ಮಾನವನ ನಿದ್ರಾಭಂಗಿ ಮತ್ತು ಸ್ವಭಾವ.

ನಿಮ್ಮ ಸ್ವಭಾವವನ್ನು ನಿದ್ದೆಯೇ ಹೇಳುತ್ತದೆ!
“””””””””””””””””””””””””””””””””””””””””

image

ನಿದ್ರಾಭಂಗಿಗಳೂ ನಮ್ಮ ಗುಣಗಳನ್ನು ಹೇಳಬಲ್ಲವು. ಇಂಗ್ಲೆಂಡಿನ ಸ್ಲೀಪ್ ಅಡ್ವೈಸರಿ ಸರ್ವಿಸ್, ಸರ್ವೆ ಮೂಲಕ ಒಟ್ಟಾರೆ 6 ಸಾಮಾನ್ಯ ನಿದ್ರಾಭಂಗಿಗಳನ್ನು ಗುರುತಿಸಿದೆ. ಅದರಂತೆ ಅವರವರ ವ್ಯಕ್ತಿತ್ವಗಳನ್ನೂ ಸ್ಟಡಿ ಮಾಡುತ್ತಾ ಹೋಗಿದೆ. ಒಬ್ಬ ವ್ಯಕ್ತಿ 55 ನಿಮಿಷಕ್ಕೂ ಅಧಿಕ ಕಾಲ ಒಂದೇ ಭಂಗಿಯಲ್ಲಿ ಮಲಗಿದರೆ, ಅದು ಅವರ ನಿದ್ರಾಭಂಗಿ ಎನಿಸಿಕೊಳ್ಳುತ್ತದೆ.

1. ಮುದುಡಿದ ಭಂಗಿ: ಇದು ಸಾಮಾನ್ಯ ಭಂಗಿ. ದೇಹವನ್ನು ಬಿಲ್ಲಿನಂತೆ ಬಾಗಿಸಿ, ನೂಲಿನಂತೆ ಮುದುಡಿ ಮಲಗಿರುತ್ತಾರೆ. ಇವರದ್ದು ತುಂಬಾ ಗಡಸು ಮಾತು. ಆದರೆ, ಒಳಗೆ ಇವರು ಮೃದುವಾಗಿರುತ್ತಾರೆ. ಸೂಕ್ಷ್ಮ ಸ್ವಭಾವದ ಇವರಿಗೆ ಒಂದು ಹೇಳಿದ್ರೆ ಕಮ್ಮಿ, ಎರಡು ಹೇಳಿದ್ರೆ ಹೆಚ್ಚು.

2. ಒಂದೇ ಪಾರ್ಶ್ವ: ತೋಳಿನ ಮೇಲೆ ತಲೆಯಿಟ್ಟುಕೊಂಡು, ದೇಹದ ಒಂದೇ ಮಗ್ಗಲಿನಲ್ಲಿ ಮಲಗುವವರು ಮುಕ್ತ ಸ್ವಭಾವದವರು. ಬೇಗನೆ ಇನ್ನೊಬ್ಬರನ್ನು ನಂಬುತ್ತಾರೆ. ಹೆಚ್ಚು ಮಾತಾಡುವ ಸ್ವಭಾವ ಇವರದ್ದು. ಯಾವ ಕೆಲ್ಸ ಮಾಡೋದಾದ್ರೂ ತೀರಾ ಪರ್ಫೆಕ್ಟ್ ಆಗಿರಲು ಬಯಸುತ್ತಾರೆ.

3. ಶೂಟಿಂಗ್ ಭಂಗಿ: ಒಂದೇ ಮಗ್ಗಲಲ್ಲಿ, ಎರಡೂ ಕೈಗಳನ್ನು ಚಾಚಿಕೊಂಡು ಮಲಗುವವರು ತುಂಬಾ ಹಿಂಜರಿಕೆಯುಳ್ಳವರಾಗಿರುತ್ತಾರೆ. ಅವರನ್ನಷ್ಟೇ ನಂಬುತ್ತಾರೆ. ಇವರು ಪಕ್ಕಾ ವ್ಯವಹಾರ ವ್ಯಕ್ತಿತ್ವದವರು. ಇವರ ಜಿಪುಣತನದಿಂದ ಮತ್ತೊಬ್ಬರಿಗೆ ಕಿರಿಕಿರಿಯನ್ನು ಸೃಷ್ಟಿಸುತ್ತದಂತೆ.

4. ಸೈನಿಕ ಭಂಗಿ: ಎರಡೂ ಕೈಗಳನ್ನು ಚಾಚಿಕೊಂಡು, ದೇಹವನ್ನು ನೆಟ್ಟಗೆ ಮಾಡಿಕೊಂಡು ಮಲಗಿಕೊಳ್ಳುವವರು ಶಿಸ್ತುಪಾಲನೆಗೆ ಹೆಚ್ಚು ಆದ್ಯತೆ ಕೊಡುತ್ತಾರೆ. ರಸಿಕತನ ಎನ್ನುವುದೇ ಇವರಿಗೆ ಗೊತ್ತಿರುವುದಿಲ್ಲ. ತಮ್ಮಂತೆಯೇ ಎಲ್ಲರೂ ಇರಬೇಕೆನ್ನುವು ಇವರ ಸ್ವಭಾವವನ್ನು ಬಹುತೇಕರು ಒಪ್ಪುವುದಿಲ್ಲ.

5. ಮಗುಚಿ ಮಲಗುವುದು: ದೇಹವನ್ನು ಕೆಳಮುಖವಾಗಿಸಿ ಮಲಗುವವರು ಶುದ್ಧ ಸೋಮಾರಿಗಳು, ರಸಿಕತನವುಳ್ಳವರು, ಮತ್ತೊಬ್ಬರಿಗೆ ಮೋಸ ಮಾಡುವವರೂ ಆಗಿರುತ್ತಾರೆ. ಇವರನ್ನು ಜಾಸ್ತಿ ನಂಬಬಾರದಂತೆ. ತೀರಾ ಸಿಟ್ಟು, ಅತಿಯಾದ ನಾಚಿಕೆ ಇವರ ಸ್ವಭಾವ. ಜನರೊಟ್ಟಿಗೆ ಇವರು ಬೆರೆಯುವುದಿಲ್ಲ.

6. ಸ್ಟಾರ್‌ಫಿಶ್ ಭಂಗಿ: ಎರಡೂ ಕೈಯನ್ನು ಮೇಲಕ್ಕೆತ್ತಿಕೊಂಡು, ಕಾಲುಗಳನ್ನೂ ಅಗಲ ಮಾಡಿಕೊಂಡು ವಿರಾಜಮಾನರಾಗಿ ನಿದ್ರಿಸುವವರು ತುಂಬಾ ಮಹತ್ವಾಕಾಂಕ್ಷಿಗಳು. ಕ್ರಿಯಾಶೀಲ ಬುದ್ಧಿವಂತಿಕೆ ಇವರಲ್ಲಿರುತ್ತದೆ. ಯಾರ ಮಾತನ್ನೂ ಕೇಳುವವರಲ್ಲ. ಆದರೆ, ಎಲ್ಲರನ್ನೂ ಪ್ರೀತಿಸುವವರಾಗಿರುತ್ತಾರೆ.

# ಶುಭರಾತ್ರಿ/Good night.

ಸರಳ ವಿವಾಹ.

ಸರಳ ಮದುವೆಯೇ ಆದರ್ಶ ವಿವಾಹ

image

ಜನರ ಬದುಕು ಹಸನಾಗಿಸಲು ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಮರ್ಪಕ ಮಾಹಿತಿ ಇಲ್ಲದೆ ಆ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪುತ್ತಲೇ ಇಲ್ಲ. ಈ ಕೊರತೆ ನೀಗಿಸಿ ಯೋಜನೆಗಳ ಪ್ರಯೋಜನ ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ವಿಜಯವಾಣಿ ಪ್ರತಿ ಗುರುವಾರ ನಿಮ್ಮ ಹಕ್ಕಿಗೆ ನಮ್ಮ ಧ್ವನಿ ಮಾಹಿತಿ ಕೈಪಿಡಿ ಸರಣಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದು, ಈ ವಾರ ಸರಳ ವಿವಾಹ ಪ್ರೋತ್ಸಾಹಕ್ಕೆ ಜಾರಿಗೊಳಿಸಲಾಗಿರುವ ಆದರ್ಶ ವಿವಾಹ ಯೋಜನೆಯ ಸಮಗ್ರ ಮಾಹಿತಿ ನೀಡಲಾಗಿದೆ.

ನಮ್ಮಲ್ಲಿ ದುಂದುವೆಚ್ಚದ ಮದುವೆಗಳೇ ಹೆಚ್ಚು. ಮದುವೆಗಾಗಿ ಮಾಡಿದ ಸಾಲದಿಂದ ಜೀವನಪರ್ಯಂತ ನರಳುವ ಹೆಣ್ಣುಮಕ್ಕಳ ತಂದೆ-ತಾಯಿಯರ ಗೋಳು ಹೇಳತೀರದು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸರಳ ಸಾಮೂಹಿಕ ವಿವಾಹ ಜನಪ್ರಿಯಗೊಳಿಸಲು ‘ಆದರ್ಶ ವಿವಾಹ’ ಯೋಜನೆಯನ್ನು 2007-08ನೇ ಸಾಲಿನಲ್ಲಿ ಜಾರಿಗೊಳಿಸಿದೆ.

ಏನೇನು ಬೇಕು?

ಪ್ರೋತ್ಸಾಹಧನ ಪಡೆಯಲು ವಧು-ವರರು ವಿವಾಹ ನೋಂದಣಿ ಮಾಡಿಸಿರಬೇಕು. ವಿವಾಹ ನೋಂದಣಿ ಪತ್ರವನ್ನು ಪ್ರೋತ್ಸಾಹಧನ ನೀಡುವ ಅರ್ಜಿಯೊಂದಿಗೆ ಲಗತ್ತಿಸಬೇಕು. ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗುವವರಿಗೆ ಮಾತ್ರ ಈ ಯೋಜನೆ ಸೀಮಿತವಾಗಿರುವುದರಿಂದ ಸಾಮೂಹಿಕ ವಿವಾಹಗಳನ್ನು ಸಂಘಟಿಸುವ ಸಂಘಟನೆಯಿಂದ ಪಡೆದ ನಿಗದಿತ ನಮೂನೆಯ ಪ್ರಮಾಣಪತ್ರವನ್ನು ಕೂಡ ಪ್ರೋತ್ಸಾಹಧನಕ್ಕಾಗಿ ನೀಡುವ ಅರ್ಜಿಯೊಂದಿಗೆ ಲಗತ್ತಿಸಬೇಕು. ವಿವಾಹವಾಗುವ ವಧು-ವರರು ವಿವಾಹವಾದ ಬಗ್ಗೆ ಸಾಕ್ಷಿಯಾಗಿ ಇಬ್ಬರೂ ಒಟ್ಟಿಗಿರುವ ಭಾವಚಿತ್ರದ ನೆಗೆಟಿವ್ ಹಾಗೂ ಪಾಸಿಟಿವ್ ಪ್ರತಿ ನೀಡಬೇಕು.

ಯಾರು ಅರ್ಹರು?

ಯೋಜನೆಯ ಫಲಾನುಭವಿಯಾಗಲು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗಬೇಕು.
ವಿವಾಹವಾಗುವ ವಧು-ವರರು ಬಾಲ್ಯ ವಿವಾಹ ನಿಯಂತ್ರಣ ಕಾನೂನಿನ ಅಡಿಯಲ್ಲಿ ನಿಗದಿಗೊಳಿಸಲ್ಪಟ್ಟ ಕನಿಷ್ಠ ವಯಸ್ಸು ಹೊಂದಿರಬೇಕು.
ವಿವಾಹವಾಗುವ ವಧು-ವರರಿಗೆ ಈ ಮೊದಲೇ ಮದುವೆಯಾಗಿ ಜೀವಂತ ಪತಿ ಅಥವಾ ಪತ್ನಿ ಇರಬಾರದು.
ಪ್ರಯೋಜನವೇನು?

ವಿವಾಹಗಳಿಂದ ಆಗುತ್ತಿರುವ ದುಂದುವೆಚ್ಚ ತಪ್ಪಿಸಲು ಮತ್ತು ಸಾಮೂಹಿಕ ವಿವಾಹ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಸಾಮೂಹಿಕ ವಿವಾಹದಲ್ಲಿ ವಿವಾಹವಾಗುವ ವಧುವಿನ ಹೆಸರಿಗೆ ರೂ.10,000ಗಳನ್ನು 2 ವರ್ಷಗಳ ಅವಧಿಯವರೆಗೆ ನಿಶ್ಚಿತ ಠೇವಣಿ (ಜ್ಡಿಛಿಛ ಛಛಿಟಟಠಜಿಠಿ) ಇಡಲಾಗುತ್ತದೆ. 2 ವರ್ಷ ನಂತರ ಹಣವನ್ನು ಬಡ್ಡಿಸಹಿತ ಆಕೆ ತನ್ನಿಚ್ಛೆಗೆ ಅನುಗುಣವಾಗಿ ಬಳಸಿಕೊಳ್ಳಬಹುದು. ವಿವಾಹ ಮುಗಿದ ಒಂದು ವಾರದಲ್ಲಿ ಹಣವನ್ನು ವಧುವಿಗೆ ಅನುಕೂಲಕರವಾದ ಬ್ಯಾಂಕ್ ಶಾಖೆಯಲ್ಲಿ ನಿಶ್ಚಿತ ಠೇವಣಿಯನ್ನು ವಧುವಿನ ಹೆಸರಿನಲ್ಲಿ ಇರಿಸಿ ವಧುವಿಗೆ ರಸೀದಿಯನ್ನು ನೀಡಲಾಗುವುದು.

ಸಮಯದ ಮಿತಿಯಿಲ್ಲ

ಯೋಜನೆ ಸಂಬಂಧಿತ ದೃಢೀಕೃತ ದಾಖಲೆಗಳನ್ನು ನೀಡುವುದರ ಮೇಲೆ ತಹಸೀಲ್ದಾರರು ಮತ್ತು ರೆವಿನ್ಯೂ ಇನ್ಸ್​ಪೆಕ್ಟರ್​ರಿಂದ ತನಿಖೆ ನಡೆದು ಇವರು ನೀಡುವ ವರದಿ ಆಧರಿಸಿ ಫಲಾನುಭವಿಗೆ ತಾಲೂಕು ಮಟ್ಟದಲ್ಲಿ ಹಣ ಸಂದಾಯವಾಗುತ್ತದೆ ಮತ್ತು ಪ್ರೋತ್ಸಾಹಧನ ಪಡೆಯಲು ಫಲಾನುಭವಿಗಳು ಅರ್ಹರಾಗುತ್ತಾರೆ. ಇದಕ್ಕೆ ಸಮಯ ಮಿತಿ ಇಲ್ಲ.

ಆದರೆ, ವಿವಾಹವಾದ ಜೋಡಿಗಳು ಅಲ್ಲಿಯ ಪ್ರಾದೇಶಿಕ ಕಚೇರಿಯಲ್ಲಿ ನೋಂದಣಿ ಮಾಡಿಸದೆ, ಬೇರೆ ಪ್ರದೇಶದಲ್ಲಿ ವಾಸವಾಗಿದ್ದರೆ, ವಾಸವಿರುವ ಪ್ರಾದೇಶಿಕ ಕಚೇರಿಯಲ್ಲಿ ತುರ್ತು ನೋಂದಾಯಿಸಿ ವಿವಾಹವಾದ 6 ತಿಂಗಳೊಳಗಾಗಿ ಅರ್ಜಿ ಸಲ್ಲಿಸಬೇಕು. ಸಾಮೂಹಿಕ ವಿವಾಹ ನಡೆದ ಆರು ತಿಂಗಳೊಳಗಾಗಿ ಪ್ರಮಾಣಪತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.

ಅರ್ಜಿ ಎಲ್ಲಿ ಸಿಗುತ್ತೆ?

ಎಲ್ಲ ತಾಲೂಕು ಕಚೇರಿಗಳಲ್ಲಿ ಯೋಜನೆಯ ಅರ್ಜಿ ನಮೂನೆ ಲಭ್ಯ.

ಏನೇನು ದಾಖಲೆ?

ವಯಸ್ಸಿನ ಪ್ರಮಾಣ ಪತ್ರ ·ವಿವಾಹ ಪ್ರಮಾಣ ಪತ್ರ ·ಸಾಮೂಹಿಕ ವಿವಾಹವಾದ ಬಗ್ಗೆ ಸಂಘಟನಕಾರರಿಂದ ದೃಢೀಕರಿಸಲಾದ ವಿವಾಹವಾದ ಜೋಡಿಗಳ ಪಟ್ಟಿ
ಯಾರು ಅರ್ಹರಲ್ಲ?

ವಿವಾಹ ನೋಂದಣಿಯಾಗದ ಪಕ್ಷದಲ್ಲಿ ಆದರ್ಶ ವಿವಾಹ ಯೋಜನೆಯಡಿ ಅನುದಾನಕ್ಕೆ ಅರ್ಹರಾಗಿರುವುದಿಲ್ಲ. ಅಂತಹ ಜೋಡಿಗಳ ಅರ್ಜಿಗಳನ್ನು ತಾಲ್ಲೂಕಿನ ತಹಸೀಲ್ದಾರರು ಆದರ್ಶ ವಿವಾಹ ಯೋಜನೆಯಡಿ ತಿರಸ್ಕರಿಸುವ ಅಧಿಕಾರ ಹೊಂದಿರುತ್ತಾರೆ.

ನೋಂದಣಿ ಕಡ್ಡಾಯ
ತಡ

image

ಬಾೆಲ್ಯ ವಿವಾಹ ತಡೆಯುವ ದೃಷ್ಟಿಯಿಂದ, ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗುವ ಮಹಿಳೆಯರ ರಕ್ಷಣೆಗಾಗಿ, ಪ್ರತಿ ಜೋಡಿಯ ವಿವಾಹವನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು.

ಇಲಾಖೆ ಕಾರ್ಯವೇನು?

ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಬಗ್ಗೆ ಹಾಗೂ ಕಾರ್ಯಕ್ರಮದಲ್ಲಿ ನಡೆದ ವಿವಾಹಗಳು ನೋಂದಣಿಯಾದ ಬಗ್ಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಕಾಲಕಾಲಕ್ಕೆ ತಪಾಸಣೆ ನಡೆಸುತ್ತಾರೆ. ಪಾಲಕರು/ಸಾಮೂಹಿಕ ವಿವಾಹಗಳ ಆಯೋಜಕರು ವಿವಾಹಗಳನ್ನು ನೋಂದಾಯಿಸಲು ಜವಾಬ್ದಾರರಾಗಿರುತ್ತಾರೆ. ತಾಲ್ಲೂಕು ಮಟ್ಟದಲ್ಲಿ ತಹಸೀಲ್ದಾರರು ಹೊಣೆಗಾರರು. ವಸ್ತುಸ್ಥಿತಿಯನ್ನು ಪಡೆದುಕೊಳ್ಳಲು ಸ್ಥಳೀಯ ಬಾಲವಿಕಾಸ ಯೋಜನಾಧಿಕಾರಿಯಿಂದ (ಇಈಕಣ) ಮಾಹಿತಿ ಸಂಗ್ರಹಿಸುತ್ತಾರೆ.

ಕೋಟಿ ರೂ. ಅನುದಾನ

2007-08ರ ಸಾಲಿನಲ್ಲಿ ಜಾರಿಗೊಂಡಿರುವ ಈ ಯೋಜನೆಗಾಗಿ ರಾಜ್ಯ ಸರ್ಕಾರ 1 ಕೋಟಿ ರೂಪಾಯಿಗಳನ್ನು ಆದರ್ಶ ವಿವಾಹ ಯೋಜನೆಗಾಗಿ ಮೀಸಲಿರಿಸಿದೆ.

ಸಂಘ-ಸಂಸ್ಥೆಗೂ ಪ್ರೋತ್ಸಾಹಧನ

ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಖಾಸಗಿ ವ್ಯಕ್ತಿಗಳು, ಸಂಘಟನೆಗಳು, ದೇವಸ್ಥಾನಗಳು, ಟ್ರಸ್ಟ್ ಮತ್ತಿತರ ಸಂಘ-ಸಂಸ್ಥೆಗಳು ಆಯೋಜಿಸಬಹುದು. ಸಾಮೂಹಿಕ ವಿವಾಹಗಳನ್ನು ಸಂಘಟಿಸುವ ಸಂಘಟನೆಗಳಿಗೂ ವಿವಾಹವಾಗುವ ಪ್ರತಿ ಜೋಡಿಗೆ ರೂ.100ರಂತೆ ಪ್ರೋತ್ಸಾಹಧನ ನೀಡಲಾಗುವುದು. ಎಲ್ಲಾ ಧರ್ಮದ ಸಂಘ-ಸಂಸ್ಥೆಗಳಿಗೂ ಇದು ಅನ್ವಯ.

ಮಾನದಂಡವೇನು?

ಯಾವುದೇ ಧರ್ಮಕ್ಕೆ ಸೇರಿದ ಖಾಸಗಿ ಟ್ರಸ್ಟ್​ಗಳು, ಸಂಘಗಳು, ಸೊಸೈಟಿಗಳು, ಖಾಸಗಿ ವ್ಯಕ್ತಿಗಳು ಮತ್ತು ದೇವಸ್ಥಾನದ ಟ್ರಸ್ಟ್​ಗಳು ತಮ್ಮ ವ್ಯಾಪ್ತಿಗೆ ಬರುವ ತಾಲೂಕಿನ ತಹಸೀಲ್ದಾರರ ಕಚೇರಿಯಲ್ಲಿ ಸಾಮೂಹಿಕ ವಿವಾಹಗಳ ಆಯೋಜಕರೆಂದು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಆಯೋಜಕರು ನೋಂದಾಯಿಸುವ ಸಂದರ್ಭದಲ್ಲಿ ಹೆಸರು, ತಾತ್ಕಾಲಿಕ ವಿಳಾಸ ಹಾಗೂ ಕಾಯಂ ವಿಳಾಸದ ಪ್ರಮಾಣ ಪತ್ರ ಹಾಗೂ ಸಂರ್ಪಸುವ ವಿವರವನ್ನು ಕಡ್ಡಾಯವಾಗಿ ನೀಡಬೇಕು. ಸಾಮೂಹಿಕ ವಿವಾಹ ನಡೆಸುವ ಸಂದರ್ಭಗಳಲ್ಲಿ ಕಾರ್ಯಕ್ರಮದಲ್ಲಿ ವಧು-ವರನ ಭಾವಚಿತ್ರ, ವಯಸ್ಸಿನ ದೃಢೀಕರಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ ಅಥವಾ ವಿಳಾಸದ ಪ್ರಮಾಣ ಪತ್ರದ ಬಗ್ಗೆ ವಿವರಗಳನ್ನು ಸಲ್ಲಿಸಿ ಸಂಬಂಧಪಟ್ಟ ತಹಸೀಲ್ದಾರರಿಂದ ಅನುಮತಿ ಪಡೆಯಬೇಕು.

ಸಂಘ-ಸಂಸ್ಥೆಗಳು ಮಾಡಬೇಕಾದ್ದೇನು?

ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನಡೆಸುವ ಸಂಘ-ಸಂಸ್ಥೆಗಳು ನಗರ ಪ್ರದೇಶಗಳಲ್ಲಿ ಕನಿಷ್ಠ 25 ವಿವಾಹ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ 10 ವಿವಾಹಗಳನ್ನು ನಡೆಸಬೇಕು. ಮದುವೆಯಾಗುವ ಸ್ಥಳಕ್ಕೆ ತಾಲ್ಲೂಕುಮಟ್ಟದಲ್ಲಿ ಇರುವ ವಿವಾಹ ನೋಂದಣಾಧಿಕಾರಿಯವರನ್ನು ಕರೆದೊಯ್ದು ವಿವಾಹ ಸ್ಥಳದಲ್ಲೇ ಮದುವೆ ನೋಂದಣಿ ಮಾಡಿಸಿ ವಿವಾಹವಾದ ಜೋಡಿಗಳಿಗೆ ವಿವಾಹ ನೋಂದಣಿ ಪ್ರಮಾಣಪತ್ರವನ್ನು ಅದೇ ದಿನ ವಿತರಿಸಬೇಕು. ವಿವಾಹವಾದ ಜೋಡಿಯ ಭಾವಚಿತ್ರ ಹಾಗೂ ಅದರ ನೆಗೆಟಿವ್ ಪ್ರತಿಯನ್ನು ಪಡೆದುಕೊಳ್ಳಲು ಸ್ಥಳದಲ್ಲಿಯೇ ವ್ಯವಸ್ಥೆ ಮಾಡಬೇಕು. ವಿವಾಹ ಮುಗಿದ ಒಂದು ವಾರದೊಳಗಾಗಿ ಸಂಬಂಧಿಸಿದ ನಿಶ್ಚಿತ ಠೇವಣಿ ಹಣವನ್ನು ವಧುವಿನ ಹೆಸರಿನಲ್ಲಿ ಇಟ್ಟು ಅದರ ರಸೀದಿಯನ್ನು (ಎಫ್​ಡಿಆರ್) ವಧುವಿಗೆ ನೀಡಬೇಕು. ನಿಶ್ಚಿತ ಠೇವಣಿ ಇಡುವಾಗ ಯಾವ ಬ್ಯಾಂಕಿನ ಯಾವ ಖಾತೆಯಲ್ಲಿ ವಧುವಿಗೆ ಅನುಕೂಲವಾಗುತ್ತದೆ ಎಂಬುದನ್ನು ಅವರಿಂದ ತಿಳಿದುಕೊಂಡು ಅಂತಹ ಬ್ಯಾಂಕ್​ನಲ್ಲಿ ಮಾತ್ರ ನಿಶ್ಚಿತ ಠೇವಣಿ ಹಣವನ್ನು ಇಡಬೇಕು.

ಹೆಚ್ಚಿನ ಮಾಹಿತಿಗೆ ಸಂರ್ಪಸಿ

ಕಂದಾಯ ಇಲಾಖೆ

ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ, 5ನೇ ಮಹಡಿ, ಕಂದಾಯ ಭವನ, ಕೆ.ಜಿ.ರಸ್ತೆ, ಬೆಂಗಳೂರು – 560 009

ದೂರವಾಣಿ: 080-22232040/ 22232012 ಫ್ಯಾಕ್ಸ್: 080-22232040

http://dssp.kar.nic.in/adarshavivah.html

ಬೇಬೀಸ್ ಥರ್ಮಾಮೀಟರ್.

ಬೇಬೀಸ್ ಥರ್ಮಾಮೀಟರ್!

image

ಜ್ವರ ಬಂತು ಎಂದರೆ ಥರ್ವಮೀಟರ್ ಇಟ್ಟು ತಾಪಮಾನ ಎಷ್ಟಿದೆ ಅಂತ ನೋಡೋದು ರೂಢಿ. ಹಿರಿಯರಿಗಾದರೆ ಪರವಾಗಿಲ್ಲ, ಆದರೆ ಚಿಕ್ಕಮಕ್ಕಳು ಥರ್ವಮೀಟರ್ ಇಟ್ಟುಕೊಳ್ಳಲು ಸಾಕಷ್ಟು ತಕರಾರು ಮಾಡುತ್ತಾರೆ. ಥರ್ವಮೀಟರನ್ನು ಬಾಯಲ್ಲಿಡಲೂ ಕೊಡದೆ, ಕಂಕುಳಲ್ಲೂ ಇಟ್ಟುಕೊಳ್ಳದೆ ಪಾಲಕರ ತಾಪಮಾನವನ್ನೂ ಹೆಚ್ಚಿಸುತ್ತಾರೆ! ಇಂತಹ ತಂಟೆಕೋರ ಮಕ್ಕಳಿಗಾಗಿಯೇ ಹೊಸಬಗೆಯ ಥರ್ವಮೀಟರನ್ನು ಅನ್ವೇಷಿಸಲಾಗಿದೆ. ಮಕ್ಕಳನ್ನೇ ಗುರಿಯಾಗಿಟ್ಟುಕೊಂಡು ಇದನ್ನು ರೂಪಿಸಲಾಗುತ್ತಿದೆ ಎಂದರೂ ತಪ್ಪಾಗಲಾರದು.

ಆರೋಗ್ಯಸಂಬಂಧಿ ಉಪಕರಣಗಳನ್ನು ಉತ್ಪಾದಿಸುವ ವಿದಿಂಗ್ಸ್ ಎಂಬ ಕಂಪನಿ, ಈ ಮಾದರಿಯ ಥರ್ವಮೀಟರ್​ಗಳನ್ನು ತಯಾರಿಸುತ್ತಿದೆ. ಇನ್​ಫ್ರಾರೆಡ್ ಸೆನ್ಸರ್​ಗಳ ಮೂಲಕ ಈ ಉಪಕರಣ ಕಾರ್ಯನಿರ್ವಹಿಸುತ್ತದೆ. ಇದನ್ನು ಹಣೆಯ ಮೇಲಿಟ್ಟಾಗ ಒಂದು ಸೆಕೆಂಡ್​ನೊಳಗಾಗಿ ಕರಾರುವಾಕ್ಕಾದ ಗರಿಷ್ಠ ತಾಪಮಾನವನ್ನು ಹೇಳುತ್ತದೆ.

ತೋರುಬೆರಳಿನಷ್ಟು ಉದ್ದವಿರುವ ಕೊಳವೆಯಾಕಾರದ ಈ ಉಪಕರಣವನ್ನು ಬಳಸುವ ಮುನ್ನ ಹಸಿರು ಬಟನ್ ಒತ್ತಬೇಕು. ನಂತರ ಹಣೆಯ ಮೇಲೆ ಎರಡು ಸೆಕೆಂಡುಗಳ ಕಾಲ ಒತ್ತಿ ಹಿಡಿದರಾಯಿತು. ತಕ್ಷಣವೇ ಎಲ್​ಇಡಿ ಪರದೆಯ ಮೇಲೆ ತಾಪಮಾನ ಮೂಡುತ್ತದೆ. ಇದನ್ನು ಗಾಢಬಣ್ಣ ಹಾಗೂ ಆಕರ್ಷಕ ವಿನ್ಯಾಸದಿಂದ ರೂಪಿಸಲಾಗಿದೆ. ಹೀಗಾಗಿ ಮಕ್ಕಳು ಥರ್ವಮೀಟರ್ ಎಂದರೆ ಮಾರುದೂರ ಓಡಲಾರರು ಎಂಬ ವಿಶ್ವಾಸ ತಯಾರಿಕಾ ಕಂಪನಿಯದು. ಇತ್ತೀಚೆಗಷ್ಟೇ ಲಾಸ್​ವೆಗಾಸ್​ನಲ್ಲಿ ನಡೆದ ಸಿಇಎಸ್ 2016 ಟೆಕ್​ಬಿಝå್ನಲ್ಲಿ ಈ ಮಾದರಿಯನ್ನು ಪ್ರದರ್ಶನಕ್ಕಿಡಲಾಗಿತ್ತು. ಮಾರ್ಚ್ ಅಂತ್ಯದೊಳಗಾಗಿ ಇಂಗ್ಲೆಂಡ್ ಮಾರುಕಟ್ಟೆ ಪ್ರವೇಶಿಸಲಿದ್ದು, ಬೆಲೆ ಅಂದಾಜು 7,800 ರೂ.

ಭಾರತದ ಮಹಿಳಾ ಮುಖ್ಯಮಂತ್ರಿಗಳು.

ಸುಚೇತಾ ಕೃಪಲಾನಿಯಿಂದ ಮೆಹಬೂಬಾ ಮುಫ್ತಿ ವರೆಗೆ 16 ಮಹಿಳಾ ಸಿಎಂಗಳು.
      

ನವದೆಹಲಿ, ಜ.8-ಮುಫ್ತಿ ಮಹಮದ್ ಸಯೀದ್ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ 9ನೇ ಮುಖ್ಯಮಂತ್ರಿಯಾಗಿ ಮೆಹಬೂಬಾ ಮುಫ್ತಿ ನಿರೀಕ್ಷೆಯಂತೆ ಅಧಿಕಾರ ವಹಿಸಿಕೊಂಡರೆ ಜಮ್ಮು-ಕಾಶ್ಮೀರದಲ್ಲಿ ಹೊಸದೊಂದು ಇತಿಹಾಸವೇ ನಿರ್ಮಾಣವಾಗಲಿದೆ. ಮೆಹಬೂಬಾ ಅವರು ಮುಖ್ಯಮಂತ್ರಿಯಾಗಲು ಪಕ್ಷದಲ್ಲಿ ಸರ್ವ ಸಮ್ಮತ ಅಭಿಪ್ರಾಯ ಈಗಾಗಲೇ ವ್ಯಕ್ತವಾಗಿದ್ದು, ಮಿತ್ರಪಕ್ಷ ಬಿಜೆಪಿ ಕೂಡ ಇದನ್ನು ವಿರೋಧಿಸಿಲ್ಲ.
ಸುಚೇತ ಕೃಪಲಾನಿ ಅವರಿಂದ ಹಿಡಿದು ಇದುವರೆಗೆ 15 ಮಂದಿ ಮಹಿಳೆಯರು ವಿವಿಧ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಾಗಿದ್ದು, ಮೆಹಬೂಬಾ ದೇಶದ 16ನೇ ಮುಖ್ಯಮಂತ್ರಿಯಾಗಲಿದ್ದಾರೆ.

ಸದ್ಯ ಮಮತಾ ಬ್ಯಾನರ್ಜಿ (ಪ.ಬಂ), ಜಯಲಲಿತಾ (ತ.ನಾ)
ಆನಂದಿ ಬೆನ್ ಪಟೇಲ್ (ಗುಜರಾತ್) ಹಾಗೂ ವಸುಂಧರಾ ರಾಜೇ (ರಾಜಸ್ಥಾನ) ನಾಲ್ವರು ಮಹಿಳಾ ಮುಖ್ಯಮಂತ್ರಿಗಳು ಇದ್ದಾರೆ.

♦ಮಹಿಳಾ ಮುಖ್ಯಮಂತ್ರಿಗಳ ಪಟ್ಟಿ : ♦

1963ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸುಚೇತಾ ಕೃಪಲಾನಿ ಅಧಿಕಾರಕ್ಕೆ ಬಂದಿದ್ದರು.

1972ರಿಂದ ಒರಿಸ್ಸಾದಲ್ಲಿ ನಂದಿನಿ ಸತ್ಪಥಿ,

1973ರಲ್ಲಿ ಗೋವಾ ಮುಖ್ಯಮಂತ್ರಿಯಾಗಿ ಶಶಿಕಲಾ ಕಾಕೋಡ್ಕರ್,

ಅಸ್ಸಾಂನಲ್ಲಿ ಸಯೀದಾ ಅನ್ವರ್ ತೈಮೂರ್ ಅವರು 1980ರಲ್ಲಿ ಮುಖ್ಯಮಂತ್ರಿಯಾಗಿದ್ದರು.

ತಮಿಳುನಾಡಿನಲ್ಲಿ 1988ರಲ್ಲಿ ಕೆಲವು ದಿನ ಜಾನಕೀ ರಾಮಚಂದ್ರನ್.

ಜಯಲಲಿತಾ 5 ಬಾರಿ ಮುಖ್ಯಮಂತ್ರಿಯಾದರು (ಈಗಲೂ ಅವರೇ ಇದ್ದಾರೆ).

1995 ರಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮಾಯಾವತಿ ನಾಲ್ಕು ಬಾರಿ ಅಧಿಕಾರ ನಡೆಸಿದರು.

1996ರಲ್ಲಿ ರಾಜೀಂಧರ್ಕೌರ್ ಪಟ್ಟಾಲ್ ಪಂಜಾಬ್ನ ಮುಖ್ಯಮಂತ್ರಿಯಾಗಿದ್ದರು.

ರಾಬ್ರಿದೇವಿ ಅವರು ಮೂರು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿದ್ದರು.

1998ರಲ್ಲಿ ಸುಷ್ಮಾ ಸ್ವರಾಜ್ ದೆಹಲಿ ಮುಖ್ಯಮಂತ್ರಿಯಾಗಿದ್ದರು.
ನಂತರ 1998ರಿಂದ 2013ರವರೆಗೂ ಶೀಲಾ ಧೀಕ್ಷಿತ್ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದರು.

2003ರಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಉಮಾಭಾರತಿ ಅಧಿಕಾರಕ್ಕೆ ಬಂದಿದ್ದರು.

ಬಳಿಕ 2003ರಿಂದ 2008ರವೆಗೆ ಮತ್ತು 2013ರ ವರೆಗೆ 2 ಅವಧಿಗೆ ವಸುಂಧರಾ ರಾಜೇ ರಾಜಸ್ಥಾನ ಮುಖ್ಯಮಂತ್ರಿಯಾಗಿದ್ದು, ಈಗಲೂ ಅವರೇ ಅಧಿಕಾರದಲ್ಲಿದ್ದಾರೆ.

2014ರಿಂದ ಆನಂದಿ ಬೆನ್ ಪಟೇಲ್ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾರೆ.

ಇಂಗ್ಲೀಷ ಭಾಷೆಯ ಕೆಲವು ಸೈಲೆಂಟ್ ಲೇಟರ್ಸ್ ಶಬ್ದಗಳು

🏻 ಲರ್ನ್ English: ಇಂಗ್ಲಿಷ್ ಪದ ಪ್ರಪಂಚ SILENT LETTERS.
               

ಸಾಮಾನ್ಯವಾಗಿ ಇಂಗ್ಲಿಷ್ ಪದವೊಂದರ ಅಕ್ಷರಜೋಡಣೆ (SPELLING) ಆ ಪದದ ಉಚ್ಚಾರವನ್ನೇ ಅವಲಂಬಿಸಿರುತ್ತದೆ. ಬಾಯಿಯಿಂದ ಹೊರಬರುವ ಶಬ್ದವನ್ನು ಅನುಸರಿಸಿ ಸೂಕ್ತ ಅಕ್ಷರವನ್ನು ಜೋಡಿಸುವ SPELLING ಕರಾಮತ್ತು ಒಮ್ಮಿಂದೊಮ್ಮೆಲೆ ಸಿದ್ಧಿಸುವುದಿಲ್ಲ. ಅನೇಕ ಪದಗಳು ಉಚ್ಚಾರವನ್ನು ಅನುಸರಿಸುವುದಿಲ್ಲ. ಅದಕ್ಕೆ ಹಲವು ಕಾರಣಗಳಿದ್ದರೂ ಮುಖ್ಯವಾದದ್ದು ಇಂಗ್ಲಿಷ್ನಲ್ಲಿಇರುವ ಅಕ್ಷರಗಳ ಕೊರತೆ.
ಕನ್ನಡದಲ್ಲಿರುವಂತೆಇಂಗ್ಲಿಷ್ ಭಾಷೆಯಲ್ಲಿಯೂ ಸ್ವರಗಳು (VOWELS) ಮತ್ತು ವ್ಯಂಜನಗಳಿವೆ (CONSONANTS). ಹ್ರಸ್ವ ಸ್ವರ – 6 (SHORT VOWEL), , ದೀರ್ಘ ಸ್ವರ – 6 (LONG VOWEL), ಪ್ಲುತ – ಎರಡು ಸ್ವರಗಳ ಮಿಶ್ರಣ – 8 (DOUBLE VOWEL – DIPTHONG) ಮತ್ತು ಮೂರು ಸ್ವರಗಳ ಮಿಶ್ರಣ – 2 (TRIPHONE – TRIPTHONG) ಎಂಬ 22 ಉಚ್ಚಾರಗಳಿದ್ದರೂ ಬಳಕೆಯಲ್ಲಿರುವುದು A, E, I, O, U ಎಂಬ ಕೇವಲ 5 ಅಕ್ಷರಗಳು ಈ 22 ಧ್ವನಿ ಸಂಜ್ಞೆಗಳನ್ನು ಪ್ರತಿನಿಸಬೇಕಾಗಿವೆ. ಹಾಗೆಯೇ 24 ವ್ಯಂಜನ ಸಂಜ್ಞೆಗಳಿಗೆ 21 ವ್ಯಂಜನಾಕ್ಷರಗಳಿವೆ. ಇದರಿಂದಾಗಿಇಂಗ್ಲಿಷ್ ಪದಗಳ ಸ್ಪೆಲ್ಲಿಂಗ್ನಲ್ಲಿ ವ್ಯತ್ಯಾಸಕಂಡುಬರುತ್ತದೆ. ಈ ವ್ಯತ್ಯಾಸವನ್ನು ಸರಿದೂಗಿಸಲುಇಂಟರ್ನ್ಯಾಷನಲ್ ಫೊನೆಟಿಕ್ಆಲಬೆಟ್ನ (IPA) ಸಹಾಯ ಪಡೆಯಲಾಗಿದೆ.
ಕೆಲವೊಂದು ಇಂಗ್ಲಿಷ್ ಪದಗಳ ಉಚ್ಚಾರಕ್ಕೂ ಅದರಲ್ಲಿರುವ ಅಕ್ಷರಜೋಡಣೆಗೂ ವ್ಯತ್ಯಾಸ ಕಂಡುಬರುತ್ತದೆ. ಕೆಲವು ಅಕ್ಷರಗಳು ಉಚ್ಚಾರಗೊಳ್ಳುವುದೇ ಇಲ್ಲ. ಇಂತಹ ಉಚ್ಚರಿಸಲ್ಪಡದ ಅಕ್ಷರಗಳು ಸ್ವರಅಥವಾ ವ್ಯಂಜನ ಧ್ವನಿ ಸಂಜ್ಞೆಗಳಿಗೆ ಪೂರಕವಾಗಿರುತ್ತವೆ. ಇವುಗಳನ್ನು SILENT LETTERS ಎನ್ನುತ್ತಾರೆ. ಉದಾಹರಣೆಗೆ: WALK – ವಾಕ್ (ವಾಲ್ಕ್ಅಲ್ಲ), TALK – ಟಾಕ್ (ಟಾಲ್ಕ್ಅಲ್ಲ!) ಇಂತಹ ಇನ್ನೂ ಕೆಲವು ಪದಗಳು ಇಲ್ಲಿವೆ:

image

ವಿಶ್ವದ ಅತಿದೊಡ್ಡ ನೀಲರತ್ನ ಪತ್ತೆ.

ವಿಶ್ವದ ಅತಿದೊಡ್ಡ ನೀಲರತ್ನ ಪತ್ತೆ
ನೀಲ ರತ್ನ(ಸಂಗ್ರಹ ಚಿತ್ರ)
ಕೊಲಂಬೊ: ವಿಶ್ವದ ಅತಿದೊಡ್ಡ ನೀಲರತ್ನ ಶ್ರೀಲಂಕಾದಲ್ಲಿ ಪತ್ತೆಯಾಗಿದೆ. ಈ ರತ್ನದ ತೂಕ 1404.49 ಕ್ಯಾರೆಟ್ ಇದ್ದು ಇದರ ಮೌಲ್ಯ 10 ಕೋಟಿ ಡಾಲರ್ (ರು.650 ಕೋಟಿ) ಆಗಲಿದೆ ಎಂದು ಅಂದಾಜಿಸಲಾಗಿದೆ.
ಶ್ರೀಲಂಕಾದ ದಕ್ಷಿಣ ಭಾಗ ರತ್ನಪುರದಲ್ಲಿ ಈ ರತ್ನ ಪತ್ತೆಯಾಗಿದೆ. ಈ ಪ್ರದೇಶವನ್ನು ವಜ್ರಗಳ ನಗರ ಎಂತಲೂ ಕರೆಯಲಾಗುವುದು. ಇದುವರೆಗೂ ಸಿಕ್ಕಿರುವ ಅತಿದೊಡ್ಡ ನೀಲಿ ರತ್ನದ ತೂಕ 1,395 ಕ್ಯಾರೆಟ್ ಆಗಿದೆ.
ಈಗ ಸಿಕ್ಕಿರುವುದು ವಿಶ್ವದಲ್ಲೇ ಅತಿದೊಡ್ಡದು ಎಂದು ಇಲ್ಲಿನ ವಜ್ರ ತಜ್ಞ ಅರ್ಮಿಲ್ ಸಮ್ ನೂನ್ ಹೇಳಿದ್ದಾರೆ. ಈ ರತ್ನಕ್ಕೆ ದಿ ಸ್ಟಾರ್ ಅಫ್ ಆಡಂ ಎಂದು ಹೆಸರಿಡಲಾಗಿದೆ.

ಗಾದೆಗಳು

೦. ವೇದ ಸುಳ್ಳಾದರೂ ಗಾದೆ ಸುಳ್ಳಾಗದು.

೧. ಹಿತ್ತಲ ಗಿಡ ಮದ್ದಲ್ಲ.

೨. ಮಾಡಿದ್ದುಣ್ಣೋ ಮಹರಾಯ.

೩. ಕೈ ಕೆಸರಾದರೆ ಬಾಯಿ ಮೊಸರು.

೪. ಹಾಸಿಗೆ ಇದ್ದಷ್ತು ಕಾಲು ಚಾಚು.

೫. ಅ೦ಗೈ ಹುಣ್ಣಿಗೆ ಕನ್ನಡಿ ಬೇಕೆ.

೬. ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣ ಹಾಕಿದರ೦ತೆ.

೭. ಎತ್ತೆಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಎಳೆದರ೦ತೆ.

೮. ಮನೇಲಿ ಇಲಿ, ಬೀದೀಲಿ ಹುಲಿ.

೯. ಕು೦ಬಳಕಾಯಿ ಕಳ್ಳ ಅ೦ದರೆ ಹೆಗಲು ಮುಟ್ಟಿ ನೋದಿಕೊ೦ಡನ೦ತೆ.

೧೦. ಕಾರ್ಯಾವಾಸಿ ಕತ್ತೆಕಾಲು ಹಿಡಿ.

೧೧. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು.

೧೨. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.

೧೩. ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.

೧೪. ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.

೧೫. ಅಕ್ಕಿ ಮೇಲೆ ಆಸೆ, ನೆ೦ಟರ ಮೇಲೂ ಪ್ರೀತಿ.

೧೬. ಅಜ್ಜಿಗೆ ಅರಿವೆ ಚಿ೦ತೆ, ಮಗಳಿಗೆ ಗ೦ಡನ ಚಿ೦ತೆ.

೧೭. ಅಲ್ಪನಿಗೆ ಐಶ್ವರ್ಯ ಬ೦ದರೆ ಅರ್ಧರಾತ್ರೀಲಿ ಕೊಡೆ ಹಿಡಿದನ೦ತೆ.

೧೮. ಅತ್ತೆಗೊ೦ದು ಕಾಲ ಸೊಸೆಗೊ೦ದು ಕಾಲ.

೧೯. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ.

೨೦. ಬೇಲೀನೆ ಎದ್ದು ಹೊಲ ಮೇಯ್ದ೦ತೆ.

೨೧. ಅ೦ಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.

೨೨. ಅ೦ತು ಇ೦ತು ಕು೦ತಿ ಮಕ್ಕಳಿಗೆ ಎ೦ತೂ ರಾಜ್ಯವಿಲ್ಲ.

೨೩. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.

೨೪. ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ.

೨೫. ದೇವರು ವರ ಕೊಟ್ರು ಪೂಜಾರಿ ಕೊಡ.

೨೬. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.

೨೭. ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.

೨೮. ಎತ್ತು ಈಯಿತು ಅ೦ದರೆ ಕೊಟ್ಟಿಗೆಗೆ ಕಟ್ಟು ಎ೦ದರ೦ತೆ.

೨೯. ಗ೦ಡ ಹೆ೦ಡಿರ ಜಗಳ ಉ೦ಡು ಮಲಗೋ ತನಕ.

೩೦. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.

೩೧. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?

೩೨. ಗೆದ್ದೆತ್ತಿನ ಬಾಲ ಹಿಡಿದ ಹಾಗೆ.

೩೩. ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನ೦ತೆ.

೩೪. ಭ೦ಗಿದೇವರಿಗೆ ಹೆ೦ಡುಗುಡುಕ ಪೂಜಾರಿ.

೩೫. ಕಾಸಿಗೆ ತಕ್ಕ ಕಜ್ಜಾಯ.

೩೬. ಸಾವಿರ ಸುಳ್ಳು ಹೇಳಿ ಒ೦ದು ಮದುವೆ ಮಾಡು.

೩೭. ಕೂಸು ಹುಟ್ಟುವ ಮು೦ಚೆ ಕುಲಾವಿ.

೩೮. ಅವರು ಚಾಪೆ ಕೆಳಗೆ ತೂರಿದರೆ ನೀನು ರ೦ಗೋಲಿ ಕೆಲಗೆ ತೂರು.

೩೯. ಇಬ್ಬರ ಜಗಳ ಮೂರನೆಯವನಿಗೆ ಲಾಭ.

೪೦. ವೈದ್ಯರ ಹತ್ತಿರ ವಕೀಲರ ಹತ್ತಿರ ಸುಳ್ಳು ಹೇಳಬೇಡ.

೪೧. ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು

ಹಾಳು.

೪೨. ಉಚ್ಚೇಲಿ ಮೀನು ಹಿಡಿಯೋ ಜಾತಿ.

೪೩. ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮ೦ದಿರು, ಬೆಳಿತಾ ಬೆಳಿತಾ ದಾಯಾದಿಗಳು.

೪೪. ಮಗೂನೂ ಚಿವುಟಿ ತೊಟ್ಟಿಲು ತೂಗಿದ ಹಾಗೆ.

೪೫. ನದೀನೆ ನೋಡದೆ ಇರುವನು ಸಮುದ್ರವರ್ಣನೆ ಮಾಡಿದ ಹಾಗೆ.

೪೬. ಅ೦ಗೈಯಲ್ಲಿ ಬೆಣ್ಣೆ ಇಟ್ಕೊ೦ಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರ೦ತೆ.

೪೭. ಶುಭ ನುಡಿಯೋ ಸೋಮ ಅ೦ದರೆ ಗೂಬೆ ಕಾಣ್ತಿದ್ಯಲ್ಲೋ ಮಾಮ ಅ೦ದ ಹಾಗೆ.

೪೮. ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?

೪೯. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.

೫೦. ಕಜ್ಜಿ ಹೋದರೂ ಕಡಿತ ಹೋಗಲಿಲ್ಲ.

೫೧. ಮಾತು ಬೆಳ್ಳಿ, ಮೌನ ಬ೦ಗಾರ.

೫೨. ಎಲ್ಲಾರ ಮನೆ ದೋಸೆನೂ ತೂತೆ.

೫೩. ಒಲ್ಲದ ಗ೦ಡನಿಗೆ ಮೊಸರಲ್ಲೂ ಕಲ್ಲು.

೫೪. ಅಡುಗೆ ಮಾಡಿದವಳಿಗಿ೦ತ ಬಡಿಸಿದವಲೇ ಮೇಲು.

೫೫. ತಾಯಿಯ೦ತೆ ಮಗಳು ನೂಲಿನ೦ತೆ ಸೀರೆ.

೫೬. ಅನುಕೂಲ ಸಿ೦ಧು, ಅಭಾವ ವೈರಾಗ್ಯ.

೫೭. ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ.

೫೮. ತಮ್ಮ ಮನೇಲಿ ಹಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.

೫೯. ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?

೬೦. ಮನೆಗೆ ಮಾರಿ, ಊರಿಗೆ ಉಪಕಾರಿ.

೬೧. ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?

೬೨. ಅಲ್ಪರ ಸ೦ಘ ಅಭಿಮಾನ ಭ೦ಗ.

೬೨. ಸಗಣಿಯವನ ಸ್ನೇಹಕ್ಕಿ೦ತ ಗ೦ಧದವನ ಜೊತೆ ಗುದ್ದಾಟ ಮೇಲು.

೬೩. ಮಾಡಿದವರ ಪಾಪ ಆಡಿದವರ ಬಾಯಲ್ಲಿ.

೬೪. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?

೬೫. ಗೋರ್ಕಲ್ಲ ಮೇಲೆ ನೀರು ಸುರಿದ೦ತೆ.

೬೬. ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?

೬೭. ಗಾಳಿ ಬ೦ದಾಗ ತೂರಿಕೋ.

೬೮. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.

೬೯. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.

೭೦. ಬಿರಿಯಾ ಉ೦ಡ ಬ್ರಾಹ್ಮಣ ಭಿಕ್ಷೆ ಬೇಡಿದ.

೭೧. ದುಡ್ಡೇ ದೊಡ್ಡಪ್ಪ.

೭೨. ಬರಗಾಲದಲ್ಲಿ ಅಧಿಕ ಮಾಸ.

೭೩. ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?

೭೪. ಎಣ್ಣೆ ಬ೦ದಾಗ ಕಣ್ಣು ಮುಚ್ಚಿಕೊ೦ಡ ಹಾಗೆ

೭೫. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.

೭೬. ಮ೦ತ್ರಕ್ಕಿ೦ತ ಉಗುಳೇ ಜಾಸ್ತಿ.

೭೭. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.

೭೮. ಕು೦ಬಾರನಿಗೆ ವರುಷ, ದೊಣ್ಣೆಗೆ ನಿಮಿಷ.

೭೯. ಕ೦ತೆಗೆ ತಕ್ಕ ಬೊ೦ತೆ.

೮೦. ಪುರಾಣ ಹೇಳೋಕ್ಕೆ, ಬದನೇಕಾಯಿ ತಿನ್ನೋಕ್ಕೆ.

೮೧. ಅ೦ಕೆ ಇಲ್ಲದ ಕಪಿ ಲ೦ಕೆ ಸುಟ್ಟಿತು.

೮೨. ಓದಿ ಓದಿ ಮರುಳಾದ ಕೂಚ೦ಭಟ್ಟ.

೮೩. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.

೮೪. ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆಯೇ ಮೇಲು.

೮೬. ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.

೮೭. ಓದುವಾಗ ಓದು, ಆಡುವಾಗ ಆಡು.

೮೮. ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ.

೮೯. ಸ೦ಸಾರ ಗುಟ್ಟು, ವ್ಯಾಧಿ ರಟ್ಟು.

೯೦. ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರ೦ತೆ.

೯೧. ಕೊಟ್ಟವನು ಕೋಡ೦ಗಿ, ಇಸ್ಕೊ೦ಡೋನು ಈರಭದ್ರ.

೯೨. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.

೯೩. ಮುಖ ನೋಡಿ ಮಣೆ ಹಾಕು.

೯೪. ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರ೦ತೆ.

೯೫. ಮ೦ತ್ರಕ್ಕೆ ಮಾವಿನಕಾಯಿ ಉದುರತ್ಯೇ ?

೯೬. ತು೦ಬಿದ ಕೊಡ ತುಳುಕುವುದಿಲ್ಲ.

೯೭. ಉಪ್ಪಿಗಿ೦ತ ರುಚಿಯಿಲ್ಲ ತಾಯಿಗಿ೦ತ ದೇವರಿಲ್ಲ.

೯೮. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?

೯೯. ಇರಲಾರದೆ ಇರುವೆ ಬಿಟ್ಟುಕೊ೦ಡ ಹಾಗೆ.

೧೦೦. ಎ೦ಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ.

೧೦೧. ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊ೦ಡರು.

೧೦೨. ದುಡಿಮೆಯೇ ದುಡ್ಡಿನ ತಾಯಿ.

೧೦೩. ಇಲಿ ಬ೦ತು ಅ೦ದರೆ ಹುಲಿ ಬ೦ತು ಎ೦ದರು.

೧೦೪. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸ೦ಕಟ.

೧೦೫. ಊರಿಗೆ ಬ೦ದವಳು ನೀರಿಗೆ ಬರದೆ ಇರುತ್ತಾಳೆಯೇ ?

೧೦೬. ಇರುಳು ಕ೦ಡ ಭಾವೀಲಿ ಹಗಲು ಬಿದ್ದರ೦ತೆ.

೧೦೭. ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ.

೧೦೮. ಶಿವಪೂಜೇಲಿ ಕರಡಿ ಬಿಟ್ಟ ಹಾಗೆ.

೧೦೯. ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಕೊಟ್ಟಿದ್ದು ಹಾಲು-ಅನ್ನ.

೧೧೦. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.

೧೧೧. ಹೊರಗೆ ಥಳಕು ಒಳಗೆ ಹುಳಕು.

೧೧೨. ಸ೦ಕಟ ಬ೦ದಾಗ ವೆ೦ಕಟರಮಣ.

೧೧೩. ಯಥಾ ರಾಜ ತಥಾ ಪ್ರಜಾ.

೧೧೪. ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು.

೧೧೫. ಬೆರಳು ತೋರಿಸಿದರೆ ಹಸ್ತ ನು೦ಗಿದನ೦ತೆ.

೧೧೬. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರ೦ತೆ.

೧೧೭. ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ.

೧೧೮. ಉಪ್ಪು ತಿ೦ದ ಮನೆಗೆ ಎರಡು ಬಗೆಯ ಬೇಡ.

೧೧೯. ಬಡವನ ಕೋಪ ದವಡೆಗೆ ಮೂಲ.

೧೨೦. ಒಪ್ಪೊತ್ತು೦ಡವ ಯೋಗಿ, ಎರಡೂತ್ತು೦ಡವ ಭೋಗಿ,

ಮೂರೊತ್ತು೦ಡವ ರೋಗಿ, ನಾಲ್ಕೊತ್ತು೦ಡವನ ಹೊತ್ಕೊ೦ಡ್ಹೋಗಿ.

೧೨೧. ಬಲ್ಲವನೇ ಬಲ್ಲ ಬೆಲ್ಲದ ರುಚಿಯ.

೧೨೨. ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ.

೧೨೩. ಶರಣರ ಬದುಕು ಅವರ ಮರಣದಲ್ಲಿ ನೋಡು.

೧೨೪. ಎತ್ತಿಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಹಾಕಿದ ಹಾಗೆ.

೧೨೫. ಕಳ್ಳನ ಮನಸ್ಸು ಹುಳಿ-ಹುಳಿಗೆ.

೧೨೬. ಕೋತಿಗೆ ಹೆ೦ಡ ಕುಡಿಸಿದ ಹಾಗೆ.

೧೨೭. ಹಾವೂ ಸಾಯಬೇಕು, ಕೋಲೂ ಮುರಿಯಬಾರದು.

೧೨೮. ಹಾಲಿನಲ್ಲಿ ಹುಳಿ ಹಿ೦ಡಿದ೦ತೆ.

೧೨೯. ಮಳ್ಳಿ ಮಳ್ಳಿ ಮ೦ಚಕ್ಕೆ ಎಷ್ತು ಕಾಲು ಎ೦ದರೆ, ಮೂರು ಮತ್ತೊ೦ದು ಅ೦ದಳ೦ತೆ.

೧೩೦. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು.

೧೩೧. ರಾತ್ರಿಯೆಲ್ಲಾ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು

ಸ೦ಬ೦ಧ ಅ೦ದ ಹಾಗೆ.

೧೩೨. ನಾರಿ ಮುನಿದರೆ ಮಾರಿ.

೧೩೩. ಕೆಟ್ಟ ಮೇಲೆ ಬುದ್ಧಿ ಬ೦ತು,ಅತ್ತ ಮೇಲೆ ಒಲೆ ಉರಿಯಿತು.

೧೩೪. ಉಪ್ಪು ತಿ೦ದಮೇಲೆ ನೀರ ಕುಡಿಯಲೇಬೇಕು.

೧೩೫. ಬೆ೦ಕಿಯಿಲ್ಲದೆ ಹೊಗೆಯಾಡುವುದಿಲ್ಲ.

೧೩೬. ಪಾಪಿ ಸಮುದ್ರ ಹೊಕ್ಕಿದರೂ ಮೊಳಕಾಲುದ್ದ ನೀರು.

೧೩೭. ಹರೆಯದಲ್ಲಿ ಹ೦ದಿ ಕೂಡ ಚೆನ್ನಾಗಿರುತ್ತೆ.

೧೩೮. ಗ೦ಡ ಹೆ೦ಡಿರ ಜಗಳದಲ್ಲಿ ಕೂಸು ಬಡವಾಯ್ತು.

೧೩೯. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.

೧೪೦. ಪ್ರತ್ಯಕ್ಷವಾಗಿ ಕ೦ಡರೂ ಪ್ರಮಾಣಿಸಿ ನೋಡು.

೧೪೧. ಬೆಳ್ಳಗಿರುವುದೆಲ್ಲಾ ಹಾಲಲ್ಲ.

೧೪೨. ಹೊಸ ವೈದ್ಯನಿಗಿ೦ತ ಹಳೇ ರೋಗೀನೇ ಮೇಲು.

೧೪೩. ಬಡವರ ಮನೆ ಊಟ ಚೆನ್ನ, ಶೀಮ೦ತರ ಮನೆ ನೋಟ ಚೆನ್ನ.

೧೪೪. ತೋಟ ಶೃ೦ಗಾರ, ಒಳಗೆ ಗೋಣಿ ಸೊಪ್ಪು.

೧೪೫. ಬಾಯಿ ಬಿಟ್ಟರೆ ಬಣ್ಣಗೇಡು.

೧೪೬. ಸ೦ಕಟ ಬ೦ದಾಗ ವೆ೦ಕಟರಮಣ.

೧೪೭. ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬ೦ದು ಎದೆಗೆ ಒದ್ದನ೦ತೆ.

೧೪೮. ಒಕ್ಕಣ್ಣನ ರಾಜ್ಯದಲ್ಲಿ ಒ೦ದು ಕಣ್ಣು ಮುಚ್ಚಿಕೊ೦ಡು ನಡಿ.

೧೪೯. ಸೀರೆ ಗ೦ಟು ಬಿಚ್ಚೋವಾಗ ದಾರದ ನ೦ಟು ಯಾರಿಗೆ ಬೇಕು.

೧೫೦. ಮನೆ ತು೦ಬಾ ಮುತ್ತಿದ್ದರೆ ತಿಕಕ್ಕೂ ಪೋಣಿಸಿಕೊ೦ಡರ೦ತೆ.

೧೫೧. ಕುಡಿಯೋ ನೀರಿನಲ್ಲಿ ಕೈಯಾಡಿಸಿದ ಹಾಗೆ.

೧೫೨. ಅಟ್ಟದ ಮೇಲಿ೦ದ ಬಿದ್ದವನಿಗೆ ದಡಿಗೆ ತೊಗೊಡು ಹೇರಿದರ೦ತೆ.

೧೫೩. ಮೀಸೆ ಬ೦ದವನು ದೇಶ ಕಾಣ.

೧೫೪. ಊರು ಸುಟ್ಟರೂ ಹನುಮ೦ತರಾಯ ಹೊರಗೆ.

೧೫೫. ಆಕಳು ಕಪ್ಪಾದರೆ ಹಾಲು ಕಪ್ಪೆ.

೧೫೬. ಕಬ್ಬು ಡೊ೦ಕಾದರೆ ಸಿಹಿ ಡೊ೦ಕೆ.

೧೫೭. ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೋಲ್ಲ.

೧೫೮. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊ೦ಡ೦ತೆ.

೧೫೯. ಕೋಣನ ಮು೦ದೆ ಕಿನ್ನರಿ ಬಾರಿಸಿದ ಹಾಗೆ.

೧೬೦. ನರಿ ಕೂಗು ಗಿರಿ ಮುಟ್ಟುತ್ಯೇ ?

೧೬೧. ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ.

೧೬೨. ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ೦ತೆ.

೧೬೩. ಹೌಡಪ್ಪನ ಚಾವಡಿಯಲ್ಲಿ ಅಲ್ಲಪ್ಪನನ್ನು ಕೇಳುವವರಾರು.

೧೬೪. ರ೦ಗನ ಮು೦ದೆ ಸಿ೦ಗನೇ ? ಸಿ೦ಗನ ಮು೦ದೆ ಮ೦ಗನೇ ?

೧೬೫. ಕಾಸಿದ್ದರೆ ಕೈಲಾಸ.

೧೬೬. ಕ೦ಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ತಿ.

೧೬೭. ಕೊನೆಯ ಕೂಸು ಕೊಳೆಯಿತು, ಒನೆಯ ಕೂಸು ಬೆಳೆಯಿತು.

೧೬೮. ಕೆಲಸವಿಲ್ಲದ ಕು೦ಬಾರ ಮಗನ ಮುಕಳಿ ಕೆತ್ತಿದನ೦ತೆ.

೧೬೯. ಆರಕ್ಕೆ ಹೆಚ್ಚಿಲ್ಲ, ಮೂರಕ್ಕೆ ಕಮ್ಮಿಯಿಲ್ಲ.

೧೭೦. ಕಳ್ಳನ ಹೆ೦ಡತಿ ಎ೦ದಿದ್ದರೂ ಮು೦ಡೆ.

೧೭೧. ಅಯ್ಯಾ ಎ೦ದರೆ ಸ್ವರ್ಗ, ಎಲವೋ ಎ೦ದರೆ ನರಕ.

೧೭೨. ಹೂವಿನ ಜೊತೆ ದಾರ ಮುಡಿಯೇರಿತು.

೧೭೩. ಮಳೆ ಹುಯ್ದರೆ ಕೇಡಲ್ಲ, ಮಗ ಉ೦ಡರೆ ಕೇಡಲ್ಲ.

೧೭೪. ಐದು ಬೆರಳು ಒ೦ದೇ ಸಮ ಇದುವುದಿಲ್ಲ.

೧೭೫. ಕೋಪದಲ್ಲಿ ಕೊಯ್ದ ಮೂಗು ಶಾ೦ತವಾದ ಮೇಲೆ ಬರುವುದಿಲ್ಲ.

೧೭೬. ಕುರಿ ಕೊಬ್ಬಿದಷ್ಟು ಕುರುಬನಿಗೇ ಲಾಭ.

೧೭೭. ದೀಪದ ಕೆಳಗೆ ಯಾವತ್ತೂ ಕತ್ತಲೆ.

೧೭೮. ತಮ್ಮ ಕೋಳಿ ಕೂಗಿದ್ದರಿ೦ದಲೇ ಬೆಳಗಾಯ್ತು ಎ೦ದುಕೊ೦ಡರು.

೧೭೯. ಅತ್ತ ದರಿ, ಇತ್ತ ಪುಲಿ.

೧೮೦. ಬಿಸಿ ತುಪ್ಪ, ನು೦ಗೋಕ್ಕೂ ಆಗೋಲ್ಲ, ಉಗುಳೋಕ್ಕೂ ಆಗೋಲ್ಲ.

೧೮೧. ಆಪತ್ತಿಗಾದವನೇ ನೆ೦ಟ.

೧೮೨. ಶ೦ಖದಿ೦ದ ಬ೦ದರೇನೇ ತೀರ್ಥ.

೧೮೩. ಹನಿಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ.

೧೮೪. ಎಲ್ಲಾ ಜಾಣ, ತುಸು ಕೋಣ.

೧೮೫. ಇಟ್ಟುಕೊ೦ಡವಳು ಇರೋ ತನಕ, ಕಟ್ಟಿಕೊ೦ಡವಳು ಕೊನೇ ತನಕ.

೧೮೬. ಮೂಗಿಗಿ೦ತ ಮೂಗುತ್ತಿ ಭಾರ.

೧೮೭. ನವಿಲನ್ನು ನೋಡಿ ಕೆ೦ಭೂತ ಪುಕ್ಕ ಕೆದರಿತ೦ತೆ.

೧೮೮. ಬೀದೀಲಿ ಹೋಗ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊ೦ಡ೦ತೆ.

೧೮೯. ಕಣ್ಣರಿಯದಿದ್ದರೂ ಕರುಳರಿಯುತ್ತದೆ.

೧೯೦. ತನಗೇ ಜಾಗವಿಲ್ಲ. ಕೊರಳಲ್ಲಿ ಡೋಲು ಬೇರೆ.

೧೯೧. ಧರ್ಮಕ್ಕೆ ಕೊಟ್ಟ ಆಕಳ ಹಲ್ಲು ಎಣಿಸಿದರು.

೧೯೨. ಇರೋ ಮೂವರಲ್ಲಿ ಕದ್ದೋರು ಯಾರು ?

೧೯೩. ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ.

೧೯೪. ತೋಳ ಬಿದ್ದರೆ ಆಳಿಗೊ೦ದು ಕಲ್ಲು.

೧೯೫. ಕೆಟ್ಟ ಕಾಲ ಬ೦ದಾಗ ಕಟ್ಟಿಕೊ೦ಡವಳೂ ಕೆಟ್ಟವಳು.

೧೯೬. ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ.

೧೯೭. ಮುಸುಕಿನೊಳಗೆ ಗುದ್ದಿಸಿಕೊ೦ಡ೦ತೆ.

೧೯೮. ತನ್ನ ಓಣಿಯಲ್ಲಿ ನಾಯಿಯೂ ಸಿ೦ಹ.

೧೯೯. ಹೆದರುವವರ ಮೇಲೆ ಕಪ್ಪೆ ಎಸೆದರ೦ತೆ.

೨೦೦. ಹೊಳೆ ದಾಟಿದ ಮೇಲೆ ಅ೦ಬಿಗ ಮಿ೦ಡ.

೨೦೧. ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುತ್ತದೆಯೇ ?

೨೦೨. ಅಕ್ಕಸಾಲಿ, ಅಕ್ಕನ ಚಿನ್ನವನ್ನೂ ಬಿಡುವುದಿಲ್ಲ.

೨೦೩. ಯುದ್ಧ ಕಾಲೇ ಶಸ್ತ್ರಾಭ್ಯಾಸ.

೨೦೪. ರೇಶ್ಮೆ ಶಾಲಿನಲ್ಲಿ ಸುತ್ತಿದ ಚಪ್ಪಲಿ ಏಟು.

೨೦೫. ನಾಯಿ ಬಾಲ ಎ೦ದಿಗೂ ಡೊ೦ಕು.

೨೦೬. ಮಹಾಜನಗಳು ಹೋದದ್ದೇ ದಾರಿ.

೨೦೭. ಅರವತ್ತಕ್ಕೆ ಅರಳು ಮರಳು.

೨೦೮. ಜನ ಮರುಳೋ ಜಾತ್ರೆ ಮರುಳೋ.

೨೦೯. ಕು೦ಟನಿಗೆ ಎ೦ಟು ಚೇಶ್ಟೆ.

೨೧೦. ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ.

೨೧೧. ಬೊಗಳುವ ನಾಯಿ ಕಚ್ಚುವುದಿಲ್ಲ.

೨೧೨. ಸಣ್ಣವರ ನೆರಳು ಉದ್ದವಾದಾಗ ಸೂರ್ಯನಿಗೂ ಮುಳುಗುವ ಕಾಲ.

೨೧೩. ಕೈಗೆಟುಕದ ದ್ರಾಕ್ಷಿ ಹುಳಿ.

೨೧೪. ಕೊ೦ಕಣ ಸುತ್ತಿ ಮೈಲಾರಕ್ಕೆ ಬ೦ದರು.

೨೧೫. ದುಷ್ಟರ ಕ೦ಡರೆ ದೂರ ಇರು.

೨೧೬. ಒ೦ದು ಕಣ್ಣಿಗೆ ಬೆಣ್ಣೆ, ಇನ್ನೊ೦ದು ಕಣ್ಣಿಗೆ ಸುಣ್ಣ.

೨೧೭. ನಿಸ್ಸಹಾಯಕರಮೇಲೆ ಹುಲ್ಲು ಕಡ್ಡಿ ಸಹ ಬುಸುಗುಟ್ಟುತ್ತೆ.

೨೧೮. ಕ೦ಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ.

೨೧೯. ಹ೦ಗಿನರಮನೆಗಿ೦ತ ಗುಡಿಸಲೇ ಮೇಲು.

೨೨೦. ಚೆಲ್ಲಿದ ಹಾಲಿಗೆ, ಒಡೆದ ಕನ್ನಡಿಗೆ ಎ೦ದೂ ಅಳಬೇಡ.

೨೨೧. ಕದ್ದು ತಿ೦ದ ಹಣ್ಣು, ಪಕ್ಕದ ಮನೆ ಊಟ, ಎ೦ದೂ ಹೆಚ್ಚು ರುಚಿ.

೨೨೨. ಕುದಿಯುವ ಎಣ್ಣೆಯಿ೦ದ ಕಾದ ತವಾದ ಮೇಲೆ ಬಿದ್ದ ಹಾಗೆ.

೨೨೩. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು.

೨೨೪. ಹಳೆ ಚಪ್ಪಲಿ, ಹೊಸ ಹೆ೦ಡತಿ ಕಚ್ಚೂಲ್ಲ.

೨೨೫. ರವಿ ಕಾಣದ್ದನ್ನು ಕವಿ ಕ೦ಡ.

೨೨೬. ಕೆಟ್ಟು ಪಟ್ಟಣ ಸೇರು.

೨೨೭. ಕಾಲಿನದು ಕಾಲಿಗೆ, ತಲೆಯದು ತಲೆಗೆ.

೨೨೮. ಹಲ್ಲಿದ್ದವನಿಗೆ ಕಡಲೆ ಇಲ್ಲ, ಕದಲೆಯಿದ್ದವನಿಗೆ ಹಲ್ಲಿಲ್ಲ.

೨೨೯. ಕನ್ನಡಿ ಒಳಗಿನ ಗ೦ಟು ಕೈಗೆ ದಕ್ಕೀತೆ ?

೨೩೦. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು.

೨೩೧. ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೆ ಮೇಲೆ ಬಿತ್ತು.

೨೩೨. ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತೆ.

೨೩೩. ನಾಯಿಗೆ ಹೇಳಿದರೆ, ನಾಯಿ ತನ್ನ ಬಾಲಕ್ಕೆ ಹೇಳಿತ೦ತೆ.

೨೩೪. ಮಹಡಿ ಹತ್ತಿದ ಮೇಲೆ ಏಣಿ ಒದ್ದ ಹಾಗೆ.

೨೩೫. ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರುವನೇ ?

೨೩೬. ಕೊಟ್ಟದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ.

೨೩೭. ಮದುವೆಯಾಗೋ ಗು೦ಡ ಅ೦ದರೆ ನೀನೆ ನನ್ನ ಹೆ೦ಡತಿಯಾಗು ಅ೦ದ ಹಾಗೆ.

೨೩೮. ಕೈಗೆ ಬ೦ದ ತುತ್ತು ಬಾಯಿಗೆ ಬರಲಿಲ್ಲ.

೨೩೯. ತಾನೂ ತಿನ್ನ, ಪರರಿಗೂ ಕೊಡ.

೨೪೦. ಗ೦ಡಸಿಗೇಕೆ ಗೌರಿ ದುಃಖ ?

೨೪೧. ನಗುವ ಹೆ೦ಗಸು, ಅಳುವ ಗ೦ಡಸು ಇಬ್ಬರನ್ನೂ ನ೦ಬಬಾರದು.

೨೪೨. ಲೇ ! ಅನ್ನೋಕ್ಕೆ ಅವಳೇ ಇಲ್ಲ, ಮಗಳ ಹೆಸರು ಅನ೦ತಯ್ಯ.

೨೪೩. ನೂರು ಜನಿವಾರ ಒಟ್ಟಿಗಿರಬಹುದು, ನೂರು ಜಡೆ ಒಟ್ಟಿಗಿರುವುದಿಲ್ಲ.

೨೪೪. ಗಾಯದ ಮೇಲೆ ಬರೆ ಎಳೆದ ಹಾಗೆ.

೨೪೫. ಗುಡ್ಡ ಕಡಿದು, ಹಳ್ಳ ತು೦ಬಿಸಿ, ನೆಲ ಸಮ ಮಾಡಿದ ಹಾಗೆ.

೨೪೬. ಅತಿ ಆಸೆ ಗತಿ ಕೇಡು.

೨೪೭. ವಿನಾಶ ಕಾಲೇ ವಿಪರೀತ ಬುದ್ಧಿ.

೨೪೮. ಅತಿಯಾದರೆ ಆಮೃತವೂ ವಿಷವೇ.

೨೪೯. ಬಡವ, ನೀ ಮಡಗ್ದ್ಹಾ೦ಗ್ ಇರು.

೨೫೦. ಆತುರಗಾರನಿಗೆ ಬುದ್ಧಿ ಮಟ್ಟ.

೨೫೧. ರತ್ನ ತಗೊ೦ಡು ಹೋಗಿ ಗಾಜಿನ ತು೦ಡಿಗೆ ಹೋಲಿಸಿದ ಹಾಗೆ.

೨೫೨. ಗಾಜಿನ ಮನೇಲಿರುವರು ಅಕ್ಕ ಪಕ್ಕದ ಮನೆ ಮೇಲೆ ಕಲ್ಲೆಸೆಯಬಾರದು.

೨೫೩. ಹುಚ್ಚುಮು೦ಡೆ ಮದುವೇಲಿ ಉ೦ಡವನೇ ಜಾಣ.

೨೫೪. ಉ೦ಡೂ ಹೋದ, ಕೊ೦ಡೂ ಹೋದ.

೨೫೫. ಎಲೆ ಎತ್ತೋ ಜಾಣ ಅ೦ದರೆ ಉ೦ಡೋರೆಶ್ಟು ಅ೦ದನ೦ತೆ.

೨೫೬. ಕೋತಿ ತಾನು ಮೊಸರನ್ನ ತಿ೦ದು ಮೇಕೆ ಬಾಯಿಗೆ ಒರಸಿದ ಹಾಗೆ.

೨೫೭. ಹಾಡಿದ್ದೇ ಹಾಡೋ ಕಿಸುಬಾಯಿ ದಾಸ.

೨೫೮. ಹಸಿ ಗೋಡೆ ಮೇಲೆ ಹರಳು ಎಸೆದ೦ತೆ.

೨೫೯. ಊರು ಹೋಗು ಅನ್ನುತ್ತೆ, ಕಾಡು ಬಾ ಅನ್ನುತ್ತೆ.

೨೬೦. ಕಾಮಾಲೆ ಕಣ್ಣವನಿಗೆ ಕಾಣುವುದೆಲ್ಲಾ ಹಳದಿ.

೨೬೧. ಲ೦ಘನ೦ ಪರಮೌಶಧ೦.

೨೬೨. ಹಾಲು ಕುಡಿದ ಮಕ್ಕಳೇ ಬದುಕೋಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೆಯೇ.

ರೇಡಿಯೋ ವಾಚ್.

​ಮಕ್ಕಳ ಮೇಲೆ ನಿಗಾ ಇಡಲು ರೇಡಿಯೋ ವಾಚ್.‌
°°°°°°°°°°°°°°°°°°°°°°°°°°°°°°°°°°°°°°°°°  

image

ಇದರಲ್ಲಿ ಫೋನ್‌ ಮಾಡಬಹುದು, ಮಕ್ಕಳಿರೋ ಜಾಗ ಪತ್ತೆ ಹಚ್ಚಬಹುದು
ಮಹಾನಗರದಲ್ಲಿ ಪೋಷಕರು ಜಾಸ್ತಿ ತಲೆ ಕೆಡಿಸಿಕೊಳ್ಳುವುದು ಮಕ್ಕಳ ಬಗ್ಗೆ. ಶಾಲೆಯಿಂದ ಬರುವಾಗ ಸ್ವಲ್ಪ ತಡವಾದರೂ ಆತಂಕ. ಶಾಪಿಂಗ್‌ಗೆ ಹೋದಾಗ ಕೈಯನ್ನು ಕೊಡವಿ ಆಚೀಚೆ ಹೋದರೆ ಗಾಬರಿ. ದಿನದ ಇಪ್ಪತ್ತನಾಲ್ಕು ಗಂಟೆಯೂ ನಿಗಾ ಇಡಬೇಕಾಗುತ್ತದೆ. ಇನ್ನು ಮಕ್ಕಳು ಹೊರಗೆ ಹೋದಾಗ ಅವರ ಕೈಗೆ ಮೊಬೈಲ್‌ ಕೊಡಲೂ ಹಿಂಜರಿಕೆ. ಇಂಥಾ ಸಂದರ್ಭದಲ್ಲಿ ಪೋಷಕರಲ್ಲಿರುವ ಆತಂಕ, ಹೆದರಿಕೆಗಳನ್ನು ದೂರ ಒಂದು ಇಂಟರೆಸ್ಟಿಂಗ್‌ ವಾಚ್‌ ತಯಾರಾಗಿದೆ. ಅದರ ಹೆಸರು ಸ್ಪಾÂಚ್‌. ಇದನ್ನು ತಯಾರಿಸಿದ್ದು ಬೆಂಗಳೂರಿನ ಟೆಕಿಗಳು.

ಯಾಕೆ ಈ ವಾಚ್‌?

– ಈ ವಾಚ್‌ ಒಂಥರಾ ಮೊಬೈಲ್‌ ಇದ್ದಂತೆ. ಆದರೆ ಮೊಬೈಲ್‌ ಅಲ್ಲ. ವಾಚ್‌ನಲ್ಲಿ ಮೂರು ನಂಬರ್‌ ಸೇವ್‌ ಮಾಡಿಡಬಹುದು. ಅಮ್ಮ, ಅಪ್ಪ ಮತ್ತು ಎಮರ್ಜೆನ್ಸಿ ನಂಬರ್‌. ಮಗು ಎಲ್ಲಿದೆ ಅಂತ ತಿಳಿಯಲು ಅಪ್ಪನೋ ಅಮ್ಮನೋ ಫೋನ್‌ ಮಾಡಬಹುದು. ಮಗು ಶಾಲೆಯಲ್ಲಿದ್ದಾಗ ಸ್ಕೂಲ್‌ ಮೋಡ್‌ನ‌ಲ್ಲಿಟ್ಟರೆ ಫೋನ್‌ ಬರುವುದಿಲ್ಲ.

– ಮಗು ಶಾಳೆಯಲ್ಲಿರಲಿ, ಆಟವಾಡುತ್ತಿರಲಿ ಎಲ್ಲೇ ಇರಲಿ ವಾಚ್‌ನಲ್ಲಿರುವ ಜಿಪಿಎಸ್‌ ತಂತ್ರಜ್ಞಾನದಿಂದ ಪೋಷಕರಿಗೆ ಮಗು ಎಲ್ಲಿದೆ ಎಂಬ ಮಾಹಿತಿ ರವಾನೆಯಾಗುತ್ತಲೇ ಇರುತ್ತದೆ.

– ಒಂದೇ ಒಂದು ಗುಂಡಿ ಒತ್ತಿ ಅಪ್ಪ, ಅಮ್ಮನ ಜೊತೆ ಮಾತಾಡಬಹುದು. ಏನೋ ತೊಂದರೆಯಾಗಿದೆ ಅಂತಂದಾಗ ಎಸ್‌ಓಎಸ್‌ ಗುಂಡಿಯನ್ನು ಒತ್ತಿದರೆ ತಕ್ಷಣ ಅಪ್ಪ ಅಮ್ಮನಿಗೆ ಮಾಹಿತಿ ಹೋಗುತ್ತದೆ.

– ಈ ವಾಚ್‌ ಮತ್ತು ಅಪ್ಪ ಅಮ್ಮನ ಮೊಬೈಲ್‌ಗೆ ಬ್ಲೂಟೂತ್‌ ಮೂಲಕ ಕನೆಕ್ಟ್ ಆಗಿರುತ್ತದೆ. ಶಾಪಿಂಗ್‌ ಹೋದಾಗ ತಮ್ಮ ಜೊತೆ ಇದ್ದ ಮಗು ಸ್ವಲ್ಪ ದೂರ ಹೋಯಿತು ಅಂದ ತಕ್ಷಣ ಮೊಬೈಲ್‌ಗೆ ಅಲರ್ಟ್‌ ಮೆಸೇಜ್‌ ಬರುತ್ತದೆ. ಆ ಮೂಲಕ ಮಗು ಹತ್ತಿರವೇ ಇರುವಂತೆ ನೋಡಿಕೊಳ್ಳಬಹುದು.

ಯಾರ ಐಡಿಯಾ?

ಈ ವಾಚ್‌ ಪರಿಕಲ್ಪನೆ ಸಾಫ್ಟ್ವೇರ್‌ ಉದ್ಯೋಗಿಯಾಗಿದ್ದ ಶ್ರುತಿ ಹೆಗಡೆಯವರದು. ತಾವು ಮಗುವನ್ನು ನೋಡಿಕೊಳ್ಳುವಾಗ ಎದುರಿಸಿದ ಸವಾಲುಗಳೇ ಈ ವಾಚ್‌ ತಯಾರಿಸಲು ಅವರಿಗೆ ಪ್ರೇರಣೆಯಾಗಿದ್ದಂತೆ.