಲಸ್ತಂಭ
೩೪.ವಾಯುಸ್ತಂಭ
೩೫.ಖಡ್ಗಸ್ತಂಭ
೩೬.ವಶ್ಯಾ
೩೭.ಆಕರ್ಷಣ
೩೮.ಮೋಹನ
೩೯.ವಿದ್ವೇಷಣ
೪೦.ಉಚ್ಛಾಟನ
೪೧.ಮಾರಣ
೪೨.ಕಾಲವಂಚನ
೪೩.ವಾಣಿಜ್ಯ
೪೪.ಪಶುಪಾಲನ
೪೫.ಕೃಷಿ
೪೬.ಸಮಶರ್ಮ
೪೭.ಲಾವುಕಯುದ್ಧ
೪೮.ಮೃಗಯಾ
೪೯.ಪುತಿಕೌಶಲ
೫೦.ದೃಶ್ಯಶರಣಿ
೫೧.ದ್ಯೂತಕರಣಿ
೫೨.ಚಿತ್ರಲೋಹ, ಪಾರ್ಷಾಮೃತ್, ದಾರು ವೇಣು ಚರ್ಮ ಅಂಬರ
ಕ್ರಿಯ
೫೩.ಚೌರ್ಯ
೫೪.ಔಷಧಸಿದ್ಧಿ
೫೫.ಮಂತ್ರಸಿದ್ಧಿ
೫೬.ಸ್ವರವಂಚನಾ
೫೭.ದೃಷ್ಟಿವಂಚನಾ
೫೮.ಅಂಜನ
೫೯.ಜಲಪ್ಲವನ
೬೦.ವಾಕ್ ಸಿದ್ಧಿ
೬೧.ಘಟಿಕಾಸಿದ್ಧಿ
೬೨.ಪಾದುಕಾಸಿದ್ಧಿ
೬೩.ಇಂದ್ರಜಾಲ
೬೪.ಮಹೇಂದ್ರಜಾಲ

ಇತಿಹಾಸದ  ಪ್ರಶ್ನೋತ್ತರಗಳು.‌:-

📖ಭಾರತದ ಇತಿಹಾಸದ ಪಿತಾಮಹ – ಕಾಶ್ಮೀರದ ಕವಿ ಕಲ್ಹಣ
📖ಜಗತ್ತಿನ ಅತೀ ಪ್ರಾಚೀನ ಗ್ರಂಥ – ಋಗ್ವೇದ
“ ಗೌಡವಾಹೊ ” ಕೃತಿಯ ಕರ್ತೃ – ವಾಕ್ಪತಿ
🔯ಸಿಂಹಳದ ಎರಡು ಬೌದ್ಧ ಕೃತಿಗಳು – ದೀಪವಂಶ ಮತ್ತು ಮಹಾವಂಶ
🔯ಕಾಮಶಾಸ್ತ್ರದ ಬಗ್ಗೆ ರಚಿತವಾದ ಪ್ರಾಚೀನ ಕೃತಿ – ವಾತ್ಸಾಯನನ ಕಾಮಸೂತ್ರ
🔯ಕರ್ನಾಟಕ ಸಂಗೀತದ ಬಗ್ಗೆ ತಿಳಿಸುವ ಪ್ರಾಚೀನ ಕೃತಿ – ಸೋಮೇಶ್ವರನ ಮಾನಸೊಲ್ಲಸ
✡ಪ್ರಾಚೀನ ಭಾರತದ 16 ಗಣರಾಜ್ಯಗಳ ಬಗ್ಗೆ ತಿಳಿಸುವ ಕೃತಿ – ಅಂಗುತ್ತಾರನಿಕಾಯ
🔯ಭಾರತದಲ್ಲಿನ ಎಲ್ಲಾ ಭಾಷೆಗಳ ಮೂಲ – ಬ್ರಾಹ್ಮಿ ಭಾಷೆ
🔀ಬಲದಿಂದ ಎಡಕ್ಕೆ ಬರೆಯುವ ಭಾಷೆ – ಖರೋಷ್ಠಿ , ಪರ್ಶೀಯನ್ , ಅರಾಬಿಕ್
🔀ಯೂರೋಪಿನ ಪ್ರವಾಸಿಗರ ರಾಜಕುಮಾರನೆಂದು “ ಮಾರ್ಕೋಪೋಲೊ ” ನನ್ನ ಕರೆಯುತ್ತಾರೆ.
⏩ಬ್ರಾಹ್ಮಿ ಭಾಷೆಯನ್ನು ಮೊದಲ ಬಾರಿಗೆ ಓದಿದವರು – ಜೇಮ್ಸ್ ಪ್ರಿನ್ಸೆಪ್
⏩ತಮಿಳಿನ ಮಹಾಕಾವ್ಯಗಳು – ಶಿಲಾಪ್ಪಾರಿಕಾರಂ ಮತ್ತು ಮಣಿ ಮೇಖಲೈ
🔆ತಮಿಳು “ ಕಂಬನ್ ರಾಮಾಯಣ ” ದಲ್ಲಿ ನಾಯಕ – ರಾವಣ
💠“ ಭಗವದ್ಗೀತೆ ” ಮಹಾಭಾರತದ “ 10 ನೇ ಪರ್ವ ”ದಲ್ಲಿದೆ.
💠ಭಾರತೀಯ ಶಾಸನಗಳ ಪಿತಾಮಹಾ – ಅಶೋಕ
💠ಅಶೋಕನ ಶಾಸನಗಳ ಲಿಪಿ – ಬ್ರಾಹ್ಮಿ , ಪ್ರಾಕೃತ್ , ಖರೋಷ್ಠಿ ,ಪರ್ಶಿಯನ್
🔯ಭಾರತದ ಪ್ರಾಚೀನ ಶಾಸನ– ಪಿಪ್ರವ ಶಾಸನ
🔯ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ಹರಿಸೇನ
➡‘ ರಾಯಲ್ ಏಷ್ಯಾಟಿಕ್ ಸೊಸೈಟಿಯ ’ ಸ್ಥಾಪಕ – ವಿಲಿಯಂ ಜೋನ್ಸ್
➡ತೆಲುಗಿನ ಪ್ರಥಮ ಶಾಸನ – ಕಲಿಮಲ್ಲ ಶಾಸನ
🚸ತಮಿಳಿನ ಪ್ರಥಮ ಶಾಸನ – ಮಾಂಗುಳಂ ಶಾಸನ
🚹ಪ್ರಪಂಚದಲ್ಲಿ ಮೊದಲ ಬಾರಿಗೆ ನಾಣ್ಯ ಚಲಾವಣಿಗೆ ತಂದ ದೇಶ – ಲಿಡಿಯು
🚻ಭಾರತದಲ್ಲಿ ಚಿನ್ನದ ನಾಣ್ಯಗಳನ್ನು ಜಾರಿಗೆ ತಂದ ಮೊದಲ ರಾಜವಂಶ – ಗುಪ್ತರು
📝ಬೌದ್ಧರ ಪವಿತ್ರ ಗ್ರಂಥಗಳು – ಪಿಟಕಗಳು
📝ಜೈನರ ಪವಿತ್ರ ಗ್ರಂಥಗಳು – ಅಂಗಗಳು
📖ಮಧ್ಯಪ್ರದೇಶದ ಖಜುರಾಹೋ ವಾಸ್ತುಶಿಲ್ಪ ನಿರ್ಮಾಪಕರು – ಚಾಂದೇಲರು
📖ಉತ್ತರದ ಭಾರತದಲ್ಲಿ ಜನಪ್ರಿಯವಾಗಿರುವ ವಾಸ್ತುಶಿಲ್ಪ ಶೈಲಿ – ನಾಗರ ಶೈಲಿ
📖ಜಗತ್ತಿನ ಅತೀ ದೊಡ್ಡ ಹಿಂದೂ ದೇವಾಲಯ – ಕಾಂಬೋಡಿಯಾದ ಅಂಗೋರ್ ವಾಟ್
📖ಜಗತ್ತಿನ ದೊಡ್ಡ ಬೌದ್ಧ ಸ್ತೂಪ – ಜಾವದ “ ಬೊರಬದೂರ್ ”
📰ಅಯೋದ್ಯೆ ನಗರ “ ಸರಾಯು ” ನದಿ ತೀರದಲ್ಲಿದೆ.
📰ಆಪ್ಘಾನಿಸ್ತಾನದ ಪ್ರಾತೀನ ಹೆಸರು – ಗಾಂಧಾರ
📙ನಾಣ್ಯಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರಕ್ಕೆ – ನ್ಯೂಮೆಸ್ ಮ್ಯಾಟಿಕ್ಸ್
📗ಭಾರತ ಮತ್ತು ಪರ್ಶೀಯಾದ ನಡುವಿನ ಸಂಬಂಧದ ಬಗ್ಗೆ ತಿಳಿಸುವ ಶಾಸನ – ಪರ್ಸಿಪೊಲಿಸ್ ಮತ್ತು ನಷ್ – ಇ – ರುಸ್ತಂ
📄ಸಂಗೀತದ ಬಗ್ಗೆ ತಿಳಿಸುವ ಶಾಸನ – ಕುಡಿಮಿಯಾ ಮಲೈ ಶಾಸನ
📗ಪಾಟಲಿಪುತ್ರವನ್ನು ಉತ್ಖನನ ಮಾಡಿದವರು – ಡಾ.ಸ್ಪೂನರ್
📖ತಕ್ಷಶಿಲೆಯನ್ನು ಉತ್ಖನನ ಮಾಡಿದವರು – ಸರ್.ಜಾನ್. ಮಾರ್ಷಲ್
📖ನಳಂದವನ್ನ ಉತ್ಖನನ ಮಾಡಿದವರು – ಡಾ.ಸ್ಪೂನರ್
📖ಕರ್ನಾಟಕ ಶಾಸನಗಳ ಪಿತಾಮಹಾ – ಬಿ.ಎಲ್.ರೈಸ್
📗ಕನ್ನಡದ ಪ್ರಥಮ ನಾಟಕ – ಮಿತ್ರವಿಂದ ಗೋವಿಂದ
📗ಕನ್ನಡದ ಪ್ರಥಮ ಪಶುಚಿಕಿತ್ಸೆ ಗ್ರಂಥ – ಗೋವೈದ್ಯ
📖ರಾಮಚರಿತ ಗ್ರಂಥದ ಕರ್ತೃ – ಸಂಧ್ಯಾಕರ ನಂದಿ
📒ದುಲ್ಬ ಮತ್ತು ತಂಗಿಯಾರ್ ಗ್ರಂಥದ ಕರ್ತೃ – ತಾರಾನಾಥ
📓“ ಕಿತಾಬ್ – ಉಲ್ – ಹಿಂದ್ ” ನ ಕರ್ತೃ – ಅಲ್ಬೇರೂನಿ
📖ಕರ್ನಾಟಕದ ಅತಿ ದೊಡ್ಡ ದೇವಾಲಯ – ಶ್ರೀರಂಗ ಪಟ್ಟಣದ ನಂಜುಡೇಶ್ವರ
📕ಚೀನಾಗೆ ಬೇಟಿ ನೀಡಿದ ಇಟಲಿ ಪ್ರವಾಸಿ – ಮಾರ್ಕೋಪೊಲೋ
📕ಬತ್ತಿದ ಸರಸ್ವತಿ ನದಿಯನ್ನು ಅನ್ವೇಷಿಸಿದವರು – ಸರ್ .ಹರೆಲ್ ಸ್ಪೀಸ್
📒ಮಂಡೇಸೂರ್ ಶಾಸನವನ್ನು ಹೊರಡಿಸಿದವರು – ಯಶೋವರ್ಮ
📃ಬೆಸ್ನಗರದ ಗರುಡ ಸ್ತಂಭ ಸ್ಥಾಪಿಸಿದವರು – ಹೆಲಿಯೋಡರಸ್
📜ಬನ್ಸ್ಕರಾ ಮತ್ತು ಮಧುವನಾ ಶಾಸನವನ್ನು ಹೊರಡಿಸಿದವರು – ಹರ್ಷವರ್ಧನ
📖ಭರತ ಖಂಡಕ್ಕೆ ಭಾರತದ ಎಂದು ಹೆಸರು ಬರಲು ಕಾರಣ – ಅರಸ ಭರತ
📖ಜಗತ್ತಿನ ಅತಿ ಎತ್ತರವಾದ ಪ್ರಸ್ಥ ಭೂಮಿ – ಪಾಮಿರ್
📖ದಕ್ಷಿಣ ಭಾರತದ ಪ್ರಾಚೀನ ಹೆಸರು – ಜಂಭೂದ್ವೀಪ
🎇ಗಂಗಾ ನದಿಯನ್ನು ಬಾಂಗ್ಲಾ ದೇಶದಲ್ಲಿ – “ ಪದ್ಮಾ ”
🎆ಬ್ರಹ್ಮಪುತ್ರ ನದಿಯನ್ನು ಟಿಬೆಟ್ ನಲ್ಲಿ – ಸಾಂಗ್ ಪೋ ಎಂಬ ಹೆಸರಿನಿಂದ ಕರೆಯುತ್ತಾರೆ
🎯ಗಂಗಾ ನದಿ ಜನಿಸುವ ಸ್ಥಳ – ಗಂಗೋತ್ರಿ
🎯ಸಿಂಧೂ ನದಿ ಜನಿಸುವ ಸ್ಥಳ – ಮಾನಸ ಸರೋವರ
☔ಯಮುನಾ ನದಿ ಜನಿಸುವ ಸ್ಥಳ – ಯಮುನೋತ್ರಿ
☔ಹಿಂಧೂ ಎಂಬ ಪದ – ಸಿಂಧೂ ಎಂಬ ಪದದಿಂದ ಬಂದಿದೆ
☔ಕಚ್ ನಿಂದ ಮಂಗಳೂರುವರೆಗಿನ ಕರಾವಳಿ ತೀರವನ್ನು – ಕೊಂಕಣ ಎಂದು ಕರೆಯುತ್ತಾರೆ.
❄ಮಂಗಳೂರಿನಿಂದ ಕನ್ಯಾಕುಮಾರಿವರೆಗಿನ ಕರಾವಳಿ ತೀರವನ್ನ – ಮಲಬಾರ್ ಎಂದು ಕರೆಯುತ್ತಾರೆ.
❄ಪೂರ್ವ ಕರಾವಳಿಯ ದಕ್ಷಿಣ ಭಾಗವನ್ನು – ಕೋರಮಂಡಲ್ ಎಂದು ಕರೆಯುತ್ತಾರೆ.
❄ದೆಹಲಿಯ ಪ್ರಾಚೀನ ಹೆಸರು – ಇಂದ್ರಪ್ರಸ್ಥ
❄ಬಂಗಾಳದ ಪ್ರಾಚೀನ ಹೆಸರು – ಗೌಡ ದೇಶ
❄ಅಸ್ಸಾಂ ನ ಪ್ರಾಚೀನ ಹೆಸರು – ಪಾಟಲೀಪುತ್ರ
❄ಪಾಟ್ನಾದ ಪ್ರಾಚೀನ ಹೆಸರು – ಪಾಟಲೀಪುತ್ರ
❄ಹೈದರಬಾದಿನ ಪ್ರಾಚೀನ ಹೆಸರು – ಭಾಗ್ಯನಗರ
☁ಅಹಮದಾಬಾದಿನ ಪ್ರಾಚೀನ ಹೆಸರು – ಕರ್ಣಾವತಿ ನಗರ
☁ಅಲಹಾಬಾದಿನ ಪ್ರಾಚೀನ ಹೆಸರು – ಪ್ರಯಾಗ
🌠ಭಾರತವನ್ನು ಇಂಡಿಯಾ ಎಂದು ಕರೆದವರು – ಗ್ರೀಕರು
🌠ಭಾರತವನ್ನು ಹಿಂದೂಸ್ತಾನ ಎಂದು ಕರೆದವರು – ಪರ್ಶಿಯನ್ನರು
🌠ದೆಹಲಿಯನ್ನು ಸ್ಥಾಪಿಸಿದವರು – ತೋಮರ ಅರಸರು
ಕೈಲಾಸ ಪರ್ವತ – ಹಿಮಾಲಯದಲ್ಲಿದೆ.
🌠ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಗಿರಿಧಾಮಗಳು – ಡಾರ್ಜಿಲಿಂಗ್ , ನೈನಿತಾಲ್ , ಸಿಮ್ಲಾ , ಮಸ್ಸೋರಿ
🌠ಉತ್ತರ ಮತ್ತು ದಕ್ಷಿಣ ಭಾರತವನ್ನು ಬೇರ್ಪಡಿಸುವ ಪರ್ವತ – ವಿಂಧ್ಯಾ ಪರ್ವತ
🌟ಪಶ್ಚಿಮದಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುವ ದಕ್ಷಿಣದ ನದಿಗಳು – ಮಹಾನದಿ , ಗೋದಾವರಿ , ಕೃಷ್ಣ , ಕಾವೇರಿ
🔥ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ನದಿಗಳು – ನರ್ಮದಾ , ತಪತಿ , ಶರಾವತಿ
⚡ಬರ್ಮಾ ದೇಶದ ಪ್ರಾಚೀನ ಹೆಸರು – ಮ್ಯಾನ್ಮಾರ್
⚡ಬರ್ಮಾದ ಪ್ರಾಚೀನ ಹೆಸರೇನು – ಸುವರ್ಣಭೂಮಿ
⚡ಭಾರತದ ಪೂರ್ವ ಕರಾವಳಿ ಬಂದರು – ಕಲ್ಕತ್ತಾ , ಚೆನ್ನೈ , ವಿಶಾಖಪಟ್ಟಣ

ಕೋಚಿಂಗ್ ಇಲ್ಲದೆ ಪರೀಕ್ಷೆಗೆ ತಯಾರಿ ಹೇಗೆ?

ಕೋಚಿಂಗ್ ಇಲ್ಲದೆ ಪರೀಕ್ಷೆಗೆ ತಯಾರಿ ಹೇಗೆ?
    
ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕಾದರೆ ಕೋಚಿಂಗ್ ಕೇಂದ್ರಗಳಲ್ಲಿ ತರಬೇತು ಪಡೆಯಲೇಬೇಕು ಎಂಬ ಮಿಥ್ಯೆ ಹಲವರಲ್ಲಿ ಇದೆ. ಆದರೆ, ಕೋಚಿಂಗ್ ಕೇಂದ್ರಗಳ ನೆರವು ಪಡೆಯದೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬಹುದೆಂದು ಸಾಕಷ್ಟು ಅಭ್ಯರ್ಥಿಗಳು ತೋರಿಸಿಕೊಟ್ಟಿದ್ದಾರೆ.

ಮನೆಯಲ್ಲೇ ಕುಳಿತು ಸ್ವಯಂ ಬುದ್ಧಿಶಕ್ತಿಯಿಂದ ಪರೀಕ್ಷೆಗೆ ಸಿದ್ಧರಾಗಲು ಇಲ್ಲಿದೆ ಟಿಪ್ಸ್. ಮೊದಲಿಗೆ ಕೋಚಿಂಗ್ ಕೇಂದ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಯಾವ ರೀತಿಯ ಸಿದ್ಧತೆ ನಡೆಸಲಾಗುತ್ತದೆ ಎಂದು ತಿಳಿದುಕೊಳ್ಳೋಣ. ಕೋಚಿಂಗ್ ಕ್ಲಾಸ್ನಲ್ಲಿ ನಿಯಮಿತ ಕ್ಲಾಸ್ ಇರುತ್ತದೆ.

ಪ್ರತಿಯೊಂದು ವಿಷಯಕ್ಕೂ ಗಮನ ನೀಡಲು ಸಾಧ್ಯವಾಗುತ್ತದೆ. ಪ್ರತಿವಾರದ ಅಂತ್ಯದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಗೆ ಬೇಕಾದ ಸ್ಟಡಿ ಮೆಟಿರಿಯಲ್ ಲಭ್ಯತೆಯೂ ಅಲ್ಲಿ ಸಾಕಷ್ಟಿರುತ್ತದೆ. ಅಲ್ಲಿ ನಿಮ್ಮೊಂದಿಗೆ ಸಾಕಷ್ಟು ಇತರ ವಿದ್ಯಾರ್ಥಿಗಳೂ ಇರುತ್ತಾರೆ. ಅವರೊಂದಿಗೆ ಸಾಕಷ್ಟು ಚರ್ಚೆಗಳನ್ನೂ ನಡೆಸಬಹುದು. ಏನಾದರೂ ಸಂಶಯಗಳಿದ್ದಲ್ಲಿ ಪರಿಹರಿಸಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಉತ್ತಮವಾದ ತರಬೇತುದಾರರಿರುತ್ತಾರೆ.

ಈಗಾಗಲೇ ಪರೀಕ್ಷೆ ಬರೆದವರೂ ಇರುತ್ತಾರೆ. ಮನೆಯಲ್ಲೇ ತಯಾರಿ ನಡೆಸಿ ನಿಮ್ಮ ಮನೆಯಲ್ಲಿ ಕೋಚಿಂಗ್ ಸೆಂಟರ್ನಂತೆ ಓದುವ ವಾತಾವರಣ ಇರುವುದು ಕಷ್ಟ. ಆಟವಾಡುವ ಮಕ್ಕಳ ಸದ್ದು, ಅಡುಗೆಮನೆಯಿಂದ ಬರುವ ಸುವಾಸನೆ, ಧಾರಾವಾಹಿಯ ಡೈಲಾಗ್ಗಳು, ಆಗಾಗ ಬರುವ ಅತಿಥಿಗಳು, ಪಕ್ಕದ ಬೀದಿಯಲ್ಲಿ ಕಾಣಿಸುವ ಚಂದದ ಹುಡುಗಿ… ಹೀಗೆ ನಿಮ್ಮ ಓದಿಗೆ ಭಗ್ನ ತರುವ ಸಾಕಷ್ಟು ಅಂಶಗಳಿರಬಹುದು. ಆದರೂ, ಮನಸ್ಸು ಮಾಡಿದರೆ ಮನೆಯಲ್ಲಿ ಕುಳಿತು ಓದಿ ಯಶಸ್ಸು ಪಡೆಯಬಹುದು.

*ನಿಯಮಿತ ಅಧ್ಯಯನ.

ಪ್ರತಿದಿನ ಇಂತಿಷ್ಟು ಗಂಟೆ ಪರೀಕ್ಷೆಗೆ ಸಿದ್ಧತೆ ಮಾಡಲೇಬೇಕು ಎಂದು ಟೈಂಟೇಬಲ್ ಹಾಕಿಕೊಳ್ಳಿ.ಕಷ್ಟಪಟ್ಟು ಸಾಕಷ್ಟು ಸಮಯವನ್ನು ಓದಲು ಮತ್ತು ವಿಷಯಗಳ ಮನನ ಮಾಡಲು ವಿನಿಯೋಗಿಸಿ. ಈ ಸಮಯದಲ್ಲಿ ನಿಮ್ಮ ಆರೋಗ್ಯ, ಡಯೆಟ್, ವಿಶ್ರಾಂತಿ ತೆಗೆದುಕೊಳ್ಳಲು ಮರೆಯದಿರಿ.

*ಸಿಲೆಬಸ್ ಇರಲಿ.

ನೀವು ಬರೆಯಲಿರುವ ಪರೀಕ್ಷೆಗೆ ಸಂಬಂಧಪಟ್ಟ ಸಿಲೆಬಸ್, ಕೊಶ್ಚನ್ ಪೇಪರ್ಗಳನ್ನು ಪಡೆದುಕೊಳ್ಳಿ. ಇಂತಹ ಸರಕುಗಳು ಯುಪಿಎಸ್ಸಿ, ಕೆಪಿಎಸ್ಸಿ ಇತ್ಯಾದಿ ವೆಬ್ಸೈಟ್ಗಳಲ್ಲೇ ದೊರಕುತ್ತದೆ. ಆಯಾ ಸಿಲೆಬಸ್ಗೆ ತಕ್ಕಂತಹ ಪುಸ್ತಕಗಳನ್ನು ಸಂಗ್ರಹಿಸಿಕೊಳ್ಳಿರಿ.

*ರಿವಿಷನ್.

ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ನೀವು ಓದಿರುವ ಸಿಲೆಬಸ್ಗಳನ್ನು ಓದಿಕೊಳ್ಳಿ. ವಿಷಯಗಳನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳಿ. ಇದರಿಂದ ನಿಮ್ಮ ಮೆಮೊರಿ ಪವರ್ ಸಹ ಉತ್ತಮಗೊಳ್ಳುತ್ತದೆ.

*ಹಳೆ ಪ್ರಶ್ನೆಪತ್ರಿಕೆ.

ಈ ಹಿಂದಿನ ವರ್ಷ ನಡೆಸಿದ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳಿಗೆ ಉತ್ತರಗಳನ್ನು ಕಂಡುಹಿಡಿಯಿರಿ. ಇದರಿಂದ ನಿಮಗೆ ಸಮಯದ ನಿರ್ವಹಣೆ, ವಿಷಯದ ಕುರಿತು ಅರಿವು ಇತ್ಯಾದಿ ಅನೇಕ ಲಾಭಗಳಿವೆ.

*ಹೊಸ ಪುಸ್ತಕಗಳನ್ನು ಖರೀದಿಸಿ.

ನೀವು ಓದಲೇಬೇಕಾದ ಕೆಲವು ಪುಸ್ತಕಗಳನ್ನು ಖರೀದಿಸಿ. ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿಗಳನ್ನು ಓದಿ. ವಿಕೆ ಮಿನಿಯಲ್ಲಿ ಪ್ರಕಟಗೊಳ್ಳುವ ಪ್ರಶ್ನೋತ್ತರ, ಮಾಹಿತಿಗಳನ್ನು ಓದಿ ತಿಳಿದುಕೊಳ್ಳಿ. ಸಮೀಪದ ಲೈಬ್ರೇರಿಗಳಿಗೆ ಭೇಟಿ ನೀಡುತ್ತಿರಿ.

*ಇಂಟರ್ನೆಟ್ ನೆರವು.

ನಿಮ್ಮಲ್ಲಿ ಇಂಟರ್ನೆಟ್ ಸೌಲಭ್ಯವಿದ್ದರೆ ದೊಡ್ಡ ಲೈಬ್ರೇರಿ ನಿಮ್ಮ ಬಳಿ ಇದ್ದಂತೆ. ಇಂಟರ್ನೆಟ್ ಮೂಲಕ ನಿಮ್ಮ ಪರೀಕ್ಷೆಗೆ ಪೂರಕವಾದ ಮಾಹಿತಿಗಳನ್ನು ಪಡೆದುಕೊಂಡು ಅಧ್ಯಯನ ಮಾಡಿ. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ವೆಬ್ಸೈಟ್ಗಳು, ಚರ್ಚಾ ತಾಣಗಳಿಗೆ ಭೇಟಿ ನೀಡುತ್ತಿರಿ.

*ಸ್ಮಾರ್ಟ್ಫೋನ್ ಮೂಲಕ.

: ನಿಮ್ಮ ಕೈಯಲ್ಲಿರುವ ಪುಟ್ಟ ಮೊಬೈಲ್ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಪಟ್ಟ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಂಡು ಬಿಡುವು ಸಿಕ್ಕಾಗ ಅಧ್ಯಯನ ಮಾಡಿ. ಬಸ್, ರೈಲು ಇತ್ಯಾದಿಗಳಲ್ಲಿ ಪ್ರಯಾಣ ಕೈಗೊಂಡಾಗಲೂ ಆ್ಯಪ್ ಮೂಲಕ ಅಧ್ಯಯನ ನಡೆಸಬಹುದು.

*ಗುಂಪು ಚರ್ಚೆ.

ನಿಮ್ಮೂರಿನಲ್ಲಿ ನಿಮ್ಮಂತೆ ಪರೀಕ್ಷೆ ಬರೆಯುವವರಿದ್ದರೆ ಅವರ ಸ್ನೇಹ ಬೆಳೆಸಿಕೊಳ್ಳಿ. ಅವರೊಂದಿಗೆ ಗುಂಪು ಚರ್ಚೆ ನಡೆಸಿ.

ಕಲಿಕೆಯೆಡೆಗೆ ಒಲವು ಹೆಚ್ಚಿಸುತ್ತಿರುವ ಬೈಜುಸ್.

ಕಲಿಕೆಯೆಡೆಗೆ ಒಲವು ಹೆಚ್ಚಿಸುತ್ತಿರುವ ಬೈಜುಸ್.

ಕೇವಲ ಪರೀಕ್ಷೆಯಲ್ಲಿ ಪಾಸಾಗುವ ಉದ್ದೇಶದಿಂದ ಕಲಿತರೆ ಸಾಲದು, ಬದಲಿಗೆ ಕಲಿಕೆಯನ್ನು ಪ್ರೀತಿಸುವಂತಾಗಬೇಕು. ಕಲಿಕೆ ಒಂದು ರೀತಿಯ ಚಟ ಆಗಬೇಕು, ಆಗಲೇ ಅದು ಪರಿಣಾಮಕಾರಿಯಾಗಲು ಸಾಧ್ಯ ಎಂಬುದು ಬೈಜುಸ್ ಕ್ಲಾಸ್​ನ ಸಂಸ್ಥಾಪಕ ಬೈಜು ರವೀಂದ್ರನ್ ಅವರ ಅಭಿಪ್ರಾಯ. ಈ ಮೂಲ ಮಂತ್ರವನ್ನೇ ಮುಂದಿಟ್ಟುಕೊಂಡು, ಇಂದು ಶಾಲೆಗಳು ಡಿಜಿಟಲೀಕರಣಗೊಂಡಿದ್ದರೂ, ಅಲ್ಲಿ ಅಳವಡಿಸಿಕೊಂಡಿರುವ ಪಠ್ಯಕ್ರಮ ಹಾಗೂ ಬೋಧನಾ ವಿಧಾನದಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗಿಲ್ಲ, ಜೊತೆಗೆ ಮಕ್ಕಳ ಕಲಿಕಾ ಸಾಮರ್ಥ್ಯದಲ್ಲೂ ಸಾಕಷ್ಟು ವ್ಯತ್ಯಾಸವಿರುವುದರಿಂದ ಮಕ್ಕಳಿಗೆ ವಿಭಿನ್ನ ರೀತಿಯ ಬೋಧನಾ ಕ್ರಮ ಅಳವಡಿಕೆಯ ಅಗತ್ಯವಿದೆ. ಅದಕ್ಕಿಂತಲೂ ಹೆಚ್ಚಾಗಿ, ಉತ್ತಮ ಶಿಕ್ಷಕರ ಕೊರತೆ ಎಲ್ಲೆಡೆ ಕಾಡುತ್ತಿದೆ. ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಕರು ಸಿಗುವುದಿಲ್ಲ ಎಂಬ ಮೂಲ ಅಂಶವನ್ನು ಗಮನದಲ್ಲಿಟ್ಟುಕೊಂಡು ಕಲಿಕೆಯನ್ನು ಸುಗಮ ಹಾಗೂ ಆಸಕ್ತಿದಾಯಕವಾಗಿಸುವ ನಿಟ್ಟಿನಲ್ಲಿ ಬೈಜುಸ್ ಕ್ಲಾಸಸ್ ಆರಂಭಿಸಿ, ಎಲ್ಲಾ ತರಹದ ವಿದ್ಯಾರ್ಥಿಗಳಿಗೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಕಲಿಯುವ ಅವಕಾಶ ಕಲ್ಪಿಸಲಾಗಿದೆ.

ಬೈಜುಸ್ ಕ್ಲಾಸಸ್ 2007ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಶಿಕ್ಷಣ ತಂತ್ರಜ್ಞಾನ(ಎಡ್-ಟೆಕ್) ಸಂಸ್ಥೆ. ಇದರ ಸಂಸ್ಥಾಪಕ ಬೈಜು ರವೀಂದ್ರನ್, ಸಾಮಾನ್ಯ ದಾಖಲಾತಿ ಪರೀಕ್ಷೆ (ಇಅಖ) ಗೆ ತಯಾರಿ ನಡೆಸುತ್ತಿದ್ದ ಕೆಲ ವಿದ್ಯಾರ್ಥಿಗಳಿಗೆ ಬೋಧಿಸುವ ಮೂಲಕ ತಮ್ಮ ಅಭಿಯಾನ ಆರಂಭಿಸಿದರು. ಖುದ್ದು ಎರಡು ಬಾರಿ 100ಕ್ಕೆ ನೂರು ಅಂಕ ಗಳಿಸುವ ಮೂಲಕ ಅಂಖಿ ಅಗ್ರಸ್ಥಾನಿಯಾಗಿರುವ ರವೀಂದ್ರನ್ ಬೋಧನೆಯೆಡೆಗಿನ ತಮ್ಮ ಒಲವು ಹಾಗೂ ಕಲಿಕೆಯಲ್ಲಿ/ಬೋಧನಾ ಕ್ರಮದಲ್ಲಿ ಅಗತ್ಯವಿದ್ದ ಬದಲಾವಣೆಗಳನ್ನು ತರುವ ಸಲುವಾಗಿ, ಉತ್ತಮ ಕೆಲಸ ಸಿಗುವ ಅವಕಾಶವನ್ನೂ ಬದಿಗಿಟ್ಟು, ಬೈಜುಸ್ ಕ್ಲಾಸಸ್​ನ ಪೋಷಕ ಸಂಸ್ಥೆ, ಥಿಂಕ್ ಅಂಡ್ ಲರ್ನ್ ಸ್ಥಾಪನೆಗೆ ಮುಂದಾದರು. ಇಂದು ಅವರು ವಾರಾಂತ್ಯದಲ್ಲಿ ನಡೆಸಿಕೊಡುವ ತರಗತಿಗಳಿಗೆ ಸಾವಿರಾರು ವಿದ್ಯಾರ್ಥಿಗಳು ಖುದ್ದು ಹಾಜರಾದರೆ, ದೇಶದ ವಿವಿಧ ಭಾಗಗಳಿಂದ 60ಕ್ಕೂ ಹೆಚ್ಚು ವಿಸ್ಯಾಟ್ ತರಗತಿಗಳ ಮೂಲಕ ಸುಮಾರು 20-30 ಸಾವಿರ ವಿದ್ಯಾರ್ಥಿಗಳು ಈ ತರಗತಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಆ ಮೂಲಕ ಅವರ ಈ ತರಗತಿ ವಾಸ್ತವದಲ್ಲಿ ಭಾರತದ ಅತಿದೊಡ್ಡ ತರಗತಿಯಾಗುತ್ತದೆ. ಆರಂಭದಲ್ಲಿ ಸಿಎಟಿ, ಜೆಇಇ, ಜಿಮ್ಯಾಟ್, ಜಿಆರ್​ಇ, ವೈದ್ಯಕೀಯ ಹಾಗೂ ಯುಪಿಎಸ್​ಸಿ ಐಎಎಸ್​ನಂತಹ ಸಾರ್ವಜನಿಕ ಸೇವಾ ಪರೀಕ್ಷೆಗಳಿಗೆ ವಿವಿಧ ಕೋರ್ಸ್​ಗಳನ್ನು ಒದಗಿಸುತ್ತಿದ್ದ ಬೈಜುಸ್, ನಂತರ 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ, ಆನಂತರ ಆರನೇ ತರಗತಿಯ ಮೇಲ್ಪಟ್ಟ ವಿದ್ಯಾರ್ಥಿಗಳಿಗೂ ಕೋರ್ಸ್​ಗಳನ್ನು ಆರಂಭಿಸಿದೆ. ಕೆಲ ಕೋರ್ಸ್​ಗಳು ಉಚಿತವಾಗಿದ್ದು, ಅದರ ಮುಂದುವರಿದ ಭಾಗವನ್ನು ಹಣ ಪಾವತಿಸಿ ಪಡೆಯಬೇಕಾಗುತ್ತದೆ.

ಆರಂಭದಲ್ಲಿ ಬೆಂಗಳೂರು, ಚೆನ್ನೈ, ಮುಂಬೈ, ಪುಣೆ ನಗರಗಳಿಗೆ ತೆರಳಿ ವಾರಾಂತ್ಯದಲ್ಲಿ ತರಗತಿಗಳನ್ನು ನಡೆಸಿಕೊಡುತ್ತಿದ್ದ ರವೀಂದ್ರನ್ ನಂತರ ಅದರ ಜೊತೆಗೆ, ವಿಡಿಯೋ, 2ಡಿ, 3ಡಿ ಅನಿಮೇಷನ್​ಗಳ ಮೂಲಕ ಆನ್​ಲೈನ್ ಕಂಟೆಂಟ್​ಗಳನ್ನು(ವಿಷಯ) ಸಿದ್ಧಪಡಿಸಿ ಕೋರ್ಸ್​ಗಳನ್ನು ನೀಡಲು ಆರಂಭಿಸಿದರು. ಇದರೊಂದಿಗೆ ಟ್ಯಾಬ್ಲೆಟ್​ಗಳ ಮೂಲಕವೂ ಬೈಜುಸ್ ತನ್ನ ಕೋರ್ಸ್​ಗಳನ್ನು ಮಾರಾಟ ಮಾಡಲು ಆರಂಭಿಸಿತು. ಕಳೆದ ವರ್ಷ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದ ನಂತರ ಅದು ಹೆಚ್ಚು ಜನಪ್ರಿಯವಾಗಿದ್ದು ಹೆಚ್ಚೆಚ್ಚು ಡೌನ್​ಲೋಡ್​ಗಳನ್ನು ಕಂಡಿದೆ. ಶ್ರೇಷ್ಠ ಗುಣಮಟ್ಟದ ಶಿಕ್ಷಕರನ್ನು ತನ್ನ ವೇದಿಕೆಯಲ್ಲಿ ಹೊಂದಿರುವ ಬೈಜುಸ್, ವಿಡಿಯೋ ಹಾಗೂ ಅನಿಮೇಷನ್ ಮೂಲಕ ಸರಳವಾಗಿ ಕಲಿಯಲು ನೆರವಾಗುವಂತೆ ಪಠ್ಯ ವಿಷಯಗಳನ್ನು ಸಿದ್ಧಪಡಿಸುತ್ತದೆ. ಕೆಲ ಪರಿಚಯಾತ್ಮಕ ಆವೃತ್ತಿಗಳನ್ನು ನೀಡಲಾಗಿದ್ದು, ಅದರ ಮೂಲಕ ವಿದ್ಯಾರ್ಥಿಗಳು/ ಪಾಲಕರು ಬೈಜುಸ್​ನ ಕಲಿಕಾ ವಿಧಾನವನ್ನು ಅರಿತು ನಂತರ ಕೋರ್ಸ್​ಗಳನ್ನು ನಾವು ಆನ್​ಲೈನ್, ಟ್ಯಾಬ್ಲೆಟ್ ಅಥವಾ ಮೊಬೈಲ್ ಅಪ್ಲಿಕೇಷನ್ ಮೂಲಕ ಖರೀದಿಸಬಹುದು. ಆರನೇ ತರಗತಿಯಿಂದ ಐಎಎಸ್ ಪರೀಕ್ಷೆ ವರೆಗಿನ ವಿವಿಧ ಕೋರ್ಸ್​ಗಳಿಗೆ ವರ್ಷಕ್ಕೆ 10,000 ರೂಪಾಯಿಯಿಂದ ಹಿಡಿದು 30,000 ರೂಪಾಯಿವರೆಗೆ ಶುಲ್ಕ ನಿಗಧಿಪಡಿಸಲಾಗಿದೆ. ದೇಶದ ಮೂಲೆ ಮೂಲೆಯಲ್ಲಿರುವ ಎಲ್ಲರೂ ಆಪ್ ಅಥವಾ ಆನ್ ಲೈನ್ ಮೂಲಕ ಕೋರ್ಸ್ ಖರೀದಿಸಿ ಈ ವೇದಿಕೆಯಲ್ಲಿರುವ ಉತ್ತಮ ಶಿಕ್ಷಕರ ಬೋಧನೆ ಪಡೆಯಬಹುದಾಗಿದೆ. ಜೊತೆಗೆ ವಿಡಿಯೋ ಅಥವಾ ಅನಿಮೇಷನ್ ಮಾದರಿಯಲ್ಲಿರುವ ಪಠ್ಯವನ್ನು ಬೇಕಾದಲ್ಲಿ ನಿಲ್ಲಿಸಿ, ಅಥವಾ ಅರ್ಥವಾಗದ್ದನ್ನು ಪುನಃ ನೋಡಿ, ನಮ್ಮ ವೇಗಕ್ಕೆ ತಕ್ಕಂತೆ ಕಲಿಯುವ ಹಾಗೂ ಪನರಾವರ್ತನೆ ಮಾಡುವ ಅವಕಾಶ ದೊರೆಯುತ್ತದೆ. ಇದರೊಂದಿಗೆ ವಿದ್ಯಾರ್ಥಿಯ ಕಲಿಕಾ ಕ್ರಮವನ್ನು ಅವರ ಸಾಮರ್ಥ್ಯಕ್ಕನುಗುಣವಾಗಿ ಮಾರ್ಪಾಟು ಮಾಡಿಕೊಳ್ಳುವ ಸಲಹೆ ಕೂಡಾ ಬೈಜೂಸ್​ನಿಂದ ಲಭ್ಯ.

ವಿವಿಧ ಹೂಡಿಕೆದಾರರಿಂದ ಬೈಜುಸ್ ಈಗಾಗಲೇ ಸಾಕಷ್ಟು ಬಂಡವಾಳ ಪಡೆದಿದ್ದು, ತಿಂಗಳಿನಿಂದ ತಿಂಗಳಿಗೆ ಶೇಕಡಾ 15ರಷ್ಟು ಅಭಿವೃದ್ಧಿ ಸಾಧಿಸುತ್ತಿದೆ. ಪ್ರಸ್ತುತ ಸುಮಾರು 1,20,000 ಶುಲ್ಕ ಪಾವತಿಸುವ ವಿದ್ಯಾರ್ಥಿಗಳನ್ನು ಹೊಂದಿರುವ ಈ ವೇದಿಕೆಗೆ ಪ್ರತಿ ತಿಂಗಳು 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸೇರುತ್ತಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ 120 ಕೋಟಿ ರೂಪಾಯಿ ಆದಾಯ ಗಳಿಸಿರುವ ಬೈಜುಸ್ ತನ್ನ ಕೋರ್ಸ್​ಗಳನ್ನು ಪೂರ್ವ ಏಷ್ಯಾದ ಕೆಲ ದೇಶಗಳಲ್ಲೂ ಒದಗಿಸುತ್ತಿದೆ. ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಇದು ತನ್ನ ಮಡಿಗೇರಿಸಿಕೊಂಡಿದೆ.

ವಿಡಿಯೋ ಹಾಗೂ ಅನಿಮೇಷನ್ ಮೂಲಕ ಕಲಿಕೆಗೆ ವಿಭಿನ್ನ ಆಯಾಮ ಒದಗಿಸುವುದರೊಂದಿಗೆ, ಪಠ್ಯವನ್ನು ಸರಳ ಹಾಗೂ ಮೋಜಿನೊಂದಿಗೆ ಕಲಿಯುವಂತೆ ಮಾಡಿರುವ ಬೈಜುಸ್ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡುತ್ತಿದೆ. ದಿನದಿಂದ ದಿನಕ್ಕೆ ಹೆಚ್ಚೆಚ್ಚು ವಿದ್ಯಾರ್ಥಿಗಳು ಕೋರ್ಸ್​ಗಳನ್ನು ಖರೀದಿಸುತ್ತಿರುವುದನ್ನು ಗಮನಿಸಿದರೆ, ಅವರು ಬೈಜುಸ್ ನ ಕಲಿಕಾ ವಿಧಾನವನ್ನು ನಿಜಕ್ಕೂ ಇಷ್ಟಪಟ್ಟಿದ್ದಾರೆ ಜೊತೆಗೆ ಕಲಿಕೆಯೆಡೆಗೆಅವರ ಒಲವು ಹೆಚ್ಚುತ್ತಿದೆ ಎಂದೇ ಅರ್ಥ. ಬೈಜು ರವೀಂದ್ರನ್, ಕಲಿಕೆಯನ್ನು ಚಟವಾಗಿಸುವ ತಮ್ಮ ಕನಸನ್ನು ನನಸಾಗುವತ್ತ ಸಾಕಷ್ಟು ಹಾದಿಯನ್ನು ಈಗಾಗಲೇ ಕ್ರಮಿಸಿದ್ದಾರೆ!

ಸಾ.ಜ್ಞಾ- ವೈಜ್ಞಾನಿಕ ಉಪಕರಣಗಳು

★ಕೆಲವು ಕನ್ನಡ ತಾಂತ್ರಿಕ/ವೈಜ್ಞಾನಿಕ ಪದಗಳು★
.
★ಇಮೇಲ್=ಮಿಂಚಂಚೆ
★ಕಂಪ್ಯೂಟರ್=ಗಣಕಯಂತ್ರ
★ಲ್ಯಾಪ್ ಟಾಪ್=ಮಡಿಲು ಗಣಕಯಂತ್ರ
★ಡೌನಲೋಡ=ಕೆಳಭರಣ
&ಅಪ್ ಲೋಡ=ಮೇಲ್ಭರಣ
★ಕಾರ್ಬನ್ ಕಾಪಿ=ಕಾಡಿಗೆ ಪ್ರತಿ
★ಬ್ಲೈಂಡ ಕಾರ್ಬನ್ ಕಾಪಿ=ಕುರುಡು ಕಾಡಿಗೆ ಪ್ರತಿ
★ಮೌಸ್=ಮೂಷಕ
★ಮೌಸ್ ಪಾಯಿಂಟ್=ಮೂಷಕ ಸೂಚಕ
★ಕರ್ಸರ್=ಮಿಂಚುಕಡ್ಡಿ
★ಕಾಪಿ=ಪ್ರತಿ ಮಾಡು
★ಪೇಸ್ಟ=ಅಂಟಿಸು ★ಇಂಟರ್ನೆಟ್=ಅಂತರ್ಜಾಲ ★ಬ್ರೌಜಿಂಗ=ಅಂತರ್ಜಾಲಾಡು ★ವಿಂಡೊ=ಕಿಟಕಿ
★ಟೈಟಲ್ ಬಾರ=ಶೀರ್ಷಿಕೆ ಪಟ್ಟಿ
★ಟಾಸ್ಕಬಾರ್=ಕಾರ್ಯಕ್ಷೇತ್ರ ಸೂಚಕ ಪಟ್ಟಿ ★ಟೂಲ್ ಬಾರ್=ಸಾಮಗ್ರಿಗಳ ಪಟ್ಟಿ
★ಮೆನು ಭಾರ್= ಆಯ್ಕೆಗಳ ಪಟ್ಟಿ ★ಫಾರ್ಮ್ಯಾಟಿಂಗ್ ಬಾರ್ = ಓರಣ ಪಟ್ಟಿ
★ಪೆನ್ ಡ್ರೈವ್=ಲೇಖನಿ ಚಾಲಕ
ಪ್ರಮುಖ ಕಂಪನಿಗಳು *******
posco- southkorea (ಉಕ್ಕಿನ ಕಂಪನಿ)
boeing- ಯುಎಸ್ಎ (ವಿಮಾನ)
airbus- ಫ್ರಾನ್ಸ್ (ವಿಮಾನ ತಯಾರಕ)
ಅಧಿಕೃತ – Itly (ವಾಹನಗಳು)
ನಿಸ್ಸಾನ್-ಜಪಾನ್ (ವಾಹನಗಳು)
Toyta – ಜಪಾನ್ (ವಾಹನಗಳು)
ಹೋಂಡಾ – ಜಪಾನ್ (ವಾಹನಗಳು)
BMW- ಜರ್ಮನಿ (ವಾಹನಗಳು)
ಆಡಿ – ಜರ್ಮನಿ (ವಾಹನಗಳು)
Volkswagon– ಜರ್ಮನಿ (ವಾಹನಗಳು)
Hyundai– Southkorea (ವಾಹನಗಳು)
ford– ಯುಎಸ್ಎ (ವಾಹನಗಳು)
Suzaki– ಜಪಾನ್ (ವಾಹನಗಳು)
ರೆನಾಲ್ಟ್ – ಫ್ರಾನ್ಸ್ (ವಾಹನಗಳು)
Volvo– Sweedon (ವಾಹನಗಳು)
ಅಶೋಕ Leyland– ಭಾರತ
Samsung– Southkorea (ಎಲೆಕ್ಟ್ರಾನಿಕ್ಸ್
andelectrical)
ಹಿಟಾಚಿ — ಜಪಾನ್ (ElectricalAppliances)
ಎಲ್ಜಿ — ದಕ್ಷಿಣ ಕೊರಿಯಾ (ಎಲೆಕ್ಟ್ರಾನಿಕ್ಸ್
andelectrical)
Whirlpool– ಯುಎಸ್ಎ (ವಿದ್ಯುತ್ ವಸ್ತುಗಳು)
Ericssion — Swedon (ಟೆಲಿಕಾಂ)
Nokia– ಫಿನ್ಲ್ಯಾಂಡ್ (ಟೆಲಿಕಾಂ)
ಮೊಟೊರೊಲಾ – ಯುಎಸ್ಎ (ಟೆಲಿಕಾಂ)
Vodaphone– ಯುಕೆ, ಬ್ರಿಟನ್ (ಟೆಲಿಕಾಂ)
ಬಾರ್ಕ್ಲೇಸ್ Bank– ಯುಕೆ (ಹಣಕಾಸು)
DeutscheBank– ಜರ್ಮನಿ (ಹಣಕಾಸು)
GoldmanSachs – ಯುಎಸ್ಎ (ಹಣಕಾಸು)
ಅಸೆಂಚರ್ – ಐರ್ಲೆಂಡ್ (ಐಟಿ)
ಇನ್ಫೋಸಿಸ್ – ಭಾರತ (ಐಟಿ)
TCS– ಭಾರತ (ಐಟಿ)
WIPRO– ಭಾರತ (ಐಟಿ)
Apple– ಯುಎಸ್ಎ (ಎಲೆಕ್ಟ್ರಾನಿಕ್ ವಸ್ತುಗಳು)
Google- ಯುಎಸ್ಎ (IT ಸೇವೆಗಳು)
Yahoo– ಯುಎಸ್ಎ (IT ಸೇವೆಗಳು)
Sony– ಜಪಾನ್ (ಎಲೆಕ್ಟ್ರಾನಿಕ್ ವಸ್ತುಗಳು)
Intel– ಅಮೇರಿಕಾ (ಯಂತ್ರಾಂಶ).

★ ವೈಜ್ಞಾನಿಕ ಉಪಕರಣಗಳು ಹಾಗೂ ಅವುಗಳ ಉಪಯೋಗಗಳು:
(Scientific equipments(tools) and their Uses)
1) ಅಲ್ಟಿಮೀಟರ್ —————> ಎತ್ತರ ಮತ್ತು ವಾಯುವಿನ ಒತ್ತಡವನ್ನು ಸೂಚಿಸುವ ಸಾಧನ.
2) ಲ್ಯಾಕ್ಟೊಮೀಟರ್ —————> ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಅಳೆಯುವ ಸಾಧನ.
3) ಬ್ಯಾರೋಮೀಟರ್ —————> ಭೂಮಿಯ ಮೇಲಿನ ಹವೆಯ ಒತ್ತಡವನ್ನು ಅಳೆಯುವ ಸಾಧನ.
4) ಮೈಕ್ರೋಮೀಟರ್ —————> ಸಣ್ಣ ವಸ್ತುಗಳ ದಪ್ಪವನ್ನು ಅಳೆಯುವ ಸಾಧನ.
5) ಹೈಡ್ರೋಮೀಟರ್ —————> ದ್ರವಗಳ ಸಾಪೇಕ್ಷ ಸಾಂದ್ರತೆಯನ್ನು ಅಳೆಯುವ ಸಾಧನ.
6) ಪೈರೋಮೀಟರ್ —————> ಹೆಚ್ಚು ಉಷ್ಣತೆಯನ್ನು ಅಳೆಯುವ ಸಾಧನ.
7) ಪ್ಯಾಥೋಮೀಟರ್ —————> ಸಮುದ್ರದ ಆಳವನ್ನು ಅಳೆಯುವ ಸಾಧನ.
8) ವೋಲ್ಟಾಮೀಟರ್ —————> ವಿದ್ಯುತ್ ಕೋಶದ ವಿದ್ಯುತ್ ಚಾಲಕ ಬಲವನ್ನು ಅಳೆಯುವ ಸಾಧನ.
9) ಗ್ಯಾಲ್ವನೋಮೀಟರ್ —————> ಕಡಿಮೆ ವಿದ್ಯುತ್ ಅಳೆಯುವ ಸಾಧನ.
10) ಅನಿಮಾಮೀಟರ್ —————> ಗಾಳಿಯ ವೇಗವನ್ನು ಅಳೆಯುವ ಸಾಧನ.
11) ಓಡೋಮೀಟರ್ —————> ಚಕ್ರವಾಹನಗಳು ಚಲಿಸುವ ದೂರವನ್ನು ಅಳೆಯುವ ಸಾಧನ.
12) ಸ್ಪೀಡೋಮೀಟರ್ —————> ವಾಹನಗಳ ವೇಗವನ್ನು ಅಳೆಯುವ ಸಾಧನ.
13) ಗ್ರಾಫಿಮೀಟರ್ —————> ನೀರಿನ ಸೆಲೆಯನ್ನು ಪತ್ತೆ ಹಚ್ಚುವ ಸಾಧನ.
14) ಮೋನೋಮೀಟರ್ —————> ಅನಿಲಗಳ ಒತ್ತಡಗಳನ್ನು ಅಳೆಯುವ ಸಾಧನ.
15) ಕ್ರೋನೋಮೀಟರ್ —————> ಹಡಗಿನ ನಿಖರವಾದ ಕಾಲವನ್ನು ಅಳತೆ ಮಾಡುವ ಸಾಧನ.
16) ರೆಡಿಯೋಮೀಟರ್ —————> ವಿಕಿರಣಗಳಿಂದ ಹೊರಬರುವ ಶಕ್ತಿಯನ್ನು ಅಳೆಯುವ ಸಾಧನ.
17) ಆಡಿಯೋಮೀಟರ್ —————> ಶಬ್ದದ ತೀವ್ರತೆಯನ್ನು ಅಳೆಯುವ ಸಾಧನ.
18) ಬೈನಾಕ್ಯೂಲರ್ —————> ದೂರದಲ್ಲಿರುವ ವಸ್ತುಗಳನ್ನು ಹತ್ತಿರದಲ್ಲಿ ನೋಡಲು ಬಳಸುವ ಸಾಧನ.
19) ಬ್ಯಾರೋಗ್ರಾಫ್ —————> ನಿರಂತರ ವಾಯುವಿನ ಒತ್ತಡವನ್ನು ಅಳೆಯುವ ಸಾಧನ.
20) ಕಂಪಾಸ್ —————> ಹಡಗಿನ ದಿಕ್ಕನ್ನು ಸೂಚಿಸುವ ಸಾಧನ.
21) ರೈನ್ ಗೇಜ್ —————> ಬಿದ್ದ ಮಳೆಯನ್ನು ಅಳೆಯುವ ಸಾಧನ.
22) ಸ್ಟೆತೋಸ್ಕೋಪ್ —————> ಹೃದಯ ಬಡಿತವನ್ನು ಅಳೆಯುವ ಸಾಧನ.
23) ಥರ್ಮೋಕೊಪಲ್ —————> ಸಣ್ಣ ಉಷ್ಣತೆಯನ್ನು ಅಳೆಯುವ ಸಾಧನ.
24) ರಿಕ್ಟರ್ ಮಾಪಕ —————> ಭೂಕಂಪನದ ತೀವ್ರತೆಯನ್ನು ಅಳೆಯುವ ಸಾಧನ.
25) ರೇಡಾರ್ —————> ರೇಡಿಯೊ ತರಂಗಗಳನ್ನು ಉಪಯೋಗಿಸಿ ದೂರದ ವಸ್ತುಗಳನ್ನು ಪತ್ತೆ ಮಾಡುವ ಮತ್ತು ಅದರ ದೂರವನ್ನು ನಿಖರವಾಗಿ ಕಂಡು ಹಿಡಿಯಲು ಉಪಯೋಗಿಸುವ ಸಾಧನ.
26) ಸೋನಾರ್ —————> ಶೃವಣಾತೀತ ಧ್ವನಿಯನ್ನು ಉಪಯೋಗಿಸಿ ನೀರಿನೊಳಗಿನ ವಸ್ತುಗಳನ್ನು ಪತ್ತೆ ಹಚ್ಚಲು ಬಳಸುವ ಸಾಧನ.
27) ಕ್ಯಾಲೋರಿ —————> ಶಾಖವನ್ನು ಅಳೆಯುವ ಸಾಧನ.
28) ಮೈಕ್ರೋಸ್ಕೋಪ್ —————> ಸಣ್ಣ ವಸ್ತುಗಳನ್ನು ದೊಡ್ಡದಾಗಿ ಅವಲೋಕಿಸುವ ಸಾಧನ.

✌ಪ್ರಮುಖ100 ಪಿತಾಮಹರುಗಳು✌
1)ವಿಜ್ಞಾನದ ಪಿತಾಮಹ👉ರೋಜರ್ ಬೇಕನ್
2)ಜೀವ ಶಾಸ್ತ್ರದ ಪಿತಾಮಹ👉ಅರಿಸ್ಟಾಟಲ್
3)ಸೈಟಾಲಾಜಿಯ ಪಿತಾಮಹ👉ರಾಬರ್ಟ್ ಹುಕ್
4)ರಸಾಯನಿಕ ಶಾಸ್ತ್ರದ ಪಿತಾಮಹ👉ಆಂಟೋನಿ ಲೇವಸಿಯರ್
5)ಸಸ್ಯ ಶಾಸ್ತ್ರದ ಪಿತಾಮಹ👉ಜಗದೀಶ್ ಚಂದ್ರಬೋಸ್
6)ಭೂಗೋಳ ಶಾಸ್ತ್ರದ ಪಿತಾಮಹ👉ಎರಟೋಸ್ತನೀಸ್
7)ಪಕ್ಷಿ ಶಾಸ್ತ್ರದ ಪಿತಾಮಹ👉ಸಲೀಂ ಆಲಿ
8)ಓಲಂಪಿಕ್ ಪದ್ಯಗಳ ಪಿತಾಮಹ👉ಪಿಯರನ್ ದಿ ಕೊಬರ್ಲೆನ್
9)ಅಂಗ ರಚನಾ ಶಾಸ್ತ್ರದ ಪಿತಾಮಹ👉ಸುಶ್ರುತ
10)ಬೀಜಗಣಿತದ ಪಿತಾಮಹ👉ರಾಮಾನುಜಂ
11)ಜನಸಂಖ್ಯಾ ಶಾಸ್ತ್ರದ ಪಿತಾಮಹ👉ಟಿ.ಆರ್.ಮಾಲ್ಥಸ್
12)ಭಾರತೀಯ ಸೈನ್ಯದ ಪೂಜ್ಯ ಪಿತಾಮಹ 👉ಸ್ಟ್ರೇಂಜರ್ ಲಾರೇನ್ಸ್
13)ಜೈವಿಕ ಸಿದ್ಧಾಂತದ ಪಿತಾಮಹ👉ಚಾರ್ಲ್ಸ್ ಡಾರ್ಮಿನ್
14)ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ 👉ಆಗಸ್ಟ್ ಹಿಕ್ಕಿಸ್
15)ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ👉ಕರೋಲಸ್ ಲಿನಿಯಸ್
16)ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ👉ಕಾರ್ನ್ ವಾಲೀಸ್
17)ಮನೋವಿಶ್ಲೇಷಣಾ ಪಂಥ ಪಿತಾಮಹ👉ಸಿಗ್ಮಂಡ್ ಫ್ರಾಯ್ಢ್
18)ಮೋಬೆಲ್ ಫೋನ್ ನ ಪಿತಾಮಹ 👉ಮಾರ್ಟಿನ್ ಕೂಪರ್
19)ಹೋಮಿಯೋಪತಿಯ ಪಿತಾಮಹ👉ಸ್ಯಾಮ್ಸುಯಲ್ ಹಾನಿಯನ್
20)ಭಾರತೀಯ ವೈದ್ಯಶಾಸ್ತ್ರದ ಪಿತಾಮಹ👉ಧನ್ವಂತರಿ
21)ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ👉 ಮೊಗ್ಲಿಂಗ್
22)ಇ ಮೇಲ್ ನ ಪಿತಾಮಹ👉ಸಭಿರಾ ಭಟಿಯಾ
23)ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ👉ಅಲ್ ಫ್ರೆಡ್ ಬೀಲೆ
24)ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ👉ಟಿಪ್ಪು ಸುಲ್ತಾನ್
25)ವೈದ್ಯಕೀಯ ಕ್ಷೇತ್ರದ ಪಿತಾಮಹ👉ಸುಶ್ರುತ
26)ಭಾರತೀಯ ಹಸಿರು ಕ್ರಾಂತಿಯ ಪಿತಾಮಹ👉ಎಂ.ಎಸ್.ಸ್ವಾಮಿನಾಥನ್
27)ಭಾರತೀಯ ಕೈಗಾರಿಕಾ ರಂಗದ ಪಿತಾಮಹ👉ಜೆಮ್ ಷೆಡ್ ಜಿ ಟಾಟಾ
28)ಭಾರತದ ಅಣು ವಿಜ್ಞಾದ ಪಿತಾಮಹ👉ಹೋಮಿ ಜಾಹಂಗೀರ್ ಬಾಬಾ
29)ರೈಲ್ವೆಯ ಪಿತಾಮಹ👉ಸ್ಟಿಫನ್ ಥಾಮಸ್
30)ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ👉ವರ್ಗೀಸ್ ಕುರಿನ್
31)ವಂಶವಾಹಿನಿ ಶಾಸ್ತ್ರದ ಪಿತಾಮಹ👉
ಗ್ರೆಗರ್ ಮೆಂಡಲ್
32)ಏಷಿಯನ್ ಕ್ರೀಡೆಯ ಪಿತಾಮಹ👉ಜೆ.ಡಿ.ಸೊಂಧಿ
33)ರೇಖಾಗಣಿತದ ಪಿತಾಮಹ👉ಯೂಕ್ಲಿಡ್
34)ವೈಜ್ಞಾನಿಕ ಸಮಾತಾವಾದದ ಪಿತಾಮಹ👉ಕಾರ್ಲ್ ಮಾರ್ಕ್ಸ್
35)ಭಾರತೀಯ ಆರ್ಥಿಕ ಯೋಜನೆಯ ಪಿತಾಮಹ👉ಪಿ.ವಿ.ನರಸಿಂಹರಾವ್
36)ಭಾರತೀಯ ಚಲನಚಿತ್ರ ರಂಗದ ಪಿತಾಮಹ👉ದಾದಾ ಸಾಹೇಬ್ ಫಾಲ್ಕೆ
37)ಭಾರತೀಯ ಸಮಾಜಶಾಸ್ತ್ರದ ಪಿತಾಮಹ👉ಜಿ.ಎಸ್.ಘುರೆ
38)ಕರ್ನಾಟಕ ಸುಗಮ ಸಂಗೀತದ ಪಿತಾಮಹ👉ಶಿಶುನಾಳ ಷರೀಪ
39)ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ👉ವರಹಮೀರ
40)ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹ👉ರಾಟ್ಜಲ್
41)ಭಾರತೀಯ ರೈಲ್ವೆಯ ಪಿತಾಮಹ👉ಲಾರ್ಡ್ ಡಾಲ್ ಹೌಸಿ
42)ಆರ್ಯುವೇದದ ಪಿತಾಮಹ👉ಚರಕ
43)ಯೋಗಾಸನದ ಪಿತಾಮಹ👉ಪತಂಜಲಿ ಮಹರ್ಷಿ
44)ಭಾರತದ ವಿದೇಶಾಂಗ ನೀತಿಯ ಶಿಲ್ಪಿ👉ಜವಾಹರಲಾಲ್ ನೆಹರೂ
45)ಭಾರತದ ನವ ಜಾಗ್ರತಿಯ ಜನಕ👉ರಾಜರಾಮ್ ಮೋಹನ್ ರಾವ್
46)ಹಸಿರು ಕ್ರಾಂತಿಯ ಪಿತಾಮಹ👉ನಾರ್ಮನ್ ಬೋರ್ಲಾನ್
47)ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ👉ಪುರಂದರದಾಸರು
48)ಆಧುನಿಕ ಕರ್ನಾಟಕದ ಶಿಲ್ಪಿ👉ಸರ್.ಎಂ.ವಿಶ್ವೇಶ್ವರಯ್ಯ
49)ಭಾರತದ ಶಾಸನದ ಪಿತಾಮಹ👉ಅಶೋಕ
50)ಕರ್ನಾಟಕದ ಶಾಸನದ ಪಿತಾಮಹ👉ಬಿ.ಎಲ್.ರೈಸ್
51)ಪ್ರತಿ ಸುಧಾರಣ ಚಳುವಳಿಯ ಪಿತಾಮಹ👉ಇಗ್ನೇಷಿಯಸ್ ಲಯೋಲ
52)ಸಮಾಜಶಾಸ್ತ್ರದ ಪಿತಾಮಹ👉ಆಗಸ್ಟ್ ಕಾಂಟೆ
53)ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹ👉ವಿಷ್ಣುಶರ್ಮ
54)ಆಧುನಿಕ ಭಾರತದ ಜನಕ👉ರಾಜರಾಮ್ ಮೋಹನ್ ರಾವ್
55)ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹ👉ಲಾಟಿನ್ ಸಾಚ್
56)ಕಂಪ್ಯೂಟರ್ ನ ಪಿತಾಮಹ 👉ಚಾಲ್ಸ್ ಬ್ಯಾಬೇಜ್
57)ಗದ್ಯಶಾಸ್ತ್ರದ ಪಿತಾಮಹ👉ಡಾಂಟೆ
58)ಪದ್ಯಶಾಸ್ತ್ರದ ಪಿತಾಮಹ👉ಪೆಟ್ರಾರ್ಕ್
59)ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹ👉ಹೋಮಿ ಜಹಾಂಗೀರ್ ಬಾಬಾ
60)ಉರ್ದು ಭಾಷೆಯ ಪಿತಾಮಹ👉ಅಮೀರ್ ಖುಸ್ರೋ
61)ಭಾರತದ ಇತಿಹಾಸದ ಪಿತಾಮಹ👉ಕಲ್ಹಣ
62)ಭಾರತದ ರಸಾಯನಿಕ ಪಿತಾಮಹ👉2ನೇ ನಾಗರ್ಜುನ
63)ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹ👉ಜ್ಯೋತಿರಾವ್ ಪುಲೆ
64)ಭೂವಿಜ್ಞಾನದ ಪಿತಾಮಹ👉ಎ.ಜೇಮ್ಸ್ ಹಟನ್
65)ಪುನರುಜ್ಜಿವನದ ಪಿತಾಮಹ👉ಪೆಟ್ರಾರ್ಕ್
66)ಭಾರತೀಯ ಪುನರುಜ್ಜಿವನದ ಪಿತಾಮಹ👉ರಾಜರಾಮ್ ಮೋಹನ್ ರಾವ್
67)ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ👉ಎಂ.ಎನ್.ಶ್ರೀನಿವಾಸ್
68)ಭಾರತದ ಕ್ಷಿಪಣಿಗಳ ಪಿತಾಮಹ👉ಎ.ಪಿ.ಜೆ.ಅಬ್ದುಲ್ ಕಲಾಂ
69)ನೀಲಿ ಕ್ರಾಂತಿಯ ಪಿತಾಮಹ👉ಹರಿಲಾಲ್ ಚೌಧರಿ
70)ಹಳದಿ ಕ್ರಾಂತಿಯ ಪಿತಾಮಹ👉ಶ್ಯಾಮ್ ಪಿತ್ರೋಡಾ
71)ಇತಿಹಾಸದ ಪಿತಾಮಹ👉ಹೆರೋಡಾಟಸ್
72)ಆರ್ಥಶಾಸ್ತ್ರದ ಪಿತಾಮಹ👉ಆಡಂ ಸ್ಮಿತ್
73)ರಾಜ್ಯ ಶಾಸ್ತ್ರದ ಪಿತಾಮಹ👉ಅರಿಸ್ಟಾಟಲ್
74)ಭಾರತದ ಪೂಜ್ಯ ಪಿತಾಮಹ👉ದಾದಾಬಾಯಿ ನೌರೋಜಿ
75)ಭಾರತದ ಹೈನುಗಾರಿಕೆಯ ಪಿತಾಮಹ👉ಜಾರ್ಜ ಕುರಿಯನ್
76)ಭಾರತದ ಅರಣ್ಯ ಶಾಸ್ತ್ರದ ಪಿತಾಮಹ👉ಬ್ರಾಂಡೀಸ್
77)ಹರಿದಾಸ ಪಿತಾಮಹ👉ಶ್ರೀಪಾದರಾಯರು
78)ಕನ್ನಡದ ಕಾವ್ಯ ಪಿತಾಮಹ👉ಪಂಪ
79)ಕನ್ನಡ ಚಳುವಳಿಯ ಪಿತಾಮಹ👉ಅ.ನ.ಕೃಷ್ಣರಾಯ
80)ಸಹಕಾರಿ ಚಳುವಳಿಯ ಪಿತಾಮಹ👉ದಿ.ಮೊಳಹಳ್ಳಿ ಶಿವರಾಯರು
81)ವಚನ ಸಂಪಾದನೆಯ ಪಿತಾಮಹ👉ಫ.ಗು.ಹಳಕಟ್ಟಿ
82)ಕರ್ನಾಟಕದ ಪ್ರಹಸನದ ಪಿತಾಮಹ👉ಟಿ.ಪಿ.ಕೈಲಾಸಂ
83)ಕಾದಂಬರಿಯ ಪಿತಾಮಹ👉ಗಳಗನಾಥ
84)ಹೋಸಗನ್ನಡ ಸಾಹಿತ್ಯದ ಪಿತಾಮಹ👉ಬಿ.ಎಮ್.ಶ್ರೀಕಂಠಯ್ಯ
85)ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹ👉ಜಿ.ಎಂ.ಪರಮಶಿವಯ್ಯ
86)ಆಧುನಿಕ ಕನ್ನಡ ನಿಘಂಟಿನ ಪಿತಾಮಹ👉ಜಿ.ವೆಂಕಟಸುಬ್ಬಯ್ಯ
87)ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹ👉ಟಿ.ಪಿಕೈಲಾಸಂ
88)ಭಾರತದ ಮೆಟ್ರೋ ರೈಲಿನ ಪಿತಾಮಹ👉ಇ.ಶ್ರೀಧರನ್
89)ಭಾರತದ ಬಾಹ್ಯಕಾಶ ಯೋಜನೆಯ ಪಿತಾಮಹ👉ವಿಕ್ರಂ ಸಾರಾಭಾಯಿ
90)ಭಾರತದ ವೃದ್ಧರ ಪಿತಾಮಹ👉ದಾದಾಬಾಯಿ ನವರೋಜಿ
91)ಹಿಂದಿಳಿದ ವರ್ಗಗಳ ಪಿತಾಮಹ👉ದೇವರಾಜ ಅರಸ್
91)ಫೇಸ್ ಬುಕ್ ನ ಪಿತಾಮಹ👉ಮಾರ್ಕ್ ಜುಗರ್ ಬರ್ಗ್
92)ಇಂಗ್ಲಿಷ್ ಕಾವ್ಯದ ಪಿತಾಮಹ👉ಜಿಯಾಪ್ರೆರಿ ಚೌಸೆರ್
93)ಭಾರತದ ಯೋಜನೆಯ ಪಿತಾಮಹ👉ಸರ್.ಎಂ.ವೀಶ್ವೇಶ್ವರಯ್ಯ
94)ವಿಕಾಸವಾದದ ಪಿತಾಮಹ👉ಚಾರ್ಲ್ಸ್ ಡಾರ್ವಿನ್
95)ಪಾಶ್ಚಿಮಾತ್ಯ ವೈದ್ಯ ಶಾಸ್ತ್ರದ ಪಿತಾಮಹ👉ಹಿಪ್ಪೋಕ್ರೇಟ್ಸ್
96)ಆಧುನಿಕ ಯೋಗದ ಪಿತಾಮಹ👉ಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾ ಜ ಅಯ್ಯಂ
ಗಾರ್
97)ಆಧುನಿಕ ಶೈಕ್ಷಣಿಕ ಮನೋ ವಿಜ್ಞಾನದ ಪಿತಾಮಹ👉ಥಾರ್ನ್ ಡೈಕ್
98)ಕನ್ನಡದ ಸಣ್ಣ ಕಥೆಗಳ ಪಿತಾಮಹ👉ಪಂಜೆ ಮಂಗೇಶರಾಯರು
99)ರಾಷ್ಟ್ರ ಪಿತಾಮಹ👉ದಾದಾಬಾಯಿ ನವರೋಜಿ
100)ಭಾರತದ ಸಂವಿಧಾನದ ಶಿಲ್ಪಿ👉 ಬಿ.ಆರ್.ಅಂಬೇಡ್ಕರ್