ಮಹಾಶಿವರಾತ್ರಿ.

ಮಹಾ ಶಿವರಾತ್ರಿ ಪ್ರಯುಕ್ತ ವಿಶೇಷ ಲೇಖನ
image

ಭಾರತೀಯರು ಆಚರಿಸುವ ಯಾವುದೇ ಹಬ್ಬ-ಹರಿದಿನಗಳು, ಸಮಾರಂಭಗಳು, ದಿನಾಚರಣೆಗಳು, ಹಾಗೂ ಜಯಂತಿಗಳು, ಉತ್ಸವಗಳು – ಮಹೋತ್ಸವಗಳು ಆಳಿ ಆಳಿದರೂ ಅಮರವಾಗಿ ಉಳಿದಿರುವ ಯಾವುದೋ ಗತ ವ್ಯಕ್ತಿಯ ಅಥವಾ ಶಕ್ತಿಯ ಅಥವಾ ಪ್ರಾಚೀನತೆಯ ಪ್ರತೀಕಗಳಾಗಿರುತ್ತವೆ ಅಥವಾ ನಡೆದುಹೋದ ಘಟನೆಗಳ ಗತ ವೈಭವದ ಪುನಃ ಸ್ಮರಣೆಗಳಾಗಿರುತ್ತವೆ. ಇಂತಹವುಗಳಲ್ಲಿ ಭಾರತೀಯರು ಆಚರಿಸುವ ಶಿವರಾತ್ರಿ ಯುಗಾದಿ, ಮಹಾನವಮಿ, ದೀಪಾವಳಿ ಮುಂತಾದ ಪ್ರತಿಯೊಂದು ಪ್ರತಿಯೊಂದು ಹಬ್ಬ ಹರಿ-ದಿನಗಳೂ ತಮ್ಮದೇ ಆದ ಶಿಷ್ಟ ನ್ನೆಲೆಯನ್ನು ಒಳಗೊಂಡಿರುವ ಪ್ರಾಯಲೋಪವಾಗಿರುವ ಪ್ರಾಚೀನ ಘಟನೆಯ ಪ್ರತೀಕಗಳಾಗಿವೆ.

ಪ್ರಸ್ತುತ ಸಮಯದಲ್ಲಿ ಶಿವರಾತ್ರಿ ಶಿವರಾತ್ರಿಯ ಬಗ್ಗೆ ಸಂಕ್ಷಿಪ್ತ ಸತ್ಯ ಪರಿಚಯ ವಿಶ್ವದ ಪ್ರತಿಯೊಬ್ಬ ಮಾನವನಿಗೂ ಅದರಲ್ಲಿಯೂ ಭಾರತೀಯನಿಗೆ ಅತ್ಯವಶ್ಯಕವೆಂದರೆ. ಅತಿಶಯೋಕ್ತಿಯಲ್ಲ.

ಶಿವರಾತ್ರಿಯಂದೇ ಶೇಷ ಭಕ್ತಿ ಏಕೆ? ಭಾರತೀಯರು ತಾವು ಆಚರಿಸುವ ಯಾವುದೇ ಹಬ್ಬ ಹರಿ-ದಿನಗಳಿಗಿಂತ ಶಿವರಾತ್ರಿಯನ್ನು ಬಹು ಮಹತ್ವವೆಂದು ನಂಬುತ್ತಾರೆ. ಶಿವರಾತ್ರಿಯ ಹಬ್ಬದ ದಿನದಂದು ಭಕ್ತರು ಪತಿತಪಾವನ ಪರಮಪಿತ, ಶ್ವಪಿತ, ಸರ್ವಜ್ಞ, ಸರ್ವ ಶಕ್ತಿವಂತ ಜ್ಯೋತಿರ್ಲಿಂಗ ಸ್ವರೂಪನಾದ ಶಿವಪರಮಾತ್ಮನ ಪ್ರೀತ್ಯರ್ಥವಾಗಿ ಶಿವಲಿಂಗಕ್ಕೆ ಭಕ್ತಿಪೂರ್ವಕ ಕ್ಷೀರಾಭಿಷೇಕ, ಪಂಚಮೃತಾಭಿಷೇಕ, ರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚನೆ, ಸಹಸ್ರ ನಾಮಾವಳಿ ಶಿವಭಜನೆ, ಶಿವ ಪುರಾಣ, ಶಿವ ಕೋಟಿ, ಜಪ ಯಜ್ಞ, ಪಾರಾಯಣ, ಶಿವ ಕಥಾ ಶ್ರವಣಗಳನ್ನು ಬಹಳ ಭಕಿಯ್ತಿಂದ, ಉಪವಾಸದಿಂದ, ಜಾಗರಣೆಯಿಂದ ಮಾಡುತ್ತಾರೆ.

ಶಿವಮಂದಿರ ಇರುವಡೆಯಲ್ಲಿ ಉತ್ಸವ, ರಥೋತ್ಸವ, ತೇರು, ಜಾತ್ರೆಗಳೂ ನಡೆಯುತ್ತವೆ. ಶಿವರಾತ್ರಿಯಂದು ಹಲವಡೆಗಳಲ್ಲಿ ಲಕ್ಷ ದೀಪಾರಾಧನೆ, ಕೋಟಿ ದೀಪಾರಾಧನೆಗಳನ್ನು ಶಿವನ ಮಂದಿಗಳಲ್ಲಿ ಶಿವನ ಭಕ್ತರು ನಡೆಸುತ್ತಾರೆ. ಶಿವರಾತ್ರಿಯ ದಿನದಂದು ಶಿವನ ಮಂದಿರಕ್ಕೆ ದರ್ಶನಾರ್ಥವಾಗಿ ಹೋಗದಿರುವಂತಹ ಭಾರತೀಯನೇ ಇಲ್ಲ. ಶಿವರಾತ್ರಿಯ ದಿನದಂದು ಶಿವಲಿಂಗ ಸ್ಥಾಪನೆಗೆ ಬಹಳ ಮಹತ್ವವನ್ನು ಕೊಡುತ್ತಾರೆ. ಶಿವರಾತ್ರಿಯಲ್ಲಿ ಅನೇಕ ಶುಭ ಕಾರ್ಯಗಳನ್ನು ಮಾಡುವುದಲ್ಲದೇ ರುದ್ರಯಜ್ಞ-ಯಾಗ, ದಾನ, ಪುಣ್ಯ, ಜಪ-ತಪಗಳಲ್ಲಿ, ಭಜನೆಗಳಲ್ಲಿ ಜನ ತಲ್ಲೀನರಾಗುತ್ತಾರೆ. ಸರ್ವೇಶ್ವರನೂ, ಸರ್ವರ ಕಲ್ಯಾಣಕಾರಿಯೂ ಆಗಿರುವ ಶಿವ ಪರಮಾತ್ಮನಿಗೆ ಪೂಜೆಯನ್ನು ಪ್ರತಿದಿನಗಳಲ್ಲಿ, ಪ್ರತಿದಿನದ ತ್ರಿಕಾಲಗಳಲ್ಲಿ ಮಾಡುತ್ತಾ ಬಂದಿದ್ದರೂ ಸಹ ಶಿವರಾತ್ರಿಯಂದೇ ಈ ಶೇಷ ಆಚರಣೆ ಏಕೆ?!!! ಎಂಬುದು ಪ್ರತಿಯೊಬ್ಬರಿಗೂ ಕುತೂಹಲಕಾರಿ ಷಯವಾಗಿಲ್ಲವಲ್ಲ! ಏಕೆ? ಈ ಸ್ಥಿತಿ.

ಶಿವರಾತ್ರಿಯಂದು ಯಾರಾದರೂ ಮರಣ ಹೊಂದಿದರೆ ಅವರನ್ನು ಶಿವನು ತಮ್ಮ ಶಿವ ಗಣಗಳಲ್ಲಿ ಸೇರಿಸಿಕೊಳ್ಳಲು ಕೈಲಾಸಕ್ಕೆ ಕರೆದೊಯ್ದನೆಂದು ಆಗ ಅವರು ಶಿವಾರ್ಪಿತರಾದರೆಂದು ತಿಳಿಸುವ ಶಿವಪುರಾಣಗಳನ್ನು ಭಾರತೀಯರು ನಂಬಿದ್ದಾರಲ್ಲವೇ?

ವಿಶ್ವೇಶ್ವರನಾದ ಶಿವಪರಮಾತ್ಮನು ಶಿವರಾತ್ರಿಯಂದು ಬಂದು ಭಕ್ತರ ಭಕ್ತಿಪೂರ್ವಕ ಸೇವೆಯನ್ನು ಮೆಚ್ಚಿ, ಭಕ್ತರನ್ನು ರೋಗರುಜಿನ ಕೇಡು, ದುಃಖ, ಭಯ, ದಾರಿದ್ರ್ಯ, ಭೂತ-ಪ್ರೇತಗಳ ಕಾಟ, ಅಪಮೃತ್ಯು ಇತ್ಯಾದಿ ಅಶಾಂತಿಯ ಅಲೆದಾಟಗಳಿಂದ ಹಾಗೂ ಭಯಾನಕ ರಾಕ್ಷಸೀ ಗುಣಗಳಿಂದ ಕಾಮ, ಕ್ರೋದ, ಲೋಭ, ಮೋಹ, ಅಹಂಕಾರಗಳಿಂದ ಮಾಯೆಯ ಬಲೆುಂದ ಬಿಡಿಸಿ ತಮಗೆ ಅಯಸ್ಸು, ಆರೋಗ್ಯ, ಐಶ್ವರ್ಯ, ಸುಖ-ಶಾಂತಿಯಾದಿಯಾಗಿ ಮುಕ್ತಿ ಜೀವನ್ಮುಕ್ತಿಗಳನ್ನು ಸದಾಕಾಲದಗಳವರೆಗೆ ಸದಾಶಿವನು ದಯಾಪಾಲಿಸುತ್ತಾನೆಂಬ ಆರ್ಯರ ಅನುಭವ ಸುಳ್ಳೇ? ಸಹಸ್ರಾರು ವರ್ಷಗಳಿಂದ ದಿನನಿತ್ಯ ತ್ರಿಕಾಲಪೂಜೆಗಳನ್ನು ಮಾಡುತ್ತಾ, ಶಿವತಂದೆಗೆ ಪತಿತಪಾವನನೇ ಬಾ ಪಾಪದ ಪ್ರಪಂಚದಿಂದ ಬಿಡುಗಡೆ ಮಾಡಿ ನಿಮ್ಮ ಬಳಿಗೆ ನಮ್ಮನ್ನು ಕರೆದುಕೊಂಡು ಹೋಗೆಂದು ನಿಮಂತ್ರಣ ಕೊಟ್ಟಿದ್ದಕ್ಕಾಗಿ, ಶಿವರಾತ್ರಿಯಂದು ಶಿವನು ಬಂದು ಬೇಡಿ-ಬೇಡಿದವರಿಗೆ ಬೇಡಿದ್ದನ್ನೆಲ್ಲಾ ನೀಡುತ್ತಾನೆಂದು ಭಕ್ತರು ನಿಶುcಸಿಕೊಂಡು ಶಿವರಾತ್ರಿಯಂದು ಶೇಷ ಭಕ್ತಿ ಮಾಡುತ್ತಿರುವಲ್ಲಿ ಆಶ್ವರ್ಯ ವೇನಿದೆ!! ಆದರೆ ಬೇರಾವ ಸಮಯಗಳಿಗಿಂತಲೂ ಶಿವರಾತ್ರಿಯಂದೇ ಶಿವನು ಬರುವುದಾದರೆ ಅಂತಹ ಶಿವರಾತ್ರಿ ಹಿಂದೆ ಎಂದೋ ನಡೆದಿತ್ತು. ಈಗ ಅಂತಹ ಶಿವರಾತ್ರಿ ಪುನಃ ನಡೆಯುತ್ತಿದೆಯೇ? ಶಿವನಿಗೂ, ರಾತ್ರಿಗೂ ಇರುವ ಸಂಬಂಧವೇನು? ಶಿವನು ಬರುವ ಅಂತಹ ರಾತ್ರಿಯನ್ನು ನಾವು ನಿರ್ಧರಿಸುವುದು ಹೇಗೆ? ಶಿವನು ಬರುವ ಅಂತಹ ರಾತ್ರಿ ನಮಗೆ ತಿಳಿದರೂ ಶಿವನ ದರ್ಶನ ನಮಗೆ ಆಗುತ್ತದೆಯೇ? ಶಿವರಾತ್ರಿಯಲ್ಲಿ ಬರುವ ಶಿವ ಪರಮಾತ್ಮನನ್ನು ದರ್ಶನ ಮಾಡಿ ಈಶ್ವರೀಯ ಜನ್ಮ ಸಿದ್ದ ಅಧಿಕಾರವನ್ನು ಪುನಃ ಪಡೆಯಿರಿ.

ಪ್ರತಿದಿನದ 24 ಘಂಟೆಗಳಲ್ಲಿ 12 ಘಂಟೆಗಳು ರಾತ್ರಿ ಇರುತ್ತದೆ. ಸೂರ್ಯ ಇಲ್ಲದ ಸಮಯಕ್ಕೆ ರಾತ್ರಿ ಎನ್ನುತ್ತಾರೆ. ಅಂದಕಾರದ ಸಮಯವೇ ರಾತ್ರಿ. ರಾತ್ರಿಯಲ್ಲಿ ಎತ್ತೆತ್ತಲೂ ಕತ್ತಲು ಕದಿರುತ್ತದೆ. ಬೆಳಕು ತೊಲಗಿರುತ್ತದೆ. ಇದೇ ರಾತ್ರಿ ಆದರೆ ಶಿವರಾತ್ರಿ ಪೃಥ್ವಿಯು ಸೂರ್ಯನ ಸುತ್ತಲೂ ಸುತ್ತುವಾಗ 24 ಘಂಟೆಗಳಲ್ಲಿ ಪ್ರಕಟವಾಗುವ ರಾತ್ರಿಯ ರಾತ್ರಿಯಂತೆ ಅಲ್ಲ ಹಾಗೇನಾದರೂ ಪ್ರತಿದಿನ ಸೂರ್ಯಾಸ್ತ ಸಮೀಪಿಸಿದಾಗ ಬರುವ ರಾತ್ರಿ ಶಿವರಾತ್ರಿ ಆಗುತ್ತಿದ್ದರೆ ದಿನ ಪ್ರತಿದಿನ ಎಲ್ಲಾ ರಾತ್ರಿಗಳು ಶಿವರಾತ್ರಿಗಳಾಗುತ್ತಿದ್ದವು. ಶಿವರಾತ್ರಿಯ ರಾತ್ರಿಯೇ ಬೇರೆ ಸೂರ್ಯಾಸ್ತವಾದ ನಂತರದ ಅಂಧಕಾರದ ರಾತ್ರಿ ಇದಾಗಿರದೇ, ಆಧ್ಯಾತ್ಮಿಕ ದೃಷ್ಟಿಕೋನದಿಂದಲೂ ನೋಡಿದಾಗ ಸೂರ್ಯನ ಬೆಳಕಿರುವಾಗಲೂ ಅಜ್ಞಾನವೆಂಬ ಕತ್ತಲು ಜನರಲ್ಲಿ ಕದಿರುತ್ತದೆ. ಅಜ್ಞಾನ – ಅಂಧಕಾರ ಆವರಿಸಿರುವ ರಾತ್ರಿ ಇದಾಗಿರುತ್ತದೆ. ಎಲ್ಲಾ ಮಾನವರು ಯಾವಾಗ ಅಧರ್ಮ, ಅನ್ಯಾಯ, ಅನೀತಿ, ಅನೈತಿಕತೆ, ಅರಾಜಕತ್ವ, ಅಶಾಂತಿ ಅತ್ಯಾಚಾರ, ಅನಾಚಾರ, ಬ್ರಷ್ಠಾಚಾರದಲ್ಲಿ ಮುಳುಗಿ ಧರ್ಮ-ಭ್ರಷ್ಟ, ಕರ್ಮ-ಭ್ರಷ್ಟರಾಗಿ ಅಜಾnನವೆಂಬ ಅಂಧಕಾರದಲ್ಲಿ ತೊಳಲುವರೋ; ಕಣ್ಣದ್ದೂ ಕಣ್ಣು ಕಾಣದ ಕುರುಡರಂತೆ ವರ್ತಿಸುವರೋ, ಅಂತಹ ಅಜ್ಞಾನದ ರಾತ್ರಿಯೇ ಕರಾಳರಾತ್ರಿ. ಎಲ್ಲಿ ಕಾಮ, ಕ್ರೋದ, ಲೋಭ, ಮೋಹ, ಅಹಂಕಾರ ತುಂಬಿ ತುಳುಕುತ್ತಿವೆಯೋ; ಎಲ್ಲಿ ಅಧಿಕಾರ ಲಾಲಸೆ, ಕಾಳಸಂತೆ, ಲಂಚ, ವಂಚನೆ, ಸರ್ವವ್ಯಾಪಿ ಆಗಿವೆಯೋ. ಜಾತೀಯತೆ, ಪ್ರಾಂತೀಯಂತೆ, ಭಾಷಾಗೊಂದಲ, ಮೂಡನಂಬಿಕೆ, ಅಂಧ ವಿಶ್ವಾಸಗಳಲ್ಲಿ ಮನುಷ್ಯಾತ್ಮರು ಸಿಕ್ಕಿ ತಲ್ಲಣಿಸುತ್ತ ದಾರಿಗಾಣದೆ ತಡಕಾಗುತ್ತಾರೋ ಅದೇ ಅಜಾnನಂದಾಕಾರದ ರಾತ್ರಿ ಶಿವರಾತ್ರಿ ಆಗಿದೆ. ಇದೇ ಗೀತೆಯಲ್ಲಿ ವರ್ಣಿಸಿರುವ ದರ್ಮಗ್ಲಾನಿ(ನಿಂದನೆ)ಯ ಸಮಯ ಇದೇ ಆಗಿದೆ.

ಈ ಎಲ್ಲಾ ಸಂಕಷ್ಟಗಳಿಂದ ಪಾರುಮಾಡು ತಂದೆ ಎಂದು ಜನಸಾಮಾನ್ಯರು, ಸಾಧು, ಸಜ್ಜನರು, ಭಗವಂತನಿಗೆ ಮೊರೆ ಇಡುವರೋ ಇದೇ ಘೋರರಾತ್ರಿ ಅದೇ ಶಿವರಾತ್ರಿ. ಮಹಾಶಿವರಾತ್ರಿ ಅಜಾnನದ ಅಂಧಕಾರವನ್ನು ತೊಲಗಿಸಿ, ವಿಶ್ವಕ್ಕೆ ಸತ್ಯ ಜಾnನಪ್ರಕಾಶವನ್ನು ದಯಪಾಲಿಸಲು ಜ್ಞಾನಸೂರ್ಯನಾದ ಪರಮಾತ್ಮನ ಆಗಮನವೇ ಸತ್ಯ ಶಿವರಾತ್ರಿ. ಏಕೆಂದರೆ ಜ್ಞಾನಸಾಗರನೂ ಜ್ಞಾನ ಪ್ರಕಾಶದಿಂದ ತೊಲಗಿಸಬಲ್ಲವನಾಗಿದ್ದಾನೆ, ಅಜಾnನಾಂಧಕಾರದ ಮಹಾರಾತ್ರಿಗೂ ಮತ್ತು ಜ್ಞಾನಸೂರ್ಯನಾದ ಶಿವಪರಮಾತ್ಮನ ಆಗಮನಕ್ಕೂ ಸಂಬಂಧವನ್ನು ಸೂಚಿಸುವ ಶಬ್ದವೇ ಮಹಾಶಿವರಾತ್ರಿ.

ಅಜ್ಞಾನದ ಅಂದಕಾರವನ್ನು ತೊಲಗಿಸಿ ಸತ್ಯ ಜ್ಞಾನಪ್ರಕಾಶವನ್ನು ವಿಶ್ವಕ್ಕೆ ದಯಪಾಲಿಸಲು ಜ್ಞಾನ ಸೂರ್ಯನಾದ ಪರಮಾತ್ಮನ ಆಗಮನವೇ ಸತ್ಯ ಶಿವರಾತ್ರಿ ಆಗಿರುತ್ತದೆ. ವಿಷ್ಣು ರಾತ್ರಿ, ರಾಮನರಾತ್ರಿ, ಕೃಷ್ಣನರಾತ್ರಿ, ಎಂದು ಯಾರು ಕರೆಯುವುದಿಲ್ಲ. ಆದರೆ ಶಿವರಾತ್ರಿ ಎಂದೇ ಕರೆಯಲಾಗುತ್ತದೆ. ಏಕೆಂದರೆ ಜಾnನಸಾಗರನೂ ಸರ್ವಜ್ಞನೂ ಆಗಿರುವ ಶಿವಪರಮಾತ್ಮನೊಬ್ಬನೇ ಅಜಾnನ ಅಂಧಕಾರದ ರಾತ್ರಿಯನ್ನು ತನ್ನ ಜಾnನಪ್ರಕಾಶದಿಮದ ತೊಲಗಿಸಬಲ್ಲನನಾಗಿದ್ದಾನೆ. ಅಜ್ಞಾನಾಂಧಕಾರದ ಮಹಾರಾತ್ರಿಗೂ ಮತ್ತು ಜ್ಞಾನಸೂರ್ಯನಾದ ಪರಮಾತ್ಮನ ಆಗಮನಕ್ಕೂ ಸಂಬಂಧ ಸೂಚಿಸುಚ ಶಬ್ದವೇ ‘ಮಹಾಶಿವರಾತ್ರಿ’ ವಿಶ್ವಕಲ್ಯಾಣಾರ್ಥವಾಗಿ ಶಿವಪರಮಾತ್ಮನು ಪ್ರತಿ 5000 ವರ್ಷಗಳ ಸೃಷ್ಟಿ ಚಕ್ರದ ಅಂತಿಮ ಸಮಯದಲ್ಲಿನ ಶಿವರಾತ್ರಿಯ ಜ್ಞಾಪಕಾರ್ಥವಾಗಿ ಅರ್ಥಾತ್‌ ಪ್ರತಿ ಕಲಿಯುಗದ ಅಜ್ಞಾನ ಅಂದಕಾರದ ಅಂತಿಮ ಸಮಯದಲ್ಲಿ ಅವತರಣೆಯ ಜ್ಞಾಪಕಾರ್ಥವಾಗಿ ಭಕ್ತರು ದ್ವಾಪರಯುಗದಿಂದ (2500) ವರ್ಷಗಳಿಂದ ಭಾರತೀಯ ವರ್ಷದ ಕಡೆ ತಿಂಗಳಾದ ಪಾಲ್ಗುಣ ಮಾಸದಲ್ಲಿನ ಕೃಷ್ಣ ಪಕ್ಷದ 14ನೇ ರಾತ್ರಿಯ ಪೂರ್ಣಾಂದಕಾರದ ವೇಳೆಯನ್ನು ರಾತ್ರಿಯ ಸಂಕೇತವಾಗಿಟ್ಟುಕೊಂಡು ಪ್ರತಿವರ್ಷ ಶಿವರಾತ್ರಿಯನ್ನು ಆಚರಿಸುತ್ತಿದ್ದಾರೆ.

ವಿಶ್ವದಲ್ಲಿ ಅಜ್ಞಾನದ ಕಾಳರಾತ್ರಿಯ, ಕಲಿಯುಗದ ಅಂತಿಮ ಪಾದವಾದ ಇಲ್ಲಿಯವರೆಗೆ ಅವತರಿಸಿರುವ ಅನೇಕ ಮಾನವರಾಗಲಿ, ಮಹಾತ್ಮರಾಗಲಿ ಸಂಪೂರ್ಣ ವಿಶ್ವ ಶಾಂತಿಯನ್ನು ದೊರಕಿಸಲಾಗಿಲ್ಲವೆಂಬುದು ಬಹಿರಂಗ ರಹಸ್ಯ ಅನೇಕ ಸಾಧು-ಸಂತ ಮಹಾತ್ಮರೂ, ಧರ್ಮಗುರುಗಳು ಈ ಸೃಷ್ಟಿಯಲ್ಲಿ ಬಂದು ಮರಳಿದರು, ಅಂದಿನಿಂದ ಇಂದಿನವರೆಗೆ ವಿಶ್ವ ಶಾಂತಿಗಾಗಿ ವಿಶ್ವ ಸಂಸ್ಥೆ ಸ್ಥಾಪನೆಯಾುತು. ಆದರೆ ವಿಶ್ವವು ಶಾಂತಿಗೆ ಬದಲಾಗಿ ಅಶಾಂತಿಯ ಕಡಲನ್ನು ತಲುಪಿತು. ಸಾಧು, ಸಂತ, ಮಹಾತ್ಮರು, ಜಾnನಿಗಳು ರಾಜಕಾರಣಿಗಳು, ಜ್ಯೋತಿಗಳು, ಜನಸಾಮಾನ್ಯರು, ಭಕ್ತರು, ಸುಖ-ಶಾಂತಿಯ ಮಾರ್ಗ ಕಾಣದಾದರು, ವಿಶ್ವದಲ್ಲಿ ಶಾಂತಿಯನ್ನು ಶ್ವಪಿತ, ಪರಮಪಿತ ಪರಮಾತ್ಮ ಸ್ಥಾಪಿಸಬಲ್ಲವನಲ್ಲದೇ ಬೇರೆ ಶರೀರಧಾರಿಗಳಿಂದ ಸಾಧ್ಯವಿಲ್ಲ ಎಂಬುದು ಬರಂಗ ಸತ್ಯ, ವಿಶ್ವಕಲ್ಯಾಣಾರ್ಥವಾಗಿ, ಪರಮಾತ್ಮನೇ ಆಗುಸಬೇಕಾಗುತ್ತದೆ ಎಂಬುದನ್ನು ಸರ್ವ ಧರ್ಮದವರು ಒಪ್ಪುತ್ತಾರೆ ಧರ್ಮ ಗ್ರಂಥಗಳು ಒಪ್ಪುತ್ತವೆ.

ಶಿವ ಪರಮಾತ್ಮ ತಪಸ್ವೀ ಶಂಕರ
ಶಿವನು ಅಶರೀರ, ಆಕಾಯ ———— ಶಂಕರ ಸೂಕ್ಷ್ಮ ದೇಹದಾರಿ
ಅವ್ಯಕ್ತ ಜ್ಯೋತಿಸ್ವರೂಪನು.
ತ್ರಿಮೂರ್ತಿಗಳಾದ ಬ್ರಹ್ಮಾ —————ಶಂಕರ ತ್ರಿಮೂರ್ತಿಗಳಲ್ಲಿ
ವಿಷ್ಣು, ಶಂಕರರ ರಚೈತ.
ಯೋಗೇಶ್ವರ —————– ಯೋಗಿ
ಕಲ್ಯಾಣ ಕಾರಿ —————– ನಾಶಕಾರಿ
ಪರಮಧಾಮ ನಿವಾಸಿ ————– ಸೂಕ್ಷ್ಮಲೋಕ ವಾಸಿ
ಎಲ್ಲಾ ಪ್ರಾಚೀನ ಗುಡಿಗಳಲ್ಲಿ ———— ಇತ್ತೀಚಿನ ಗುಡಿಗಳಲ್ಲಿ
ಶಿವಲಿಂಗವನ್ನಿಡಲಾಗಿದೆ ————- ಮಾತ್ರ ಶಂಕರನ ಚಿತ್ರ ಸ್ಥಾಪಿಸಲಾಗಿದೆ.

ಪರಮಪಿತ ಶಿವಪರಮಾತ್ಮನ ಯತಾರ್ಥ ಮಹಿಮೆಗಳು :-
1.ವಿಶ್ವನಾಥ :- ವಿಶ್ವದ ಸ್ಥಿತಿ-ಲಯಗಳಿಗೆ ಅಧಿಪತಿಯಾದ ಪರಮಾತ್ಮನಿಗೆ ವಿಶ್ವನಾಥ, ವಿಶ್ವೇಶ್ವರ ಎಂಬ ಹೆಸರಿದೆ. ಕಾಶಿಯಲ್ಲಿ ಮೊಟ್ಟ ಮೊದಲು ಆವತರಿಸಿದ್ದರಿಂದ ಕಾಶಿ ವಿಶ್ವನಾಥ ಎನ್ನುವ ಮಹಿಮೆ ಇದೆ.

2. ಅಮರನಾಥ : ಪರಮಾತ್ಮನು ಶಾಶ್ವತನು, ಅವನು ಅರ್ಥಾತ್‌ ಅಮರನು ಆಗಿದ್ದಾನೆ. ನಂಬಿದ ಮಾನವರಿಗೆ ಅಮರ ಪದಯ ನೀಡುವನಾಗಿದ್ದಾನೆ. ಆದ್ದರಿಂದ ಪರಮಾತ್ಮನಿಗೆ ಅಮರೇಶ್ವರ ಅಮರನಾಥ ಎಂಬ ಮಮೆ ಇದೆ.

3. ಶಾಂತಿಸಾಗರ : ಸುಖಸಾಗರ,. ಪ್ರೇಮಸಾಗರ, ದಯಾಸಾಗರ ಹಾಗೂ ಕಲ್ಯಾಣಕಾರಿ ಗುಣಗಳಿಗೆ ಶಿವಪರಮಾತ್ಮನು ಸಾಗರನಾಗಿದ್ದಾನೆ. ಬೇಡಿ ಬೇಡದ ಮಾನವನಿಗೆ ಶಾಂತಿ, ಸುಖ, ಪ್ರೇಮ, ದಯೆಗಳನ್ನು ನೀಡುತ್ತಾನೆ.

4. ಪತಿತ ಪಾವನ : ಪತಿತವಾದ ಸೃಷ್ಟಿಯನ್ನು (ಮಾನವನ್ನು) ತಾನು ಪಾವನ ಮಾಡುವುದರಿಂದ ಪತಿತ ಪಾವನ ಎಂದು ಮಹಿಮೆ ಪರಮಾತ್ಮನಿಗೆ ಮಹಿಮೆ ಇದೆ.

5. ಜ್ಞಾನೇಶ್ವರ : ಪರಮಾತ್ಮನ ಜ್ಞಾನನೇತ್ರವೆಂಬ ತ್ರಿನೇತ್ರವನ್ನು ನೀಡುವ ತ್ರಿಕಾಲದರ್ಶಿ ಆಗಿದ್ದಾನೆ. ಪರಮಾತ್ಮನು ಶ್ವದ ಆದಿ, ಮದ್ಯ, ಅಂತ್ಯಗಳನ್ನು ಸೃಷ್ಟಿ – ಸ್ಥಿತಿ – ಲಯಗಳನ್ನು ತಿಳಿದಿದ್ದಾನೆ. ವಿಶ್ವದ ಸಕಲ ಜೀವಾತ್ಮರ ಹಿಂದಿನ, ಇಂದಿನ ಹಾಗೂ ಮುಂದಿನ ಆಗ ಹೋಗುಗಳನ್ನು ಅರಿತಿದ್ದಾನೆ. ಆದ್ದರಿಂದ ಪರಮಾತ್ಮನಿಗೆ ಜ್ಞಾನೇಶ್ವರನೆಂಬ ಮಹಿಮೆ ಇದೆ. ಶರೀರಧಾರಿ ಮನುಷ್ಯಾತ್ಮನು ತನ್ನ ಮಕ್ಕಳಿಗೆ ತಂದೆ ಆದಾಗ ತನ್ನಲ್ಲಿರುವ ಭೂಮಿು, ಕನಕ, ವಸ್ತು, ವಾಹನ, ಅನ್ನ, ವಸ್ತ್ರ, ವಸತಿಗಳನ್ನು ಕೊಡುತ್ತಾನೆ. ಇವೆಲ್ಲವೂ ನಶ್ವರವಾದ ತಂದೆುಂದ ಅಲ್ಪಕಾಲಕ್ಕಾಗಿ ಸಿಗುತ್ತವೆ. ಅಮರನಾದ ಅಮರನಾಥನಿಂದ ಶಾಶ್ವತವಾದ ಆಸ್ತಿಯನ್ನು ನೀಡಲಾರರು. ಏಕೆಂದರೆ ಋಶಿಯಿುಂದ ರಾಜನವರೆಗೆ ಎಲ್ಲಾ ಮಾನವರು ಪರಮಾತ್ಮನಿಂದ ಬೇಡುವವರಾಗಿದ್ದಾರೆ. ಭೂದಾನ, ಹಿರಣ್ಯದಾನ, ಗೋದಾನ, ಕನ್ಯಾದಾನ, ಅನ್ನದಾನ ಮುಂತಾದ ಎಲ್ಲಾ ದಾನಗಳಲ್ಲಿ ಜ್ಞಾನದಾನವೇ ಮಾನವನು ಪಶು ಸಮಾನ ಜ್ಞಾನವೇ ವಿಶ್ವದಲ್ಲಿನ ಎಲ್ಲ ಐಶ್ವರ್ಯಗಳಲ್ಲಿ ಪರಮ ಶ್ರೇಷ್ಟವಾದದು. ಜ್ಞಾನಿಯೇ ಸಕಲರಿಗೂ ಪ್ರಿಯನು, ಆದ್ದರಿಂದ ನಹಿ ಜ್ಞಾನೇನ ಸದೃಶ್ಯಂ ಜ್ಞಾನಕ್ಕೆ ಸರಿಸಮಾನವಾದುದು ಯಾವುದೂ ಇಲ್ಲ ಎಂದು ಭಗವದ್ಗೀತೆ ಸಾರುತ್ತಿದೆ. ವಿಶ್ವದ ಎಲ್ಲಾ ಮಾನವರಿಗಿಂತ, ಭಕ್ತಿಗಿಂತ, ಯೋಗಿಗಳಿಗಿಂತ ಜ್ಞಾನಿಯೇ ಭಗವಂತನಿಗೆ ಅತೀಪ್ರಿಯನೆಂದು ಗೀತಾ ಜಾnನದಾತನಾದ ಪರಮಾತ್ಮ ಶಿವ ತಿಳಿಸುತ್ತಾನೆ. ಜ್ಞಾನಸಾಗರವಾದ ಭಗವಂತನಿಂದ ಪ್ರಾಪ್ತಿಮಾಡಿಕೊಳ್ಳಬಹುದಾದ ಈಶ್ವರೀಯ ಜನ್ಮಸಿದ್ದ ಅಧಿಕಾರ ಜ್ಞಾನವೇ ಪರಮ ಶ್ರೇಷ್ಟ ಜ್ಞಾನಗಳಲ್ಲಿ ಹಲವು ವಿಜ್ಞಾನ, ಸಮಾಜ ಜ್ಞಾನ, ಅರ್ಥಜ್ಞಾನ, ಬೌತ ಜ್ಞಾನ, ಒಂದೊಂದು ಜ್ಞಾನವು ಒಂದೊಂದು ಕಡೆ ಅರಿವನ್ನು ಮೂಡಿಸುತ್ತದೆ. ಪರಮಾತ್ಮ ತಿಳಿಸುವ ಜಾnನ ರುದ್ರಜ್ಞಾನ ಆಗಿದೆ. ಸಮಸ್ತ ಜ್ಞಾನವನ್ನು ಪರಮಾತ್ಮ ತಿಳಿಸುತ್ತಾರೆ. ಜಗತ್ತಿನ ಈ ರೀತಿಯಾಗಿ ಅಜ್ಞಾನಿಗಳಾದಾಗ ಜಗನ್ನಾಥನು ಈ ಜ್ಞಾನವನ್ನು ಜಗತ್ತಿನ ಜನತೆಗೆ ನೀಡುವ ಸಮಯ ಇದೇ ಆಗಿದೆ. ಆ ಕಾರ್ಯಕ್ಕಾಗಿ ಪ್ರಜಾಪಿತ ಬ್ರಹ್ಮಾ ರವರ ಶರೀರದಲ್ಲಿ ಶಿವಪರಮಾತ್ಮನು ವಿಶ್ವ ಕಲ್ಯಾಣಾರ್ಥವಾಗಿ ಸರ್ವ ಶ್ರೇಷ್ಟವಾದ ತ್ರಿಕಾಲ ಜ್ಞಾನವನ್ನು ಶಿವಭಕ್ತರಿಗೆ ಅನುಗ್ರಸಿದ್ದನೆಂದು ಶಿವ ಪುರಾಣ ಸಾರುತ್ತಿದೆ. ಈಶ್ವರನಿಂದ ಭೋದಿಸಲ್ಪಟ್ಟ ಈಶ್ವರೀಯ ಜನ್ಮಸಿದ್ದ ಅಧಿಕಾರದಲ್ಲಿ ಶ್ರೇಷ್ಟವಾದ ತ್ರಿಕಾಲಜ್ಞಾನವನ್ನು ಜನತೆ ಹೊಂದಿದಾಗ, ಅಜ್ಞಾನ ತೊಲಗಿ ಮಹಾಶಿವರಾತ್ರಿ ಆಗುತ್ತದೆ. ಅದರ ಕುರುಹನ್ನೇ ಇಂದಿಗೂ ಆಚರಿಸಲ್ಪಡುತ್ತಿರುವ ಶಿವರಾತ್ರಿ

6. ಶಿವರಾತ್ರಿ ಆಚರಿಸಲಿಕ್ಕಾಗಿ ಪರಮಾತ್ಮನು ಈಶ್ವರೀಯ ಜ್ಞಾನವನ್ನು ಜನತೆಗೆ ಭೋದಿಸಬೇಕು. ಯಾರೇ ಆಗಲಿ ಏನನ್ನೇ ಆಗಲೀ ಭೋದಿಸಲು ಶರೀರಲ್ಲದೆ ಜನತೆಗೆ ತಿಳಿಸಲು ಆಗುವುದಿಲ್ಲ. ಕೇಳುವವರಿಗೂ ಶರೀರಬೇಕು ಹೇಳುವವರಿಗೂ ಶರೀರ ಬೇಕೇ ಬೇಕು. ಈಶ್ವರನು ಜನನಮರಣ ರಹಿತನು. ಅಯೋನಿಜನು, ಅಶರೀರ ಆಗಿರುವ ಕಾರಣ ತನ್ನದೇ ಶರೀರವನ್ನು ಹೊಂದಿಲ್ಲದಿರುವ ಕಾರಣ, ಬೇರೊಬ್ಬರ ಶರೀರವನ್ನು ಎರವಲು ಪಡೆಯಬೇಕಾಗುತ್ತದೆ. ಪಡೆಯಬೇಕಾದರೆ ಪರಕಾಯ ಪ್ರವೇಶ ಮಾಡಬೇಕಾಗುತ್ತದೆ. ಅನ್ಯತಾ ಮಾರ್ಗವಿಲ್ಲಾ. ಶಿವಪರಮಾತ್ಮನು 1936ರಲ್ಲಿ ದಾದಾ ಲೇಖರಾಜ್‌ ಎಂಬ ಮಾನವನ ಶರೀರವನ್ನು ಆಧಾರ ಪಡೆದನು. ಎಂದಿನ ದಿನ ಶರೀರವನ್ನು ಆಧಾರವಾಗಿ ಪಡೆದನೋ ಅಂದಿನ ದಿನ ಪ್ರಜಾಪಿತ ಬ್ರಹ್ಮಾ ಎಂದು ದಿವ್ಯ ನಾಮಕರಣ ಮಾಡದನು. ಪರಕಾಯ ಪ್ರವೇಶ ಮಾಡಿ ಪ್ರಜಾಪಿತ ಬ್ರಹ್ಮನ ಮುಖಕಮಲದ ಮೂಲಕ ಜ್ಞಾನವನ್ನು ಮಾನವನಿಗೆ ದಾನ ಮಾಡಲು ಪರಮಾತ್ಮ ಶಿವನ ದಿವ್ಯ ಅವತರಣಮಾತು. ಅವತರಣ ಆದ ಮಾತ್ರಕ್ಕೆ ಪರಮಾತ್ಮನಿಗೆ ಪೂರ್ಣ ಶರೀರದ ಅವಶ್ಯಕತೆ ಇಲ್ಲ. ಜಾnನ ಭೋದನೆ ಮಾಡಲು ಕೇವಲ ಶರೀರದಲ್ಲಿನ ಶಿರವೇ ಪ್ರಧಾನ. ಆ ಶಿರಸ್ಸೇ ಶಿವನಿಗೆ ಆಭರಣ. ಆ ಶಿರಸ್ಸನ್ನು ಪರಮಾತ್ಮನು ಧರಿಸಿದನೋ ಅಂದೆ ಮಹಾಶಿವರಾತ್ರಿ. ಹಿಂದೆ ಒಮ್ಮೆ ಇದೇ ರೀತಿ ಕಾರ್ಯವನ್ನು ಮಾಡಿದ್ದರೆ ಗುರುತಾಗಿ ಇಂದಿಗೂ ಶಿವರಾತ್ರಿ. ಆಚರಣೆಯಲ್ಲಿದೆ. ಆ ಶಿರದ ನೆನಪಿನಾರ್ಥವಾಗಿ ಆ ಮಾನವನ ಮುಖಾಭರಣವನ್ನು ಶಿವಲಿಂಗಕ್ಕೆ ತೊಡಿಸುತ್ತಾರೆ.ಇದು ಶಿವಲಿಂಗಕ್ಕೆ ಮುಖವಾಡಡುವುದರ ಆದ್ಯಾತ್ಮಿಕ ರಹಸ್ಯ ಆಗಿದೆ.

7. ಬ್ರಹ್ಮನು ಮುಖಾಭರಣವನ್ನು ಸಾಮಾನ್ಯವಾಗಿ ಸದಾಕಾಲಕ್ಕೂ ಶಿವಲಿಂಗಕ್ಕೆ ಧರಿಸದೇ ಶಿವರಾತ್ರಿ ಇತ್ಯಾದಿ ಶೇಷ ಸಂದರ್ಭಗಳಲ್ಲಿ ಮಾತ್ರ ಧರಿಸಿ ಪೂಜಿಸುತ್ತಾರೆ. ಈಗೀಗ ಸದಾ ಧರಿಸುವ ರೂಡಿಯೂ ಇದೆ. ಇದರಿಂದ ಸ್ಪಷ್ಟವಾಗುವುದೇನೆಂದರೆ ಪರಮಾತ್ಮನು ಕೇವಲ ಸೃಷ್ಟಿಯ ಅಜ್ಞಾನ ರಾತ್ರಿಯಲ್ಲಿ ಮಾತ್ರ ಪ್ರಜಾಪಿತ ಬ್ರಹ್ಮನ ಮುಖವನ್ನು ಧರಿಸುತ್ತಾನೆ.

ಪರಮಾತ್ಮನು ವಿಶ್ವದ ತ್ರಿಕಾಲಜ್ಞಾನವನ್ನು ತಿಳಿದಿರುವುದರಿಂದ ಶಿವಲಿಂಗಕ್ಕೆ ಒಂದು ಶೇಷ ನೇತ್ರವನ್ನು ಧರಿಸುತ್ತಾರೆ. ಇದಕ್ಕೆ ತ್ರಿನೇತ್ರ ಎಂದು ಹೇಳಲಾಗುತ್ತದೆ. ತ್ರಿನೇತ್ರವೆಂದರೆ ಮೂರನೇ ಜ್ಞಾನನೇತ್ರವೆಂದರ್ಥವೇ ಹೊರತು ಮೂರು ನೇತ್ರಗಳೆಂದು ಅಲ್ಲ. ಶಿವನಿಗಲ್ಲದೇ ಈ ನೇತ್ರ ಬೇರೆ ಯಾರಿಗೂ ಇಲ್ಲ. ಪರಮಾತ್ಮನು ಮಾನವನ ಮುಖಕಮಲವನ್ನು ಧರಿಸಿದಾಗ, ತ್ರಿಕಾಲ ಜ್ಞಾನವನ್ನು ಈ ಮೂಲಕ ಜನತೆಗೆ ಕೊಟ್ಟ ಸತ್ಯವನ್ನು ಪ್ರತಿಪಾದಿಸುವ ಜಾnನದ ಸಂಕೇತ ಇದಾಗಿದೆ. ಶಿವನು ಮಾನವ ಮುಖದ ಮಸ್ತಕದಲ್ಲಿ ತನ್ನ ಶ್ರೇಷ್ಟ ಸ್ಥಾನವನ್ನು ಸ್ಥಾಪಿಸಿಕೊಂಡು ತ್ರಿಕಾಲ ಜಾnನವನ್ನು ಜನತೆ ಉಪದ್ದೇಶಿಸಿದ್ದರಿಂದ ಪರಮಾತ್ಮನಿಗೆ ಫಾಲಾಕ್ಷ, ಫಾಲನೇತ್ರ ಎಂದು ಹೇಳುತ್ತಾರೆ. ಫಾಲ ಎಂದರೆ ಹಣೆ ಅಕ್ಷ ಎಂದರೆ ನೇತ್ರ ಫಾಲಾಕ್ಷ ಎಂದರೆ ಹಣೆಯಲ್ಲಿ ಕಣ್ಣುಳ್ಳವನೆಂದು ಅರ್ಥ.
ಶಿವನು ಹಣೆ ಕಣ್ಣನ್ನು ತೆರೆದಾಗ ಶ್ವದಲ್ಲಿ ಪಾಪ ಭಸ್ಮ ಆಗುತ್ತದೆ ಎಂಬ ಗಾಯನದ ಅರ್ಥವೇನೆಂದರೆ ಪರಮಾತ್ಮನು ಜಾnನನೇತ್ರವನ್ನು ತೆರೆದಾಗ ಅರ್ಥಾತ್‌ ಜಾnನೋಪದೇಶ ಮಾಡಿದಾಗ ಪಾಪಗಳನ್ನು ರಾಜಯೋಗದಿಂದ ಯೋಗಾಗ್ನಿಯಿಂದ ಭಸ್ಮ ಮಾಡಿಕೊಳ್ಳುವುದಾಗಿದೆ.

ಶಿವಪರಮಾತ್ಮನು ಜ್ಞಾನ ಸಾಗರನಾಗಿದ್ದಾನೆ. ಜ್ಞಾನಗಂಗೆಯು ಅವನ ಬಳಿ ಇದೆ. ಅವನಿಗೆ ಜ್ಞಾನಗಂಗಾಧರನೆಂಬ ಮಮೆ ಇದೆ. ಶಂಕರನು ತ್ರಿಮೂರ್ತಿಗಳಲ್ಲಿ ಒಬ್ಬರು. ಮತ್ತು ಶಿವನ ರಚನೆ ಆಗಿದ್ದರಿಂದ ಶಂಕರನು ಜ್ಞಾನಗಂಗಾಧರನಲ್ಲ ಶಿವಪರಮಾತ್ಮನು ಪ್ರಜಾಪಿತ ಬ್ರಹ್ಮರವರ ಮುಖಧರಿಸಿ ಜ್ಞಾನಗಂಗೆಯ ಮಮೆಯನ್ನು ಜನತೆಗೆ ಉಪದೇಶಿಸಿದ ತ್ರಿಕಾಲಜ್ಞಾನ ರೂಪಿಸುವ ಸಾಂಕೇತಿಕವಾಗಿ ಧಾರಾಪಾತ್ರೆಯನ್ನು ಲಿಂಗದ ಮೇಲೆ ಇಟ್ಟು ಧಾರೆ (ಹನಿಹನಿ) ಯಾಗಿ ಬೀಳುವಂತೆ ಏರ್ಪಡಿಸಲಾಗಿದೆ. ಧಾರಾಪಾತ್ರೆಯಲ್ಲಿನ ನೀರು ಶಿವಲಿಂಗದ ಮೇಲೆ ಬಿದ್ದು ನಂತರ ಮುಂದಕ್ಕೆ ಹರಿದಾಗ ಶಿವತೀರ್ಥವೆಂದು ಶಿವ ಭಕ್ತರು ಸ್ವೀಕರಿಸುತ್ತಾರೆ. ಇದು ಪರಮಾತ್ಮನಿಂದ ತಾನೂ ಧರಿಸಿದ ಪ್ರಜಾಪಿತನಿಂದ ಬ್ರಹ್ಮನ ಮುಖಕಮಲದ ಮೂಲಕ ಬೋಧಿಸಲ್ಪಟ್ಟ ಜ್ಞಾನ ತೀರ್ಥವನ್ನು ಜನತೆ ಸ್ವೀಕರಿಸಿದ ಸಂಕೇತವಾಗಿದೆ.

ಧಾರಾಪಾತ್ರೆಯಲ್ಲಿ ಗಂಗೆ ಹೆಚ್ಚು ಕಡಿಮೆ ಇಲ್ಲದಂತೆ ಒಂದೊಂದೇ ಹನಿಹನಿಯಾಗಿ ಶಿವಲಿಂಗದ ಮೇಲೆ ಬೀಳುವಂತೆ ಧಾರಾಪಾತ್ರೆ ಗಂಗೆ ಹೆಚ್ಚು ಕಡಿಮೆ ಇಲ್ಲದಂತೆ ಒಂದೊಂದೇ ಹನಿಹನಿಯಾಗಿ ಶಿವಲಿಂಗದ ಮೇಲೆ ಬೀಳುವಂತೆ ಧಾರಾಪಾತ್ರೆ ಅಳವಡಿಸಲಾಗುತ್ತದೆ.

ತ್ರೆ„ಯಂಬಕೇಶ್ವರ :- ತ್ರಿ ಎಂದರೆ ತ್ರಿಮೂರ್ತಿಗಳು (ಬ್ರಹ್ಮಾ, ವಿಷ್ಣು, ಶಂಕರವನ್ನು) ಎಂದರೆ ಜನ್ಮ ಕೊಟ್ಟವರು, ಸೃಷ್ಟಿಕರ್ತ, ಜನನಿ ಅಥವಾ ತಾುಯಿ ಎಂತಲೂ ಈಶ್ವರ ಎಂದರೆ ಒಡೆಯ ಅಥವಾ ತಂದೆ ಎಂತಲೂ ಅರ್ಥಾತ್‌ ತ್ರಿಮೂರ್ತಿಗಳನ್ನು ರಚಿಸಿದವನಾದ್ದರಿಂದ ಶಿವ ಪರಮಾತ್ಮನನ್ನು ಮಹಾರಾಷ್ಟ್ರದ ಗೌತಮಿತಟದಲ್ಲಿ ತ್ರೆ„ಯಂಬಕೇಶ್ವರನೆಂಬ ಹೆಸರಿನಿಂದ ಪೂಜಿಸುತ್ತಾರೆ.

ಬಿಲ್ಪತ್ರೆ ಅರ್ಪಿಸುವುದರ ಅರ್ಥ :- ಪರಮಾತ್ಮ ತ್ರಿಮೂರ್ತಿಗಳ ರಚೈತನಾದ್ದರಿಂದ ಶಿವನಿಗೆ ತ್ರಿಧಳ ಬಿಲ್ಪ ಪತ್ರೆಯನ್ನು ಅರ್ಪಿಸುತ್ತಾರೆ.

ತ್ರಿಶೂಲದ ಅರ್ಥ : ತ್ರಿಲೋಕಿನಾಥ ಪರಮಾತ್ಮನು ಮೇಲೆ ಅರ್ಥಾತ್‌ ಪರಮಧಾಮದಲ್ಲಿ ಇದ್ದಾನೆ ಎಂದು ತ್ರಿಶೂಲ ತೋರಿಸುತ್ತಿದೆ. ಅದು ಹಿಂಸಾತ್ಮಕವಾದ ಆಯುಧ‌ವಲ್ಲ. ಆತ ಎಂದೂ ಹಿಂಸೆಯನ್ನು ಭೋದಿಸುವುದಿಲ್ಲ.

– ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಕಾರ್ಕಳ.

ಮಕ್ಕಳ ಸಾಹಿತ್ಯ ಜಾತ್ರೆ

ಮಕ್ಕಳ ಸಾಹಿತ್ಯ ಜಾತ್ರೆ:
ಚಿಣ್ಣರಿಂದಲೇ ಮಕ್ಕಳ ಸಾಹಿತ್ಯ ರಚನೆಯಾಗಬೇಕು. ಪುಟಾಣಿಗಳಲ್ಲೂ ಬರವಣಿಗೆ ಶಕ್ತಿ ವೃದ್ಧಿಸಬೇಕು. ಅವರಲ್ಲಿ ಸಾಹಿತ್ಯಭಿಮಾನ ಮೂಡಿಸುವ ಜತೆಗೆ ಬರೆಯುವ ಕೌಶಲಕ್ಕೆ ಪ್ರೇರೇಪಣೆ ನೀಡುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ. ಹಾಸನದಲ್ಲಿ ನಡೆಯುವ ಈ ಸಮ್ಮೇಳನದ ಜವಾಬ್ದಾರಿಯನ್ನು ಮಕ್ಕಳೇ ನಿಭಾಯಿಸುವುದು ಮತ್ತೊಂದು ವಿಶೇಷ.

| ಮಂಜು ಬನವಾಸೆ ಹಾಸನ

ಸಾಹಿತ್ಯ ಎಂದರೆ ಹಿರಿಯರು, ಪ್ರಬುದ್ಧರ ಆಸ್ತಿ ಎನ್ನುವ ಭಾವನೆ ಬಲವಾಗಿ ಬೇರೂರಿದೆ. ಮಕ್ಕಳ ಸಾಹಿತ್ಯವನ್ನೂ ದೊಡ್ಡವರೇ ಬರೆದು ಮುಂದಿಡುವಷ್ಟು ಅದು ಗಟ್ಟಿಯಾಗಿದೆ. ಆದರೆ ಈ ಸಂಪ್ರದಾಯ ಮುರಿದು ಮಕ್ಕಳಿಂದಲೇ ಮಕ್ಕಳ ಸಾಹಿತ್ಯ ರಚಿಸುವ, ಅವರಲ್ಲಿನ ಬರವಣಿಗೆ ಶಕ್ತಿಯನ್ನು ಪ್ರೇರೇಪಿಸುವ ಹೊಸ ಪ್ರಯತ್ನಕ್ಕೆ ಸಾಹಿತ್ಯಾಸಕ್ತರ ತಂಡವೊಂದು ಮುಂದಾಗಿದೆ. ಅದರ ಭಾಗವಾಗಿ ಇದೇ ಮೊದಲ ಬಾರಿಗೆ ಹಾಸನದಲ್ಲಿ ಫೆ.9-10ರಂದು ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.

ಹಾಸನ ಜಿಲ್ಲೆಯಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಕ್ರಿಯಾಶೀಲವಾದ ತಂಡಗಳನ್ನು ಹೊಂದಿರುವ ಚನ್ನರಾಯಪಟ್ಟಣದಲ್ಲಿ ಕೆಲವು ವರ್ಷಗಳ ಹಿಂದೆ ಸ್ಥಾಪನೆಯಾದ ಮಕ್ಕಳ ಸಾಹಿತ್ಯ ಪರಿಷತ್, ಈಗ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಾವ ರೀತಿಯಿಂದಲೂ ಕಡಿಮೆಯಿಲ್ಲದ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸುವ ಸಾಹಸಕ್ಕೆ ಕೈ ಹಾಕಿದೆ. ಈ ಪ್ರಯತ್ನಕ್ಕೆ ಆದಿಚುಂಚನಗಿರಿ ಹಾಸನ ಶಾಖಾ ಮಠ ಕೈಜೋಡಿಸಿದ್ದು, ಶ್ರೀ ಶಂಭುನಾಥ ಸ್ವಾಮೀಜಿ ಸಮ್ಮೇಳನದ ಮಹಾ ಪೋಷಕ ಸ್ಥಾನದ ಜವಾಬ್ದಾರಿ ಹೊತ್ತಿದ್ದಾರೆ.

ಕನಸು.. ನನಸು: ರಾಷ್ಟ್ರೀಯ ಪರಿಸರ ಪ್ರಶಸ್ತಿ ಪುರಸ್ಕೃತ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಚ.ನಾ. ಅಶೋಕ್ ಮತ್ತು ಅವರ ಗೆಳೆಯರು ಮಕ್ಕಳ ಸಾಹಿತ್ಯ ಸಮ್ಮೇಳನದ ಪರಿಕಲ್ಪನೆ ಹಿಂದಿರುವ ಪ್ರೇರಕ ಶಕ್ತಿಗಳು. 2 ವರ್ಷಗಳ ಹಿಂದೆ ಚನ್ನರಾಯಪಟ್ಟಣದಲ್ಲಿ ಮಕ್ಕಳ ಸಮ್ಮೇಳನ ಆಯೋಜಿಸಿ ಗಮನ ಸೆಳೆದಿದ್ದ ಅವರಲ್ಲಿ ಅಂದೇ ರಾಜ್ಯಮಟ್ಟದ ಸಮ್ಮೇಳನ ನಡೆಸುವ ಕನಸು ಚಿಗುರಿತ್ತು.

ನಮ್ಮ ರಾಜ್ಯದಲ್ಲಿ ಕನ್ನಡ ಓದು, ಸಾಹಿತ್ಯದ ಪರಿಚಯವೇ ಇಲ್ಲದಂತಾಗುತ್ತಿರುವ ಮಕ್ಕಳನ್ನು ಇತ್ತ ಎಳೆದು ತರಬೇಕು. ಆಸಕ್ತಿಯಿದ್ದರೂ ಪಠ್ಯ ಶಿಕ್ಷಣದ ಒತ್ತಡದಲ್ಲಿ ಸಿಲುಕಿ ಸೂಕ್ತ ವೇದಿಕೆ ದೊರೆಯದೆ ಕಮರುತ್ತಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎನ್ನುವ ಉದ್ದೇಶ ಹೊಂದಿದ್ದ ಅವರು ಸಮ್ಮೇಳನ ಸಂಘಟಿಸುವ ಬಗ್ಗೆ ಸಮಾನಮನಸ್ಕರೊಂದಿಗೆ ರ್ಚಚಿಸಿದರು. ಇದಕ್ಕೆ ಎಲ್ಲರಿಂದಲೂ ಸೂಕ್ತ ಸ್ಪಂದನೆ ದೊರೆಯಿತು. ಹಲವು ಸುತ್ತಿನ ಚರ್ಚೆಯ ಬಳಿಕ ಫೆ.9 ಹಾಗೂ 10ರಂದು ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಯಿತು. ಕಾರ್ಯಕ್ರಮದ ಮಹಾಪೋಷಕ ಸ್ಥಾನವನ್ನು ಸಂತೋಷದಿಂದ ಒಪ್ಪಿಕೊಂಡ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಬೆಂಬಲವಾಗಿ ನಿಂತರು. ಹೀಗೆ ಚ.ನಾ. ಅಶೋಕ್ ಅವರ ಕನಸು ನನಸಾಗುತ್ತಿದೆ.

ಸಮ್ಮೇಳನಾಧ್ಯಕ್ಷೆ ಭಾರ್ಗವಿ ಹೇಳಿದ್ದೇನು?

ಮಕ್ಕಳ ಪ್ರಥಮ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಭಾರ್ಗವಿ, ದಕ್ಷಿಣ ಕನ್ನಡ ಜಿಲ್ಲೆ, ಉಜಿರೆಯ ಪದ್ಮನಾಭ ಶಬರಾಯ ಹಾಗೂ ಭಾನುಮತಿ ಶಬರಾಯ ದಂಪತಿ ಪುತ್ರಿ. ಎಸ್​ಎಸ್​ಎಲ್​ಸಿ ವ್ಯಾಸಂಗ ಮಾಡುತ್ತಿರುವ ಅವರಿಗೆ ಕವನಗಳನ್ನು ರಚಿಸುವ ಆಸಕ್ತಿಯಿದೆ. ಅವರ ಹಲವು ಕವನಗಳು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿಜಯವಾಣಿಯೊಂದಿಗೆ ಭಾರ್ಗವಿ ನಡೆಸಿರುವ ಮಾತುಕತೆ ಇಲ್ಲಿದೆ.

ಮಕ್ಕಳ ಪ್ರಥಮ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದೀರಿ, ಹೇಗನ್ನಿಸುತ್ತಿದೆ?
ಆಯ್ಕೆಯಾದ ಆರಂಭದಲ್ಲಿ ಬಹಳ ಖುಷಿಯಾಗಿತ್ತು. ನಾನು ತೀರಾ ಈಚಿನವರೆಗೂ ಯಾವುದೇ ಸಮ್ಮೇಳನ ನೋಡಿರಲಿಲ್ಲ. ಈಚೆಗೆ ನಡೆದ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನದಲ್ಲಿ ಮೂರು ದಿನವೂ ಸಭಿಕಳಾಗಿ ಭಾಗವಹಿಸಿದ್ದೆ. ಅಲ್ಲಿನ ಸಮ್ಮೇಳನಾಧ್ಯಕ್ಷರನ್ನು ನೋಡಿದ ಮೇಲೆ ನಾನು ಹೊರಬೇಕಾದ ಜವಾಬ್ದಾರಿ ಎಷ್ಟು ದೊಡ್ಡದು ಎನ್ನುವುದು ಗೊತ್ತಾಯಿತು. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎನ್ನುವ ವಿಶ್ವಾಸವಿದೆ.

ಈವರೆಗೂ ಕನ್ನಡ ಸಾಹಿತ್ಯ ಓದಿದ್ದೀರಾ? ಯಾವ ಲೇಖಕರು ಇಷ್ಟವಾಗುತ್ತಾರೆ?
ಈವರೆಗೂ ಪಠ್ಯ ಹೊರತುಪಡಿಸಿದರೆ ಕುವೆಂಪು ಅವರ ಕವನಗಳನ್ನು ಇಷ್ಟಪಟ್ಟು ಓದಿದ್ದೇನೆ. ಬೇರೆ ಲೇಖಕರ ಕೃತಿಗಳ ಪರಿಚಯವಿಲ್ಲ.

ಸಾಹಿತ್ಯ, ಬರಹ ಬಗ್ಗೆ ಆಸಕ್ತಿ ಮೂಡಿದ್ದು ಯಾವಾಗ?
7ನೇ ತರಗತಿಯಲ್ಲಿರುವಾಗ ಕವನ ಬರೆಯಲು ಆರಂಭಿಸಿದೆ. ಮನಸ್ಸಿಗೆ ಬಂದ ಭಾವನೆಗಳನ್ನು ಬರೆಯುವ ಮೂಲಕ ಅದು ರೂಢಿಯಾಗತೊಡಗಿತು. ಕೆಲವು ಕವನಗಳು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕೈ ಜೋಡಿಸಿದ ಸಾಹಿತಿಗಳು

ಮಕ್ಕಳಲ್ಲಿ ಸಾಹಿತ್ಯ ಪ್ರೀತಿ ಬಿತ್ತುವ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ಕೆ ನಾಡಿನ ಹಲವು ಸಾಹಿತಿಗಳು ಕೈ ಜೋಡಿಸಿದ್ದಾರೆ. ಲಕ್ಷ್ಮಣ್ ಹೊಸಕೋಟೆ, ಬಾನುಮುಷ್ತಾಕ್, ಡಾ.ನಾ.ಸೋಮೇಶ್ವರ್, ನಾ.ಡಿಸೋಜಾ, ಸುಬ್ಬು ಹೊಲೆಯಾರ್ ಅವರು ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ಶಿಕ್ಷಣ ವ್ಯವಸ್ಥೆ ಹಾಗೂ ಸಾಹಿತ್ಯ ಕ್ಷೇತ್ರ ಕುರಿತ 5 ವಿಚಾರಗೋಷ್ಠಿಗಳು, ರಸಪ್ರಶ್ನೆ ಕಾರ್ಯಕ್ರಮ, ಕವಿಗೋಷ್ಠಿ, ಸಂಜೆ ವೇಳೆ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಸುಮಾರು 20 ಸಾವಿರ ಮಕ್ಕಳು ಭಾಗವಹಿಸುವ ನಿರೀಕ್ಷೆಯಿದ್ದು, ಊಟ, ವಸತಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಮಕ್ಕಳೇ ಅಧ್ಯಕ್ಷರು

ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಉಜಿರೆ ಎಸ್​ಡಿಎಂ ಆಂಗ್ಲ ಮಾಧ್ಯಮ ಶಾಲೆಯ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ ಭಾರ್ಗವಿ ಆಯ್ಕೆಯಾಗಿದ್ದಾರೆ. ಸಹ ಸಮ್ಮೇಳನಾಧ್ಯಕ್ಷರಾಗಿ ಹಾಸನ ಸರ್ಕಾರಿ ಶಾಲೆಯ ಎಚ್.ಎಸ್. ವಿವೇಕ್, ಬಾಗಲಕೋಟೆ ಜಿಲ್ಲೆಯ ಬಿಳಗಿಯ ಸರ್ಕಾರಿ ಶಾಲೆಯ ಗೌರಮ್ಮ, ಬೆಳ್ತಂಗಡಿ ಸರ್ಕಾರಿ ಶಾಲೆಯ ಅನನ್ಯ ಮತ್ತು ತುಮಕೂರು ಸರ್ಕಾರಿ ಶಾಲೆಯ ಸುಬ್ರಹ್ಮಣ್ಯ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಮಕ್ಕಳಲ್ಲಿನ ಸೃಜನಶೀಲತೆ, ಸಾಹಿತ್ಯಾಭಿರುಚಿ, ಮನೋವಿಕಾಸಕ್ಕೆ ಸಹಕಾರ ಆಗುವಂತಹ ಕಾರ್ಯಕ್ರಮಗಳನ್ನು ಮಕ್ಕಳ ಸಾಹಿತ್ಯ ಪರಿಷತ್ ಮೂಲಕ ನಾಲ್ಕು ವರ್ಷಗಳಿಂದ ನಡೆಸುತ್ತಿದ್ದೇವೆ. ಈ ಬಾರಿ ರಾಜ್ಯಮಟ್ಟದಲ್ಲಿ ಕನ್ನಡ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಬೇಕು ಎನ್ನುವ ಉದ್ದೇಶದಿಂದ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.

| ಚ.ನಾ.ಅಶೋಕ್ ಅಧ್ಯಕ್ಷ, ಮಕ್ಕಳ ಸಾಹಿತ್ಯ ಪರಿಷತ್, ಚನ್ನರಾಯಪಟ್ಟಣ

ಪುಟಾಣಿಗಳ ಹೆಗಲಿಗೆ ಜವಾಬ್ದಾರಿ

ಮಕ್ಕಳ ಸಾಹಿತ್ಯ ಸಮ್ಮೇಳನವೆಂದ ಮೇಲೆ ಮಕ್ಕಳ ಹೆಸರಿನಲ್ಲಿ ಹಿರಿಯರು ವೇದಿಕೆಯಲ್ಲಿ ಕುಳಿತು ಉಪದೇಶ ನೀಡುವಂತಾಗಬಾರದು. ಸಮ್ಮೇಳನದ ಸರ್ವಾಧ್ಯಕ್ಷತೆಯಿಂದ ಹಿಡಿದು ಎಲ್ಲ ಜವಾಬ್ದಾರಿ ಮಕ್ಕಳೇ ನಿರ್ವಹಿಸುವಂತಾಗಬೇಕು ಎಂದು ಮಕ್ಕಳ ಸಾಹಿತ್ಯ ಪರಿಷತ್ ಸದಸ್ಯರು ನಿರ್ಧರಿಸಿದರು. ಆದರೆ, ಪ್ರತಿಭಾವಂತ ಮಕ್ಕಳನ್ನು ಯಾವುದೇ ಪೂರ್ವಗ್ರಹವಿಲ್ಲದೆ ಆಯ್ಕೆ ಮಾಡುವುದು ಹೇಗೆ ಎನ್ನುವ ಜಿಜ್ಞಾಸೆ ಎದುರಾಯಿತು. ಇದಕ್ಕೆ ಉಪಾಯ ಹುಡುಕಿದ ಹಾಸನದ ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ರಾಜ್ಯದ ವಿವಿಧ ಜಿಲ್ಲೆಗಳ ಪ್ರೌಢಶಾಲೆಗಳಿಂದ ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ಸಾಹಿತ್ಯಾಸಕ್ತ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಅವರಲ್ಲಿ ಯಾರನ್ನಾದರೂ ಒಬ್ಬರನ್ನು ಆಯ್ಕೆ ಮಾಡುವ ಮಾರ್ಗ ಸೂಚಿಸಿದರು. ಈ ಆಹ್ವಾನಕ್ಕೆ ರಾಜ್ಯದ ವಿವಿಧ ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಕಳುಹಿಸಿಕೊಟ್ಟರು. ಅವರಿಗಾಗಿ ಏರ್ಪಡಿಸಿದ್ದ ಕವಿತೆ ರಚನೆ, ಚರ್ಚಾ ಸ್ಪರ್ಧೆಗಳಲ್ಲಿ 300 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅತ್ಯಂತ ಪಾರದರ್ಶಕವಾಗಿ ಮೌಲ್ಯಮಾಪನ ನಡೆಸಿ ಒಬ್ಬರನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಾಗೂ ಇತರೆ ನಾಲ್ವರನ್ನು ಸಹ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.