ಸಮೂಹ ಅಂದು, ಇಂದು
ಅಂದು,
ಒಂದು ಮನೆಯಿಂದ ಐದಾರು ಮಂದಿ ಒಟ್ಟಿಗೆ ಒಂದೇ ಕಾರಿನಲ್ಲಿ ಒಂದು ಸ್ಥಳಕ್ಕೆ ಹೋಗತ್ತಿದ್ದೆವು.
ಇಂದು,
ಒಂದು ಮನೆಯಿಂದ ಒಂದು ಸ್ಥಳಕ್ಕೆ ಐದಾರು ಮಂದಿ ಐದಾರು ಕಾರಿನಲ್ಲಿ ಹೋಗುತ್ತೇವೆ.
ಅಂದು,
ಒಂದು ಕೋಣೆಯಿರುವ ಮನೆಯಲ್ಲಿ ಹತ್ತಾರು ಮಂದಿ ವಾಸಿಸುತ್ತಿದ್ದೆವು.
ಇಂದು,
ಹತ್ತಾರು ಕೋಣೆಯಿರುವ ಮನೆಯಲ್ಲಿ ಒಂದೋ ಎರಡೋ ಮಂದಿ ವಾಸಿಸುತ್ತಿದ್ದೇವೆ.
ಅಂದು,
ನೂರು ರೂಪಾಯಿ ಕೊಟ್ಟರೆ ಒಂದು ಚೀಲ ತುಂಬಾ ಸಾಮಾಗ್ರಿ ತರುತ್ತಿದ್ದವು.
ಇಂದು,
ಒಂದು ಚೀಲ ತುಂಬಾ ಹಣ ಕೊಟ್ಟು ಒಂದೋ ಎರಡೋ ಸಾಮಾಗ್ರಿ ಖರೀದಿಸುತ್ತೇವೆ.
ಅಂದು,
ಹತ್ತು ಜನ ಊಟ ಮಾಡಲು ಎಂಟು ಜನರಿಗಾಗುವಷ್ಟು ಊಟ ತಯಾರಿಸಿ ಹನ್ನೆರಡು ಮಂದಿ ಊಟ ಮಾಡುತ್ತಿದ್ದೆವು.
ಇಂದು,
ಹತ್ತು ಜನ ಊಟ ಮಾಡಲು, ಇಪ್ಪತ್ತು ಜನರಿಗಾಗುವಷ್ಟು ಊಟ ತಯಾರಿಸಿ, ಎಂಟು ಮಂದಿ ಊಟ ಮಾಡಿ , ಬಾಕಿ ಕಸದ ತೊಟ್ಟಿಗೆ ಹಾಕುತ್ತೇವೆ.
ಅಂದು,
ಸಾವಿರ ಮಂದಿಗೆ ಸಹಾಯ ಮಾಡಿದವರೂ ಯಾರಿಗೂ ಗೊತ್ತಾಗುತ್ತಿರಲಿಲ್ಲ.
ಇಂದು ,
ಒಬ್ಬನಿಗೆ ಸಹಾಯ ಮಾಡಿದರೆ ಸಾವಿರ ಮಂದಿಗೆ ಗೊತ್ತಾಗುತ್ತದೆ.
ಅಂದು,
ಅರ್ಧ ಹೊಟ್ಟೆ ತುಂಬಿಸಲು ಬೇಕಾಗಿ ಕಿಲೋಮೀಟರ್ ವರೆಗೆ ನಡೆದು ಹೋಗಿ ಕೆಲಸ ಮಾಡತ್ತಿದ್ದೆವು.
ಇಂದು,
ಹೊಟ್ಟೆ ಕರಗಿಸಲು ಬೇಕಾಗೆ ಕಿಲೋಮೀಟರ್ ವರೆಗೆ ನಡೆಯುತ್ತೇವೆ.
ಅಂದು,
ಜೀವಿಸಲಿಕ್ಕಾಗಿ ತಿನ್ನುತ್ತಿದ್ದೆವು.
ಇಂದು,
ತಿನ್ನಲಿಕ್ಕೊ ಸ್ಕರ ಜೀವಿಸುತ್ತಿದ್ದೇವೆ.
ಅಂದು ,
ಮನೆಯೊಳಗೆ ಊಟ ಮಾಡಿ ಹೊರಗಡೆ ಶೌಚಾಲಯಕ್ಕೆ ಹೋಗುತ್ತಿದ್ದೆವು.
ಇಂದು,
ಹೊರಗಡೆ ಊಟ ಮಾಡಿ ಒಳಗೆ ಶೌಚಾಲಯಕ್ಕೆ ಹೋಗುತ್ತೇವೆ.
ಅಂದು,
ಮಾನ ಮುಚ್ಚಲು ವಸ್ತ್ರ ಧರಿಸುತ್ತಿದ್ದೆವು.
ಇಂದು,
ಮಾನ ಇತರರಿಗೆ ತೋರಿಸಲು ವಸ್ತ್ರ ಧರಿಸುತ್ತಿದ್ದೇವೆ.
ಅಂದು ,
ಅಧ್ಯಾಪಕರ ಕೈಯಿಂದ ಪೆಟ್ಟು ಸಿಗಬಾರದು ಎಂದು ಪ್ರಾರ್ಥಿಸುತ್ತಿದ್ದವು.
ಇಂದು,
ವಿದ್ಯಾರ್ಥಿಗಳ ಕೈಯಿಂದ ಪೆಟ್ಟು ಸಿಗದೆ ಇರಲು ಅಧ್ಯಾಪಕರು ಪ್ರಾರ್ಥಿಸುತ್ತಿದ್ದಾರೆ.
ಬದಲಾಗಿರುವುದು ನಾವೇ ಹೊರತು, ಕಾಲವಲ್ಲ.
$$$$$$$$$$
ಯಾರೋ ಸಂಗ್ರಹಿಸಿದ ಅಮೃತವಾಣಿಗಳ ಗುಚ್ಛ ಇಲ್ಲಿದೆ. ಓದಿರಿ – ಆನಂದಿಸಿರಿ. ಅರ್ಥ ತಿಳಿಯಿರಿ, ಬದುಕಿನುದ್ದಕ್ಕೂ ಅನ್ವಯಿಸುವುದನ್ನು ಅಳವಡಿಸಿಕೊಳ್ಳಿರಿ.
೦೧) “ರಸ್ತೆ ಮೇಲೆ ಕಲ್ಲಿನ ಹರಳುಗಳಿದ್ದರೆ ಒಳ್ಳೆಯ ಬೂಟು ಹಾಕಿಕೊಂಡು ನಡೆಯಬಹುದು..!!”
ಆದರೆ….
“ಒಳ್ಳೆಯ ಬೂಟಿನೊಳಗೆ ಒಂದೇ ಒಂದು ಕಲ್ಲಿನ ಹರಳು ಇದ್ದಲ್ಲಿ ಅತ್ಯುತ್ತಮ ರಸ್ತೆಯ ಮೇಲೂ ನಾಲ್ಕು ಹೆಜ್ಜೆ ನಡೆಯಲು ಸಾಧ್ಯವಿಲ್ಲ…!!”
“ಹೊರಗಿನ ಸವಾಲುಗಳಿಗಿಂತಲೂ ನಾವು ಒಳಗಿನ ದುರ್ಬಲತೆಯಿಂದಲೇ ಸೋಲುವುದು ಹೆಚ್ಚು.!”
“”””””””””””””””””””””””””””””
೦೨) ತುಳಿಯುವವರ ಮಧ್ಯೆ ಬೆಳೆದು ನಿಲ್ಲಬೇಕು ಅವಾಗಲೇ ವ್ಯಕ್ತಿತ್ವಕ್ಕೆ ಬೆಲೆ ಸಿಗುವುದು.
“”””””””””””””””””””””””””””””
೦೩) ಪ್ರಯತ್ನ ಎಂಬುದು ಬೀಜದ ಹಾಗೆ. ಬಿತ್ತುತ್ತಲೇ ಇರಿ. ಒಂದಲ್ಲ ಒಂದು ದಿನ ಮರವಾಗಿ ಫಲ ಕೊಟ್ಟೇ ಕೊಡುತ್ತದೆ….
“”””””””””””””””””””””””””””””
೦೪) ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ. ಏಕೆಂದರೆ ಜೀವನ ಕಲಿಸುವುದನ್ನು ನಿಲ್ಲಿಸುವುದಿಲ್ಲ.
“”””””””””””””””””””””””””””””
೦೫) ಒಂದು ಕಾಲು ಮುಂದೆ ಒಂದು ಕಾಲು ಹಿಂದೆ. ಆದರೆ ಮುಂದಿನದಕ್ಕೆ ಗರ್ವವಿಲ್ಲ, ಹಿಂದಿನ ಅದಕ್ಕೆ ಬೇಸರವಿಲ್ಲ, ಏಕೆಂದರೆ ಇದು ಕ್ಷಣಿಕ.
“”””””””””””””””””””””””””””””
೦೬) ಸಮುದ್ರ ಎಂದೂ ನೀರಿಗಾಗಿ ಯೋಚಿಸುವುದಿಲ್ಲ. ತಾನಾಗೇ ನೀರು ಅಲ್ಲಿಗೆ ಹರಿದುಬರುತ್ತದೆ
ಯಶಸ್ಸು ಮತ್ತು ಕೀರ್ತಿಗಳೂ ಹಾಗೆಯೇ. ಒಮ್ಮೆ ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿದ್ದಲ್ಲಿ ನಮ್ಮನ್ನು ಹಿಂಬಾಲಿಸಿ ಬರುತ್ತವೆ.
“”””””””””””””””””””””””””””””
೦೭) ಪ್ರಭಾವ ನೋಡಿ ಹತ್ತಿರ ಬರುವುದಕ್ಕಿಂತ, ಸ್ವಭಾವ ನೋಡಿ ಬರುವವರು ನಿಜವಾದ ಹಿತೈಷಿಗಳು.
“”””””””””””””””””””””””””””””
೦೮) ಕತ್ತಲೆಯಿಲ್ಲದೆ ದೀಪದ ಮಹತ್ವ ತಿಳಿಯಲಾರದು.. ದುಃಖದ ಅನುಭವವಿಲ್ಲದೆ ಸುಖದ ಮಹತ್ವ ತಿಳಿಯಲಾರದು.
“”””””””””””””””””””””””””””””
೦೯) ಸೈಕಲ್ ತುಳಿದು ಕಾಲು ನೋವಾಗಿ ಬೈಕ್ ಬಂತು ಬೈಕ್ ಓಡಿಸಿ ಬೆನ್ನು ನೋವಾಗಿ ಕಾರು ಬಂತು ಕಾರು ಚಾಲನೆ ರೂಢಿಯಾಗಿ ಹೊಟ್ಟೆ ಬಂತು ಹೊಟ್ಟೆ ಇಳಿಸಲು ಜಿಮ್ ಸೇರಿ ಸೈಕಲ್ ತುಳಿವ ಕಾಲ ” ಮತ್ತೆ ” ಬಂತು ಇದೇ – Recycling ??
“”””””””””””””””””””””””””””””
೧೦) ಮೀನು ಇಡೀ ಸಮುದ್ರವನ್ನು ತನ್ನದು ಎಂದು ಭಾವಿಸಿ ಜೀವಿಸುವಂತೆ, ನೀನು ಕೂಡಾ ಇಡೀ ಜಗತ್ತನ್ನು ನಿನ್ನ ದೇಶ ಎಂದು ಭಾವಿಸಿ ಜೀವಿಸು.
“”””””””””””””””””””””””””””””
೧೧) ವಿಕಾಸವೇ ಜೀವನ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ; ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.
“”””””””””””””””””””””””””””””
೧೨) ಜೀವನದಲ್ಲಿ ಹಣದ ಕೊರತೆ ಇದ್ದರೂ ಗುಣದ ಕೊರತೆ ಇರಬಾರದು ಏಕೆಂದರೆ ಹಣವನ್ನು ಬೇರೆಯವರಿಂದ ಕೇಳಿ ಪಡೆಯಬಹುದು ಆದರೆ ಗುಣವನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.
“”””””””””””””””””””””””””””””
೧೩) ಎಲ್ಲಿಯವರೆಗೆ ನಮಗೆ ನಾವು ಪ್ರಾಮಾಣಿಕರಾಗಿರುತ್ತೇವೆಯೋ ಅಲ್ಲಿಯವರೆಗೂ ಖಂಡಿತವಾಗಿ, ನಾವು ಸಂತೋಷದಿಂದಿರುತ್ತೇವೆ….
“”””””””””””””””””””””””””””””
೧೪) ನಿಮ್ಮ ಮನಸ್ಸು ಮತ್ತು ಹೃದಯ ಸರಿಯಾದ ದಿಕ್ಕಿನಲ್ಲಿದ್ದರೆ ಬದುಕು ಎತ್ತ ಹೋಗುತ್ತದೆ ಎಂದು ಚಿಂತಿಸಬೇಕಿಲ್ಲ.
“”””””””””””””””””””””””””””””
೧೫) ವಂಚಕರಿಗೆ ಕಿರೀಟವಾಗುವುಕ್ಕಿಂತ ಉತ್ತಮರಿಗೆ ಪಾದುಕೆಯಾಗುವುದು ಶ್ರೇಷ್ಠ…!
ಕಾಲೆಳೆವವರ ನಾಯಕನಾಗುವುದಕ್ಕಿಂತ ಕೈಹಿಡಿವವರ ಸೇವಕನಾಗುವುದು ಉತ್ಕೃಷ್ಟ..!
“”””””””””””””””””””””””””””””
೧೬) ಉತ್ತಮ ಸಮಯಕ್ಕಾಗಿ ಕಾಯುವುದಕ್ಕಿಂತ, ಸಮಯವನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳೋಣ. ಏಕೆಂದರೆ ಸಮಯ ಎಂದೂ ಭೇದ ತೋರುವುದಿಲ್ಲ.
“”””””””””””””””””””””””””””””
೧೭) ಚಿಂತೆಗೂ, ಚಿತೆಗೊ ಇರುವ ವ್ಯತ್ಯಾಸ ಒಂದು “೦” ಮಾತ್ರ…
ಚಿತೆ ಸತ್ತ ದೇಹವನ್ನು ಸುಡುತ್ತದೆ, ಚಿಂತೆ ಬದುಕಿರುವ ದೇಹವನ್ನೇ ಸುಡುತ್ತದೆ.!!
“”””””””””””””””””””””””””””””””
೧೮) ಸಹನೆ ನಿನ್ನದಾದರೆ ಸಕಲ ನಿನ್ನದೇ ವಿನಯ ನಿನ್ನದಾದರೆ ವಿಜಯ ನಿನ್ನದೇ.
೧೯) ಕತ್ತಲೆ ಆವರಿಸಿಕೊಳ್ಳದೆ ನಕ್ಷತ್ರಗಳು ಮಿನುಗುವುದಿಲ್ಲ ಹಾಗೆಯೇ ಕಷ್ಟಗಳು ಬಾರದೆ ವ್ಯಕ್ತಿಯ ಸಾಮರ್ಥ್ಯ ಅನಾವರಣಗೊಳ್ಳಲು ಸಾಧ್ಯವಿಲ್ಲ.
“”””””””””””””””””””””””””””””””
೨೦) ನಡೆದಷ್ಟು ದಾರಿ ಇದೆ ಪಡೆದಷ್ಟು ಭಾಗ್ಯವಿದೆ ಎಂಬುದೇ ಜಗತ್ತು ನಮಗೆ ನೀಡುವ ಸಂದೇಶವಾಗಿದೆ.
“”””””””””””””””””””‘”””””””””‘””
೨೧) ಬದುಕುವ ಆಸೆ ಇದ್ದರೆ ನಿನ್ನ ಶತ್ರುಗಳ ಕಣ್ಣೆದುರಲ್ಲೇ ಬದುಕು ಅವರು ನಿನ್ನ ಮುಂದೆ ಸುಳಿದಾಗಲೆಲ್ಲ ನಿನ್ನಲ್ಲಿ ಬದುಕುವ ಛಲ ಎಚ್ಚೆತ್ತುಕೊಳ್ಳುತ್ತದೆ.
“”””””””””””””””””””””””””””””””
೨೨) ನಿಮ್ಮ ನಗು ಜಗತ್ತನ್ನು ಬದಲಿಸಲಿ. ಆದರೆ ನಿಮ್ಮ ನಗುವನ್ನು ಬದಲಿಸಲು ಜಗತ್ತಿಗೆ ಅವಕಾಶ ಕೊಡಬೇಡಿ.
“”””””””””””””””””””””””””””””””’
೨೩) “ಸಮಯಕ್ಕೆ ರಜೆ ಇಲ್ಲ ಸ್ವಪ್ನಕ್ಕೆ ಅಂತಿಮ ತಾರೀಖು ಇಲ್ಲ ಜೀವನದಲ್ಲಿ ತಾತ್ಕಾಲಿಕ ವಿರಾಮ ಕೀಲಿ ಇಲ್ಲ …ಜೀವಿಸಿ….ಪ್ರೀತಿಸಿ… ಜೀವನದಲ್ಲಿನ ಪ್ರತೀ ಕ್ಷಣ ಅನುಭವಿಸಿ ಆನಂದಿಸಿ “
“””””””””””””””””””””””””””””
೨೪) ತಾಯಿ ಇರುವವರೆಗೂ ಹಸಿವು ಗೊತ್ತಾಗಲ್ಲ. ತಂದೆ ಇರುವವರೆಗೂ ಜವಾಬ್ದಾರಿ ಗೊತ್ತಾಗಲ್ಲ.
“”””””””””””””””””””””””””””””””
೨೫) ಇಲ್ಲಿ ಎಲ್ಲರೂ ಹುಟ್ಟಿದ್ದು ಅಳುವಿನಿಂದ ನಗುವಿಗಾಗಿ ಜೀವನಪರ್ಯಂತ ಶ್ರಮಪಡಲೇ ಬೇಕು.
“”””””””””””””””””””””””””””””””
೨೬) ನಿಮಗೆ ಶತ್ರುಗಳು ಹುಟ್ಟಬೇಕೆಂದರೆ ನೀವು ಅನ್ಯಾಯ ಮಾಡಬೇಕೆಂದಿಲ್ಲ, ಕೆಲವೊಮ್ಮೆ ಜೀವನದಲ್ಲಿ ನೀವು ಸಾಧಿಸುವ ಯಶಸ್ಸುಗಳೇ ನಿಮಗೆ ಶತ್ರುಗಳನ್ನು ಸೃಷ್ಟಿ ಮಾಡುತ್ತವೆ.
“”””””””””””””””””””””””””””””””
೨೭) ಬೈಯ್ಯೋರು ಬದುಕೋಕೆ ಹೇಳಿದರು…ಹೋಗಳೋರು ಹಾಳಾಗೋಕೆ ಹೇಳಿದರು…
ಬೈಯೋರು ಬಾಗಿಲೊಳಗಿರಬೇಕು, ಹೋಗಳೋರು ಬಾಗಿಲಾಚೆ ಇರಬೇಕು.
“”””””””””””””””””””””””””””””””
೨೮) ಶ್ರೀಮಂತರ ಜೊತೆ ಸ್ನೇಹ ಮಾಡಿ ತಪ್ಪೇನಿಲ್ಲ, ಆದರೆ ಬಡವರ ಜೊತೆಗೆ ಪ್ರೀತಿಯಿಂದ ಮಾತನಾಡಿ ಏಕೆಂದರೆ ಸತ್ತ ಮೇಲೆ ಹೆಗಲು ಕೊಡುವವರು ಅವರೇ, ಶ್ರೀಮಂತರು ನೇರವಾಗಿ ಕಾರಿನಲ್ಲಿ ಸ್ಮಶಾನಕ್ಕೆ ಬರುತ್ತಾರೆ ಅಷ್ಟೇ”
“””””””””””””””””””””””””””””””
೨೯) ದಾನ ಧರ್ಮಕ್ಕೇ ಕಣ್ಣಿಲ್ಲ ನ್ಯಾಯ ನೀತಿಗೆ ಸಾವಿಲ್ಲ…, ಜೀವ ಚಿಕ್ಕದು ಜೀವನ ದೊಡ್ಡದು…, ಸತ್ತವನಿಗೆ ಒಂದು ದಾರಿ, ಸಾಧಿಸಿದವನಿಗೆ ಸಾವಿರ ದಾರಿ.
“””””””””””””””””””””””‘”””””””
೩೦) ಹಣತೆ ಮಣ್ಣಿನದಾಗಿರಲಿ, ಬಂಗಾರದ್ದಾಗಿರಲಿ ಅದು ಮುಖ್ಯವಲ್ಲ. ಕತ್ತಲಾದಾಗ ಅದು ಎಷ್ಟು ಬೆಳಗುತ್ತದೆ ಎಂಬುದು ಮುಖ್ಯ
ಹಾಗೆಯೇ ಗೆಳೆಯ ಬಡವನಾಗಿರಲಿ ಶ್ರೀಮಂತನಾಗಿರಲಿ ಅದು ಮುಖ್ಯವಲ್ಲ, ಕಷ್ಟದ ಸಮಯದಲ್ಲಿ ಅವರು ನಮಗೆಷ್ಟು ಜೊತೆಯಾಗುತ್ತಾರೆ ಎಂಬುದು ಮುಖ್ಯ
“”””””””””””””””””””””””””””””
೩೧) ಗಡಿಯಾರವನ್ನು ನೋಡಿ ಕೆಲಸ ಮಾಡುವವರು ಕೊನೆಯವರೆಗೂ ಕಾರ್ಮಿಕರಾಗಿಯೇ ಉಳಿಯುತ್ತಾರೆ
ಗಡಿಯಾರವನ್ನು ನೋಡದೆ ದುಡಿಯುವವರು ಮಾಲಿಕರಾಗಿ ಬೆಳೆಯುತ್ತಾರೆ
🌹🌹🌹🙏🏻🙏🏻🙏🏻🙏🏻🙏🏻